ಜನಪದ ಸಾಹಿತ್ಯ
ವಂಡಾರು ಕಂಬಳ ಮತ್ತು ನರಬಲಿ...
September 3, 2008 - 1:55pm — Nagendra.trasiನಮ್ಮ ಊರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ 'ಹಿಂದಿನ ಕಾಲವಲ್ಲ - ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ. ಮುಂದೆ ಓದಿ »

ಜೇಡರ ಬಲೆ ಹುಟ್ಟಿದ್ದು ಹೇಗೆ .....?
June 22, 2008 - 12:09pm — ChaitraHosmaneಇತ್ತೀಚೆಗೆ ನಾನು ಕೇಳಿದ ಒಂದು ಸುಂದರ ಜನಪದ ಸೊಗಡಿನ ಕಥೆ ಇದು.
ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆ ಎಂದು ಹೆಸರಾಗಿದ್ದು ಗ್ರೀಸ್ ದೇಶದ ನಾಗರೀಕತೆ. ಈ ನಾಗರೀಕತೆ ಇಂದ ಹುಟ್ಟಿದ ಕಥೆಗಳು ಹಲವಾರು.
ತುಂಬ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಅರಾಕ್ನೆ ಎಂಬ ಹೆಸರಿನ ಯುವತಿ ವಾಸವಾಗಿದ್ದಳಂತೆ. ಆಕೆಯ ವೃತ್ತಿ ನೇಯ್ಗೆ. ರೇಶಿಮೆಯ ನೂಲನ್ನು ತೆಗೆದು ಅದನ್ನು ಸುಂದರವಾಗಿ ನೇಯ್ದು ವಿಧ ವಿಧವಾದ ರೇಷ್ಮೆಯ ಬಟ್ಟೆ ಗಳನ್ನು ತಯಾರಿಸುವುದರಲ್ಲಿ ಆಕೆಗೆ ಎಲ್ಲಿಲ್ಲದ ಆಸಕ್ತಿ.. ಆಕೆಯಲ್ಲಿದ್ದ ಕಲಾತ್ಮಕತೆಯಂತು ಅದ್ಭುತ. ನೇಯ್ಗೆಯನ್ನೇ ತನ್ನ ಜೀವ ಎಂದು ಕೊಂಡಿದ್ದ ಆಕೆ ದಿನದ ಸಂಪೂರ್ಣ ಸಮಯವನ್ನು ಹೊಸ ಹೊಸ ಮಾದರಿಯ ರೇಷ್ಮೆ ಬಟ್ಟೆಗಳನ್ನು ತಯಾರಿಸುವುದರಲ್ಲಿ ಕಳೆಯುತಿದ್ದಳು. ಬರಿ ಅಷ್ಟೆ ಅಲ್ಲ ಆ ಕೆಲಸವನ್ನು ಅಷ್ಟೇ ಪ್ರೀತಿಸುತಿದ್ದಳು ಕೂಡ..
ಹಾಗಿರುವಾಗ ಆರಾಕ್ನೆ ವಾಸವಾಗಿರುವ ಸುತ್ತ ಮುತ್ತಣ ಗ್ರೀಕ್ ಎಲ್ಲ ಜನರು ಕೂಡ ರೇಶಿಮೆಯ ಬಟ್ಟೆಗಳನ್ನು ಕರೀದಿಸಲು ಇವಳಲ್ಲಿಗೆ ಬರತೊಡಗಿದರು. ಹೀಗೆ ಬರು ಬರುತ್ತಾ ಸುತ್ತ ಮುತ್ತಣ ಪ್ರದೇಶದಲ್ಲಿ ಆರಾಕ್ನೆಯಾ ಪ್ರಸಿದ್ಧಿ ಹೆಚ್ಚಾಗುತ್ತಾ ಹೋಯಿತು. ಆರಾಕ್ನೆಗಂತೂ ತನ್ನ ಬುದ್ದಿಶಕ್ತಿ ಕಲಾತ್ಮಕತೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಹೀಗೆಯೇ ಪ್ರಸಿದ್ಧಿ ಹೆಚ್ಚಾದಂತೆಲ್ಲಾ ಅರಾಕ್ನೆಗೆ ಅಹಂ ಶುರುವಾಯಿತು. ಆಕೆ ತನ್ನ ಕೌಶಲ್ಯದ ಬಗ್ಗೆ ಎಲ್ಲರಲ್ಲಿ ಹೇಳುವುದಕ್ಕೆ ಶುರುಮಾಡಿದಳು.. ಬರು ಬರುತ್ತಾ ತನ್ನ ಪ್ರಸಿದ್ದಿ ಇನ್ನು ಜಾಸ್ಥಿಯಾದಂಥೆಲ್ಲಾ ಆರಾಕ್ನೆಯ ಅಹಂ ಕೂಡ ಆಷ್ಟೇ ಜಾಸ್ತಿಯಾಯಿತು.. ಅವಳು ನನ್ನ ಬುದ್ದಿಶಕ್ತಿಯನ್ನು ಮೀರಿಸಲು ಗ್ರೀಕ್ ದೇಶದ ದೇವತೆ ಅಥೆನ್ಸ್ ಗೆ ( ನಮ್ಮಲ್ಲಿಯ ಸರಸ್ವತಿಯಂತೆ) ಕೂಡ ಸಾಧ್ಯವಾಗದು ಎಂದು ಹೇಳಲು ಶುರು ಮಾಡಿದಳಂತೆ. ಮುಂದೆ ಓದಿ »

ಜನಪದ ಕಥೆ
May 13, 2008 - 6:22pm — Shivakumar.Revadiಒಂದು ಜಾನಪದ ಕತೆ ಮುಂದೆ ಓದಿ »

- Login or register to post comments
- 314 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಗುರಜಿ ಹಾಡು
May 7, 2008 - 2:26pm — Shivakumar.Revadiನಾನು ಚಿಕ್ಕವನಿದ್ದಾಗಿನ ನೆನಪು....
ಮುಂಗಾರು ಮಳೆ ಬರುವದು ತಡವಾದರೆ ನಮ್ಮ ಕಡೆ ಗುರಜಿ ಆಡಿಸುವ ಸಂಪ್ರದಾಯ.
ಒಬ್ಬ ಹುಡುಗನನ್ನು ಅರೆಬೆತ್ತಲೆ ಮಾಡಿ (ಅವನೂ ಸಂತೊಷದಿಂದಲೇ ಒಪ್ಪುತ್ತಿದ್ದಾ) ತಲೆಯ ಮೇಲೆ ರೊಟ್ಟಿ ಬಡಿವ ಹಂಚು ಬೋರಲಾಕಿ ಅದರ ಮೇಲೆ ಸಗಣಿ ಗುಳ್ಳವ್ವ ಮಾಡಿ ಆ ಸಗಣಿ ಗುಳ್ಳವ್ವಕ್ಕೆ ಸಲ್ಪ ಹುಲ್ಲು ಸಿಗಿಸಿ ಮನೆ ಮೆನೆಗೆ ಹೋಗಿ ಗುರಜಿ ಹಾಡು ಹಾಡ್ತಾ ಇದ್ವಿ, ಆ ಮನೆಯವರು ಒಂದು ತಂಬಿಗೆ ನೀರನ್ನು ತಂದು ಗುರಜಿ ಮೇಲೆ ಸುರಿಯುತ್ತಿದ್ದರು ಆಗ ಗುರಜಿ ಆದ ಹುಡುಗ ಸಗಣಿ ಕೊಚ್ಚಿ ಹೋಗದಂತೆ ಗುಳ್ಳವ್ವನನ್ನು ಎರಡು ಕೈಯಿಂದ ಮುಚ್ಚಿಕೊಂಡು ತನ್ನ ಮೈ ಸುತ್ತಾ ಸುತ್ತುತ್ತಿದ್ದ ಆಗ ನಾವೆಲ್ಲಾ ಸಂಗಡಿಗರು ಕೆಳಗಿನಂತೆ ಹಾಡು ಹೇಳುತ್ತಿದ್ವಿ.
ಗುರಜಿ...ಗುರಜಿ.....
ಎಲ್ಲಾಡಿ ಬಂದೆ...
ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ
ಉದ್ದತ್ತಿನ್ಯಾಗಾ ಉರುಳಾಡಿ ಬಂದೆ
ಮ್ಯಾದಾರವ್ವ ಏನ್ ಹಡದಾಳಾ
ಹೆಣ್ನ ಹಡದಾಳ
ಹೆಣ್ಣಿನ ತಲಿಗೆ ಎಣ್ಣಿಲ್ಲೋ ಬೆಣ್ಣಿಲ್ಲೋ
ಕುಂಬಾರಣ್ಣಾ ಮಣ್ಣಾ ತಂದಾನ
ಮಣ್ಣ ಕಲಸಾಕ ನೀರಿಲ್ಲೊ ನಾರಿಲ್ಲೊ ಮುಂದೆ ಓದಿ »

- Login or register to post comments
- 258 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಗುಡು ಗುಡಿಯಾ ಸೇದಿ ನೋಡಾ
March 30, 2008 - 3:34pm — karihaidaಗುಡು ಗುಡಿಯಾ ಸೇದಿ ಅನುಭವವಿಲ್ಲದ ನಂಗೆ, ರಘು ದೀಕ್ಷಿತರು ಹಾಡಿರುವ ಸಂತ ಶಿಶುನಾಳ ಶರೀಫರ ಪದ ಗುಡು ಗುಡಿಯಾ ಸೇದಿದಷ್ಟೇ ಮತ್ತನ್ನು ಬರಿಸಿದೆ; ಅವರ ಈ ತಾಣದಲ್ಲಿ ತುಣಕನ್ನು ಕೇಳಬಹುದು. -http://raghudixit.com/discography. ಮ್ಯೂಸಿಕ್ಇಂಡಿಯಾಆನ್ಲೈನ್ ನಲ್ಲಿ ಪೂರ್ತಿ ಇದೆ - http://www.musicindiaonline.com/p/x/tV7wwjx3jS.As1NMvHdW/
ಸಿಡಿ ಕೊಂಡು ಕೇಳಿದರೆ ಅತ್ಯುತ್ತಮ
ಪೂರ್ಣ ಪದ: ಮುಂದೆ ಓದಿ »



RSS: