quotes
ಬಸವಣ್ಣನ ನುಡಿ
July 17, 2008 - 12:42pm — makrumanjuಹಾವು ತಿಂದವರ ನುಡಿಸಬಹುದು
ಗರಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರು ಕೂಡಲಸಂಗಮದೇವ||

ಆದಾಯ
July 15, 2008 - 8:49pm — vinyasaಆದಾಯ ಎನ್ನುವುದು ಒಂದು ಪಾದರಕ್ಷೆ ಇದ್ದಂತೆ.
ಚಿಕ್ಕದಾದರೆ ಕಚ್ಚುತ್ತದೆ,
ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ

ನೀ ಲೋಕದ ಚಿಂತೀ ಮಾಡುತ್ತೇನಂತಿ...
July 13, 2008 - 7:51pm — anupkumartನೀ ಲೋಕದ ಚಿಂತೀ ಮಾಡುತ್ತೇನಂತಿ
ಯಾರ ಬ್ಯಾಡ ಅಂದಾರ ಮಾಡಪ್ಪಾ ಚಿಂತೀ
- ಸಂತ ಶಿಶುನಾಳ ಶರೀಫರು





RSS: