ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 24, 2024
ಅಡಿಯನು ಮೆಲ್ಲಗೆ ಇಡುತಿರು ಪ್ರಿಯತಮೆ
ದಡವದು ಕೊಂಚ ದೂರವಿದೆ
ಹಿಡಿದಿರು ಕರವನು ಬಿಡೆ ನಾ ಜಾರಲು
ಕೊಡುವೆನು ವಚನ ನಾ ನಿನಗೆ
ಬಾಳಿನ ಪಯಣದಿ ಬೀಳದೆ ಸಾಗಲು
ಜೋಳಿಗೆ ತುಂಬ ಪ್ರೀತಿಯಿದೆ
ತಾಳುವ ಭಾವವು ಬಾಳಿಗೆ ಬೇಕಿದೆ
ತೋಳನು ಚಾಚಿ ನಿಂತಿರುವೆ
ಒಪ್ಪದಿ ಬಾಚಿದ ಕಪ್ಪಿನ ಕೂದಲು
ತಪ್ಪಿಸಿಕೊಂಡ ಮುಂಗುರುಳು
ಒಪ್ಪಿದ ಮನಗಳು ತಪ್ಪದೆ ಬೆರೆವವು
ತುಪ್ಪದ ಸವಿಯು ಪ್ರೇಮದೊಳು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ವಾಟ್ಸಾಪ್)
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 23, 2024
ಪುಸ್ತಕವ ತೆರೆದು ಓದುತ ನಲಿಯುತಲಿ
ಕಲಿತ ವಿಷಯವು ಮಸ್ತಕದಲಿರಲಿ
ಅಜ್ಞಾನವದು ಮನದಿಂದ ದೂರವಾಗುತಲಿ
ಪುಸ್ತಕದ ಜ್ಞಾನ ಜಲದಂತೆ ಹರಿದು ಬರಲಿ
ಮೊದಲು ತಲೆಯ ತಗ್ಗಿಸಿ ಓದು
ಮತ್ತೆ ಲೋಕದೊಳು ತಲೆಯೆತ್ತಿ ಬಾಳು
ಸನ್ಮಾನ ಗೌರವಗಳು ತಾನಾಗಿ ಬರುವುದು
ಬದುಕು ಬಂಗಾರವಾಗುವುದು ಕೇಳು
*ವಿಶ್ವ ಪುಸ್ತಕದ ದಿನ* ಜೈಕಾರ ಹಾಕಿನ್ನು
ಕೊಂಡು ಓದುವೆ ಪುಸ್ತಕವ ಅನುದಿನವುಯೆನ್ನು
ಪುಸ್ತಕದ ಕೃತಿಸ್ವಾಮ್ಯ ಇರಲಿ ಎಂದೆಂದೂ
ಪ್ರಕಟಿಸಿದ ಪುಸ್ತಕಕೆ ಮನ್ನಣೆ ಸಿಗಲೆಂದು
ದೇಶ ಸುತ್ತುತಲೆ ಪುಸ್ತಕವ ನೋಡು
ಜ್ಞಾನ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 22, 2024
ಕೊರಗಿ ಕೊರಗಿ ಮನದೆ ಶಶಿಯು
ಸೊರಗಿ ಸೊರಗಿ ಕೊಂಚ ಕೊಂಚ
ಕರಗಿ ಮುಗಿದು ಕೊನೆಯಲೊಮ್ಮೆ ಶೂನ್ಯ ತಲಪಿದ
ಮರುಗಿದಂಥ ಚುಕ್ಕಿ ತಾರೆ
ಕರೆದು ಶಶಿಯ ನೋವ ಕಳೆಯೆ
ಮೆರೆಯೆ ಮತ್ತೆ ಗುಂಡಗಾದ ಬೆಳಕು ಚೆಲ್ಲಿದ
ಇರುಳ ಲಾಂದ್ರ ಚುಕ್ಕಿ ಚಂದ್ರ
ಮರಳೆ ತನ್ನ ಕಾರ್ಯವೆಸಗೆ
ಧರಣಿಯಲ್ಲಿ ಮತ್ತೆ ಬಂತು ಸೆಳೆವ ಹುಣ್ಣಿಮೆ
ಮರೆಯನೇನು ಹಳೆಯ ಚಾಳಿ
ಕೊರಗಿನಲ್ಲಿ ಸವೆಯತೊಡಗಿ
ಕರಗಿ ಶೂನ್ಯವಾಗೊ ಚಟದ ಪುನರಾವರ್ತನೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಅಂತರ್ಜಾಲ
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 21, 2024
ಮತ್ತೆ ಮತ್ತೇ ಅಲ್ಲೆ ನಿಂತು
ಮುಗುಳು ನಗೆಯಾ ಚೆಲ್ಲುತ
ಹಿಂದೆ ತಿರುಗೀ ನನ್ನ ನೋಡಿ
ಕಣ್ಣು ಕಣ್ಣೂ ಬೆರೆಸುತ
ನನ್ನಲೇನೋ ಬೆಂಕಿ ಹಚ್ಚಿ
ದೂರ ಹೋಗೀ ಕುಳಿತೆಯಾ
ಒಳಗೆ ಸುಡುತಾ ಬೇಯಲೀಗ
ನಗುತ ಸುತ್ತಾ ಸುಳಿದೆಯಾ
ರವಿಯ ಕಿರಣಾ ರಾಶಿಯೊಳಗೆ
ಕೇಶರಾಶೀ ಸೇರುತ
ಅದರ ರಶ್ಮೀ ನನ್ನ ಮೈಗೆ
ತಾಗಿ ಮುತ್ತಾ ಒತ್ತುತ
ನೀನು ಬರದೇ ಇರುಳನಿಲ್ಲಿ
ನಾನು ಹೇಗೇ ಕಳೆಯಲಿ
ಚಂದ್ರ ತಾರೇ ಚೆಲುವಿನಲ್ಲಿ
ನಮ್ಮ ಪಯಣಾ ಸಾಗಲಿ
***
ಗಝಲ್
ಬದುಕಿನಲ್ಲಿ ಸವಿಯನು ತಿನಿಸಲೇ ಗೆಳತಿ
ಜೀವನದಲ್ಲಿ ಪ್ರೇಮವ ಕುಣಿಸಲೇ ಗೆಳತಿ
…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 20, 2024
ಹಸಿರಿನ ಗಿಡಮರ ನಶಿಸಲು ತೊಡಗಿವೆ
ಬಿಸಿಲಿನ ತಾಪ ಮಿತಿಮೀರಿ
ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ
ಮುಸುಕಿದೆ ಚಿಂತೆ ಬಾಯಾರಿ
ಮಾತಲಿ ನುಡಿವರು ರೈತಗೆ ಬೆಂಬಲ
ಕಾತರದಿಂದ ಕಾದಿಹನು
ಭೂತದ ಬಾಯಲಿ ಗೀತೆಯ ಕೇಳುತ
ಸೋತಿಹ ಕೃಷಿಕ ನೊಂದಿಹನು
ಮೋಡವು ಮಳೆಯನು ನೀಡದೆ ನಡೆದಿರೆ
ಕಾಡಿದೆ ಬುವಿಯ ನೀರಿರದೆ
ಮೋಡಿಯ ಮಾತಿಗೆ ಹಾಡಿತು ಹೃದಯವು
ತೋಡಿತು ಗುಂಡಿ ಅರಿವಿರದೆ
ಕೃಷಿಕನ ಬಾಳಲಿ ಖುಷಿಯದು ಮೂಡಲಿ
ನೊಸಲಲಿ ನೆರಿಗೆ ಬರದಿರಲಿ
ಕೆಸರಲಿ ಕರಗಳ ಬೆಸೆಯುವ ರೈತನ
ಮೊಸರಿನ ತಟ್ಟೆ ತುಂಬಿರಲಿ||
-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 19, 2024
ಈಟಿನ ಗಿಡವಿದು ಚಂದದಿ ಚಿಗುರಿದೆ
ಸಾಟಿಯು ಇಲ್ಲದೆ ಸೊಗಸಾಗಿ
ತೋಟದಿ ಬೆಳೆಯುವ ಗಿಡಕಿದು ಪೋಷಣೆ
ಕಾಟವ ನೀಡದು ಕಳೆಯಾಗಿ
ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ
ನಾಟಿದರಾಯಿತು ಬೆಳೆಯುವುದು
ಕೋಟೆಗೆ ಬೇಲಿಯ ರೂಪದಿ ಬೆಳೆದರೆ
ದಾಟಲು ಬಿಡದಿಹ ಭದ್ರತೆಯು
ಮಳೆಯಲಿ ದೊರೆಯುವ ನೀರನು ಬಳಸುತ
ಬೆಳೆವುದು ತಾನೇ ಚಂದದಲಿ
ಬೆಳೆಗಳ ಗಿಡಕಿದು ಉತ್ತಮ ಗೊಬ್ಬರ
ಕೊಳೆತಿಹ ಈ ಗಿಡದೆಲೆಗಳಲಿ
ಸಾಕುವ ಸಲಹುವ ಪ್ರೀತಿಯ ಬಯಸದು
ಸಾಕೆನುವಷ್ಟರ ಹಸಿರಿಹುದು
ಬೇಕಿಹ ಸತ್ವವ ತಾನೇ ಪಡೆವುದು
ಶೋಕವ ತೋರದು ಬಸವಳಿದು||
-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 18, 2024
ಸೋತಿರುವ ಮುಖದಲ್ಲಿ
ಮಂದಹಾಸ ಮೂಡುವುದೆ
ಜಗದ ನಿಯಮಗಳರಿವು ತಿಳಿಯುವುದೇ ಹೇಳು
ಮದನ ಮೋರೆಯು ಇಲ್ಲ
ಸುಖದ ನನಸದು ವಿಷವೆ
ಕನಸ ಗೋಪುರದೊಳಗೆ ಬಾಳುವೆಯೇ ಹೇಳು
ಹುಟ್ಟಿದಾಕ್ಷಣ ನಗುವು
ಸತ್ತಾಗ ಅಳುವೆಲ್ಲ
ಕಿತ್ತು ತಿನ್ನುವ ನೋವು ಹೃದಯದಲೇ ಹೇಳು
ಬಾಲ್ಯವನು ಕಳೆಯುತಲೆ
ಯೌವ್ವನದ ಮೋಹದಲಿ
ಮುದ್ದಾದ ಪ್ರಿಯತಮನ ಪಡೆಯುವೆನೇ ಹೇಳು
ತಿರುಗಾಟ ಹುಡುಕಾಟ
ನಡೆಯುತಿರೆ ಶನಿಕಾಟ
ಜೊತೆಗೆ ಇರುವರ ಕಾಟ ಬದುಕುವೆನೇ ಹೇಳು
ಶಿಖರ ದಾಟಿದ ಸಾಲ
ತನುಮನವ ಬಂಧಿಸಿರೆ
ಚಿತ್ತ ಶಾಂತಿಯು ಹೋಗೆ ಮೌನವಿದೆಯೇ ಹೇಳು
…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 17, 2024
ರಾಜಕೀಯ...
ತಮ್ಮ ತಮ್ಮ
ಪಕ್ಷದ
ಎಂ ಪಿ
ಎಂಎಲ್ಎ ಗಳಿಗೇ
ಭಾರೀ
ಅನುದಾನ...
ವಿರೋಧ
ಪಕ್ಷದ
ಪರಮ
ಪಾಪಿಗಳಿಗೆ
ಉಳಿದಿರುವುದು
ಬರೀ ರೋದನ!
***
ಬಿಸಿ-ಹಸಿ ಸುಳ್ಳು
ಬಿಸಿ ಬಿಸಿಯಾದ
ಹಸಿ ಹಸಿ ಸುಳ್ಳು-
ಈ ನಮ್ಮ
ಚುನಾವಣಾ
ಅಭ್ಯರ್ಥಿಗಳ
ಆಸ್ತಿ ಘೋಷಣೆ...
ಮೂಗು
ಮುಚ್ಚಿಕೊಂಡು
ನಕ್ಕು- ಓಟು
ಹಾಕುವುದೊಂದೇ
ನಮ್ಮ ಪಾಲಿಗಿರುವ
ವ್ಯರ್ಥ ಬವಣೆ!
***
ಜಾಣತನ
ರಾಜಕೀಯದಲಿ
ಹಣ ಮಾಡುವ
ವಿಷಯ
ಅಲ್ಲ
ಅಷ್ಟು
ದೊಡ್ಡತನ...
ಮಾಡಿದ
ಸಂಪತ್ತನು
ಉಳಿಸಿಕೊಳ್ಳಲು
ಅತ್ತಿಂದಿತ್ತ
ಹಾರಾಡುವುದೇ
ಜಾಣತನ!
***
ಇತಿಹಾಸ…
ಲೇಖಕರು: kavitha@ramesh
ವಿಧ: ಕವನ
April 16, 2024
ಉಷೆಯು ನಗುವಲಿ
ನಿಶೆಯ ಸರಿಸುತ
ಹಸಿರು ವನಸಿರಿ ಚೆಲುವಲಿ
ಮಿಸುಪ ಕಾಂತಿಗೆ
ಬೆಸನ ಬಯಸುತ
ಧಿಷಣ ಕುಶಲದ ನೆಪದಲಿ
ಒಂಟಿ ಪಯಣದೆ
ಜಂಟಿಯಾಗವೆ
ತುಂಟತನವನು ತೋರೆನು
ತಂಟೆ ಮಾಡದೆ
ನಂಟು ಬಯಸುತ
ನೆಂಟನಾಗುವ ಕೋರಿಕೆ
ಮುನ್ನ ಮನ್ನಿಸು
ಬೆನ್ನ ಹತ್ತಿದೆ
ಕೆನ್ನೆ ರಂಗಿಗೆ ಸೋತೆನು
ನಿನ್ನ ಕಾಲ್ಗಳ
ಹೊನ್ನ ಗೆಜ್ಜೆಯ
ಚೆನ್ನ ನಾದವು ಘಲಿರಲಿ
ಯಾವ ರಾಗದೆ
ಭಾವ ತುಂಬುತ
ಜೀವ ವೀಣೆಯ ಮಿಡಿಸಲಿ
ನಾವೆ ಪಯಣದೆ
ನೀವು ಬೆರೆತರೆ
ನೋವ ಮರೆಯುತ ನಲಿಯುವ
(ಜಲ ಷಟ್ಪದಿ ಕವನ)
ಬೆಸನ = ಅಪ್ಪಣೆ ಧಿಷಣ = ಪ್ರತಿಭಾವಂತ
-ಕಾ ವಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
April 16, 2024
ಮುಡಿತುಂಬ ಮಲ್ಲಿಗೆಯ
ಮುಡಿದಿರುವೆ ನೀ ಚೆಲುವೆ
ಕುಡಿನೋಟ ನೀನೇಕೆ ಮರೆಸಿ ನಿಂತೆ
ಬಡಿಗೆಯಲಿ ಒಂದೆರಡು
ಬಡಿದು ಬಿಡು ಮನ ತಣಿಯೆ
ಕಡೆಗಣಿಸಿ ತೆರಳದಿರು ನನ್ನ ಕಾಂತೆ
ಬಂಗಾರದೊಡವೆಯಲಿ
ಶೃಂಗಾರಗೊಂಡಿರುವೆ
ಸಂಗಾತಿ ನೀನೀಗ ಬಳಿಗೆ ಬಾರೆ
ಸಿಂಗಾರಿ ನಿನ್ನಿಂದ
ದಂಗಾಗಿ ಹೋಗಿರುವೆ
ತಂಗಾಳಿಯಂದದಲಿ ಹಿತವ ತಾರೆ
ಕನಸೆಲ್ಲ ಕೈಗೂಡಿ
ನನಸಾಗಿ ಬಂದಿರಲು
ಮುನಿಸೇಕೆ ನನ್ನಲ್ಲಿ ಹೇಳು ಚೆಲುವೆ
ಮನದೊಳಗೆ ಕುಳಿತಿರುವೆ
ಕಣಕಣದಿ ಬೆರೆತಿರುವೆ
ಮನದನ್ನೆ ತೊರೆ ಮೌನ ಜೊತೆಗೆ ಬೆರೆವೆ||
-ಪೆರ್ಮುಖ ಸುಬ್ರಹ್ಮಣ್ಯ…