olnswamy (ಬ್ಲಾಗ್ ಬರಹಗಳು)
ಸಾವಿರ ರಾಮರು: ರಾಮಾನುಜನ್ ಸಂಗ್ರಹಿಸಿದ ಕಥೆ
September 17, 2008 - 8:29pm — olnswamyಇದು ಏ.ಕೆ. ರಾಮಾನುಜನ್ ಅವರು ಸಂಗ್ರಹಿಸಿದ್ದ ಒಂದು ಜಾನಪದ ಕಥೆ. ರಾಮ ವನವಾಸವನ್ನು ಮುಗಿಸಿಕೊಂಡು ಬಂದ. ಒಂದು ದಿನ ಆಸ್ಥಾನದಲ್ಲಿ ಕುಳಿತಿದ್ದ. ಸಭೆ ನಡೆದಿತ್ತು. ರಾಮನ ಕೈಯಲ್ಲಿದ್ದ ಮುದ್ರೆಯುಂಗರ ಜಾರಿ ನೆಲಕ್ಕೆ ಬಿದ್ದಿತು. ಉಂಗುರ ಬಿದ್ದಲ್ಲಿ ರಂಧ್ರವಾಗಿ, ಉಂಗುರ ಅದರಲ್ಲಿ ಜಾರಿ ಭೂಮಿಯೊಳಕ್ಕೆ ಹೋಗಿ ಬಿಟ್ಟಿತು.
ರಾಮ ಆ ಉಂಗುರವನ್ನು ಹುಡುಕಿಕೊಂಡು ಬರಲು ಹನುಮಂತನಿಗೆ ಹೇಳಿದ. ಹನುಮಂತ ಸೂಕ್ಷ್ಮ ರೂಪವನ್ನು ತಳೆದು ಭೂಮಿಯೊಳಕ್ಕೆ ಇಳಿದ. ಉಂಗುರ ಹುಡುಕುತ್ತಾ ಪಾತಾಳ
ಲೋಕಕ್ಕೆ ತಲುಪಿದ. ಅಲ್ಲಿನ ಜನ ಅವನ ಮೇಲೆ ಬಿದ್ದು ಕಾದಾಡಲು ತೊಡಗಿದರು.ಇತ್ತ ರಾಮನ ಸಭೆಗೆ ವಸಿಷ್ಠ, ಇಂದ್ರ ಮೊದಲಾದವರೆಲ್ಲ ಬಂದರು. 'ರಾಮ, ನಿನ್ನ ಅವತಾರದ ಅವಧಿ ಮುಗಿದಿದೆ, ಇನ್ನು ದೇವಲೋಕಕ್ಕೆ ವಾಪಸ್ಸು ಬಾ' ಎಂದು ಕರೆದರು. ರಾಮ ಹೊರಟುಬಿಟ್ಟ. ಇತ್ತ ಹನುಮಂತನನ್ನು ಪಾತಾಳದ ಅರಸನಲ್ಲಿಗೆ ಒಯ್ದರು. 'ಯಾರು ನೀನು?' ಅರಸ ಕೇಳಿದ. 'ನಾನು ಹನುಮಂತ, ರಾಮನ ಬಂಟ, ಅವನ ಉಂಗುರ ಬಿದ್ದು ಹೋಯಿತು, ಹುಡುಕಿ ಬಂದಿದ್ದೇನೆ' ಎಂದ ಹನುಮಂತ. ಪಾತಾಳದ ಅರಸ ಅಲ್ಲಿದ್ದ ಒಂದು ತಟ್ಟೆಯನ್ನು ತೋರಿಸಿ 'ಅಗೋ, ಅಲ್ಲಿರುವ ತಟ್ಟೆಯಲ್ಲಿ ಹಲವು ಉಂಗುರಗಳಿವೆ, ನಿನ್ನ ರಾಮನ ಉಂಗುರ ತೆಗೆದುಕೋ' ಎಂದ.
ಹನುಮಂತ ಹೋಗಿ ನೋಡಿದರೆ ಅಲ್ಲಿ ಸಾವಿರಾರು ರಾಮಮುದ್ರಿಕೆಗಳಿದ್ದವು. ತಬ್ಬಿಬ್ಬಾಯಿತು. ಮುಂದೆ ಓದಿ »

ಝೆನ್ ಕಥೆ: ಮೀನು ಗೊತ್ತೇ?
September 16, 2008 - 1:27pm — olnswamyಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯಪಕ್ಕದಲ್ಲಿ ನಡೆಯುತ್ತಿದ್ದರು.
‘ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿವೆ' ಅಂದ ಚಾಂಗ್ ತ್ಸು.
‘ನೀನು ಮೀನಲ್ಲ. ಆದ್ದರಿಮದ ಅವು ಖುಷಿಯಾಗಿವೆಯೋ ಇಲ್ಲವೋನಿನಗೆ ಗೊತ್ತಾಗುವುದು ಸಾಧ್ಯವಿಲ್ಲ' ಅಂದಗೆಳೆಯ.
‘ನೀನು ನಾನಲ್ಲ, ಮೀನು ಖುಷಿಯಾಗಿವೆ ಅನ್ನುವುದು ನನಗೆಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು?' ಅಂದ ಚಾಂಗ್ ತ್ಸು. ಮುಂದೆ ಓದಿ »

- olnswamy ರವರ ಬ್ಲಾಗ್
- Login or register to post comments
- 210 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
September 4, 2008 - 4:25am — olnswamyಹೀಗೆ ಹೋಗಿ ಹಾಗೇ ಬಂದೆ
ಇದೊಂದು ಥರಾ ಪ್ರವಾಸ ಕಥನ. ಆಗಷ್ಟು ಈಗಷ್ಟು ಬರೆಯುತ್ತೇನೆ.
ಮನಸ್ಸು ಆಮೆಯಾಗುತ್ತಿರುವಾಗ, ವಯಸ್ಸಾಯಿತು ಎಂಬ ಅರಿವು ಮೈಯ
ಒಂದೊಂದು ಭಾಗಕ್ಕೂ ಆಗುತ್ತಿರುವಾಗ, ಏನೋ ಸಾಧಿಸಬೇಕು, ಇನ್ನೂ ಇನ್ನೂ ಸಂಪಾದಿಸಬೇಕು, ಈ ದರಿದ್ರ
ಇಂಡಿಯಾದ ನೆಲದಿಂದ ಮುಕ್ತನಾಗಿ ಆ ಯಾವುದಾದರೂ ಒಂದು ದೇಶದ ಪ್ರಜೆಯಾಗಿ ಸ್ವರ್ಗಸ್ಥನಂತೆ ಇರಬೇಕು,
ಅಥವಾ ಮಗಳ ಬಾಣಂತನ, ಮಗ ಕೊಂಡ ಹೊಸ ಮನೆಯ ಗೃಹಪ್ರವೇಶಕ್ಕೆ ಹಾಜರಿದ್ದು ಜನ್ಮ ಸಾರ್ಥಕವಾಯಿತು
ಎಂದು ಸಂಭ್ರಮಿಸಬೇಕು ಎಂಬಿತ್ಯಾದಿ ಯಾವ ಕಾರಣಗಳೂ ಇಲ್ಲದೆ--
ಕಂಡದ್ದೆಲ್ಲ ಅರ್ಥವಾಗುವಮೊದಲೇ ಅರಿವಿನ ಭಾಗವಾಗುವ ಎಳೆಯ
ಮನಸ್ಸಲ್ಲ; ಅಪ್ಪ ಅಮ್ಮ ಹೆಂಡತಿ, ನನ್ನ ಸುತ್ತಲ ಜನ, ನಾನು ಓದಿದ ಸ್ಕೂಲುಗಳು, ಕೇಳಿದ ಓದಿದ
ಕಥೆಗಳು ಎಲ್ಲರೂ ಎಲ್ಲವೂ ನನ್ನ ಭಾಷೆಯಲ್ಲಿ ಕೆತ್ತಿ ನಿಲ್ಲಿಸಿರುವ ವಿಗ್ರಹಗಳೇ ಮನಸ್ಸಿನ ತುಂಬ
ಕಿಕ್ಕಿರಿದಿವೆ; ಕೆಲವು ಚೆಲುವಾಗಿವೆ, ಕೆಲವು ವಿಕಾರವಾಗಿವೆ, ಇನ್ನು ಕೆಲವು ವಿಕಾರವಾಗಿವೆ;
ಅವನ್ನು ಪೂಜಿಸಲಾರದೆ, ವಿಸರ್ಜಿಸಲಾರದೆ, ಯಾಕೆ ಅವನ್ನೆಲ್ಲ ಇಟ್ಟುಕೊಂಡಿದ್ದೇನೆ ಎಂದು ಚಡಪದಿಸುತ್ತಾ
ನನಗೇ ವಿವರಿಸಿಕೊಳ್ಳುತ್ತಾ ಇರುವಾಗ ಬೇರೆ ದೇಶದ, ಬೇರೆ ಭಾಷೆಗಳ, ಬೇರೆ ಸಮಾಜಗಳ, ಬೇರೆ ಜನಗಳ,
ಬೇರೆ ಮನೆಗಳ ಒಳಹೊಕ್ಕು ಬಂದರೇನು ಬಂದೀತು; ನನ್ನ ವೃತ್ತಿಯಲ್ಲಿ ದುಡಿದು ಉಳಿಸಿದ್ದರಲ್ಲಿ
ಮುಕ್ಕಾಲು ಹಣ ಖರ್ಚುಮಾಡಿಕೊಳ್ಳುವುದು ಅವಿವೇಕವೋ ಹೇಗೆ-- ಮುಂದೆ ಓದಿ »

ಪದಬೆಳಗು: ೩: ಸಜ್ಜನ
September 3, 2008 - 8:11pm — olnswamyಸಜ್ಜನ ಅನ್ನುವ ಮಾತಿಗೆ ‘ಹೆಂಡತಿ' ಎಂಬ ಅರ್ಥವಿದೆ!
ಇದು ತಿಳಿದದ್ದು ಡಾ. ಎಲ್. ಬಸವರಾಜು ಅವರು ಸಂಪಾದಿಸಿರುವ ಸರಳ ಪಂಪಭಾರತವನ್ನು ಬಳಸಿಕೊಂಡು
ಇತ್ತೀಚೆಗೆ ರಂಗಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿರುವಾಗ.
ಪಂಪಭಾರತದ ಒಂಬತ್ತನೆಯ ಆಶ್ವಾಸದ ೪೬ನೆಯ ಪದ್ಯದಲ್ಲಿ ಅದು ಸಜ್ಜನ ಎಂಬ ಪದ ಬಳಕೆಯಾಗಿದೆ.
ಅದಕ್ಕೆ ಬಸವರಾಜು ಅವರು ಹೆಂಡತಿ ಅನ್ನುವ ಅರ್ಥ ನೀಡಿದ್ದಾರೆ, ಆ ಪ್ರಸಂಗಕ್ಕೆ ಅದು
ಹೊಂದಿಕೊಳ್ಳುತ್ತದೆ.
ಪದ್ಯ ಹೀಗಿದೆ [ಓದಿಕೊಳ್ಳಲು ಅನುಕೂಲವಾಗುವಂತೆ ಸಾಲುಗಳನ್ನು ವಿಂಗಡಿಸಿ, ಪದಗಳನ್ನು ಬೇರೆ
ಮಾಡಿ ಕೊಟ್ಟಿದೆ. ಮೂಲದಲ್ಲಿ ಇದು ಉತ್ಪಲಮಾಲಾ ವೃತ್ತ]
ಭಾಗಮನ್ ಆಸೆವಟ್ಟು ಅಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ಯೆ
ನೀನ್ ಆಗಳುಮ್ ಅಣ್ಣ ಬೇಡಿದಪೆ ಮುಂದೆ ಓದಿ »


RSS: