ತಿಳಿವು ಮಾರ್ಪು-ಅರ್ಥಾಂತರ!
ಒಂದು ನುಡಿಯಿಂದ ಮತ್ತೊಂದು ನುಡಿಗೆ ಒರೆಗಳು ಬಂದಾಗ ಅವುಗಳ ತಿಳುವು ಬದಲಾಗಿ ಹೋಗುವುವು.
ಮಾದರಿ
ರಕ್ತ ಸಂಸ್ಕ್ರುತದ ಬಳಕೆಯಲ್ಲಿ ಕೆಂಪು, ನೆತ್ತರು
-----ರಕ್ತಚಂದನ, ರಕ್ತವಸ್ತ್ರ, ರಕ್ತಾಕ್ಷ
ಕನ್ನಡದಲ್ಲಿ ರಕ್ತ ಬರೀ ನೆತ್ತರು
ವಾರ್ತಾ - ಸಂಸ್ಕ್ರುತದಲ್ಲಿ ಮಾತು, ಸಂಗತಿ.. ಅದಲ್ಲಿ ಸುದ್ದಿಗೆ ಸಂದೇಶ ಎಂಬ ಒರೆ ಬಳಕೆ ಅಲ್ಲವೇ.
ವಾರ್ತೆ - ಕನ್ನಡದಲ್ಲಿ ಬರೀ ಸುದ್ದಿ.
ವಿದ್ಯುತ್ - ಸಂಸ್ಕ್ರುತದಲ್ಲಿ ಮಿಂಚು, ಕನ್ನಡದಲ್ಲಿ ಕರೆಂಟು
ಆಂದೋಲನ - ಸಂಸ್ಕ್ರುತದಲ್ಲಿ oscillation, ಕನ್ನಡದಲ್ಲಿ ಚಳುವಳಿ
ಪ್ರವಾಹ - ಸಂಸ್ಕ್ರುತದಲ್ಲಿ ಹರಿವು, ಕನ್ನಡದಲ್ಲಿ ನೆರೆ
ಹೀಗೆ ಬದಲಾಗಿ, ಹಲವು ಸರತಿ ಸಂಸ್ಕ್ರುತವನ್ನು ಓದುವಾಗ ಕನ್ನಡದ ತಿಳಿವುಗಳೇ ಮೊದಲು ಬಂದು ಸರಿಯಾಗಿ ತಿಳಿಯಲ್ಲ...
ಈ ಇಕ್ಕಟ್ಟು ಎದುರಿಸಿದವರು ಏನು ಉಪಾಯ ಮಾಡಿಕೊಂಡಿದ್ದೀರಿ./?

- Login or register to post comments
- 207 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಉ: ತಿಳಿವು ಮಾರ್ಪು-ಅರ್ಥಾಂತರ!
ಪ್ರವಾಹ ಅಂದರೆ ಹರಿಯುವುದು. ನೆಱೆ=ತುಂಬು ನೆಱೆ=ಸಾಮಾನ್ಯವಾಗಿ ಮೞೆಗಾಲದಲ್ಲಿ ಹೊೞೆ ತುಂಬಿ ಹರಿಯುವುದು. ಪ್ರವಾಹ=ನೆಱೆ. ಈಗ ನಾವು ಬೞಸುತ್ತಿದ್ದೇವೆ. ಸ್ವರಗಳು=ಸರಗಳು=ಸೊರಗಳು(ಸೊರ ಎನ್ನುವುದನ್ನು ಕೇಶಿರಾಜ ಒಪ್ಪುವುದಿಲ್ಲ)=ಉಸಿರುಲಿಗಳು. ವ್ಯಂಜನಗಳು=ಬೆಂಜನಗಳು=ತಡೆಯುಲಿಗಳು. ಸಾಮಾನ್ಯವಾಗಿ ಪದ ಪ್ರಾರಂಭದಲ್ಲಿ ಕನ್ನಡಿಗರು ’ವ’ ಬೞಸರು. ನನಗೆ ಗೊತ್ತಿರುವ ಅಚ್ಚಗನ್ನಡದ ’ವ’ಯಿಂದ ಪ್ರಾರಂಭವಾಗುವ ಪದಗಳೆರಡೇ. ವಲಂ=ನಿಕ್ಕುವ, ವಾಡಿಕೆ=ಬೞಕೆ (usual ಅಥವಾ in use). ಆದರೆ ವೀಳೆ=ವೀಟಾ(ಸಂಸ್ಕೃತ)=ಬೀಡಾ(ಬಡನುಡಿಗಳಲ್ಲಿ=ಉತ್ತರಭಾರತೀಯ ಭಾಷೆಗಳಲ್ಲಿ)
ವಿದ್ಯುತ್=ಮಿಂಚು
ಆಂದೋಲನ=ತೊನೆದಾಟ=ಉಯ್ಯಾಲೆ
ವಿದ್ಯುತ್ಪ್ರವಾಹ=ಮಿಂಚುವರಿವು
high voltage=ಮಿಂಚುನೆಱೆ ಎನ್ನಬಹುದೇನೋ
ಉ: ತಿಳಿವು ಮಾರ್ಪು-ಅರ್ಥಾಂತರ!
ರೀ ವಿಶಯ ಏನು ನೀವ್ ಹೇಳ್ತಿರೋದೇನೂ?
=====================================
ಮಾಯ್ಸ!
ಉ: ತಿಳಿವು ಮಾರ್ಪು-ಅರ್ಥಾಂತರ!
ಇನ್ನೊಂದು ನುಡಿಯಿಂದ ನಮ್ಮದಕ್ಕೆ ಪದಗಳು ಬಂದಾಗ(ತಂದಾಗ) ಬಂದಂತಹ ಪದಗಳು ನಮ್ಮವಾಗುತ್ತವೆ. ಆದರೆ ಅವುಗಳ ಮೂಲವೇನು ಮತ್ತು ಯಾವ ಸಂದರ್ಭದಲ್ಲಿ ಬಳಸುತ್ತಿದ್ದೇವೆ ಎಂದು ತಿಳಿದಿದ್ದರೆ ಒಳಿತು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು