ಕರ್ನಾಟಕ ಸರ್ಕಾರದ ನೂರು ದಿನದ ಸಾಧನೆ
ಯಾವ ಸರ್ಕಾರ ಬಂದರೂ ಅಷ್ಟೇ ಅವರು ಚುನಾವಣೆಯಲ್ಲಿ ಹೇಳಿದ ಭರವಸೆಗಳು ಬರೀ ಗಾಳಿಗೋಪುರವಷ್ಟೇ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಸರ್ಕಾರ ಮಾಡಿರುವ ಸಾಧನೆಯಾದರೂ ಏನೂ ಬರೀ ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸಿ ತಮ್ಮ ಸರ್ಕಾರ ಭದ್ರ ಪಡಿಸಿವುದೇ ಆಗಿದೆ. ಅವರು ಹೇಳಿಕೊಳ್ಳುತ್ತಿರುವ ಸಾಧನೆಗಳು ಜನಸಾಮಾನ್ಯರಿಗೆ ಮುಟ್ಟಿದೆಯೇ?, ಅವರ ಸಾಧನೆಯ ಪಟ್ಟಿಗೆ ಅಪರೇಷನ್ ಕಮಲ, ಧರ್ಮ-ಧರ್ಮ ನಡುವೆ ನಡೆಯುತ್ತಿರುವ ಗಲಭೆ, ಸ್ವ ಅಸ್ತಿತ್ವದ ಭದ್ರತೆ, ವರ್ಗಾವಣೆ ಪ್ರಕರಣ, ದ್ವೇಷ ರಾಜಕಾರಣದಿಂದ ತಮ್ಮ ತಮ್ಮ ಆಯಕಟ್ಟಿನ ಸ್ಥಳಗಳಿಗೆ ಸ್ಥಳಾಂತರ( ರಾಜೀವ ಗಾಂಧಿ ವಿ.ವಿ) ಇದೆಲ್ಲಾ ಈ ಸರ್ಕಾರಕ್ಕೆ ಅವಶ್ಯಕವ? ಹೊಸ
ಸರ್ಕಾರದ ಮೇಲೆ ಜನ ಸಾಮಾನ್ಯರು, ರೈತರು, ಯುವ ಜನಾಂಗಗಳ ಆಸಾಗೋಪುರಕ್ಕೆ ತಣ್ಣೀರೆಚ್ಚಿದ್ದಾರೆ ಅಷ್ಟೇ. ನನ್ನ ಪ್ರಕಾರ ಈ ಸರ್ಕಾರದ ಸಾಧನೆ 100 ಕ್ಕೆ ಶೂನ್ಯ ಮಾತ್ರ.
ಮಾ.ಕೃ.ಮಂಜು

- Login or register to post comments
- 156 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: