ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

November 27, 2007 - 5:51pm — ಶ್ರೀನಿವಾಸ ವೀ. ಬ೦ಗೋಡಿ

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
(ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.)

ವಿ.ವಿ.ಯವರು ಈ ಪದ್ಯದ ಅರ್ಥವನ್ನು ಬಹಳ ಹಿಂದೆಯೇ ಕೇಳಿದ್ದರು.

ಗೊತ್ತಿರುವವರು ಹೇಳುತ್ತಿರಾ?
ಮುಂಗಡವಾಗಿ ನನ್ನಿ!

‹ ಮಂಜುಗುಣಿಪುರವಾಸ ಯಾರು? ಈ ಕಪ್ಪೆ ಅರಬಟ್ಟ ಯಾರು? ಅರವಟ್ಟಿಗೆ ಅಂದ್ರೆ ಏನು? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 555 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 27, 2007 - 9:35pm — srivathsajoshi

ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

srivathsajoshi's picture

ಪದ್ಯದ ಸ್ಥೂಲ ಅರ್ಥ ಹೀಗಿದೆ:

"

ಈ ನಮ್ಮ ಭೂಮಿಯು (ಅಂದರೆ ಭೂಗೋಳವು) ಆದಿಶೇಷನ ತಲೆಯ ಮೇಲೆ ನಿಂತಿದೆ ಎಂದು ನಂಬಿಕೆ.

ಈ ನಮ್ಮ ಭೂಮಿಯ ಮೇಲೆ, ರಾಮಾಯಣವನ್ನು ಬರೆದ ಕವಿಗಳು ಅನೇಕರಿದ್ದಾರೆ - ವಾಲ್ಮೀಕಿಯಿಂದ ಹಿಡಿದು ವೀರಪ್ಪಮೊಯಿಲಿವರೆಗೆ... (ಅಫ್‍ಕೋರ್ಸ್ ಕುಮಾರವ್ಯಾಸನ ಕಾಲದಲ್ಲಿ ವೀರಪ್ಪಮೊಯಿಲಿ ಇರಲಿಲ್ಲ, ಕುಮಾರಸ್ವಾಮಿಯ ಕಾಲದಲ್ಲಿ ಇದ್ದಾರೆ).

ರಾಮಾಯಣದ ಬೇರೆಬೇರೆ ಆವೃತ್ತಿಗಳಿಂದ ಮತ್ತು ಅವನ್ನು ಬರೆದಿರುವ ಕವಿಗಳಿಂದ ಭೂಮಿಭಾರವಾಗಿದೆ; ಭೂಮಿಯನ್ನು ಹೊತ್ತ ಫಣಿರಾಯ ಅಂದರೆ ಆದಿಶೇಷ ತಿಣುಕುವಂತಾಗಿದೆ; ಭೂಮಿಯ ಮೇಲೆ ಕಾಲಿಡಲೂ ಜಾಗ (ತೆರಪು) ಇಲ್ಲದಷ್ಟು ಸಾಂದ್ರವಾಗಿ ರಾಮಾಯಣ ಕವಿಗಳು ತುಂಬಿಕೊಂಡಿದ್ದಾರೆ.

ಅದಕ್ಕಾಗಿ ನಾನು (= ಕುಮಾರವ್ಯಾಸ) ರಾಮಾಯಣದ ಗೋಜಿಗೆ ಹೋಗದೆ ಮಹಾಭಾರತದ ಕಥೆಯನ್ನು ಪೇಳುವಂಥವನಾಗುತ್ತೇನೆ.

"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2007 - 11:44am — shreekant.mishrikoti

ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

shreekant.mishrikoti's picture

ಜಗತ್ತಿನಲ್ಲಿರುವ ರಾಮಾಯಣಗಳ ಸಂಖ್ಯೆ - ನಂಬಿದರೆ ನಂಬಿ , ಇಲ್ಲವೆ ಬಿಡಿ - ಒಂದು ಲಕ್ಷ ಅಂತೆ ! - ಈ ವಾರದ ಸುಧಾದಲ್ಲಿ ಈ ವಿಷಯ ಬಂದಿದೆ.

"ಕನ್ನಡಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2007 - 10:33pm — nrjavali

ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

nrjavali's picture

ಪ್ರಿಯರೇ,
ಶ್ರೀ ಜೋಶಿಯವರು ಹೇಳಿದ್ದನ್ನು ಮುಂದುವರೆಸುತ್ತೀದ್ದೇನೆ. ಕುಮಾರವ್ಯಾಸನ ಕಾಲದಲ್ಲಿ ಪ್ರಚಲಿತವಾಗಿದ್ದ ರಾಮಾಯಣಗಳ ಸಂಖ್ಯಾಬಾಹುಳ್ಯ ತುಂಬಾ ಇದ್ದಿರಬೇಕು. ಆದ್ದರಿಂದಲೇ ಆತ ಹಾಗೆ ಹೇಳಿದ್ದಾನೆ. ಭೂಮಿಯ ಮೇಲೆ ಕಾಲಿಡಲು ಸ್ಠಳವಿಲ್ಲದಂತೆ ರಾಮಾಯಣಗಳು ತುಂಬಿಕೊಂಡಿವೆ ಎನ್ನುತ್ತಾನೆ. ಅನಂತರ ಆ ಕಾಲದಲ್ಲಿದ್ದ ಕವಿಗಳನ್ನು ಗೇಲಿ ಮಾಡುತ್ತಾ ಬಣಗುಕವಿಗಳ ಲೆಕ್ಕಿಪನೇ ಎನ್ನುತ್ತಾನೆ. ಇಧು ಅಹಂಕಾರವೆಂದಲ್ಲ. ತನ್ನ ಆತ್ಮವಿಶ್ವಾಸವನ್ನು ಇಲ್ಲಿ ಪ್ರಕಟಿಸಿದ್ದಾನೆ. ಅಂದರೆ ತಾನು ಅಲ್ಪಕವಿಗಳ ಸಾಲಿನಲ್ಲಿ ಸೇರುವಂತಹವನಲ್ಲ. ಅಂತಹವರನ್ನು ತಾನು ಗಣನೆಗೆ ತೆಗೆದುಕೊಳ್ಳುವವನೇ? ತಾನು ಕುವರ ವ್ಯಾಸ. ಶುಕರೂಪ. ವ್ಯಾಸರ ಕುವರ. ಈ ಅಲ್ಪ ಕವಿಗಳನ್ನು ತಾನು ಕುಣಿಸಿ ನಗುವುದಿಲ್ಲವೇ? ಎಂದು ಹೇಳುತ್ತಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2007 - 4:02pm — ಶ್ರೀನಿವಾಸ ವೀ. ಬ೦ಗೋಡಿ

ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

ಶ್ರೀನಿವಾಸ ವೀ. ಬ೦ಗೋಡಿ's picture

ಜೋಶಿ ಮತ್ತು ಜವಳಿಯವರಿಗೆ ನನ್ನಿಗಳು. ಅರ್ಥ ತುಂಬ ಸೊಗಸಾಗಿದೆ.
ಬಣಗು ಕವಿ ಅರ್ಥ ಸ್ಥೂಲವಾಗಿ ಗೊತ್ತಾಯಿತು. ಆದರೆ ಹಾಗಂದರೇನು? Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2007 - 8:26pm — nrjavali

ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

nrjavali's picture

ಬಣಗು ಕವಿಗಳು ಎಂದರೆ ಅಲ್ಪ , ಹೀನ,ಕೀಳಾದ ಕವಿಗಳು ಎಂದರ್ಥ. ತನ್ನ ಕಾಲದ ಕವಿಗಳನ್ನು ಆತ ಗೇಲಿ ಮಾಡುತ್ತಾನೆ., ಅಂದರೆ ಕುವರವ್ಯಾಸ ಅಹಂಕಾರಿ ಎಂದು ಹೇಳಲಿಕ್ಕಾಗುವುದಿಲ್ಲ. ಹಲಗೆ ಬಳಪವ ಪಿಡಿಯದ ಒಂದು ಅಗ್ಗಳಿಕೆ ಎಂಬ ಆತ್ಮವಿಶ್ವಾಸ ಇಲ್ಲೂ ಕಾಣಿಸಿಕೊಂಡಿದೆ ಅಷ್ಟೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 30, 2007 - 11:46am — ಶ್ರೀನಿವಾಸ ವೀ. ಬ೦ಗೋಡಿ

ಉ: "ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

ಶ್ರೀನಿವಾಸ ವೀ. ಬ೦ಗೋಡಿ's picture

ನನ್ನಿ.

ಜವಳಿ wrote:
ಕುವರವ್ಯಾಸ ಅಹಂಕಾರಿ ಎಂದು ಹೇಳಲಿಕ್ಕಾಗುವುದಿಲ್ಲ

ನಿಜ. ಈ ತರದ ಆತ್ಮವಿಶ್ವಾಸವನ್ನು ಹಿಂದಿನ ನಮ್ಮ ಅನೇಕ ಕವಿಗಳಲ್ಲಿ ಕಾಣಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Fonts, Unicode and Sampada
  • About Sampada
  • Getting Involved
  • Ongoing projects, present websites on Sampada
  • Take Part
Syndicate content

ಲೇಖಕರು

ಶ್ರೀನಿವಾಸ ವೀ. ಬ೦ಗೋಡಿ's picture

ಪೂರ್ಣ ಹೆಸರು
ಶ್ರೀನಿವಾಸ ವೀ. ಬಂಗೋಡಿ

ಪರಿಚಯ

ವೃತ್ತಿ: ಮೃದ್ವ೦ಶ ಅಭಿಯ೦ತರ
ಹವ್ಯಾಸ: ಕನ್ನಡ ಪುಸ್ತಕಗಳನ್ನು ಓದುವುದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
  • ಸಪ್ತಸ್ವರಗಳು
  • ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
  • ಕೈದು, ಖೈದು
  • ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:41pm
  • ASHOKKUMAR
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:22pm
  • ASHOKKUMAR
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:21pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 8:15pm
  • imunde
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 6, 2008 - 8:10pm
  • cmariejoseph
    ಉ: ಮತಾಂತರ ಏನು ಎತ್ತ
    October 6, 2008 - 8:07pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:56pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:54pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:53pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:51pm
ಇನ್ನಷ್ಟು


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator