ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕಬ್ಬಿಗ = ಕವಿ

June 18, 2007 - 4:16pm — Anonymous User

ಜೈ ಭಾರತ ಜನನಿಯ ತನು- ಜಾತೆ - ಯಲ್ಲಿ 'ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ' ಅನ್ನುತ್ತಾರೆ ಕುವೆಂಪು. ಕಬ್ಬಿಗ ಅನ್ನುವ ಶಬ್ದದ ಅರ್ಥ ಕವಿ ಎಂದು ಆದಲ್ಲಿ , ಒಂದೇ ಅರ್ಥ ಬರುವ ಎರಡು ಶಬ್ದಗಳನ್ನು ಪಕ್ಕ ಪಕ್ಕ ಇಟ್ಟರೆ ಕುವೆಂಪು.. ? ಅಥವಾ ಕಬ್ಬಿಗ ಅಂದರೆ ಬೇರೆ ಅರ್ಥವಿದೆಯೆ...? ಬರಹ ನಿಘಂಟು ನಾನು ನೋಡಿ ಆಗಿದೆ, ಗೊತ್ತಿದ್ದವರಿಂದ ಸಮಾಧಾನಕ್ಕಾಗಿ ಕಾಯುತ್ತಿದ್ದೇನೆ.

( ಈ ವಿಷಯ ಚರ್ಚೆ ಆಗಬೇಕಾದರೆ | ಚರ್ಚೆಯಲ್ಲಿ ಸೇರಬೇಕಾದರೆ ನಾನು 75 ಶಬ್ದಗಳು ಸೇರಿಸಬೇಕು ಅನ್ನುತ್ತಿದೆ ಸಂಪದ , ಅಂತೂ ಇಂತೂ ಕಷ್ಟ ಪಟ್ಟು 75 ಶಬ್ದ ಕುಟ್ಟಿ ಸೇರಿಸಿದ್ದೇನೆ Sad :-( Sad :-( Sad :-( Sad :-( Sad :-( Sad , ಗೊತ್ತಿರುವವರಿಂದ ಉತ್ತರ ಬೇಕು ... )

‹ ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ ನಾಡೋಜ ಎಂದರೆ..... ›
  • ಸಾಹಿತ್ಯ, ಭಾಷೆ
~.~
  • Login or register to post comments
  • 498 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 18, 2007 - 5:39pm — Sunil Jayaprakash

ಉ: ಕಬ್ಬಿಗ = ಕವಿ

Sunil Jayaprakash's picture

ಶ್ರೀ.ಡಿ.ಎನ್(ಅಥವಾ ಡಿ.ಎನ್.ಶ್ರೀ), ಕಬ್ಬಿಗ ಎನ್ನುವ ಪದ ಹೀಗೆ ಬಂದಿದೆ. ಕಾವ್ಯ(ಸಂಸ್ಕೃತ) = ಕಬ್ಬ(ಕನ್ನಡ)

ಮಾಡು - ಮಾಡುಗ, ನೋಡು - ನೋಡುಗ, ಓದು - ಓದುಗ, ಅಂಬಿಗ, ಹಾಡುಗ ಹೀಗೆ.
ಕಬ್ಬ - ಕಬ್ಬಿಗ

"ಕಬ್ಬ" ಪದಕ್ಕೆ ನಾಮಪ್ರತ್ಯಯ ಸೇರಿ ಕಬ್ಬಿಗ ಪದ ಬಂದಿದೆ. ಕಬ್ಬಿಗರ ಕಾವನ್(ಕವಿಗಳ ರಕ್ಷಕ) ಎಂಬ ಒಂದು ಅಚ್ಚಗನ್ನಡ ಕಾವ್ಯವಿದೆ. ಇದರ ಬಗ್ಗೆ ಸಂಪದದಲ್ಲಿ ಕೆಲವು ಕಾಲ ಚರ್ಚೆಗಳಾಗಿದ್ದವು. ಬಿಡುವಿದ್ದಾಗ ಇದನ್ನು ಓದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 5:49pm — srivathsajoshi

ಉ: ಕಬ್ಬಿಗ = ಕವಿ

srivathsajoshi's picture

ಕಬ್ಬಿಗ ಎಂದರೆ ಕಬ್ಬಿನಂತೆ (= ಸಿಪ್ಪೆ ಗಟ್ಟಿ ಆದರೆ ಒಳಗೆ ಸಿಹಿಯಾದ ರಸ) ಇರುವ ಕವಿತೆ ಬರೆಯುವ ಕವಿ ಎಂದು ಅರ್ಥೈಸಿಕೊಳ್ಳೋಣ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 19, 2007 - 10:34am — shreedn (not verified)

ಉ: ಕಬ್ಬಿಗ = ಕವಿ

shreedn's picture

ಹಾಗಾದರೆ ಕುವೆಂಪುರವರು ಯಾಕೆ ಹಾಗೆಂದಿರಬಹುದು...? ನನ್ನ ಗೆಳೆಯರ ಬಳಗದಲ್ಲಿ ಇದು ಚರ್ಚೆಗೆ ಬಂದಾಗ, 'ಕಬ್ಬಿಗರುದಿಸಿದ..' ಸಾಲಿನ ಹಿಂದೆ ಮಹಾನ್ ಕವಿಗಳ ಹೆಸರುಗಳಿರುವುದರಿಂದ ಬಹುಷಃ ಕಬ್ಬಿಗರೆಂದರೆ ಮಹಾನ್ ಕವಿಗಳೆಂಬ ಅರ್ಥದಲ್ಲಿ ತೆಗೆದುಕೊಂಡಿರಬಹುದೆ ಅಂತ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 8:20pm — mahesha

ಉ: ಕಬ್ಬಿಗ = ಕವಿ

mahesha's picture

ಆ ಸಾಲನ್ನು

"ಕುಮಾರವ್ಯಾಸನ ಮಂಗಳಧಾಮ" ಅಂತ ಕೆಲವರು ಹಾಡುವರು.

ಕಾವ್ಯ => ಕಬ್ಬ => ಕಪ್ಪಿಯ( ತಮಿಳು? )

ಕಬ್ಬವನ್ನು ಬರೆಯುವವನು ಕಬ್ಬಿಗ.

ಹೀಗೆ 'ಇಗ' ಸೇರಿ ಹಲವು ಒರೆಗಳು ಬಂದಿದೆ.

ಕೆಲವು ತಮಾಶೆ ಹುಟ್ಟಿಸಿದ್ದೇನೆ Smiling
೧) ಕೊಬ್ಬಿಗ ( ಕೊಬ್ಬು ಇರವವನು )
೨) ಕನ್ನಡಕಿಗ/ಕಣ್ಣಡಕಿಗ ( ಕಣ್ಣಡಕ ಹಾಕುವವನು )
೩) ಸೂಜಿಗ ( ಸೂಜಿ ಹಿಡಿದವನು Smiling )
೪) ಗಬ್ಬಿಗ ( ಗಬ್ಬಾಗಿರುವವನು )
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 8:28pm — ವೈಭವ

ಉ: ಕಬ್ಬಿಗ = ಕವಿ

ವೈಭವ's picture

ಕೆಲವು ದಿನಗಳ ಹಿಂದೆ ಡುಂಡಿರಾಜರು ವಿ.ಕ.ದ ಅಂಕಣದಲ್ಲಿ 'ಕಬ್ಬಿಗ' --> ಕಬ್ಬು ಬೆಳೆಯುವವನು ಅಂತಾಗಬೇಕುತ್ತು Smiling
ಆದರೆ ಆಗಲೆ 'ಕವಿ' ಗಳು 'ಕಬ್ಬಿಗ' ರಾಗಿರುವುದರಿಂದ ಈ ಪದದಿಂದಲೂ ರೈತರು ವಂಚಿತರಾಗಿದ್ದಾರೆ ಅಂತ ಬರೆದಿದ್ದರು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 8:41pm — mahesha

ಉ: ಕಬ್ಬಿಗ = ಕವಿ

mahesha's picture

ಅವ್ದವ್ದು Smiling!!

ಹಾ...

ಕುವೆಂಪು ಅವರ ಮಾತು "ಕಬ್ಬಿಗರುದಿಸಿದ ಮಂಗಳಧಾಮ" ಅಂದ್ರೆ ಹೀಗು ಅರ್ತ ಮಾಡಿಕೋಬವುದಲ್ಲ!

ಕಬ್ಬು ಬೆಳಗಾರರಿಂದ, ಮಂಗಳ/ಶುಭ/ಸರಿ/ಚೆಲುವುಗಳಿಸಿ ನಾಡು ಈ ಕನ್ನಡವೆಂದು.

ಇಲ್ಲಿ ನೋಡಿ
ಕಬ್ಬಿರು ಉದಿಸಿದ. ಉದಿಸು = ಮೂಡಿಸು, ಹುಟ್ಟಿಸು. ಕಬ್ಬುಗಾರರೇ ಅಲ್ಲವೇ ಬೆಳೆಯನ್ನು ಮೂಡಿಸುವುದು.

ನಮ್ಮ ಮಂಡ್ಯ, ಬೀದರ ಮುಂತಾದ ಕಬ್ಬಬೆಳೆಗಾರರಿಗೆ ಜೈ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 9:02pm — ವೈಭವ

ಉ: ಕಬ್ಬಿಗ = ಕವಿ

ವೈಭವ's picture

ಬೀದರ್ ನಲ್ಲಿ ಬೆಳೀತಾರ ..?? ನಂಗ ಗೊತ್ತಿರ ಹಂಗೆ ಬಳ್ಳಿಗಾವಿ/ಬಾಗಲಕೋಟೆಯಲ್ಲೇ ಬಹಳ ಬೆಳೆಯೋದು.
ನೀವು ಹೇಳ್ದಂಗೆ ಕುವೆಂಪುರವರ ಕಬ್ಬಿಗ = ಕಬ್ಬು ಬೆಳೆಯುವವನೆ ಆಗರಿಬಹುದು !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 10:58pm — hamsanandi

ಉ: ಕಬ್ಬಿಗ = ಕವಿ

hamsanandi's picture

Quote:
ಬೀದರ್ ನಲ್ಲಿ ಬೆಳೀತಾರ ..?? ನಂಗ ಗೊತ್ತಿರ ಹಂಗೆ ಬಳ್ಳಿಗಾವಿ/ಬಾಗಲಕೋಟೆಯಲ್ಲೇ ಬಹಳ ಬೆಳೆಯೋದು

ಬೆಳಗಾವಿ ಅನ್ನೋದಕ್ಕೆ ಬಳ್ಳಿಗಾವಿ ಅಂತ ಬರೆದಿದ್ದೀರ ಅಂದುಕೊಂಡಿದ್ದೇನೆ.

ಬಳ್ಳಿಗಾವಿ ಎಂಬ ಊರು ಇರುವುದು ಶಿವಮೊಗ್ಗ ಜಿಲ್ಲೆ (ಅಥವ ಈಗ ದಾವಣಗೆರೆ ಆಗಿರಬಹುದು) ಶಿಕಾರಿಪುರ ತಾಲ್ಲೂಕಿನಲ್ಲಿ.

ಹೊಯ್ಸಳರ ಕಾಲದ ಒಂದು ಪ್ರಮುಖ ಸ್ಥಳ ಇದು. ಬೇರೆ ಕಡೆಗಳಲ್ಲಿ ದೇವಾಲಯಗಳನ್ನು ಕಟ್ಟುವ ಮೊದಲು, ಇಲ್ಲಿ ಹೊಯ್ಸಳರ ಶಿಲ್ಪಿಗಳು ಬಹಳಷ್ಟು ಪ್ರಯೋಗ ನಡೆಸಿದ್ದರೆಂದು ಹೇಳಲಾಗಿದೆ.

ಬಳ್ಳಿಗಾವಿಯ ಬಗ್ಗೆ ಒಂದು ಸುದ್ದಿ ಕೊಂಡಿ ನೋಡಿ ಇಲ್ಲಿ:

http://www.deccanherald.com/archives/jan252005/spt7.asp

ಇನ್ನು ಬೆಳಗಾವಿ ಬಗ್ಗೆ ಹೇಳೋದೇನಿಲ್ಲ - ನನಗೆ ತಿಳಿದಂತೆ, ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆ ಹೆಚ್ಹು. ಆದರೆ ಅದೆಲ್ಲ ಹೋಗುವುದು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ Sad

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2007 - 8:39pm — srivathsajoshi

ಉ: ಕಬ್ಬಿಗ = ಕವಿ

srivathsajoshi's picture

"ಕಬ್ಬಿಗರುದಿಸಿದ ಮಂಗಳಧಾಮ..." ಸಾಲನ್ನು ನಾನು ಡುಂಡಿರಾಜ್ ಅವರಿಗೆ ಒಂದು ಇಮೈಲ್‍ನಲ್ಲಿ ಈರೀತಿಯಾಗಿ ಉಪಯೋಗಿಸಿಕೊಂಡಿದ್ದೆ.

"ಕಬ್ಬಿಗ ಕೊರೆದಿಹ ಮಂಗಳವಾರ..." (ಪ್ರತಿ ಮಂಗಳವಾರ ವಿಜಯಕರ್ನಾಟಕದಲ್ಲಿ ಪ್ರಕಟವಾಗುವ ಡುಂಡಿರಾಜ್ ಅಂಕಂಅ ಮಾತು-ಕ(ವಿ)ತೆ ಬಗ್ಗೆ).

ಅದಕ್ಕವರು ಉತ್ತರವಾಗಿ, ’ಜೋಶಿಯವರೆ ನಿಮ್ಮ ಅಂಕಣ ಸಹ ದಟ್ಸ್‌ಕನ್ನಡದಲ್ಲಿ ಮಂಗಳವಾರವೇ ಬರುವುದಲ್ಲ?" ಎಂದು ಪ್ರತಿಸವಾಲಿಸಿದ್ದರು Smiling

ಆಗ ನನ್ನ ಸಮಜಾಯಿಶಿ ಹೀಗಿತ್ತು: "ನಾನು ಕಬ್ಬಿಗನಲ್ಲ, ತುಕ್ಕು ಹಿಡಿದ ಕಬ್ಬಿಣ. ಹಾಗಾಗಿ "ಕಬ್ಬಿಣ ಕೆರೆದಿಹ ಮಂಗಳವಾರ..." ಎನ್ನಬಹುದು, ವಿಚಿತ್ರಾನ್ನದ ಬಾಣಲೆಯನ್ನು ಕೆರೆಯುವುದೆಂದರ್ಥದಲ್ಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ಸಖೇದಾಶ್ಚರ್ಯ’ ಮತ್ತು ’ಸನೇಕ’
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಕನ್ನಡ ನಾಡಿನ ಕಬ್ಬಿಗರು -೧ ನಯಸೇನ
  • hacker ಶಬ್ದದ ಬಗ್ಗೆ
  • मृग = ಜಿಂಕೆ ?
Syndicate content

ಲೇಖಕರು

Anonymous User's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಓದಬೇಕು & ಓದಿಕೊಳ್ಳಬೇಕು
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ನಲ್ಲೆಯ ಕೋಪ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • `ಓವಿ ' ಪದದ ಅರ್ಥವೇನು?
  • ಪಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: Typical ನಲ್ಲನ ಒಲುಮೆಯಳಲು
    August 20, 2008 - 2:06pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:07pm
ಇನ್ನಷ್ಟು


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator