ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

May 1, 2007 - 10:06am — venkatesh
ಸೂಳೆಕೆರೆ,  (ಶಾಂತಸಾಗರ)  ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು.   ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

*
ಸೂಳೆಕೆರೆ, ಭಾರತದ ಅತಿದೊಡ್ಡಕೆರೆ. ಅಷ್ಟೇಕೆ ಏಶಿಯಾದ ಅತ್ಯಂತ ದೊಡ್ಡಕೆರೆಗಳಲ್ಲಿ ಎರಡನೆಯದು, ಸೂಳೆಕೆರೆ ಅಥವಾ ಶಾಂತ ಸಾಗರ. ೬೦ ಚದರ ಕಿ. ಮೀ. ವಿಸ್ತೀರ್ಣದ ಈ ಮಹಾಕೆರೆ, ಚಿತ್ರದುರ್ಗ, ಜಗಳೂರಿನ ಜಮೀನುಗಳಿಗೆ ನೀರಾವರಿಯ ಸೌಕರ್ಯ ಕಲ್ಪಿಸುವ ಒಂದು ಪ್ರಮುಖ ಸಾಧನವಾಗಿದೆ. ಇದು ಮಲೆನಾಡು ಮುಗಿದು ಬಯಲುನಾಡಿಗೆ ಪಾದಾರ್ಪಣೆ ಮಾಡುವ ಸ್ಥಳದಲ್ಲಿ ಇದೆ.

ಪಶ್ಚಿಮಘಟ್ಟಗಳಿಂದ ಹರಿದು ಬರುವ ನೀರು ತಗ್ಗಾದ ಬೆಟ್ಟದಡಿಯಲ್ಲಿ ನಿಲ್ಲುತ್ತದೆ. 'ಭದ್ರಾ ಛಾನಲ್' ನೀರೂ ಇಲ್ಲಿಗೆ ಸೇರುವುದಂತೆ. ವರ್ಷವಿಡೀ ನೀರು ಇಂಗದೆ ಹತ್ತಿರದ ಗ್ರಾಮಗಳಿಗೆ ಕುಡಿಯುವ ನೀರು, ವ್ಯವಸಾಯಕ್ಕೆ ಹೇಳಿಮಾಡಿಸಿದಂತೆ ಅನುಗ್ರಹ ನೀಡುತ್ತಿದ್ದ ಈ ಮಹಾಕೆರೆ ೩ ವರ್ಷಗಳಿಂದ ಸರ್ಕಾರದ ನಿರಾಸಕ್ತಿಯಿಂದ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.( ನೀರಿನ ಮಟ್ಟ ಗಮನಾರ್ಹವಾಗಿ ತಗ್ಗಿದೆ ) ಈ ಸ್ಥಳದವರೇ ಆಗಿದ್ದ, ಹಿಂದಿನ ಮುಖ್ಯ ಮಂತ್ರಿ ಜೆ. ಎಚ್. ಪಾಟೀಲ್ , ಸ್ವಲ್ಪ ಹೆಚ್ಚಿಗೆ ನಿಗವಹಿಸಿದ್ದಿದ್ದರೆ, ಈ ಕಾರ್ಯ ಸುಗಮವಾಗುತ್ತಿತ್ತೋ ಏನೋ !

ಶಾಂತಸಾಗರದ ಚರಿತ್ರೆ ತುಂಬಾ ಆಕರ್ಷಕವಾಗಿದೆ. ಈ ಕೆರೆಯ ಹಿಂದಿನ ಹೆಸರು, ಸ್ವರ್ಗಾವತಿ. ಶಾಂತವ್ವ ಎಂಬುವರು ಈ ಸ್ಥಳದ ಸರದಾರನ ಮಗಳು . ಆಕೆಗೆ ರಾತ್ರಿ ಸಮಯಯಲ್ಲಿ ಹೊರಗೆ ಓಡಾಡುವ ಅಭ್ಯಾಸವಿತ್ತಂತೆ. [ ನಿಶಾಚರ ಸ್ವಭಾವ] ಒಮ್ಮೆ ಆಕೆಯ ತಂದೆ ಶಾಂತವ್ವ ಹೊರಗೆ ಹೋಗುತ್ತಿದ್ದಾಗ ಹಿಂಬಾಲಿಸಿ ತಾನೂ ಅವಳ ಹಿಂದೆ ಹೋದನಂತೆ. ಶಾಂತವ್ವ ಒಬ್ಬ ದೇವಮಾನವನನ್ನು ಭೇಟಿಮಾಡಿ ಅದೃಷ್ಯಳಾದದ್ದನ್ನು ಕಂಡು ಆತ ವಿಚಲಿತನಾದನಂತೆ. ತಕ್ಷಣ 'ಶಾಂತವ್ವ' ಎಂದು ಜೋರಾಗಿ ಚೀರಿ, ಮೂರ್ಛೆಹೋದನಂತೆ. ತಂದೆಯ ಮನಸ್ಸನ್ನು ಅರಿತ ಶಾಂತವ್ವ ಕಾಡಿನಲ್ಲೇ ಉಳಿದಳಂತೆ. ಅಲ್ಲಿಯೇ ಇದ್ದು ಒಂದು ಭವ್ಯವಾದ, ಅತಿ ದೊಡ್ಡ ಸಾಗರದಂತಹ ಕೆರೆ ನಿರ್ಮಿಸಿದಳೆಂದು ಸ್ಥಳ ಪುರಾಣಗಳು ಸಾರುತ್ತವೆ. ಲೋಕಾರೂಢಿಯಲ್ಲಿ ಜನ ಆ ಕೆರೆಯನ್ನು ಸೂಳೆಕೆರೆ ಯೆಂದು ಕರೆದರು. ಅದನ್ನು ಶಾಂತಸಾಗರವೆಂದೂ ಕರೆಯಲಾಯಿತು.

ಚಿತ್ರದುರ್ಗದಜನ, ನೀರಿನ ಬೇಗೆಯಿಂದ ಬೇಸತ್ತು ಬಹಳ ಸಂಕಟವನ್ನು ಅನುಭವಿಸುತ್ತಿದ್ದಾರೆ. ಕುಡಿಯುವನೀರಿನ ಪೂರೈಕೆಯನ್ನು ಗಮನದಲ್ಲಿಟ್ಟಿಕೊಂಡು, ಹಿಂದಿನ ಕರ್ನಾಟಕ ಸರ್ಕಾರ, ಸೂಳೆಕೆರೆಯ ನೀರನ್ನು ದೊಡ್ಡ ದೊಡ್ಡ ಪೈಪುಗಳ ಮೂಲಕ ಚಿತ್ರದುರ್ಗಕ್ಕೆ ಸಾಗಿಸಲು ವ್ಯವಸ್ಥೆ ಮಾಡಿತ್ತು. ಅದು ಇನ್ನು ಸರಿಯಾಗಿ ಕಾರ್ಯರೂಪಕ್ಕೆ ಬರಬೇಕು.

ಶಾಂತಸಾಗರವನ್ನು ಒಂದು ಪ್ರವಾಸಿ ತಾಣವನ್ನಾಗಿಯೂ ಮಾಡಬಹುದು. ಎರಡು ಬೆಟ್ಟಗಳ ಮಧ್ಯೆ 'ರೋಪ್ ವೇ' ಹಾಕಿಸಿದರೆ ಸಾಕು. ಹೆಚ್ಚು ನೀರು ನಿಲ್ಲಲು ಅವಕಾಶ ಮಾಡಿಕೊಡಬೇಕು. ಪ್ರವಾಸಿಕಗರಿಗೆ ಬೋಟಿನಲ್ಲಿ ಹೋಗಲು ಸೌಲಭ್ಯವನ್ನೂ ಕಲ್ಪಿಸಿ ಕೊಡಬಹುದು. ಬೇಕಾದಷ್ಟು ಕೆಲಸ ಮಾಡಬಹುದು. ಸರ್ಕಾರಕ್ಕೆ ಇಂತಹ ಜನಕಲ್ಯಾಣ ಕಾರ್ಯಕ್ರಮ ಮಾಡಲು ಪುರುಸೊತ್ತು ಬೇಕು. ರಾಜಕೀಯದ ಬಿರಿಸು ವಾತಾವರಣದಲ್ಲಿಯೂ ಸ್ವಲ್ಪ ಸಮಯ ವಿನಿಯೋಗಿಸಿ ಕರ್ನಾಟಕದ ಜನರ ಹಿತರಕ್ಷಣೆಗೆ ಗಮನ ಕೊಡುವುದು ಈಗ ನಮ್ಮ ಮುಂದಿರುವ ಪ್ರಮುಖ ಮುದ್ದೆಗಳಲ್ಲೊಂದು.

ಈಗಿನ ಸರ್ಕಾರಕ್ಕೆ ಚಿತ್ರದುರ್ಗದಂತಹ ಬೆಂಗಾಡಿಗೆ ನೀರಿನ ಪೂರೈಕೆ ಮಾಡುವ ಕೆಲಸ ಪರಮಾದ್ಯತೆಗಳಲ್ಲಿ ಒಂದು ಎಂದು ನಾವು ಮತ್ತೊಮ್ಮೆ ಮನವಿಮಾಡುತ್ತೇವೆ.

[ಚಿತ್ರದುರ್ಗದ ನಿವಾಸಿಗಳೆಲ್ಲಾ]

*ಇಲ್ಲಿ ನನಗೆ ಸಿಕ್ಕ, ಕೆರೆಯ ಚಿತ್ರ ಸುಮಾರು ಹಲವು ದಶಕಗಳ ಹಿಂದಿನದು. ಎಲ್ಲೂ ಪ್ರಸಕ್ತ ವರ್ಷದ ಚಿತ್ರ ದೊರೆಯಲಿಲ್ಲ. ಯಾರಾದರೂ ಅದನ್ನು ಒದಗಿಸಿದಲ್ಲಿ ನಾನು ಕೃತಜ್ಞ !

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 528 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 25, 2008 - 11:36pm — shaamala

ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

shaamala's picture

ಖಂಡಿತ ಬೇಡ!!! ಪ್ರವಾಸಿಗರು ಬಂದು ಅವರ ಒಂದು ದಿನದ ಸಂತೋಷಕ್ಕಾಗಿ ಕೆರೆಯ ಪರಿಸರವನ್ನೆಲ್ಲಾ ಹಾಳುಮಾಡುತ್ತಾರೆ. ಅದರ ಬದಲು ಅದನ್ನು ಸುರಕ್ಷಿತ ಪ್ರದೇಶವೆಂದು ಘೋಷಿಸಿ ಬೇಲಿ ಹಾಕಿ ಸುತ್ತ ೩-೫ ಮೈಲಿ ಫಾಸಲೆಯಲ್ಲಿ ಯಾವುದೇ ರೀತಿಯ ಜನವಸತಿ ಇರದಂತೆ ನಿಷೇಧಿಸಿ ಕಾಪಾಡುವುದು ಉತ್ತಮ.

ಶಾಮಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ
  • ದೋಣಿ
  • ಕಾವೇರಿ
  • ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !
  • ಚಿತ್ರಾವತಿನದಿಗೆ ಅಡ್ಡಲಾಗಿ ಕಟ್ಟಲಾದ, ಪರಗೋಡು ಜಲಾಶಯ- ಈಗಿನ ಪ್ರಮುಖ ಆಕರ್ಶಣೆಗಳಲ್ಲೊಂದು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಭರತನಾಟ್ಯದ ಅದ್ಭುತ ಸೌಂದರ್ಯದ ದೇಸಿಸವಿಯನ್ನು,  ಅಮೆರಿಕದಲ್ಲಿ ಕಂಡೆವು !

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator