ಶಿವರಾಮ ಕಾರಂತರು

ಈ ತೈಲವರ್ಣಚಿತ್ರ ಉದಯ್ ಜಾದೂಗಾರ್ ತೆಗೆದ ಒಂದು ಛಾಯಾಚಿತ್ರದ ಕಾಪಿ.
ಇದನ್ನು ಹಿಡಿದುಕೊಂಡು ’ಸುಹಾಸ’ ಕ್ಕೆ ೯೨ ರಲ್ಲಿ ಹೋಗಿದ್ದೆ. ಅಂದು ಕಾರಂತರ ಹುಟ್ಟುಹಬ್ಬದ ದಿನ. ಸಾಲಿಗ್ರಾಮದ ನನ್ನ ಒಬ್ಬ ಗೆಳೆಯ ಡಾ.ಹರಿಪ್ರಸಾದ್ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು.
ಕಾರಂತರು ಚಿತ್ರದ ಚೌಕಟ್ಟಿನ ಕಾಗದದ ಮೇಲೆ ಸಹಿ ಮಾಡಿದ್ದರಿಂದ ಈ ಚಿತ್ರದಲ್ಲಿ ಅದು ಕಾಣುತ್ತಿಲ್ಲ.
ಇದನ್ನು ನೋಡಿ ಅವರು ’ ಯಾವುದೋ ಚಿತ್ರವನ್ನು ನೋಡಿ ಚಿತ್ರ ಬರೆಯುವುದಕ್ಕಿಂತ ವ್ಯಕ್ತಿಯನ್ನೇ ಎದುರಿಗಿರಿಸಿ ಚಿತ್ರ ಬರೆದರೆ ಚೆನ್ನಾಗಿರುತ್ತದೆ’ ಎಂದಿದ್ದರು. ಹಾಗೇ ’ಬಣ್ಣಗಳ ಬಗ್ಗೆ ವ್ಯಾಮೋಹ ಒಳ್ಳೆಯದಲ್ಲ’ ಅಂದಿದ್ದರು. ಬಹುಶಃ ಅವರಿಗೆ ಫಿನಿಶಿಂಗ್ ಚೆನ್ನಾಗಿಲ್ಲ ಅನ್ನಿಸಿತ್ತೋ ಏನೋ.
ಕಿಶೋರ್.

- Login or register to post comments
- 783 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS: