ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು

July 19, 2007 - 1:17pm — prapancha

ಇ೦ದು ರಾಷ್ಟ್ರಪತಿಯ ಚುನಾವಣೆ ನಡೆಯುತ್ತಿದೆ. ಇಬ್ಬರು ಘಟಾನುಘಟಿ ಅಬ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಈ ಅಬ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಅನೇಕ ಸ್ವಾರಸ್ಯಕರ ಚರ್ಚೆಗಳು ನಡೆದಿವೆ ಮತ್ತು ಈ ಚುನಾವಣೆ ಕೆಲವೊ೦ದು ವಿಚಿತ್ರ ಸನ್ನಿವೇಶಗಳನ್ನೂ ಸೃಷ್ಠಿಸಿದೆ. ಕಾ೦ಗ್ರೇಸ್-ಬಿಜೇಪಿ ಪಕ್ಷಗಳ ಹೇಟರ್ಸ್ ಎ೦ದು ಹೇಳಿಕೊಳ್ಳುತ್ತಾ ಇವೆರಡೂ ಪಕ್ಷಗಳಿ೦ದ ಸಮಾನಾ೦ತರ ದೂರವಿರುವುದಕ್ಕೋಸ್ಕಾರ ಇತರೆ ಪ್ರಾದೇಶಿಕ ಪಕ್ಷಗಳು UNPA ಎ೦ಬ ಒ೦ದು ಗು೦ಪು ಕಟ್ಟಿಕೊ೦ಡು ಮತದಾನದಿ೦ದ ದೂರಸರಿದಿವೆ. ಆದರೆ ಇದು ಒ೦ದು ಗಿಮಿಕ್ ಎ೦ಬುದು ಎಲ್ಲರಿಗೂ ತಿಳಿದಿರುವ ವಿಷಯ. ಒಬ್ಬ ಅಬ್ಯರ್ಥಿಗೆ ಮತದಾನ ಮಾಡುವುದರಿ೦ದ ಎಲ್ಲಿ ಒ೦ದು ಕೋಮಿನ ಮತಗಳ ಹು೦ಡಿ ತಮ್ಮ ಪಕ್ಷಗಳಿ೦ದ ದೂರ ಸರಿಯುತ್ತವೋ ಎ೦ಬ ಬಯದಿ೦ದ ಈ ಪಕ್ಷಗಳು ಈ ರೀತಿ ದೂರ ಉಳಿದಿವೆ ಎ೦ಬುದು ಸ್ಪಷ್ಟವಾಗಿ ತಿಳಿಯುತ್ತದೆ.

ನಮ್ಮ ಸ೦ವಿದಾನದ ಪ್ರಕಾರ ರಾಷ್ಟ್ರಪತಿಯ ಆಯ್ಕೆ ಜನರಿ೦ದ ನೇರವಾಗಿ ಆಯ್ಕೆ ಮಾಡಲು ಅವಕಾಶವಿಲ್ಲ ಹಾಗೂ ರಾಷ್ಟ್ರಪತಿಯ ಆಯ್ಕೆ ಜನ ಪ್ರತಿನಿದಿಗಳಿ೦ದಲೇ ಆಗಬೇಕು. ಆದ್ದರಿ೦ದ ಲಕ್ಷೋಪಲಕ್ಷ ಜನರ ಪ್ರತಿನಿದಿಗಳಾದ ಇವರು ದೂರಸರಿದರೆ ಅಷ್ಟೂ ಜನರ ಮತದಾನದ ಹಕ್ಕನ್ನ ಹಾಳು ಮಾಡಿದ ಹಾಗೆ ಆಗುವುದಿಲ್ಲವೆ?. ಇದು ತಮ್ಮನ್ನ ಆರಿಸಿದ ಜನತೆಗೆ ಮಾಡಿದ ದ್ರೋಹವಲ್ಲವೇ?. ನಿಯಮಗಳ ಪ್ರಕಾರ ಔದು ಮತದಾನ ಮಾಡುವುದು ಬಿಡುವುದು ಅವರವರಿಗೆ ಬಿಟ್ಟ ಸ್ವ೦ತ ವಿಚಾರ ಆದರೆ ನಮ್ಮ ನಾಯಕರು ಎನಿಸಿಕೊ೦ಡ ಇವರೇ ಹೀಗೆ ಮಾಡಿದರೆ ಸಾಮಾನ್ಯಜನ ಮತದಾನದಿ೦ದ ದೂರ ಉಳಿಯುವದರಲ್ಲಿ ತಪ್ಪಿಲ್ಲವೆ೦ದನಿಸುತ್ತದೆ. ಈಗಾಗಲೇ ಯಾವುದೇ ಸಾಮಾನ್ಯ ಚುನಾವಣೆಯಲ್ಲಿ ಮತದಾನ ೬೦% ದಾಟುವುದೇ ಹರ ಸಾಹಸವಾಗಿದೆ ಇ೦ತಹ ಸ೦ದರ್ಬದಲ್ಲಿ ನಮ್ಮ ಶಾಸಕರು ಮತ್ತು ಸ೦ಸದರು ಮತದಾನಮಾಡದಿರುವುದು ಒ೦ದು ಕೆಟ್ಟ ಸ೦ಪ್ರದಾಯಕ್ಕೆ ನಾ೦ದಿಯನ್ನ ಹಾಕುವುದಿಲ್ಲವೇ?.

ಈಗಾಗಲೇ ಜನ ಸಾಮಾನ್ಯರು ಮತದಾನ ಮಾಡದಿರಲು ಇಷ್ಟವಿಲ್ಲದೆಯೋ, ದೂರದೂರಿನಲ್ಲಿರುವುದರಿ೦ದಲೋ, ತಮಗೆ ಅಥವ ತಮ್ಮ ಊರಿಗೆ ಸರಿಯಾದ ಸೌಲಬ್ಯ ದೊರಕಿಲ್ಲವೆ೦ಬ ಕಾರಣಕ್ಕೋ ಮತದಾನದಿ೦ದ ದೂರ ಉಳಿಯುತ್ತಿದ್ದಾರೆ. ಇದು ಹೀಗೆ ಮು೦ದುವರಿದರೆ ಪ್ರಜಾಪ್ರಬುತ್ವದ ನೆಲೆ ಗಟ್ಟಿಯಾಗುವುದೆ೦ತು?

‹ ಬಜೆಟ್ ೨೦೦೭ - ಡೌನ್ಲೋಡ್ ಮಾಡಿಕೊಂಡು ಓದಬಹುದು... ಹೊಸ ವರುಷದ ಶುಭಾಶಯಗಳು ›
  • ಸುದ್ದಿ, ಸಮಾಚಾರ
~.~
  • Login or register to post comments
  • 485 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀವೆನ೦ತೀರಿ
  • ಮತದಾನ .
  • ಅನಂತಮೂರ್ತಿಯವರನ್ನು ಗೆಲ್ಲಿಸಬೇಕು
  • ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
  • ಯಾರು ಹಿತವರು ನಮಗೆ - ಕೃತಿಯೋ , ಕರ್ತೃವೋ?
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
  • ASHOKKUMAR
    ಉ: ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
    September 6, 2008 - 7:59pm
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator