ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಪ್ರವಾಸ ಕಥನ ಹೇಗಿರಬೇಕು?

August 11, 2007 - 9:09pm — uniquesupri

ಬ್ಲಾಗೆಂಬ ಹುಟ್ಟಿಯಲ್ಲಿನ ಅಸಂಖ್ಯ ಬರಹಗಳ ಮೇಲೆ ಕಣ್ಣಾಡಿಸುವಾಗ ಮನಸ್ಸಲ್ಲಿ ಮಿಂಚಿ ಮರೆಯಾದ ವಿಚಾರ ಒಂದು ಪ್ರಶ್ನೆಯಾಗಿ ಕಾಡಲಾರಂಭಿಸಿದೆ.

 

ಪ್ರವಾಸ ಕಥನಗಳು ಎಂದರೆ ಏನು? ಇಷ್ಟು ಘಂಟೆಗೆ ಬಸ್ಸು ಹತ್ತಿ ಇಂತಲ್ಲಿ ಇಷ್ಟು ಹೊತ್ತು ಕುಳಿತು ಇಂತಹ ಹೊಟೇಲಿನಲ್ಲಿ ಟೀ ಕುಡಿದು, ಇಂತಹ ಲಾಡ್ಜಿನಲ್ಲಿ ಉಳಿದುಕೊಂಡು ಇಂತಿಂಥವರನ್ನು ಮಾತನಾಡಿಸಿ … ಎನ್ನುವ ಧಾಟಿಯಲ್ಲಿ ಬರೆದರೆ ಅದು ಪ್ರವಾಸ ಕಥನವೇ? ಹಾಗಾದರೆ ದಿನಚರಿಗೂ ಪ್ರವಾಸ ಕಥನಕ್ಕೂ ವ್ಯತ್ಯಾಸವೇನು?

 

ಪ್ರವಾಸದ ಸಮಯದಲ್ಲಿ ಭೇಟಿ ನೀಡಿದ ಸ್ಥಳದ ಮಹಿಮೆಯ ಬಗ್ಗೆ, ಪ್ರಾಕೃತಿಕ ಸೌಂದರ್ಯ, ಐತಿಹಾಸಿಕ ಮಹತ್ತುಗಳ ಬಗ್ಗೆ, ರಾಜ ಮಹಾರಾಜರುಗಳ ಜೀವನ ಚರಿತ್ರೆಯ ಬಗ್ಗೆ ಹೇಳುವ ಧಾಟಿಯ ಬರಹ ನಮಗೆ ಸಹಾಯಕವಾಗಬಹುದೇ? ಇದನ್ನು ಸ್ಥಳ ಪರಿಚಯ ಎಂದರೆ ಸಾಕಾಗುವುದಿಲ್ಲವೇ?

 

ಒಪ್ಪಿಕೊಳ್ಳುತ್ತೇನೆ… ಕೆಲವು ಪ್ರವಾಸದ ಬರಹಗಳನ್ನು ನಾವು ಯಾವ ಇನ್ನಿತರ ಸಿದ್ಧ ಸಾಹಿತ್ಯದ ಪ್ರಕಾರಗಳಿಗೂ ಸೇರಿಸಲಾಗುವುದಿಲ್ಲ. ಅಲೆಮಾರಿಯ ಅಂಡಮಾನ್, ಅಪೂರ್ವ ಪಶ್ಚಿಮ ಮುಂತಾದ ಪ್ರವಾಸ ಕಥನಗಳನ್ನು ನಾನು ಮೆಚ್ಚಿ ಓದಿದ್ದು ಅವು ಪ್ರವಾಸಕಥನಗಳು ಎಂಬ ಕಾರಣಕ್ಕೆ.

 

ಮನಸ್ಸಿಗೆ ಗೋಚರವಾದ ವಿಚಾರವನ್ನಿಲ್ಲಿ ಹಂಚಿಕೊಂಡಿದ್ದೇನೆ.

‹ मृग = ಜಿಂಕೆ ? ಎಣ್ಮಯ ಎಂದರೆ ಯಾರು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 495 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 12, 2007 - 10:00am — Sunil Jayaprakash

ಉ: ಪ್ರವಾಸ ಕಥನ ಹೇಗಿರಬೇಕು?

Sunil Jayaprakash's picture

"ತಿರಿವಾಟ"ಗಳಲ್ಲಿ ಏನೇನೆಲ್ಲಾ ಇದ್ದರೂ, ನಾನು ನಂಬುವ ಒಂದು ಚೊಕ್ಕಾಯವೆಂದರೆ ಈ "ತಿರಿವಾಟಗಳು" ಆಯಾ ಸ್ಥಳದ ಬಗ್ಗೆ ಓದುಗರಲ್ಲಿ ಕುತೂಹಲ ಮೂಡಿಸಿ, ಅಲ್ಲಿಗೆ ನಮ್ಮನ್ನು ಕರಸಿಕೊಳ್ಳುವಂತೆ ಮಾಡಲೇಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 12, 2007 - 10:41am — muralihr

ಉ: ಪ್ರವಾಸ ಕಥನ ಹೇಗಿರಬೇಕು?

muralihr's picture

ಅಪರವಯಸ್ಕತ ಅಮೇರಿಕಾ ಯಾತ್ರೆ ಮೂರ್ತಿ ರಾವ್ ಬರೆದಿರುವುದನ್ನು ಓದುತ್ತಿದ್ದೇನೆ.
ಅದರಲ್ಲಿ ಅವ್ರು ಬರೆದಿರುವ ಶೈಲಿ ನ೦ಗೆ ತು೦ಬಾ ಇಷ್ಟವಾಯ್ತು.
೧> ಅಲ್ಲಿ ತಮ್ಮ ಚಟುವಟಿಕೆ ಬಗ್ಗೆ ಜಾಸ್ತಿ ಹೇಳಿಕೊ೦ಡಿಲ್ಲಾ.ಆದರೆ ಅಲ್ಲಿಯ ಸಮಾಜದ ಪೂರ್ಣ ಚಿತ್ತಾರ ವನ್ನು ಕೊಡುತ್ತಾ, ಆ ಸಮಾಜದ ವಿಶ್ಲೇಷಣೆ ಮಾಡಿದ್ದಾರೆ. ಅದರ ಇತಿಮಿತಿಗಳನ್ನು ಗುರುತ್ತಿಸಿದ್ದಾರೆ.
ಅಷ್ಟೇ ಅಲ್ಲಾ , ಒ೦ದೊ೦ದು ಸ್ಥಳದ ಇತಿಹಾಸವನ್ನು ಸ೦ಕ್ಷಿಪ್ತವಾಗಿ ತಿಳಿಸಿ ,ನಾವು ನಮ್ಮ ದೇಶದಲ್ಲಿ ಮಾಡುತಿರುವ ಅದೇ ತಪ್ಪಿನ ಅರಿವು ಮೂಡಿಸುತ್ತಾರೆ.ಹೀಗೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ದರ್ಶನವನ್ನು ಮಾಡಿಸುತ್ತಲೇ ಒ೦ದು ಸ್ಥಳವನ್ನು ಕಾಲಾ-ದೇಶಾತೀತವನ್ನಾಗಿ ಮಾಡುವ ಶಕ್ತಿ ಕೆಲವು ಸಾಹಿತ್ಯಗಳಿಗಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 12, 2007 - 2:44pm — uniquesupri

ಉ: ಪ್ರವಾಸ ಕಥನ ಹೇಗಿರಬೇಕು?

uniquesupri's picture

Quote:
ಹೀಗೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ದರ್ಶನವನ್ನು ಮಾಡಿಸುತ್ತಲೇ ಒ೦ದು ಸ್ಥಳವನ್ನು ಕಾಲಾ-ದೇಶಾತೀತವನ್ನಾಗಿ ಮಾಡುವ ಶಕ್ತಿ ಕೆಲವು ಸಾಹಿತ್ಯಗಳಿಗಿವೆ.

ಬಹುಶಃ ಇದು ಸಮರ್ಪಕವಾದ defnition ಎನ್ನಿಸುತ್ತದೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravablog.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಂಟನಿ ಎಂಬ ವಿಸ್ಮಯ
  • ಚಿಂತನ
  • "ಪ್ರೀತಿಸಿದ ಹುಡುಗಿ"
  • ಹಾರಿಹೋಗುವವೆಲ್ಲಿಗೆ ಹೃದಯದ ಭಾವನೆಗಳು...
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಓದಬೇಕು & ಓದಿಕೊಳ್ಳಬೇಕು
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ನಲ್ಲೆಯ ಕೋಪ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • `ಓವಿ ' ಪದದ ಅರ್ಥವೇನು?
  • ಪಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:07pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:06pm
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator