shobha.koppad (ಚರ್ಚೆಯ ವಿಷಯಗಳು)
ಹೇಳಿ, ಇವರು ಜಾತಿವಾದಿಗಳೇ ?
June 13, 2008 - 9:51pm — shobha.koppadಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಮಯ ವಾತಾವರಣವಿರಬೇಕು, ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ೩೦೦೦ ಬಡ ರೈತರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸಬೇಕು, ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕ.ರ.ವೇ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆ ಓದಿ »

ಇಂದು ವಿಶ್ವ ಪರಿಸರ ದಿನ - Do I care?
June 5, 2008 - 5:11pm — shobha.koppadಇವತ್ತು ವಿಶ್ವ ಪರಿಸರ ದಿನಾಚರಣೆ. ಎಂದಿನಂತೆ ಇಂದು ಒಂದು ದಿನ ಅಂತಾನೆ ನಾವು ಇಷ್ಟು ದಿನ ಕಳೆದಿದ್ದಿವಿ. ಹೆಚ್ಚೆಂದರೆ ಗಿಡ ನೆಡಬೇಕು, ಪರಿಸರ ಕಾಪಾಡಬೇಕು ಅಂತ ಒಂದೆರಡು ಮಾತಾಡಿ ಸುಮ್ಮನಾಗಿ ಬಿಡ್ತಿವಿ. ಆದ್ರೆ ಇವತ್ತು ವಿಶ್ವ ಪರಿಸರ ದಿನ ನಮ್ಮಿಂದ ತುಂಬ ಪ್ರಾಮಾಣಿಕವಾದ, ಬದ್ಧತೆ ಯನ್ನು ಬೇಡುತ್ತ ಇದೆ. ಈ ನಮ್ಮ ಭೂಮಿಯನ್ನು, ನಮ್ಮ ಸುಂದರ ಕರುನಾಡನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹೇಗೆ ಬಿಟ್ಟು ಹೋಗ್ತಾ ಇದ್ದಿವಿ ? ಇವತ್ತು ಭೂಮಿ ಮೇಲೆ ಆಗ್ತಿರೋ ಆಕ್ರಮಣ, ದೌರ್ಜನ್ಯದ ಪ್ರಮಾಣ ಮೇರೆ ಮಿರಿದೆ. ಇವತ್ತಿಗಾಗ್ಲೆ ಗ್ಲೋಬಲ್ ವಾರ್ಮಿಂಗ್ ಅನ್ನೋ ಭೂತದ ಪರಿಣಾಮ ನಮ್ಮೆಲ್ಲರ ಅನುಭವಕ್ಕೆ ಬರ್ತಾ ಇದೆ. ಮೊನ್ನೆ ಮೊನ್ನೆ ಯಷ್ಟೇ ಸುರಿದ ಅಕಾಲಿಕ ಮಳೆಯಿಂದ ನಮ್ಮ ರಾಯಚೂರು, ಬಳ್ಳಾರಿ, ಗದಗ್ ಸುತ್ತಮುತ್ತಲಿನ ರೈತರ ಬೆಲೆ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗುವಂತೆ ಮಾಡಿತು. ಆದ್ರೆ, ಇದೆಲ್ಲ ಬರಿ ಆರಂಭ. ಬರೋ ದಿನಗಳಲ್ಲಿ ಎಲ್ಲಕಿಂತ ಹೆಚ್ಚು ಕಷ್ಟ ನಷ್ಟ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆ. ಅವರಿಗೆ ನಾವು ಬಿಟ್ಟು ಹೋಗುತ್ತಿರುವುದಾದರೂ ಏನು ? ವೈಪರಿತ್ಯ ಉಳ್ಳ ಹವಾಮಾನ, ಎಲ್ಲಿ ನೋಡಿದರಲ್ಲಿ ಜಲ ಕ್ಷಾಮ, ೨೦ ರಿಂದ ೩೦% ಪ್ರಾಣಿ ಮತ್ತು ಸಸ್ಯ ಸಂಕುಲದ ನಾಶ. ಆದರೆ ಇದೆಲ್ಲವನ್ನೂ ಸ್ವಲ್ಪ ಪ್ರಯತ್ನ ಮಾಡಿದ್ರೆ ತಪ್ಪಿಸಬಹುದೇನೋ ! ಮುಂದೆ ಓದಿ »

2 ರೂಪಾಯಿಗೆ ಅಕ್ಕಿ ಕೊಟ್ರೆ ಸಾಕಾ?
May 5, 2008 - 10:08pm — shobha.koppadಚುನಾವಣಾ ಇನ್ನೇನು ತಲೆ ಮೇಲಿದೆ, ರಾಜಕಾರಣಿಗಳು ಕಾಲ ಬುಡದಲ್ಲಿದ್ದಾರೆ. ಒಬ್ಬರು ಟಿ.ವಿ ಕೊಡ್ತೀನಿ ಅಂತಾರೆ, ಇನ್ನೊಬ್ರು ೨ ರೂಪಾಯಿಗೆ ಅಕ್ಕಿ ಕೊಡ್ತೀನಿ ಅಂತಾರೆ, ಆದ್ರೆ ಯೋಚನೆ ಮಾಡಿದ್ರೆ ಯಾವ ನನ್ನ ಮಕ್ಕಳಿಗೂ ಒಂದು ದೊಡ್ಡ ಕನಸಿಲ್ಲ, ಒಂದು ದೊಡ್ಡ ಗುರಿ ಇಲ್ಲ. ಮುಂದೆ ಓದಿ »

- Login or register to post comments
- 369 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: