ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ

July 22, 2006 - 5:07pm — Sunil Jayaprakash

ಗೆಳೆಯರೆ, ನನಗೆ ಕಳೆದುಹೋಗಿರುವ ಒಂದು ಕನ್ನಡ ಪದ್ಯ ಬೇಕಾಗಿದೆ, ದಯವಿಟ್ಟು ಸಹಾಯ ಮಾಡಿರೆಂದು ಕೇಳಿಕೊಳ್ಳುವೆ. ಆ ಪದ್ಯದ ಕೆಲವು ಸಾಲುಗಳು ಮಾತ್ರ ನನಗೆ ತಿಳಿದಿವೆ.

ನಾನು ಈಗ್ಗೆ ಸುಮಾರು ತಿಂಗಳ ಹಿಂದೆ, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ, "ಶಿವಾನಂದ ಲಹರಿ" ಬಗ್ಗೆ ಒಂದು ಉಪನ್ಯಾಸ ಕೇಳುತ್ತಿದ್ದೆ. ಆಗ ಈ ಪದ್ಯದ ಪ್ರಸ್ತಾಪವಾಗಿತ್ತು,

ಯಾರೋ ಪುಣ್ಯಾತ್ಮರು ಈ ರೀತಿ ಒಂದು ಸರಳ ಪದ್ಯವನ್ನು ಬಹಳ ಹಿಂದೆ ರಚಿಸಿರುವರಂತೆ.
ಸುಲಿದ ಬಾಳೆಯಹಣ್ಣಿನಂದದಿ...
ಕಳಿದ.....ಕಬ್ಬಿನಂದದಿ...
......................
ಸಂಸ್ಕೃತದಲ್ಲಿನ್ನೇನು.

ಆ ಪದ್ಯದ ಅರ್ಥ ಹೀಗಂತೆ..
ನಮ್ಮ ಕನ್ನಡ ಭಾಷೆಯು, ಸುಲಿದ ಬಾಳೆ ಹಣ್ಣಿನಂತೆ, ಕಬ್ಬಿನ ಹಾಲು ಕುಡಿದಷ್ಟೇ ಸಿಹಿ.....ಹೀಗೆ ಸರಳವಾಗಿ ಇರುವ ಕನ್ನಡ ಭಾಷೆಯಲ್ಲಿ ನಾನು ಹೇಳುತ್ತೇನೆ. ಸಂಸ್ಕೃತದಲ್ಲಿ ಅದರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸಂಸ್ಕೃತದಲ್ಲೂ ಅದೇ ಹೇಳಿದೆ.

ಜೇನಿನ ಹೊಳೆಯಾಗಿರುವ, ಹಾಲಿನ ಮಳೆಯಾಗಿರುವ ನಮ್ಮ ಕನ್ನಡ ಭಾಷೆಯನ್ನು ಇನ್ನಷ್ಟು ಸರಳವಾಗಿ ಹೊಗಳಿರುವ ಆ ಪದ್ಯ ಬೇಕಾಗಿದೆ. ನನಗೆ ಆ ಪದ್ಯವನ್ನು ದಯಮಾಡಿ ಯಾರಾದರು ತಿಳಿಸಿಕೊಟ್ಟರೆ ನಾನು ನಿಜವಾಗಿಯೂ ಚಿರಋಣಿಯಾಗಿರುತ್ತೇನೆ.

‹ ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು ಕಬ್ಬಿಗ = ಕವಿ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1669 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2006 - 5:13pm — Sunil Jayaprakash

ಸುಲಿದ ಬಾಳೆಯ ಹಣ್ಣಿನಂದದಿ

Sunil Jayaprakash's picture

ಗೂಗಲ್ ಮಾಡಿದಾಗ, ಡಾ || ಚಿದಾನಂದಮೂರ್ತಿಯವರು ಈ ಪದ್ಯದ ಹಿರಿಮೆಯ ಬಗ್ಗೆ ವಿಶ್ವಕನ್ನಡದಲ್ಲಿ ಬರೆದಿರುವ ಒಂದು ಲೇಖನ ಕಂಡಿತು. ಇಂತಹ ಲೇಖನಗಳನ್ನು ಓದಲೇ ಬೇಕು ನಾವೆಲ್ಲರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2006 - 1:40am — mana

Re: ಸುಲಿದ ಬಾಳೆಯ ಹಣ್ಣಿನಂದದಿ

mana's picture

ಸುನಿಲ್, ನೀವು ಕೇಳಿರುವ ಪದ್ಯ ಇಲ್ಲಿದೆ.

---------

 

ಸುಲಿದ ಬಾಳೆಯ ಹಣ್ಣಿನಂದದಿ

ಕಳೆದ ಸಿಗುರಿನ ಕಬ್ಬಿನಂದದಿ

ಅಳೆದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ

ಲಲಿತವಹ ಕನ್ನಡ ನುಡಿಯಲಿ

ತಿಳಿದು ತನ್ನಲಿ ತನ್ನ ಮೋಕ್ಷವ

ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2006 - 9:34am — nadahalli

Comment on (ಮನ's) comment

nadahalli's picture

ಈ ಪದ್ಯವನ್ನು ರಚಿಸಿದವರಾರೆಂದು ತಿಳಿಸಿಕೊಟ್ಟರೆ ಚೆನ್ನಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2006 - 10:16am — Sunil Jayaprakash

ಸುಲಿದ ಬಾಳೆಯ ಹಣ್ಣಿನಂದದಿ - ರಚಿಸಿದವರು

Sunil Jayaprakash's picture

ಡಾ|ಚಿದಾನಂದಮೂರ್ತಿಯವರು ಪ್ರಸ್ತಾಪಿಸಿರುವಂತೆ ಇದರ ರಚನಕಾರ ಮಹಾಲಿಂಗರಂಗ ಎಂಬ ಕವಿ. ಇದರ ಪೂರ್ಣ ಲೇಖನ ಇಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2006 - 10:26am — Sunil Jayaprakash

ಮನರವರಿಗೆ ನಮೋನಮಃ

Sunil Jayaprakash's picture

ನನಗೆ ಬಹಳ ಸಂತೋಷವಾಗುತ್ತಿದೆ. ಈ ಪದ್ಯವನ್ನು ತಿಳಿಸಿ ಬಹಳ ಉಪಕಾರವನ್ನು ಮಾಡಿರುವಿರಿ "ಮನ" ಅವರೇ. ಸವಿಯೊದಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2006 - 10:26am — ಮಹೇಶ ಭೋಗಾದಿ

ಸವಿ ಸಿರಿ ಗನ್ನಡಂ ಗೆಲ್ಗೆ

ಮಹೇಶ ಭೋಗಾದಿ's picture

ನಲಿವಾಯಿತು ಜೀವಕ್ಕೆ
ಒಲವಾಯಿತು ಭಾವಕ್ಕೆ
ಕನ್ನಡದ ಈ ಹೊಗಳಿಕೆ
ತಿಂದ ಹಾಗೆ ಹೋಳಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2006 - 8:20am — benaka

ಸಕ್ಕರೆಯದು ಕನ್ನಡದ ಪಾಲ್ಗೆ!

benaka's picture

ಗೆಳೆಯರೇ,

ಸಾಲದೇ, 'ಸಂಸ್ಕೃತದಲಿನ್ನೇನು'? ಎಂಬುದೇನೋ ಸರಿ, ಕನ್ನಡದ ಹಿರಿಮೆ ಅರ್ಥವಾಗುತ್ತದೆ. ಆದರೆ, ಸಂಸ್ಕೃತವಿಲ್ಲದೆ ಕನ್ನಡವಿಲ್ಲ ಎಂಬುದಕ್ಕೆ ಇದೇ ಪದ್ಯವೇ ಒಳ್ಳೆಯ ಉದಾಹರಣೆ. ಏಕೆಂದರೆ ಇಲ್ಲಿಯೂ ಕೂಡ ಸಕ್ಕದದ ಬಳಕೆಯಿದೆ! ನೋಡಿ:

'ಉಷ್ಣ'ದ ಹಾಲು, 'ಸುಲಭ'ವಾಗಿರುವ, 'ಲಲಿತ'ವಹ, 'ಮೋಕ್ಷ' -> ಎಲ್ಲ ಶುದ್ಧ ಸಕ್ಕದಪದಗಳೇ! ಅಲ್ಲವೇ?

ಸಕ್ಕದದೊಳಿನಿತಕ್ಕರೆಯಿರಲ್
ಸಕ್ಕರೆಯದು ಕನ್ನಡದ ಪಾಲ್ಗೆ!

ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 8, 2007 - 4:13pm — Sunil Jayaprakash

ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ

Sunil Jayaprakash's picture

ಗೆಳೆಯರೆ,

ಈ ದಿನ ಅಶೋಕ್ ಅವರು ಒಂದು ಕೊಂಡಿಯನ್ನು ನೀಡಿ ದೊಡ್ಡ ನೆರವನ್ನಿತ್ತರು. ತೆರೆದು ನೋಡಿದರೆ, ನಾವುಗಳು ತುಂಬಾ ದಿನಗಳಿಂದ ಕಾಯುತ್ತಿದ್ದ ಪುಸ್ತಕ ಸಿಕ್ಕಿತು.

ಈ ಪುಸ್ತಕದ ಮುನ್ನುಡಿಯನ್ನು ತಿರುವಿ ಹಾಕಿದಾಗ ತಿಳಿದುಬಂದದ್ದು, ಅನೇಕ ಕುತೂಹಲಕಾರಿಯಾದ ಅಂಶಗಳು.
೧. ಈ ಗ್ರಂಥದ ಕರ್ತೃವಿಗೂ, ಚಿತ್ರದುರ್ಗಕ್ಕೂ ಏನೋ ನಂಟಿದೆ.
೨. ನಾವು ಸಂಸ್ಕೃತದ ಅನೇಕ ಗ್ರಂಥಗಳು ಕನ್ನಡಕ್ಕೆ ಭಾಷಾಂತರವಾಗಿರುವದನ್ನು ಕಾಣುತ್ತೇವೆ. ಆದರೆ ಕುತೂಹಲಕಾರಿಯಾದ ಅಂಶವೆಂದರೆ, ಈ ಕನ್ನಡ ಗ್ರಂಥವು ಸಂಸ್ಕೃತಕ್ಕೆ ಭಾಷಾಂತರವಾಗಿದೆಯಂತೆ. "ಶ್ರೀಮತ್ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು" ಇದನ್ನು ೧೭೩೫ರಲ್ಲಿ ಸಂಸ್ಕೃತಕ್ಕೆ ಅನುವಾದ ಮಾಡಿರುವರಂತೆ.

ಅನುಭವಾಮೃತ ಪುಸ್ತಕವನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ಕಿ. ಶ್ರೀಮಹಲಿಂಗರಂಗಕವಿಯ ಅನುಭವಾಮೃತ (ಶುದ್ಧಪಾಠ) ಸರ್ವಾರ್ಥಸಂದರ್ಶಿನಿ ಎಂಬ ಟೀಕಿನೊಡನೆ - ಮುದ್ರಣ ೧೯೩೬

ಈ ಪುಸ್ತಕ ತುಂಬಾ ತೂಕವುಳ್ಳದ್ದೆನಿಸುತ್ತಿದೆ. ಓದಿದರೆ ತಿಳಿಯುವುದು. ಬಿಡುವಿದ್ದಾಗ ಅಥವಾ ಅದ್ವೈತದಲ್ಲಿ ಆಸಕ್ತಿಯುಳ್ಳವರು ಓದಬಹುದು. ಪಿ.ಡಿ.ಎಫ್ ಎಲ್ಲಿಯಾದರೂ ಅಪ್ಲೋಡ್ ಮಾಡಲು ಪ್ರಯತ್ನಿಸುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 8, 2007 - 10:44pm — ASHOKKUMAR

ಉ: ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ

ASHOKKUMAR's picture

ಸುನೀಲ್‍ಜಿ,
ನಿಮ್ಮ ಡೌನ್‍ಲೋಡ್ ಸಲಕರಣೆಗೆ ಧನ್ಯವಾದಗಳು.
ಅನುಭವಾಮೃತ ಪುಸ್ತಕವನ್ನು ಇಳಿಸಿಕೊಂಡೆ. ಇದನ್ನು ಅಂತರ್ಜಾಲದ ಈ ಕೊಂಡಿಯಲ್ಲಿ ಇರಿಸಿದ್ದೇನೆ. ಬೇಕಾದವರು ಇಳಿಸಿಕೊಳ್ಳಿ.
http://www.mediafire.com/?52m091zh1tz
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನುಭವಾಮೃತ - ೧
  • ಘೃತಮುಮಂ ತೈಲಮುಮಂ
  • ಈ ಕವನ ಸಂಪದ್ಭಾಂದವರಲ್ಲಿ ಯಾರಿಗಾದರೂ ಗೊತ್ತೆ?
  • O L Nagabhushanaswami and Yeats
  • ಭಗವದ್ಗೀತೆ ಜ್ಞಾನಯೋಗದ ಬಗ್ಗೆ ಉಪನ್ಯಾಸ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
  • ಸಪ್ತಸ್ವರಗಳು
  • ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
  • ಕೈದು, ಖೈದು
  • ನಮ್ಮೂರ ಮಂದಾರ ಹೂವು ಸಿನಿಮಾದ ಭಯಾನಕ ದೃಶ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:41pm
  • ASHOKKUMAR
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:22pm
  • ASHOKKUMAR
    ಉ: ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!
    October 6, 2008 - 8:21pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 8:15pm
  • imunde
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 6, 2008 - 8:10pm
  • cmariejoseph
    ಉ: ಮತಾಂತರ ಏನು ಎತ್ತ
    October 6, 2008 - 8:07pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:56pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:54pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:53pm
  • Rajeshwari
    ಉ: ಅವರು "ಮಹಾತ್ಮ"
    October 6, 2008 - 7:51pm
ಇನ್ನಷ್ಟು


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator