ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಭಾರತೀಯ ಪ್ರಜಾಸತ್ತೆ

November 2, 2007 - 7:40pm — csomsekraiah

ಇಂದಿನ ಭಾರತೀಯ ಪ್ರಜಾಸತ್ತೆ ಸರಿಯಾದ ದಾರಿಯಲ್ಲಿ ಚಲಿಸುತ್ತಿದೆಯೇ ?

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆಂಬುವು , ರಥದ ಎರಡು ಚಕ್ರಗಳು. ಕಾಲಕ್ರಮದಲ್ಲಿ ಇವು ಒಂದರ ಸ್ಥಾನಕ್ಕೆ ಇನ್ನೊಂದು ಬರುವುದು ಪ್ರಜಾಸತ್ತೆಯ ಸಹಜ ಪ್ರಕ್ರಿಯೆ. ರಾಜಕೀಯ ಪಕ್ಷವೊಂದು ಆಡಳಿತ ಪಕ್ಷವಾಗಿದ್ದರೂ ; ವಿರೋಧ ಪಕ್ಷವಾಗಿದ್ದರೂ ಅದರ ಸ್ಥಾನಬಲದ ಮೇಲೆ ಸಾಂವಿಧಾನಿಕ ಕರ್ತ ವ್ಯಗಳಿದ್ದೇ ಇರುತ್ತವೆ.

ಬಂದಿರುವ ತೊಂದರೆ ಎಂದರೆ ಯಾವ ಪಕ್ಷವೂ ಈಗ ವಿರೋಧಪಕ್ಷವಾಗಲು ಇಷ್ತಪಡುತ್ತಿಲ್ಲ.ಪ್ರಜಾ ಪ್ರಭುತ್ವದಲ್ಲಿ ಯಾವ ಸ್ಥಾನವಾದರೂ ನಿರ್ಣಾಯಕವೇ ಎಂಬ ಅರಿವಿನ ಕೊರತೆಯಿಂದ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾದ ಪಕ್ಷಗಳು ಆಜನ್ಮ ವೈರಿ ಪಡೆಗಳಂತೆ ಬವಿದಾಡುತ್ತಿವೆ

ಪಕ್ಷಗಳು ಪರಸ್ಪರ ಗೌರವ ತೋರಿಸದಿರುವ; ಉದಾರತೆ ಮೆರೆಯದಿರುವ ಪರಿಣಾಮವಾಗಿ, ಸಂಸತ್ತು ಯಾವುದೇ ಪರಿಣಾಮಕಾರಿಯಾದ ಚರ್ಚೆಯನ್ನು ನಡೆಸಲಾರದ ಸ್ಠಿತಿಗೆ ಮುಟ್ಟಿ, ಕೇವಲ ಗಲಭೆ ಗೊಂದಲಗಳ ಗೂಡಾಗುತ್ತಿದೆ.

ಸಂವಿಧಾನಾತ್ಮಕವಾಗಿ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ಪಡೆದ ಪಕ್ಷಗಳನ್ನು ಸಮಾಜವಿರೋಧಿಗಳಂತೆ ಚಿತ್ರಿಸುವ ಪರಿಪಾಠ ಸಹ ಸಂವಿಧಾನಕ್ಕೆ ಮತ್ತು ಆರಿಸಿದ ಜನ ಸಮುದಾಯಕ್ಕೆ ಮಾಡುವ ಅಪಮಾನವೇ ಆಗುತ್ತದೆ ;ಹಾಗೂ ಪಕ್ಷಗಳೂ ಸಹ ತುಂಬಾ ಜಾವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯಕ್ಕೆ ಬದ್ದವಾಗಬೇಕಾಗುತ್ತದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ವಂಶಾಧಿಕಾರ ಪದ್ದತಿಯನ್ನು ಎಗ್ಗಿಲ್ಲದೆ ಪ್ರತಿಪಾದಿಸಲಾಗುತ್ತಿದೆ.ಇದು ಪ್ರಜಾಸತ್ತೆಯ ಮೇಲೆ ನಡೇಸುವ ಕ್ರೂರ ದಾಳಿ.ನಾಡಿನ ಪ್ರತಿಭ್ಹಾವಂತ ಯುವ ಸಮುದಾಯದ ಮೇಲೆ ಇದರ ಕೆಟ್ಟ ಪರಿಣಾಮ ಊಹಿಸಲು ಬಾರದ್ದು.
ಭಾರತದಂತಹ ಬೃಹತ್ ಪ್ರಜಾಸತ್ತೆಯ ಹೊಣೆಯನ್ನು ಹೊತ್ತ ಕೇಂದ್ರ ಸರ್ಕಾರದಲ್ಲಿ ಎಷ್ಟು ಮಾನವ ಪ್ರತಿಭ್ಹೆ ಇದ್ದರೂ ಸಾಲದು,ಅದಕ್ಕೆ ಬದಲಾಗಿ, ಕೇವಲ ನಾಯಕ ನಿಷ್ಟೆಗೆ; ವಿಚಾರಹೀನ ವಿಧೇಯತೆಗೆ ಒತ್ತು ಕೊಡುತ್ತಿರುವುದು ಪ್ರಜಾಸತ್ತೆಯನ್ನು ಮರಣಾಸನ್ನ ಸ್ಠಿತಿಗೆ ದೂಡಿದಂತೆಯೇ ಆಗುತ್ತದೆ.

ರಾಜ್ಯಾಂಗದತ್ತವಾದ ತನಿಖಾ ಸಂಸ್ಠೆಗಳನ್ನು , ಸ್ವಾಯತ್ತೆ ಸಂಸ್ಠೆಗಳನ್ನು ದುರುಪಯೋಗಪಡೀಸಿ ಎದುರಾಳಿಗಳನ್ನು ಸದೆಬಡಿಯಲು; ಸ್ವಜನರನ್ನು ಬಚಾವು ಮಾಡಲು ಉಪಯೋಗಿಸಿಕೊಳ್ಳುವುದು ಪ್ರಜಾಸತ್ತೆಯನ್ನು ದುರ್ಬಲಗೊಳಿಸುವ ಕ್ರಮವಾಗುತ್ತದೆ.

ಸ್ವಾತಂತ್ರ್ಯ ನಂತರ ಕೇವಲ ಅರವತ್ತು ವರ್ಷಗಳಲ್ಲಿ ಭಾರತೀಯ ಪ್ರಜಾಸತ್ತೆ ಚಲಿಸುತ್ತಿರುವ ಇಂತಹ ಅಪಾಯದ ಹಾದಿಯನ್ನು ಕಂಡೂ ಎಚ್ಚರಿಸದಿರುವುದು ಪ್ರಾಜ್ನರ ಕರ್ತವ್ಯ ಲೋಪವೇ ಆಗುತ್ತದೆ

‹ ಈ ಪರಿಯ ಸೊಬಗು ಹೊಗೇನಕಲ್ ವಿವಾದ: ಪಕ್ಷಬೇಧ ಮರೆತ ಸಂಸದರು ›
  • ರಾಜಕೀಯ
~.~
  • Login or register to post comments
  • 430 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬದಲಾಗುತ್ತಿರುವ ಸಂಸತ್ತಿನ ನಡವಳಿಕೆಗಳು
  • ಶೇಕಡಾ ಏಳರ ಹಣದುಬ್ಬರವೂ, ಬಣ್ಣದ ಟಿ.ವಿ.ಯೂ...
  • ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?
  • ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
  • ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬಿಡ್ತಾರ್‍
  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • ತೊರಡು/ತರಡು, ತೊಱಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shreedevikalasad
    ಉ: ಕಚೇರಿ ಎಂಬ ನರಕ-೧
    August 29, 2008 - 1:22pm
  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator