ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

csomsekraiah (ಲೇಖನಗಳು)

ಕಾರಂತರ ಜೀವಂತ ಪಾತ್ರಗಳು ೧೩ (೩)

October 16, 2008 - 7:33pm — csomsekraiah

ಸುನಾಲಿನಿ ಪ್ರಾಧ್ಯಾಪಕಿಯಾಗಿರುವ ಶಿಕ್ಷಣ ಸಂಸ್ಥೆ ಹೆಸರುವಾಸಿಯಾದುದಾಗಿರುತ್ತದೆ . ದೇಶದ ಪ್ರಮುಖರು ಅಲ್ಲಿಗೆ ಅತಿಥಿಗಳಾಗಿ ಬಂದು ಅಲ್ಲಿ ವಿಮರ್ಶೆ ಚರ್ಚಾಕೂಟ ಮುಂತಾದವು ಜರುಗುತ್ತಲೇ ಇರುತ್ತವೆ . ಒಂದು ಸಾರಿ ಸುನಾಲಿನಿ ಕಾಸರಕರು ಮುಂಬೈನ ಕೆಲವು ಗಣ್ಯರೊಡನೆ ಒಂದು ಬೌದ್ದಿಕ ಪ್ರವಾಸ ಕೈಗೊಳ್ಳಬೇಕಾಗುತ್ತದೆ .  ಮುಂದೆ ಓದಿ »

  • ವಿಮರ್ಶೆ
~.~
  • 5 ಪ್ರತಿಕ್ರಿಯೆಗಳು
  • 123 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾರಂತರ ಜೀವಂತ ಪಾತ್ರಗಳು ೧೩ (೨)

October 15, 2008 - 7:56pm — csomsekraiah

ಕಾದಂಬರಿ ತೊಡಗುವುದೇ ’ಹಂದಿಗೋಣ’ ಎಂಬ ಹಂದಿಯೂ ಅಲ್ಲದ ಕೋಣವೂ ಅಲ್ಲದ ವಿಚಿತ್ರವಾದೊಂದು ಹೆಸರಿನ ಊರಿನಿಂದ , ಗೋಕರ್ಣದ ಸಮೀಪದ ಆ ಊರಿಗೆ ಮೂರೂರಿನ ರಾಮಕೃಷ್ಣಯ್ಯನವರ ತಂಗಿಯನ್ನು ಕೊಟ್ಟಿರುತ್ತದೆ . ತಂಗಿಯ ಮಕ್ಕಳ ಉಪನಯನಕ್ಕೆ ರಾಮಕೃಷ್ಣಯ್ಯ ಆ ಊರಿಗೆ ಬಂದಿರುತ್ತಾರೆ .ಉಪನಯನದ ಊಟ ಮುಗಿದು ಎಲ್ಲರೂ ಚಾವಡಿಯಲ್ಲಿ ವಿರಾಮವಾಗಿ ಕುಳಿತಿದ್ದಾಗ , ಗೋಕರ್ಣದ ’ದೇವರುಹೆಗಡೆ’ ಎಂಬ ಹೆಸರಿನ ಮೇಧಾವಿಗೆ ತನ್ನ ಹಸ್ತಸಾಮುದ್ರಿಕ ವಿದ್ಯೆಯಲ್ಲಿನ ಪ್ರಾವೀಣ್ಯವನ್ನು ಪ್ರದರ್ಶಿಸುವ ಚಪಲವಾಗುತ್ತದೆ .ಆಲ್ಲಿ ಆಡುತ್ತಿದ್ದ ಹುಡುಗರಲ್ಲಿ ಒಬ್ಬನನ್ನು ಕರೆದು ಅವನ ಕೈ ನೋಡಿ ಇಂತಹ ಕೈಯಿ ಈ ಜಗತ್ತಿನಲ್ಲಿಯೇ ಇಲ್ಲ ಎಂದು ಘೋಷಿಸಿಬಿಡುತ್ತಾನೆ . ಮೂರೂರು ರಾಮಕೃಷ್ಣಯ್ಯನವರಿಗೆ ಬೇಸರವಾಗುವುದು ದೇವರು ಹೆಗಡೆಯ ಸಾಮುದ್ರಿಕ ಶಾಸ್ತ್ರಕ್ಕಿಂತ ಆ ವ್ಯಕ್ತಿಯ ಗತ್ತು ಮತ್ತು ಅಹಂಕಾರದ ಬಗ್ಗೆ . " ಎಂದೋ ಈ ಹುಡುಗ ಮಹಾರಾಜನಾಗುವುದನ್ನು ಕಾದು ಕುಳಿತು ಕಂಡು ಹಿಡಿಯುವವರಾದರೂ ಯಾರು? ಈಗ ಯಾವ ಬೊಗಳೆ ಬಿಟ್ಟರೆ ಯಾರು ಕೇಳುತ್ತಾರೆ ? " ಎಂದುಕೊಂಡ ರಾಮಕೃಷ್ಣಯ್ಯ ಅಲ್ಲಿಯೇ ಆಡುತ್ತಿದ್ದ ತಮ್ಮ ತಂಗಿಯ ಮಗ ಗಣೇಶನನ್ನು ಕರೆದು ಅವನ ಕೈ ನೋಡಲು ಹೇಳುತ್ತಾರೆ . ಆ ಹುಡುಗ ಕೈ ತೋರಿಸಿದ ರೀತಿ ರಾಮಕೃಷ್ಣಯ್ಯನವರ ಮಾತಿನ ಧಾಟಿ ಎರಡೂ ದೇವರು ಹೆಗಡೆಗೆ ಒಂದು ರೀತಿಯ ಸವಾಲಿನಂತೆ ಭಾಸವಾಗಿ , ತಾತ್ಸಾರವಾಗಿ ಅವನ ಕೈ ನೋಡಿದಂತೆ ನಟಿಸುತ್ತಾ " ಇಂತಹ ಕಳಪೆಯ ಕೈ ತಮ್ಮ ಜೀವಮಾನದಲ್ಲಿಯೇ ನೋಡಿಲ್ಲ ,ಇಂತಹ ಭವಿಷ್ಯವಿಲ್ಲದ ಕೈಯ್ಯನ್ನು ನೋಡಲೂಬಾರದು" ಎನ್ನುವ ಧಾಟಿಯಲ್ಲಿ ಮಾತಾಡಿಬಿಡುತ್ತಾನೆ. ಇಲ್ಲಿಗೆ ಇಂದ್ರನ ಸಭೆಯ ವಶಿಷ್ಟ ವಿಶ್ವಾಮಿತ್ರರ ವಾಗ್ವಾದದ ತರಹ ಆದ ದೇವರು ಹೆಗಡೆ , ರಾಮಕೃಷ್ಣಯ್ಯ ಇವರ ವಾದದಿಂದ, ರಾಮಕೃಷ್ಣಯ್ಯನವರಲ್ಲಿ ಹಠದ ಬೀಜವೊಂದು ಬೆಳೆದು , ತಂಗಿಯ ಮಗನ ಜೀವನವನ್ನು ಅಭಿವೃದ್ದಿಗೊಳಿಸಲೇಬೇಕು ಎಂಬ ಹಠಕ್ಕೆ ಬಿದ್ದು , ಅವನನ್ನು ತಮ್ಮ ಊರಿಗೇ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸುತ್ತಾರೆ . ತಂಗಿಗೆ ಬಹಳ ಮಕ್ಕಳಿದ್ದುದರಿಂದ ಅವಳು ಅಣ್ಣನ ಇಷ್ಟದಂತೆ ಅವನ ಊರಿಗೆ ಮಗನನ್ನು ಕಳುಹಿಸುತ್ತಾಳೆ . ಮುಂದೆ ರಾಮಕೃಷ್ಣಯ್ಯನವರು ತಮ್ಮ ಹೆತ್ತ ಮಕ್ಕಳಿಗಿಂತಲೂ ಈ ತಂಗಿಯ ಮಗನ ಶ್ರೇಯಸ್ಸಿಗೆ ಶ್ರಮಿಸುತ್ತಾರೆ.  ಮುಂದೆ ಓದಿ »

  • ವಿಮರ್ಶೆ
~.~
  • Login or register to post comments
  • 154 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾರಂತರ ಜೀವಂತ ಪಾತ್ರಗಳು ೧೩ (೧)

October 14, 2008 - 5:46pm — csomsekraiah

ಬುದ್ದಿ ಇರುವ ಮನುಷ್ಯನನ್ನು , ಅವನ ಮನಸ್ಸು ಕೆಣಕುತ್ತಲೇ ಇರುವ ವಿಷಯಗಳಲ್ಲಿ ಆಕಾಶವು ಪ್ರಮುಖವಾದುದು . ಕಾಲದಿಂದ ಕಾಲಕ್ಕೆ ಆಕಾಶದ ಬಗ್ಗೆ ಅವನ ಅರಿವಿನ ವಿಸ್ತಾರ ಹೆಚ್ಚುತ್ತಲೇ ಇದೆ . ಈ ವಿಷಯದ ತಿಳಿವಿನಲ್ಲಿ ಪ್ರಾಚೀನ ಕಾಲದ ಭಾರತೀಯರು ಜಗತ್ತಿನ ಬೇರೆ ಭಾಗಗಳ ಜನರಿಗಿಂತ ತುಂಬಾ ಮುಂಚೂಣಿಯಲ್ಲೇ ಇದ್ದರು .  ಮುಂದೆ ಓದಿ »

  • ವಿಮರ್ಶೆ
~.~
  • 2 ಪ್ರತಿಕ್ರಿಯೆಗಳು
  • 127 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾರಂತರ ಜೀವಂತ ಪಾತ್ರಗಳು ೧೨ (೩)

September 30, 2008 - 6:15am — csomsekraiah

ಗೊಂಡಾರಣ್ಯದ ಹಿರಿಯ ಮುಖಂಡ ಅರುಣಾಚಲಯ್ಯ ನಾಡಿನ ಈ ಅಪದೆಶೆಯನ್ನು ಕಂಡೂ, ಏನೂ ಮಾಡಲು ತೋರದ ಅಸಹಾಯಕತೆಯಲ್ಲಿ ಚಿಂತೆಗೀಡಾಗುತ್ತಾನೆ ; ವ್ಯವಸ್ಥೆಯ ವಿರುದ್ದ ಒಂಟಿದನಿಯಾಗಿ ಸೆಣಸುತ್ತಿರುತ್ತಾನೆ . ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಚುನಾವಣೆಗಳೂ ಬರುತ್ತವೆ , ಅವುಗಳಲ್ಲಿ ಮೋಸ ವಂಚನೆಗಳೂ ನಡೆಯುತ್ತವೆ . ಪ್ರಗತಿಗಿಂತ ವಿಪ್ಲವ , ಚಳುವಳಿ , ಸಂಪು , ಬಂದ್ ಇವುಗಳದೇ ಸಾಮ್ರಾಜ್ಯವಾಗುತ್ತದೆ .

ರಾಜ್ಯದಲ್ಲಿ ದೇಶವಾದಿಗಳೂ , ಸಾಮ್ಯವಾದಿಗಳೂ , ಜನವಾದಿಗಳೂ ಮುಂತಾದ ವಿವಿಧ ತಾತ್ವಿಕ ಗುಂಪುಗಳು ತಮ್ಮ ತಮ್ಮ ಸಿದ್ದಾಂತದಂತೆ ಪಕ್ಷಗಳನ್ನು ಕಟ್ಟಿಕೊಂಡು ರಾಜಕೀಯವಾಗಿ ಸೆಣೆಸುತ್ತಾರೆ ; ಆದರೆ ಇದಾವುದರಿಂದಲೂ ಕುಸಿಯುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ನೇರಗೊಳಿಸಲು ಮಾತ್ರ ಸಾಧ್ಯವಾಗುವುದಿಲ್ಲ .  ಮುಂದೆ ಓದಿ »

  • ವಿಮರ್ಶೆ
~.~
  • Login or register to post comments
  • 123 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾರಂತರ ಜೀವಂತ ಪಾತ್ರಗಳು ೧೨ (೨)

September 29, 2008 - 6:40am — csomsekraiah

ಜನತೆಗೆ ಕನಸುಗಳ ಜಾತ್ರೆಯನ್ನೇ ತೋರಿಸಿ ಕ್ರಾಂತಿಯ ಹರಿಕಾರರ ರೀತಿಯಲ್ಲಿ ಬಿಂಬಿಸಿಕೊಂಡ ನಾಯಕರೂ ಸಹ ಆಧಿಕಾರ ಸಿಕ್ಕ ಕ್ಷಣದಿಂದ ನಡೆದುಕೊಂಡ ರೀತಿ ಮಾತ್ರ ಅವರು ಯಾವುದನ್ನು ವಿರೋಧಿಸಿ ಅಧಿಕಾರಕ್ಕೆ ಬಂದರೋ ಅದರ ಮುಂದುವರಿದ ರೂಪವಾಗಿ ; ಅದರದೇ ಪಳೆಯುಳಿಕೆಯಾಗಿ ಬಣ್ಣ ಬದಲಾಯಿಸಿದುದು - ಕಳೆದ ಶತಮಾನದ ರಾಜಕೀಯ ಚರಿತ್ರೆಯನ್ನು ನಿಷ್ಪಕ್ಷಪಾತವಾಗಿ ಗಮನಿಸಿದವರಿಗೆ -  ಮುಂದೆ ಓದಿ »

  • ವಿಮರ್ಶೆ
~.~
  • 2 ಪ್ರತಿಕ್ರಿಯೆಗಳು
  • 149 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789…ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator