srikanth (ಲೇಖನಗಳು)
ಪ್ರವಾಸ
May 30, 2006 - 2:50pm — srikanth“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ ಬೆಂಗಳೂರಿನಲ್ಲಿ…..) ಜಪ ಮಾಡಲು ಪ್ರಾರಂಭಿಸಿದೆ. ಮುಂದೆ ಓದಿ »

- Login or register to post comments
- 594 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)
May 22, 2006 - 12:33pm — srikanthಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅಭಾಸವಾದರೂ “ಭಾರತದ ಬಗ್ಗೆ ಮಾತನಾಡವಾಗ ಸಹಜವಾಗಿ ಅದರ ಪ್ರಾಚೀನ ಹಾಗು ಭವ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವವರೇ ಹೆಚ್ಚು” ಎಂಬ ಮಾತು ಸ್ಪಷ್ಟವಾಯಿತು. ಮುಂದೆ ಓದಿ »

ರಂಗಸ್ಥಳ
March 15, 2006 - 12:44am — srikanthನಿಸರ್ಗವೇ ಹೀಗೆ. ಮನುಷ್ಯನು ಯೋಚಿಸಲು ಪ್ರಾರಂಭಿಸಿದಾಗಿನಿಂದಲೂ, ತನ್ನ ಸೌಂದರ್ಯದಿಂದ ಅವನನ್ನು ಆಕರ್ಷಿಸಿ ತನ್ನ ಆರಾಧಕನನ್ನಾಗಿಸುವುದು. ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಕವಿಗಳ ಕೊನೆಯಿಲ್ಲದ ಸಾಲು ಇದಕ್ಕೆ ಸಾಕ್ಷಿ.ಆದರೆ ಅದೇ ಸೌಂದರ್ಯದೊಳಗೆ ಅಡಗಿರುವ ಭೀಕರತೆ ಕಂಡವರು ಕೆಲವೇ ಮಂದಿ. ಆ ಭೀಕರತೆಯನ್ನು ಕಂಡವರು ನಿಸರ್ಗದ ನಿಷ್ಕರುಣ ವ್ಯವಸ್ಥೆಗೆ ತಲೆದೂಗಿ ಗೌರವಿಸುವುದುಂಟು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ. ನಿಸರ್ಗವನ್ನು ಹತ್ತಿರದಿಂದ ನೋಡಿರದಿದ್ದರೆ ಅದನ್ನು “ಕವಿಗಣ್ಣಿ”ನಿಂದ ನೋಡಿದಾಗಲೇ ಅದನ್ನು ಗೌರವದಿಂದ ಕಾಣಲು ಸಾಧ್ಯ. ಬಹುಶಃ ಇದು ನಿಸರ್ಗದ ಭೀಕರತೆಯ ಮುಖವನ್ನು ಬದಿಗಿಟ್ಟು, ಅದರ ಸೌಂದರ್ಯವನ್ನು ಹೊಗಳುವ,ಗೌರವಿಸುವ ಪ್ರಯತ್ನ. ಹೀಗೆ ನೋಡಿದಾಗಲೇ ನಿಸರ್ಗವನ್ನು ಕಾಪಾಡಬೇಕೆಂಬ ಮನಸ್ಸಾಗುವುದು. ಮುಂದೆ ಓದಿ »

ಬೈರಾಗಿ
March 1, 2006 - 8:25am — srikanth ಬಲು ಕಠಿಣವಿದೆ ಹಾದಿ, ಒಲ್ಲೆನೆನ್ನುವಂತಿಲ್ಲ
ಅನಿಶ್ಚಿತತೆಯ ಭಯವು, ಬೆನ್ನಟ್ಟಿ ಮುಂದೆ ಓದಿ »

ಮಿತ್ರ
February 28, 2006 - 4:15am — srikanthನೀನು ದುರುಗುಟ್ಟಿ ನೋಡುತ್ತಿರುವುದನ್ನು ಅನಿತಾ ತೋರಿಸಿದಾಗಲೂ, ನಿನ್ನ ನಾಚಿಕೆಯಿಲ್ಲದ ನೆಟ್ಟ ನೋಟ ಹಾಗೆಯೇ ಇತ್ತು. ಇಷ್ಟು ಸುಂದರವಾಗಿರುವ ನಿನ್ನನ್ನು ತಾನಾಗಿದ್ದರೆ ಹೋಗಿ ಖಂಡಿತ ಮಾತನಾಡಿಸಿಬರುತ್ತಿದ್ದೆ ಎಂದು ಗೇಲಿಮಾಡಿದಳು.ನೀನು ಹಾಗೆ ದುರುಗುಟ್ಟಿ ನೋಡುತ್ತಿದ್ದರೂ ನನ್ನ ಬಳಿ ಬರಲು ಭಯವೇ ? ಛೇ ನಾಚಿಕೆ ಇರಬಹುದು ಎಂಬ ಕಾರಣ ಬರಿ ಪೊಳ್ಳು. ಅದೇನಾದರೂ ಇದ್ದಿದ್ದರೆ, ನಮ್ಮ ನೋಟಗಳೆರಡು ಕೂಡಿದಾಗ , ಕಂಡೂ ಕಾಣದವನಂತೆ ದೃಷ್ಟಿ ಬೇರೆಡೆಗೆ ಸರಿಸುತ್ತಿದ್ದೆ. ಆದರೂ ನಿನ್ನ ಕಂಡಾಕ್ಷಣ ನಿನ್ನ ಕಣ್ಣಿನ ಮುಗ್ಧತೆ,ರೂಪ ನನ್ನನ್ನು ಸೆಳೆಯದೇ ಇರಲಿಲ್ಲ. ಅದರೂ ಇಲ್ಲದ ತೊಂದರೆಯನ್ನು ಗಂಟಿಕ್ಕಿಕ್ಕೊಳ್ಳಬಾರದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ಮನೆಯೆಡೆಗೆ ನಡೆದೆ. ಎಷ್ಟಾದರೂ ನೀನು ಅಪರಿಚಿತನಲ್ಲವೆ ?. ಮನೆಗೆ ಹೋಗುವಾಗ ಸಿಕ್ಕುವ ಜಾರುಬಂಡೆಯಂತಿರುವ ರಸ್ತೆಯಲ್ಲಿ ನಡೆದು ಬರುವಾಗ ಯಾರೋ ನನ್ನನ್ನು ಹಿಂಬಾಲಿಸುವಂತೆನ್ನಿಸಿ ಹಿಂದುರುಗಿ ನೋಡಿದಾಗ ಮತ್ತೆ ನಿನ್ನ ದರ್ಶನವಾಯಿತು. “ ಥೂ ! ನಾನು ನೋಡಿದ್ದೇ ತಪ್ಪಾಯಿತು. ಅನಗತ್ಯ ತಲೆನೋವು ಎದುರಾಯಿತಲ್ಲಾ” ಎಂದು ಒಮ್ಮೆ ನನ್ನನ್ನೇ ಬೈದುಕೊಂಡೆ. ಅಲ್ಲೇ ಬಳಿ ಬಂದು ಚೆನ್ನಾಗಿ ಬೈದು, ಬೇಕಾದರೆ ಅಲ್ಲೇ ತಿರುಗಾಡುತ್ತಿರುವ ಬೆರಳೆಣಿಕೆಯ ಜನರನ್ನು ಸೇರಿಸಿ ಜಗಳ ಪ್ರಾರಂಭಿಸಬಹುದೆಂದು ಯೋಚಿಸಿದೆ.ಅದರೆ ಧೈರ್ಯಬರಲಿಲ್ಲ. ಜಗಳದಲ್ಲಿ ನೀನು ಕೋಪಗೊಂಡು ಗಾಯಗೊಳಿಸಿದರೆ, ಒಬ್ಬಳೇ ಆಸ್ಪತ್ರೆಗೆ ತಿರುಗಬೇಕಾಗುತ್ತದೆ ಎಂದೆನ್ನಿಸಿ ಹಾಗೆಯೇ ಮುಂದೆ ನಡೆದೆ. ರಸ್ತೆ ಕೊನೆಯವರೆಗೂ ಹಿಂದಿರುಗಿ ನೋಡದೆ ನಡೆದು, ಅರಳಿ ಮರದ ಜೋಡಿ ರಸ್ತೆ ಸಿಕ್ಕಾಗ ಸ್ವಲ್ಪ ಧೈರ್ಯ ಬಂತು. ಈ ಜನನಿಬಿಡ ರಸ್ತೆಯಲ್ಲಿ ಹಿಂಬಾಲಿಸುವ ಧೈರ್ಯ ಯಾರಿಗಿದೆ ? ಎಂದೆನ್ನುತ್ತಾ ಮತ್ತೆ ತಿರುಗಿ ನೋಡಿದಾಗ ನಿನ್ನನ್ನು ಕಂಡು ಅಶ್ಚರ್ಯವಾಯಿತು. ನಿನ್ನ ತಾಳ್ಮೆಯನ್ನು ಮೆಚ್ಚಲೇಬೇಕು, ಇಷ್ಟು ದೂರ ಹಿಂಬಾಲಿಸುವುದು ಕಷ್ಟವೇ ಸರಿ. ಹಿಂಬಾಲಿಕೆಯಲ್ಲೂ ಸೌಜನ್ಯವೇ ? ಹಿಂಬಾಲಿಸುತ್ತಿರುವಂತೆ ಕಾಣದಿರಲು ದೂರ ಕಾಯ್ದುಕೊಳ್ಳುತ್ತಿರುವುದು. ಜೊಲ್ಲು ಸುರಿಸಿಕೊಂಡು ಬೀದಿ ತಿರುಗುವ ನಿಮ್ಮಂಥವರಿಗೆ ಸೌಜನ್ಯಗಳ ಗಂಧವಿದೆಯೇ ? ಮುಂದೆ ಓದಿ »



RSS: