ಹಿಂದೊಮ್ಮೆ ನನಗೆ ಅಶ್ವತ್ಥರ ಕಥಾಸಂಕಲನದ ಒಂದು ಸಂಪುಟ - ಸುಮಾರು ಸಾವಿರ ಪುಟಗಳದ್ದು - ಸೆಕಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸಿಕ್ಕಿತು . ಅದರಲ್ಲಿರುವ ಕಥೆಗಳು ಬಹುತೇಕ ಚೆನ್ನಾಗಿದ್ದವು . ಇನ್ನೊಮ್ಮೆ ಓದಬೇಕಿದೆ. ನನಗೆ ಒಂದು ಕಥೆ ನೆನಪಿನಲ್ಲುಳಿದಿದೆ .
೩೦-೪೦ ವರ್ಷಗಳ ಹಿಂದಿನ ಕತೆ ; ಆಗ ಗಂಡ ಸರಕಾರೀ ಅಧಿಕಾರಿ ; ಪತ್ನಿ ಗರ್ಭಿಣಿ ; ಗರ್ಭಪಾತವಾಗುತ್ತದೆ ; ಡಾಕ್ಟರರು ’ನೀವು ಇನ್ನು ಮೇಲೆ ಎಚ್ಚರದಿಂದಿರಬೇಕು ;ಆಕೆ ಇನ್ನೊಮ್ಮೆ ಗರ್ಭಿಣಿಯಾದರೆ ಅವಳ ಜೀವಕ್ಕೆ ಅಪಾಯ’ ಎನ್ನುತ್ತಾರೆ . ಅವರು ಹೇಳಿದ ರೀತಯೇ ಯಾವ ರೀತಿಯ ಎಚ್ಚರ ವಹಿಸಬೇಕು ಎಂದು ತಿಳಿಸುವಂತಿತ್ತು ; ’ಸೂಕ್ತ ಆಪರೇಶನ್ ಮಾಡಬಲ್ಲೆ ’ ಎಂದೂ ಸೂಚಿಸುತ್ತಾರೆ ; ಆಗ ಅಧಿಕಾರಿ ಗಂಡ - ಅಂಥದೇನೂ ಅಗತ್ಯವಿಲ್ಲ ; ನಾವು ಎಚ್ಚರ ವಹಿಸುತ್ತೇವೆ’ ಎನ್ನುತ್ತಾರೆ . ವೈದ್ಯರು ಮತ್ತೆ ಮತ್ತೆ ತಿಳಿ ಹೇಳಿದರೂ ಇವರು ಕೇಳರು . ತಮ್ಮ ಮೇಲೆ ಅಷ್ಟು ಆತ್ಮವಿಶ್ವಾಸ ಅವರಿಗೆ . ಡಾಕ್ಟರರಾದರೂ ಇನ್ನೇನು ಮಾಡಿಯಾರು ? ಅಧಿಕಾರಿಯ ಮನಸ್ಸಿನ ವಿರುದ್ಧ ಚಿಕಿತ್ಸೆ / ಆಪರೇಶನ್ ಮಾಡಲು ಸಾಧ್ಯವೇ ?
ನಂತರ ಮೂವತ್ತು ವರ್ಷಗಳು ಉರುಳಿವೆ ; ಈ ಮಧ್ಯೆ ಈ ದಂಪತಿಗಳು ಬಹಳೇ ಮಾನಸಿಕ ಕೋಲಾಹಲಕ್ಕೆ ಒಳಗಾಗಿದ್ದಾರೆ . ಸಣ್ಣ ಸಣ್ಣ ವಿಷಯಗಳಿಗೂ ಪರಸ್ಪರ ಕಿರಿಕಿರಿ , ಜಗಳ , ಮನಸ್ತಾಪ ಮಾಡಿಕೊಂಡು ಬಹಳೇ ಕಷ್ಟದಿಂದ ತಮ್ಮನ್ನು ನಿಯಂತ್ರಿಸಿಕೊಂಡಿದ್ದಾರೆ . ಇದೀಗ ರೈಲು ಪ್ರಯಾಣದಲ್ಲಿ ಆ ಹಳೆಯ ಡಾಕ್ಟರರನ್ನು ಅಕಸ್ಮಾತ್ ಭೇಟಿಯಾಗಿ ಹಳೆಯದೆಲ್ಲವನ್ನು ನೆನಪಿಸಿಕೊಂಡಿದ್ದಾರೆ . ಮಾತಿನಲ್ಲಿ ಆ ಡಾಕ್ಟರರು ಹೇಳುತ್ತಾರೆ - ನಿಮಗೆ ತೊಂದರೆಯಾಗಬಾರದೆಂದು ನಿಮ್ಮ ಇಷ್ಟಕ್ಕೆ ವಿರುದ್ಧವಾಗಿದ್ದರೂ ನಿಮ್ಮ ಒಳ್ಳೆಯದಕ್ಕೆ ಆ ಆಪರೇಷನ್ ಆಗಲೇ ಮಾಡಿ ಮುಗಿಸಿದೆ.
ಅಯ್ಯೋ ದುರ್ದೈವವೇ , ಇದು ಅವರಿಗೆ ಗೊತ್ತಿದ್ದರೆ ಇಷ್ಟೆಲ್ಲ ಕಷ್ಟ ಪಡುವದು, ಅದೂ ಮೂವತ್ತು ವರ್ಷ ಕಾಲ , ತಪ್ಪುತ್ತಿತ್ತೇ !
ಉ: ಮರೆಯಲಾರದ ಸಣ್ಣ ಕಥೆಗಳು
ಹಿಂದೊಮ್ಮೆ ನನಗೆ ಅಶ್ವತ್ಥರ ಕಥಾಸಂಕಲನದ ಒಂದು ಸಂಪುಟ - ಸುಮಾರು ಸಾವಿರ ಪುಟಗಳದ್ದು - ಸೆಕಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸಿಕ್ಕಿತು . ಅದರಲ್ಲಿರುವ ಕಥೆಗಳು ಬಹುತೇಕ ಚೆನ್ನಾಗಿದ್ದವು . ಇನ್ನೊಮ್ಮೆ ಓದಬೇಕಿದೆ. ನನಗೆ ಒಂದು ಕಥೆ ನೆನಪಿನಲ್ಲುಳಿದಿದೆ .
೩೦-೪೦ ವರ್ಷಗಳ ಹಿಂದಿನ ಕತೆ ; ಆಗ ಗಂಡ ಸರಕಾರೀ ಅಧಿಕಾರಿ ; ಪತ್ನಿ ಗರ್ಭಿಣಿ ; ಗರ್ಭಪಾತವಾಗುತ್ತದೆ ; ಡಾಕ್ಟರರು ’ನೀವು ಇನ್ನು ಮೇಲೆ ಎಚ್ಚರದಿಂದಿರಬೇಕು ;ಆಕೆ ಇನ್ನೊಮ್ಮೆ ಗರ್ಭಿಣಿಯಾದರೆ ಅವಳ ಜೀವಕ್ಕೆ ಅಪಾಯ’ ಎನ್ನುತ್ತಾರೆ . ಅವರು ಹೇಳಿದ ರೀತಯೇ ಯಾವ ರೀತಿಯ ಎಚ್ಚರ ವಹಿಸಬೇಕು ಎಂದು ತಿಳಿಸುವಂತಿತ್ತು ; ’ಸೂಕ್ತ ಆಪರೇಶನ್ ಮಾಡಬಲ್ಲೆ ’ ಎಂದೂ ಸೂಚಿಸುತ್ತಾರೆ ; ಆಗ ಅಧಿಕಾರಿ ಗಂಡ - ಅಂಥದೇನೂ ಅಗತ್ಯವಿಲ್ಲ ; ನಾವು ಎಚ್ಚರ ವಹಿಸುತ್ತೇವೆ’ ಎನ್ನುತ್ತಾರೆ . ವೈದ್ಯರು ಮತ್ತೆ ಮತ್ತೆ ತಿಳಿ ಹೇಳಿದರೂ ಇವರು ಕೇಳರು . ತಮ್ಮ ಮೇಲೆ ಅಷ್ಟು ಆತ್ಮವಿಶ್ವಾಸ ಅವರಿಗೆ . ಡಾಕ್ಟರರಾದರೂ ಇನ್ನೇನು ಮಾಡಿಯಾರು ? ಅಧಿಕಾರಿಯ ಮನಸ್ಸಿನ ವಿರುದ್ಧ ಚಿಕಿತ್ಸೆ / ಆಪರೇಶನ್ ಮಾಡಲು ಸಾಧ್ಯವೇ ?
ನಂತರ ಮೂವತ್ತು ವರ್ಷಗಳು ಉರುಳಿವೆ ; ಈ ಮಧ್ಯೆ ಈ ದಂಪತಿಗಳು ಬಹಳೇ ಮಾನಸಿಕ ಕೋಲಾಹಲಕ್ಕೆ ಒಳಗಾಗಿದ್ದಾರೆ . ಸಣ್ಣ ಸಣ್ಣ ವಿಷಯಗಳಿಗೂ ಪರಸ್ಪರ ಕಿರಿಕಿರಿ , ಜಗಳ , ಮನಸ್ತಾಪ ಮಾಡಿಕೊಂಡು ಬಹಳೇ ಕಷ್ಟದಿಂದ ತಮ್ಮನ್ನು ನಿಯಂತ್ರಿಸಿಕೊಂಡಿದ್ದಾರೆ . ಇದೀಗ ರೈಲು ಪ್ರಯಾಣದಲ್ಲಿ ಆ ಹಳೆಯ ಡಾಕ್ಟರರನ್ನು ಅಕಸ್ಮಾತ್ ಭೇಟಿಯಾಗಿ ಹಳೆಯದೆಲ್ಲವನ್ನು ನೆನಪಿಸಿಕೊಂಡಿದ್ದಾರೆ . ಮಾತಿನಲ್ಲಿ ಆ ಡಾಕ್ಟರರು ಹೇಳುತ್ತಾರೆ - ನಿಮಗೆ ತೊಂದರೆಯಾಗಬಾರದೆಂದು ನಿಮ್ಮ ಇಷ್ಟಕ್ಕೆ ವಿರುದ್ಧವಾಗಿದ್ದರೂ ನಿಮ್ಮ ಒಳ್ಳೆಯದಕ್ಕೆ ಆ ಆಪರೇಷನ್ ಆಗಲೇ ಮಾಡಿ ಮುಗಿಸಿದೆ.
ಅಯ್ಯೋ ದುರ್ದೈವವೇ , ಇದು ಅವರಿಗೆ ಗೊತ್ತಿದ್ದರೆ ಇಷ್ಟೆಲ್ಲ ಕಷ್ಟ ಪಡುವದು, ಅದೂ ಮೂವತ್ತು ವರ್ಷ ಕಾಲ , ತಪ್ಪುತ್ತಿತ್ತೇ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"