Khavi (ಬ್ಲಾಗ್ ಬರಹಗಳು)
ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
September 20, 2007 - 8:44pm — Khaviಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..
ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ
) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ
ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ.. ಮುಂದೆ ಓದಿ »

ಅಗಲಿಕೆ..
September 7, 2007 - 7:43pm — Khaviಅಗಲಿಕೆ..
ಇತ್ತೀಚಿಗೆ ನಿನ್ನ ನೆನಪಿಲ್ಲದ ದಿನಗಳೇ ಇಲ್ಲ
ಹೆಚ್ಚಲ್ಲದಿದ್ದರೂ, ಕಡಿಮೆಯೇನಿಲ್ಲ.
ಮತ್ತೆ ನಾನೇ ನಿಬ್ಬೆರಗಾಗುವೆ,
ಹೇಳಿದರೆ ಹೇಗೆ ನಾ ನಿನಗೆ ಎಷ್ಟೆಂದು?
ಆದರೆ ಮತ್ತೆ ಮುಗುಳುನಗುವೆ
ಗುಟ್ಟು ನನ್ನಲ್ಲಿಯೇ ಇರಲಿ,
ಭರವಸೆಯಲ್ಲೇ ಕಳೆಯುವೆ,
ನೀನೇ ಒಂದು ಸಲ ತಿಳಿಯುವೆ ಎಂದು...
--------------------------------- ಮುಂದೆ ಓದಿ »

- Khavi ರವರ ಬ್ಲಾಗ್
- Login or register to post comments
- 474 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹೀಗೆ ಬರೆಯುತ್ತಿರು...
July 12, 2007 - 8:27pm — Khaviನೀ ಹೀಗೆ ಬರೆಯುತ್ತಿರು
ನೀ ಹೀಗೆ ಹೆಣೆಯುತ್ತಿರು
ಮುದ್ದಾದ ಪದಗಳ ಕವನಮಾಲೆ.
ಕೈ ಹಿಡಿದು ಮುನ್ನಡೆವಳು...
ಹರಸಿ ನಿನ್ನ ಪೊರೆವಳು..
ಕನ್ನಡದ ಕುಲದೇವಿ ಆ ಶಾರದೆ..
---------------------------------------------
ಇದು ನನ್ನ ಗೆಳೆಯ ಪ್ರಶಾಂತನ ಕವನಕ್ಕೆ ಹಾರೈಸಿ ಬರೆದ ಕವನ

- Khavi ರವರ ಬ್ಲಾಗ್
- Login or register to post comments
- 475 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ನೋವು ನಲಿವು..
July 3, 2007 - 5:50pm — Khaviಹೂವು ಮುಳ್ಳಿನ ನಂಟು
ಒಂದೆ ಗಿಡದಲಿ ಉಂಟು
ಹಗಲು ರಾತ್ರಿಯ ಗುಟ್ಟು
ಒಂದಿರದು ಇನ್ನೊಂದ ಬಿಟ್ಟು
ಕಷ್ಟವೆಂದರೆ ಬಾಳು
ನೋವು ನಲಿವಿನ ನೆರಳು
ಇಷ್ಟವೆಂದು ಬಗೆಯಲು
ನಲಿವು ತಾ ನೋವಿನ ಗೆಲುವು..
--------------------------------------------
ನನ್ನದು ಕವಿ ಹೃದಯವಲ್ಲ ಆದರೂ ಗೀಚಿದ್ದೀನಿ.. ಹೇಗಿದೆಯೆಂದು ತಿಳಿಸಿದರೆ.. ಸಂತೋಷ

ಕಡ್ಲಿಮಟ್ಟಿಯ ಕಾಶೀಬಾಯಿ!!!
April 17, 2007 - 10:06pm — Khaviಕಡ್ಲಿಮಟ್ಟಿಯ ಕಾಶೀಬಾಯಿ!!!
"ಕಡ್ಲಿಮಟ್ಟಿಯ ಕಾಶೀಬಾಯಿಯ ಶೀಲಕ ತಂದಿತ್ತ..."
ಇದು ಉ.ಕರ್ನಾಟಕದಲ್ಲಿ ಮನೆಮನೆಗೂ ಗೊತ್ತಿರುವ ಸೊಗಸಾದ ಜಾನಪದ ಹಾಡು. ಇದನ್ನ ನಾನು ಚಿಕ್ಕವನಾಗಿದ್ದಾಗ ಹಾಡತಾ ಇದ್ದೆ. ಆದರೆ ಅದರ ಅರ್ಥ ಮಾತ್ರ ಗೊತ್ತಿರಲಿಲ್ಲ. ಈಗ ನನಗೆ ಇದು ಸಂಪೂರ್ಣವಾಗಿ ಮರೆತು ಹೋಗಿದೆ. ಆದರೆ ಈ ಒಂದು ಸಾಲು ಮಾತ್ರ ನೆನಪಿದೆ. ಇದನ್ನು ನಾನು ಹಾಗೆ ಗುನುಗುತ್ತಿರುವಾಗ ನನ್ನ ಅಮ್ಮ ಈ ಹಾಡಿನ ಹಿಂದಿರುವ ಕಥೆಯನ್ನು ಹೇಳಿದರು. ನೂರೈವತ್ತು ವರ್ಷಗಳ ಹಿಂದೆ ನಡೆದಿದೆ ಅನ್ನಬಹುದಾದ ಒಂದು ಕಥೆ ಅದು. ಅದು ಈಗ ಜಾನಪದ ಗೀತೆಯಾಗಿ ಉತ್ತರಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ.
ಆ ಕಥೆ ಇಂತಿದೆ....
ಬಾಗಲಕೋಟೆಯಿಂದ ಬಿಜಾಪುರಕ್ಕೆ ರೈಲು ಮಾರ್ಗವಾಗಿ ಹೋಗುವಾಗ ಕಡ್ಲಿಮಟ್ಟಿಯನ್ನೊ ಒಂದು ಸ್ಟೇಷನ್ ಬರುತ್ತೆ. ಕಡ್ಲಿಮಟ್ಟಿಯಲ್ಲಿ ಕಾಶೀಬಾಯಿ ಅನ್ನೊ ಒಬ್ಬ ಸಾಮಾನ್ಯ ಕೂಲಿ ಹೆಣ್ಣುಮಗಳೊಬ್ಬಳ ಕಥೆ ಇದು. ಅವಳಿಗೆ ಒಂದು ಚಿಕ್ಕ ಹಸುಳೆಯು ಇತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಬೇರೆ. ಗಂಡನ ಕೂಲಿ ಸಾಕಾಗುವುದಿಲ್ಲ ಎಂದು ತಾನೂ ಕೂಡ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಳು.
ಒಂದು ದಿನ ಹಾಗೆಯೇ ಕೂಲಿ ಮಾಡಿ, ಮನೆಗೆ ಹಿಂತಿರುಗಬೇಕೆನ್ನುವಷ್ಟರಲ್ಲೇ ಅದಾಗಲೇ ಕತ್ತಲು ಆವರಿಸಿತ್ತು. ಜನರೆಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದ್ದರು. ತಾನು ತನ್ನ ಹಸುಳೆಯೊಂದಿಗೆ ಮನೆಕಡೆಗೆ ಹೆಜ್ಜೆ ಹಾಕಿದಳು ಕಾಶೀಬಾಯಿ ದಾರಿಯಲ್ಲಿ ಊರ ಹೊರಗಿನ ರೈಲ್ವೆ ಸ್ಟೇಷನ್ ಹತ್ತಿರ ಬಂತು. ಅದು ಇನ್ನೂ ಊರ ಹೊರಗಡೆ ಇದ್ದುದರಿಂದ ನಿರ್ಜನ ಪ್ರದೇಶವಾಗಿತ್ತು. ಮುಂದೆ ಓದಿ »


RSS: