‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಬಾಂಬ್ ಹಾರಿಸಿ ಅಮಾಯಕರನ್ನು ಕೊಲ್ಲುವುದರಿಂದ, ಮುಗ್ಧ ಜನರನ್ನು ಗಾಯಗೊಳಿಸಿ,ನಾಗರಿಕ ಸಮಾಜವನ್ನು ಭಯಭೀತಗೊಳಿಸಿವುದರಿಂದ ಯಾವುದಾರೂಂದು ಸಮಸ್ಯೆಗೆ ಕೊನೆಪಕ್ಷ ಪರಿಹಾರ ಸಿಗುವುದು ಎಂದಾದರೆ ಎಲ್ಲರೂ ಅದನ್ನೇ ಮಾಡೋಣ. ಕೈಲಾಗದಿದ್ದಲ್ಲಿ ಮೈಎಲ್ಲ ಪರಚಿಕೊಂಡಂತೆ, ಹೇಡಿಗಳಂತೆ ಕದ್ದು-ಮುಚ್ಚಿ ಗೆರಿಲ್ಲಾ ಶೈಲಿ ‘ಪ್ರಾಕ್ಸಿ ವಾರ್’ಗೆ ಇಳಿದವರ ವಿರುದ್ಧ ನಮ್ಮ ವರ್ತನೆ ಎಷ್ಟು ಕಠಿಣವಾಗಿರಬೇಕು? ಮತ್ತು ಈಗಾಗಲೇ ಭಯೋತ್ಪಾದನೆಯಲ್ಲಿ ಕೈವಾಡವಿರುವುದು ಸಾಬೀತಾದ ಮಂದಿಯನ್ನು ನಾವು ಹೇಗೆ ಶಿಕ್ಷಿಸಿದ್ದೇವೆ? ಎಂಬುದರ ತಥ್ಯದ ಮೇಲೆ ಶಾಶ್ವತ ಪರಿಹಾರ ದೊರಕುವುದು.
ಅನಾಗರಿಕ ವರ್ತನೆಯ ಭಯೋತ್ಪಾದಕರಿಗೆ ನಾಗರಿಕ ಸಮಾಜದ ಸಂಘಟಿತ ಹೋರಾಟವೇ ಉತ್ತರವಲ್ಲವೇ? ಸದಾ ಸನ್ನದ್ಧ ಹಾಗು ಎಚ್ಚರ ಸ್ಥಿತಿಯಲ್ಲಿ ಇರಬೇಕಾಗಿದ್ದೇ ನಾವು ಸ್ವಾತಂತ್ರ್ಯಕ್ಕೆ ನೈಜಾರ್ಥದಲ್ಲಿ ತೆರಬೇಕಾದ ಬೆಲೆ ಅಲ್ಲವೇ?

- Login or register to post comments
- 374 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಭಯೋತ್ಪಾದಕರ ಕುಕೃತ್ಯ ಯಾವತ್ತೂ ಖಂಡನೀಯ. ದೇಶದ ಅಖಂಡತೆಗೆ ಹಾಗು ಸಾರ್ವಭೌಮತೆಗೆ ಧಕ್ಕೆ ತರುವಂತಹ ಈ ಕೃತ್ಯಗಳನ್ನು ಮೂಲೋಚ್ಛಾಟನೆ ಮಾಡಲೇಬೇಕು. ಜಾಗೃತ ಸಮಾಜ ಮಾತ್ರ ಬಹಳ ದಿನ ಬದುಕಬಲ್ಲುದು ಎಂಬುದು ಸರ್ವಕಾಲಿಕ. ಚರ್ಚಾ ವಿಷಯದಂತೆ ಸಂಘ ಶಕ್ತಿಯೇ ಭಯೋತ್ಪಾದನೆ ತೊಲಗಿಸುವ ಮದ್ದು. ನಾಗರಿಕ ಸಮಾಜದಲ್ಲಿ ಸಂವಿಧಾನ ಬದ್ಧ ಹೋರಾಟಗಳಿಗೆ ಮಾತ್ರ ಸ್ಥಾನ-ಮಾನ. ಅನಾಗರಿಕ ರೀತ್ಯಾ ‘ಹಾರಾಟ’ಗಳಿಗೆ ಅದೇ ಉತ್ತರ ತಿರುಗಿಸುವ ಸಿದ್ಧತೆ ನಡೆಯಬೇಕು.
ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಶಂಕಿತ ಉಗ್ರರ ಬಂಧನದ ಪ್ರಾರಂಭದ ಹಂತದಲ್ಲಿಯೇ ಅವರ ಅಡುಗು ತಾಣಗಳನ್ನೆಲ್ಲ ಜಾಲಾಡಿಬಿಡಬೇಕಿತ್ತು. ಹಾಗೆ ಮಾಡದಿರುವುದೇ ಈಗ ಈ ಪರಿಸ್ಥಿಯನ್ನು ನಮ್ಮ ರಾಜಧಾನಿಯ ಜನ ಎದುರಿಸುವಂತಾಯಿತು. ಜೊತೆಗೆ ಈಗಾಗಲೇ ಶಂಕಿತ ಭಯೋತ್ಪಾದನೆ ಅಡಿಯಲ್ಲಿ ಬಂಧಿತರಾಗಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮಾಧ್ಯಮಗಳಲ್ಲಿ ಶಂಕಿತ ಉಗ್ರರ ಚಿತ್ರಗಳು ಪ್ರಕಟಗೊಂಡಾಗ ಅವರ ಮುಖದಲ್ಲಿ ಯಾವುದೇ ಆತಂಕಗಳಿಲ್ಲದಿರುವುದು, ಆವರಣದಲ್ಲಿ ನಿಂತವರತ್ತ ಅವರು ಕೈಬೀಸುವುದು ಎಲ್ಲ ನಮ್ಮ ಪ್ರಜಾಪ್ರಭುತ್ವವನ್ನು ಅಣಕಿಸುತ್ತಿವೆ ಎನಿಸುತ್ತದೆ.
ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಎನ್ನುವುದನ್ನು ಬಿಟ್ಟು ನಾವೆಲ್ಲರು ಜಾಗೃತರಾಗಬೇಕು ಮೊದಲು. ಉಗ್ರರು ಇನ್ನೊಂದು ಬಾರಿ ಇಂತಹ ದುಷ್ಕೃತ್ಯ ವೆಸಗದ ಹಾಗೆ ನಾಗರಿಕರೇ ಪೊಲೀಸರಾಗಿ ವರ್ತಿಸಬೇಕು. ಸಹನೆ ಕೈಲಾಗದತನ ಎನ್ನಿಸಿಕೊಳ್ಳುವ ಮೊದಲು ದಿಟ್ಟ ಉತ್ತರ ನೀಡಲು ನಾವು ಸಿದ್ಧರಾಗೋಣ. ಎಲ್ಲವೂ ಸರಕಾರವೇ ಮಾಡಲಿ ಎಂದರೆ ‘ಸಮಾಜದ ಸಹಭಾಗಿತ್ವ’, ನಮ್ಮ ನಿಮ್ಮ ಪಾಲೇನು? ಪಾಡೇನು?
ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ನಾಡಿನ ಶಾಂತಿಯನ್ನು ಕದಡುವ ಇಂತಹ ಘಟನೆಗಳು ಪುನರಾವರ್ತಿಯಾಗದಂತೆ ವ್ಯಾಪಕ ಸುರಕ್ಷಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. ಶ್ರೀಸಾಮಾನ್ಯನಿಗೆ ಪರಿಸ್ಥಿತಿ ತಹಬದಿಗೆ ಬರುವ ವರೆಗೆ ಕೆಲದಿನಗಳ ಕಾಲ ಇದು ಪೊಲೀಸ್ ರಾಜ್ಯವೇ? ಎನಿಸಿದರೂ ಪರವಾಗಿಲ್ಲ. ಒಮ್ಮೆ ಅವರನ್ನು ಹತ್ತಿಕ್ಕಿಬಿಡಲಿ. ಇಲ್ಲದಿದ್ದರೆ ಇದು ನಮ್ಮ ಪೂರ್ವಾಂಚಲದ ನಕ್ಸಲಿಸಂ, ಮಾವೋಇಸಂ, ಮೂಲಭೂತವಾದದ ಪಡಿಯಚ್ಚು ಎನಿಸಿ ಕರ್ನಾಟಕದಲ್ಲಿ ಉಗ್ರರ ಪ್ರತಿ ಸಹಾನುಭೂತಿ ಪ್ರಕಟಗೊಂಡು, ಅವರಿಗೂ ಸಹ ಪರಿಹಾರ ನೀಡಿ ಮುಖ್ಯವಾಹಿನಿಗೆ ಸೇರಿಸುವ ತರ್ಕ ಸರಕಾರದ ಮುಂದೆ ಬರಬಹುದು!
ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಅನಾಗರಿಕ ಬಾಂಬ್ ಉತ್ತರವೂ ಅಲ್ಲ ,ಪ್ರಶ್ನೆಯೂ ಅಲ್ಲ . ಅದೊಂದು ಕೆಟ್ಟ ಸಮಸ್ಯೆ .ಇದರ ಪೋಷಕರು ದೂರದಲ್ಲೆಲ್ಲೂ ಇಲ್ಲ. ನಮ್ಮ ಕೆಟ್ಟ ರಾಜಕೀಯ ವ್ಯವಸ್ಥೆಯೇ ಇದರ ತಾಯಿ ಬೇರು . ನಮ್ಮ ಪ್ರಜಾತಂತ್ರ, ನಮ್ಮ ಸ್ವಾತಂತ್ರ್ಯ ಉಳಿಯಬೇಕಾದರೆ ಯಾರು ಏನೇ ಬೊಬ್ಬೆ ಹೊಡೆಯಲಿ, ಭಯೋತ್ಪಾದಕರಿಗೆ, ಹಿಂಸೆಯನ್ನು ಅವಲಂಬಿಸಿರುವವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯಾಗಬೇಕು.