ನಾನು ಪತ್ರಕರ್ತ. ಸದ್ಯ ನಾನು ಸುವರ್ಣ ನ್ಯೂಸ್ ಚಾನೆಲ್ನಲ್ಲಿ ಸುದ್ದಿ ವಾಚಕನಾಗಿ ಕೆಲಸ ಮಾಡುತ್ತಿದ್ದೇನೆ. ಮೂಲತಃ ನಾನು ಹಾಸನ ಜಿಲ್ಲೆ ಅರಕಲಗೂಡಿನ ಹೆಗ್ಗಡಿಹಳ್ಳಿ ಗ್ರಾಮದವನು. ಓದಿದ್ದು ಹುಟ್ಟೂರು ಹೆಗ್ಗಡಿಹಳ್ಳಿ, ಹಾಸನ, ಹುಲಿಕಲ್, ಕೊಣನೂರು ಮತ್ತು ಚೆನ್ನೈನಲ್ಲಿ. ಮೊದಲ ಕೆಲಸ ಸೂರ್ಯೋದಯ ದಿನಪತ್ರಿಕೆಯಲ್ಲಿ. ನಂತರ ಈ ಟಿವಿ ಕನ್ನಡದಲ್ಲಿ ದುಡಿದು ಸುವರ್ಣ ಚಾನೆಲ್ಗೆ ವಲಸೆ ಬಂದಿದ್ದೇನೆ. ಬರವಣಿಗೆ, ಸುದ್ದಿ ವಾಚನ, ವರದಿಗಾರಿಕೆ, ಕೃಷಿ ನನ್ನ ನೆಚ್ಚಿನ ಆಸಕ್ತಿ ಕ್ಷೇತ್ರಗಳು.