ಉ: ಶರಣರ ಬದುಕನ್ನು ಮರಣದಲ್ಲಿ ನೋಡು
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: Jayalaxmi.Patil (Jul 24 2008 - 10:19pm)
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: savithru (Jul 25 2008 - 10:25am)
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: Jayalaxmi.Patil (Jul 25 2008 - 9:18pm)
- ಉ: ಶರಣರ ಬದುಕನ್ನು ಮರಣದಲ್ಲಿ ನೋಡು By: savithru (Jul 25 2008 - 10:25am)

RSS:
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
ಜಯಲಕ್ಷ್ಮಿಯವ್ರೆ,
ಕಲ್ಯಾಣ ಕ್ರಾಂತಿಯ ( ಕ್ರಾಂತಿಯನ್ನು ಎರಡು ರೀತಿಯಲ್ಲಿ ಅರ್ಥ ಮಾಡಿ ಕೊಳ್ಳಬಹುದು!!) ಸಮಯದಲ್ಲಿ
ಹಲ ಶರಣರು ಕತ್ತಿ ಹಿಡಿದಿದ್ದು ನಿಜ. ಆಗ ಹುಟ್ಟಿಕೊಂಡ ನುಡಿಗಟ್ಟು " ಶರಣರಿಗೆ ಮರಣವೇ ಮಾನವಮಿ"
"ಶರಣರ ಬದುಕನ್ನು ಮರಣದಲ್ಲಿ ನೋಡು"....ಈ ನುಡಿಗಟ್ಟನ್ನು ಸ್ವಲ್ಪ ಬೇರೆ ತರದಲ್ಲಿ ಅರ್ಥ ಮಾಡಿಕೊಳ್ಳಬೇಕು.
ಕಾಯಕವೇ ಕೈಲಾಸ ಅಂತ ಬದುಕಿ ಅದರಿಂದ ಬಂದ ಹಣವನ್ನು ಶರಣರು ಎಂದೂ ಕೂಡಿಟ್ತವರಲ್ಲ. "ಕೂಡಿಡುವಿಕೆ" ಶರಣ ಧರ್ಮಕ್ಕೆ ವಿರುದ್ದ. ಹಾಗಾಗಿ ಕೆರೆಯ ನೀರನು ಕೆರೆಗೆ ಚೆಲ್ಲಿ ಅನ್ನೋ ರೀತಿಯಲ್ಲಿ ತಮ್ಮದೆಲ್ಲವನೂ ಸಮಾಜಕ್ಕೆ ನೀಡಿ ಬದುಕಿದವರು. ಅಂದ್ರೆ ಸಮಾಜದಲ್ಲಿ ಜನಸಾಮಾನ್ಯರಾಗಿದ್ದವರು. ಬದುಕಿದ್ದಾಗ "ಇವನಾರೋ" ಅನ್ನೋ ರೀತಿ ಎಲೆ ಮರೆ ಕಾಯಿಯಾಗಿ ಬದುಕಿ ಜನರ ಗಮನಕ್ಕೆ ಬಾರದೆ .....ಸತ್ತಾಗ ಅವರಿಂದ ಉಪಕೃತರಾದವರು ಅವರನ್ನು ನೆನೆಯುವ / ನೆರೆಯುವ ರೀತಿಯಿಂದ ಅವರ ದೊಡ್ಡತನವನ್ನು ತಿಳಿಯಬಹುದಿತ್ತು.
ಸವಿತೃ