ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಳೆಗನ್ನಡ

ಚಾಗದ ಭೋಗದಕ್ಕರದ...

May 21, 2008 - 6:49pm — Prabhu Murthy

(’ಶ್ರೀಬಸವೇಶ್ವರರ ವಚನಗಳು’ ಈ threadನ ಮೂಲವಿಶಯ ಬದಲಾಯಿತು... )

ಕನ್ನಡಕಂದ ಅವರೆ, ’ಚಾಗ’ ಮತ್ತು ’ನೆರೆಹೊರೆ’ಗಳ ಕುರಿತು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ.

’ಚಾಗ’ವನ್ನು ನೆನೆಪಿಸುವ ಇನ್ನೊಂದು ಸಾಲು:
’ಚಾಗದ ಭೋಗದಕ್ಕರದ ಗೊಟ್ಟಿ...’
ಈ ಪದ್ಯ ’ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು...’ ಎಂದು ಮುಗಿಯುತ್ತದೆ. ಮರೆತು ಹೋಗಿದೆ. ಪಂಪನು ತನ್ನ ಬನವಾಸಿದೇಶದ ಅಭಿಮಾನವನ್ನು ಪ್ರಕಟಿಸುವ ಇದರ ಪೂರ್ಣಪಾಠ ಯಾರಿಗಾದರೂ ನೆನೆಪಿದ್ದರೆ ಉತ್ತರಿಸಿ.

ಪ್ರಭು ಮೂರ್ತಿ

‹ ಹಳೆಗನ್ನಡ ಓದಲು ನೆರವು ಸಲ್ಲೇಖನ ›
  • ಹಳೆಗನ್ನಡ
~.~
  • Login or register to post comments
  • 630 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 21, 2008 - 8:26pm — ಕರಿ ತವಳೆ

ಉ: ಚಾಗದ ಭೋಗದಕ್ಕರದ...

ಕರಿ ತವಳೆ's picture

ಪದ್ಯ ಸ್ವಲ್ಪ ನೆನಪಿದೆ. ಆದರೆ ಯಾವ ಸಾಲಲ್ಲಿ ಯಾವ ಪದಗಳು ಬರಬೇಕೋ ಸರಿಯಾಗಿ ನೆನಪಿಲ್ಲ.
ಇಲ್ಲಿ ಮೂರು ಸಾಲ್ಲಲ್ಲಿ ಬರೆದಿದ್ದೇನೆ, ಆದರೆ ಅದು ಇರೋದು ನಾಲ್ಕು ಸಾಲುಗಳು.

ಚಾಗದ ಭೋಗದಕ್ಕರದ ಗೊಟ್ಟಿಯಲಿಂಪಿನಿಂಪುಗಳ್ಗಾಗರಮಾದ ಮಾನಿಸರೇ ಮಾನಿಸರ್

ಅಂತವರಾಗಿ (??) ಪುಟ್ಟಲೇನಾಗಿಯುಮೇನೋ ತೀರ್ದಪುದೇ ತೀರ್ದೊಡಂ

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 9:15am — anivaasi

ಉ: ಚಾಗದ ಭೋಗದಕ್ಕರದ...

anivaasi's picture

ಚಾಗದ ಭೋಗದಕ್ಕರದ ^ಗೇಯದ^ಗೊಟ್ಟಿಯ...
ಗೇಯದ ಗೊಟ್ಟಿ - ಗಾಯನ ಗೋಷ್ಟಿ ಅಲ್ಲವೆ?
ಉಳಿದದ್ದು ನಿಮ್ಮಷ್ಟೇ ನನಗೂ ನೆನಪಿನಲ್ಲಿರುವುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 2:20pm — kannadakanda

ಉ: ಚಾಗದ ಭೋಗದಕ್ಕರದ...

kannadakanda's picture

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ-
ಳ್ಗಾಗರಮಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ-
ನಾಗಿಯೊಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್‍
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‍ ವನವಾಸಿ ದೇಶದೊಳ್‍||

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ-
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-
ಪಂ ಕೆಡೆಗೊಂಡಡಂ ಮಧುಮಹೋತ್ಸವಮಾದೊಡಮೇನನೆಂಬೆನಾ-
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ||

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 9:59am — keshavamurali

ಉ: ಚಾಗದ ಭೋಗದಕ್ಕರದ...

keshavamurali's picture

“ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನ
ಇಂಪುಗಳ್ಗೆ ಆಗರ ಆದ ಮಾನಿಸರೆ ಮಾನಸರ್;
ಅಂತವರಾಗಿ ಪುಟ್ಟಲ್ ಏನಾಗಿಯುಂ ಏನೋ ತೀರ್ದುಪುದೆ;
ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ,
ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್||"

ಅಂತ ಇರ್ಬೇಕು.

ಕೇಶವ ಮುರಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 10:04am — keshavamurali

ಉ: ಚಾಗದ ಭೋಗದಕ್ಕರದ...

keshavamurali's picture

ಇದನ್ನು ನಾವು ಆರನೇ ತರಗತಿಯಲ್ಲಿ ಓದಿದ ಜ್ಞಾಪಕ. ಆವಾಗ ಒಂದಕ್ಷರಾನೂ ಅರ್ಥ ಆಗಿರಲಿಲ್ಲ !!! Smiling.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 10:14am — thewiseant

ಉ: ಚಾಗದ ಭೋಗದಕ್ಕರದ...

thewiseant's picture

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗ

ಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ

ನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ

್‌ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 5:18pm — cmariejoseph

ಉ: ಚಾಗದ ಭೋಗದಕ್ಕರದ...

cmariejoseph's picture

ಚಾಗದ (ತ್ಯಾಗದ)ಭೋಗದ (=) ಅಕ್ಕರದ(ವಿದ್ಯೆಯ) ಗೇಯದ (ಸಂಗೀತದ) ಗೊಟ್ಟಿಯ(ವಿಚಾರದ) ಅಲಂಪಿನ(ರಸಿಕತೆಯ) ಇಂಪುಗ
ಳ್ಗೆ(ಸೊಗಸುಗಳಿಗೆ) ಆಗರವಾದ (=) ಮಾನಿಸರೆ ಮಾನಿಸರ್‍ (ಸಾರ್ಥಕಜೀವಿ) ಅಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೇ (ಅಂತವರಾಗಿ ಹುಟ್ಟದೆ ಏನೋ ಆಗಿಬಿಟ್ಟರೆ ಆಯಿತೇ?) ತೀರದೊಡಂ ಮರಿದುಂಬಿಯಾಗಿ ಮೇಣ್‌
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್ (ಬನವಾಸಿ ದೇಶವೆಂಬ ನಂದನದಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಆದರೂ ಹುಟ್ಟಬೇಕು)

ತಪ್ಪಿದ್ದರೆ ಕ್ಷಮಿಸಿ,

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 2:31pm — kannadakanda

ಉ: ಚಾಗದ ಭೋಗದಕ್ಕರದ...

kannadakanda's picture

ತೀರ್ದಪುದೆ ತೀರದೊಡಂ ಅಂದರೆ ಹುಟ್ಟಲಿಕ್ಕಾಗುತ್ತದೆಯೋ ಆಗದಿದ್ದರೆ ಎಂದರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 11:03am — kannadakanda

ಉ: ಚಾಗದ ಭೋಗದಕ್ಕರದ...

kannadakanda's picture

ಹೞಗನ್ನಡ ಪದ್ಯ ಗದ್ಯಗಳನ್ನು ಬೞಸುವಾಗ ದಯವಿಟ್ಟು ’ಱ್’ ಮತ್ತು ’ರ್’ ಹಾಗೂ ’ೞ್’ ಮತ್ತು ’ಳ್’ ಗಳ ನಡುವಿನ ಬೇಱೆತನವನ್ನು ದಯವಿಟ್ಟು ಗಮನಿಸಿ. ಉದಾಹರಣೆಗೆ ಈ ’ಚಾಗದ ಭೋಗದಕ್ಕರದ’ ಮಱಿದುಂಬಿ ಸರಿ ಆದರೆ ಮರಿದುಂಬಿ ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾಗದ ಭೋಗದ....
  • ಗೊಂದಲ ಬಿಡಿಸಿ
  • ಅನಂತಮೂರ್ತಿ: ಐದು ದಶಕದ ಬರೆವಣಿಗೆ
  • ಬೇಂದ್ರೆ ಅಲ್ಲಮ ಪ್ರಭು ಬಗ್ಗೆ...
  • ಮೊದಲ ಹೆಜ್ಜೆ
Syndicate content

ಲೇಖಕರು

Prabhu Murthy's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಲಾಂದರ
  • ಎೞ್ತು
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
  • ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator