ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ.
ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದೆ.
೧) ಯಾವುದೇ ಮಹಾಪ್ರಾಣ ಇಲ್ಲ
೨) ಅರ್ಕ ವತ್ತು ಇದರಲ್ಲಿ ಇಲ್ಲ
೩) 'ಕೃಷ್ಣ' ಅಲ್ಲ 'ಕ್ರುಶ್ಣ'
೪) 'ಮೈಸೂರು'ಅಲ್ಲ 'ಮಯ್ಸೂರು'
ಹೀಗೆ ಕನ್ನಡಿಗರ ಬಾಯಲ್ಲಿ ಯಾವ ಬಗೆಯಲ್ಲಿ ಕನ್ನಡ ಇದೆ ಅದೇ ಬಗೆಯಲ್ಲಿ ಬರೆಯಲಾಗಿದೆ. ನಿಜಕ್ಕೂ ಶಂಕರಬಟ್ಟರನ್ನು ಮೆಚ್ಚಲೇಬೇಕು.
ಅವರ ಹೊತ್ತಿಗೆಗಳಿಂದ ತಮ್ಮ ಅರಿಮೆಯನ್ನು ಹೆಚ್ಚಿಸಿಕೊಂಡಿರುವವರಲ್ಲಿ ನಾನು ಒಬ್ಬನು.

- Login or register to post comments
- 801 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಈ ಹೊತ್ತುಗೆ ಸಪನದಲ್ಲಿ ಇಂನೂ ಬಂದಿಲ್ಲ...
ನೆಂನೆ ಅಂಕಿತ ಕದ-ತೆರೆದಿದ್ದಿಲ್ಲ.
ಕೃಷ್ಣ = ಕ್ರಿಶ್ಣ, ನಾವು ಕೃ ಅನ್ನು ಕ್ರು ಅನ್ನೋದಿಲ್ಲ ಅಲ್ವಾ!! ನೋಡೋಣ.
ಮೃಗ = ಮಿಗ
ಋಷಿ = ರಿಸಿ
ಹೀಗೆ ನೋಡಿದ್ರೆ, ಕೃಷ್ಣ = ಕಿಣ್ಣ/ಕಣ್ಣ ಆಗಬೇಕು.
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ನಾವು ಕೃಷ್ಣಂಗೆ 'ಕಿಟ್ಟಿ' ಅಂತಾನೆ ಹೇಳದು.
ಕಿಲಾಡಿ ಕಿಟ್ಟು, ಕಿಟ್ಟು-ಪುಟ್ಟು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಅಂಕಿತಕ್ಕೆ ದೂರುಲಿ ಮಾಡಿ ನೋಡಿದೆ ... ಅಲ್ಲೂ ಇಲ್ಲ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ದೂರುಲಿ ಅಲ್ಲ...
ದೂರದುಲಿ
( ಸುನಿಲಂನ ನೆನೆದು )
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ನನ್ನಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಈ ಹೊತ್ತಗೆ ಚೆನ್ನಾಗಿ ಓಡುತ್ತಿರುವ ಹೊತ್ತಗೆಗಳಲ್ಲಿ ೨ನೇ ಇಕ್ಕೆ ಪಡೆದಿದೆ
http://vijaykarnatakaepaper.com/pdf/2007/11/04/20071104a_027101004.jpg
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಈ ಹೊತ್ತಗೆಯನ್ನು ನಾನು ಓದಿಲ್ಲ, ಆದರೆ ಡಿ.ಎನ್. ಶಂಕರಭಟ್ಟರ "ಭಾಷೆಯ ಬಗೆಗೆ ನೀವೇನು ಬಲ್ಲಿರಿ" ಓದಿದ್ದೇನೆ. ಮು೦ಬದಿಯಲ್ಲಿ ಹೀಗೆ ಅಚ್ಚಾಗಿತ್ತು...'ತೃತೀಯ ಪರಿಷ್ಕೃತ ಮುದ್ರಣ'.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಶಹಬ್ಬಾಸ್ ! ಭಾಪು , ಭಳಿರೆ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಅಣ್ಣ
ನಾನಿದ್ನೋದಿ ಮುಗಿಸಾಯ್ತು... ಚನ್ನಾಗಿದೆ....
ನಮ್ಮ ಕನ್ನಡದೊಳನುಡಿಗಳು ಹೇಗೇಗೆ ಬೇರೆ ಬೇರೆ ಬಗೆಗಳಲ್ಲಲಿಗಳನ್ನು ತೋರುವುವು..
ಹೇಗೆ ಪೞಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪುಗಳಾಗಿರುವುವು...
ತಮಿಳು-ತೆಲುಗು-ತುಳುಗಳ ಕೂಡೇ ಹೋಲಿಕೆ
ಇವೆಲ್ಲ ಬಲು ಚನ್ನಾಗಿದೆ....