ನನ್ನ ಪದ್ಯ
ಪದ್ಯವೊನ್ದ ಬರೆದೆನು ಶ್ರಾವಣದೀ ಸನ್ಜೆಯನ್ದು
ತಿಳಿಯಲಿಲ್ಲ ಮನಕೆ ಬಯಕೆ ಏಕಾಯ್ತೆನ್ದು
ಚರ್ಚಿಸಿದೆನು ಎನ್ನೊಳು ಏನು ಇದಕೆ ಕಾರಣ
ಸಿಕ್ಕುವುದಿಲ್ಲ ಬಿರುದು ಸನ್ಮಾನ ಇಲ್ಲವೇ ಇಲ್ಲ ಹಣದ ಝಣಝಣ
ಛೇಡಿಸುವರು ಜನರು ಸೊಮಾರಿಗಳ ಕಾಲಹರಣವೆನ್ದು
ನಗುವರು ಮೂರ್ಖತೆಯ ಪ್ರಮಾಣವೆನ್ದು
ಚಿನ್ತೆಯಲಿ ಈಕ್ಷಿಸಿದೆನು ನಾ ಬರೆದ ಪದ್ಯವಾ
ಪದ್ಯದೀ ಕಣ್ಡೆನು ಎನ್ನ ಮನದ ಭಾವವ
ಸೂರ್ಯನ ರಶ್ಮಿಗೆ ಮನ್ಜು ಕರಗುವನ್ತೆ
ಮಾಸುವವು ಭಾವಗಳು ಕಾಲ ಕಳೆದನ್ತೆ
ಪದ್ಯಗಳು ಭಾವಗಳ ರಕ್ಷಿಸುವ ಸಾಧನ
ಅವುಗಳ ಮಧುರ ನೆನಪಾಗಿಸುವ ವಿಧಾನ
ಮುಗಿಯಿತು ಯುಕ್ತಿಯ ವಿಶ್ಲೇಶಣೆ, ಮೂಡಿತು ಮನದಿ ಹರುಷದ ಭಾವನೆ
ಒಡನೆ ಬರೆದೆನು ಈ ಪದ್ಯವ, ಮಧುರ ನೆನಪಾಗಿಸಿದೆನು ಈ ಹರುಷದಾ ಭಾವವ








RSS: