ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › venkatesh ರವರ ಬ್ಲಾಗ್

ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !

"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ ! ಜುಲೈ ೪ ನೆ ತಾರೀಕ್ ಆದ್ಮ್ಯಾಗೆ, ನಾನ್ ಇಲ್ಲಿಲ್ಲ. ಪರ್ದೇಸ್ದಲ್ಲಿ ಅಂದ್ರೆ ಅಮ್ರ್ಕದಲ್ಲಿವ್ನಿ. ಒಂದೆಲ್ಡ್ ತಿಂಗ್ಳಾದ್ ಮ್ಯಾಗೆ ಬರೋದು. ಅಂಗೆ ಗೀಚೋ ಅಳೇ ಉಚ್ಚು ಐತಲ್ಲ ! " ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು "! ಅಂತ ತಲಿಗ್ ತೋಚಿದ್ನ ಬರ್ದಿವ್ನಿ. ಓದಂಗಿದ್ರೆ ಓದ್ರಪೋ. ನಾನ್ತಾನೇ ಏನೇಳ್ಲಿ ? ! ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ ! ನಿಮ್ದರ್ಮ

ಡಾ. ಯು.ಬಿ.ರಾವ್- ಒಂದು ಸವಿನೆನಪು !

March 30, 2006 - 6:03pm — venkatesh

ಡಾ. ಯು.ಬಿ.ರಾವ್- ಒಂದು ಸವಿನೆನಪು !

ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇನಲ್ ಡಾಕ್ಟರ್'. ಮುಂಬೈ ನ ಮಾಟುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು !

ಒಮ್ಮೆ ನಾನು ನನ್ನ ಹೆಂಡತಿ, ನಮ್ಮ ಮಗು ರವಿ ಯನ್ನು ಅವರಬಳಿ ತೋರಿಸಲೆಂದು ಕರೆದುಕೊಂಡು ಹೋಗಿದ್ದೆವು. ರವಿ, ಸ್ಪಲ್ಪ ಸಪೂರಾಗಿದ್ದ. ಆದರೆ ಆಟ ಆಡಿಕೊಂದಿದ್ದ; ಗೆಲುವಾಗಿದ್ದ. ನಮ್ಮಪಡೋಸಿ, 'ಓಜಾ' ರವರು ಅವನನ್ನು ಕಂಡಾಗಲೆಲ್ಲಾ 'ಕಿತನ ಪತಲ ಹೈ, ಕುಚ್ ಅಚ್ಛ ಖಿಲಾವ್ ಪಿಲಾವ್' ಎಂದು ಹೇಳುತ್ತಲೇ ನಮ್ಮಿಬ್ಬರನ್ನು ಪೇಚಿಗೆ ಸಿಲುಕಿಸುತ್ತಿದ್ದರು. ನಮ್ಮ ತಾಯಿಯವರ ಪ್ರಕಾರ, 'ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲಿ ಹಾಗೆ ಇರುತ್ತಾರೆ. ಕ್ರಮೇಣ ಎಲ್ಲಾ ಸರಿಹೋಗುತ್ತೆ' ಎಂದು ಹೇಳಿದ್ದು ತಲೆಗೆ ನಾಟಲಿಲ್ಲ. ಮೊದಲು ರವಿಯನ್ನು ಟೇಬಲ್ ಮೇಲೆ ಮಲಗಿಸಿ, ಎಲ್ಲಾ ತಪಾಸ್ ಮಾಡಿದರು. ಅವರಿಗೇನು ಹೆಚ್ಚಿಗೆ ಸಮಸ್ಯೆ ಇದೆ ಎಂದು ತೋರಲಿಲ್ಲ, ಎನ್ನುವುದು ಅವರ ಮುಖ ಭಾವ ದಿಂದ ಸ್ಪಷ್ಟವಾಗಿ ತಿಳಿಯಿತು. ನಾವು ಹೊರಗೆ ಬಂದು, ಅವರ ಕೆಲಸದ ಟೇಬಲ್ ಬಳಿ ಕುಳಿತುಕೊಂಡ ಮೇಲೆ 'ಏನ್ರಿ, ಸಮಸ್ಯೆ ' ಎಂದು ಡಾ. ರಾವ್ ಕೇಳಿದಾಗ, ನಾನು, ಅವಳು, ಉಸುರು ಸಿಕ್ಕಿಹಾಕಿ ಕೊಂಡವರಂತೆ ಒಮ್ಮೆಲೇ, ' ತಟ್ಟೆಯಲ್ಲಿ ಕಲಸಿದ ಅನ್ನ ಪೂರ್ತಿ ತಿನ್ನಲ್ಲ, ಬೆಳಿಗ್ಯೆ ಮದ್ಯಾನ್ಹ, ರಾತ್ರಿ ಕೊಟ್ಟ ಕಾಂಪ್ಲಾನ್ ಬಿಟ್ಟು, ಚಿಕ್ಕು, ಬಾಳೇಹಣ್ಣು ತಿಂತಾನೆ. ಆಪಲ್, ದ್ರಾಕ್ಷಿ ತಿನ್ನಲ್ಲ. 'ಥ್ರೆಪ್ಟಿನ್ ಬಿಸ್ಕೆಟ್' ಒಂದು ಚೂರು ತಿಂತಾನೆ, ಅಷ್ಟೆ, ಇತ್ಯಾದಿ. ತಕ್ಷಣ ಗ್ರಹಿಸಿದ ರಾವ್, 'ಸ್ವಲ್ಪ ಸುಮ್ನಿರಿ' ಅಲ್ಹೋಗ್ ಕೂತ್ಕೊಳ್ಳಿ'ಎಂದು ಪಕ್ಕದ ಬೆಂಚ್ ತೋರ್ಸಿದರು. ನಂತರ, ಅವರು ತಮ್ಮ ಪೇಷೆಂಟ್ ಗಳಾದ, ಶಾರದಾ ಬೆನ್, ಗಾಯ್ತೊಂಡೆ, ನಿತಿನ್, ಪೋಟ್ದುಖೆ, ಮೋಹಿತೆ, ಸುಮಿತ್ರ ಬೆನ್ ಮತ್ತು ಯಾರ್ಯಾರ್ನೊ ಕರೆದು, ಅವ್ರಿಗೆ ಸಲ್ಹೆ ಉಪ್ದೇಶ್ಗಳನ್ನು ಕೊಡ್ತಿದ್ರು. ನಮ್ಮನ್ ಮರ್ತ್ರೇನೋ ಅನ್ನುವಹಾಗಿತ್ತು !

ಸ್ವಲ್ಪಸಮಯದ ನಂತರ, 'ಬನ್ನಿ' ಎಂದು ನಮ್ಮನ್ನು ಆಹ್ವಾನಿಸಿದರು. ಅವ್ರು, 'ಏನು ಹೇಳಿ' ? ಎಂದಾಗ ನಾವು ತಬ್ಬಿಬ್ಬಾಗಿ ಏನ್ ಹೇಳ್ತಿದ್ವಿ, ಏನ್ ಬಾಕಿ ಇದೆ, ಎನ್ನುವ ಗೊಂದಲದಿಂದ ಮುಕ್ತರಾಗುತ್ತಿದ್ದಂತೆ,ಮುಗುಳ್ನಕ್ಕ ರಾವ್, ತಮ್ಮ ಟೇಬಲ್ ಮೇಲೆ ಒಟ್ಟಿದ್ದ ಪುಸ್ತಕಗಳ ರಾಶಿಯಿಂದ ಒಂದು ಪುಸ್ತಕ ತೆಗೆದು ಅದರ ಒಳಗಿನ ಪುಟವೊಂದರಿಂದ, ಏನೋ ಓದಿ, ಚೀಟಿಯಲ್ಲಿ ಬರೆದು ನನ್ನ ಕೈಗೆ ಕೊಟ್ಟರು. 'ಇದನ್ನು ನೀವಿಬ್ರೂ ಓದಿ, ಒಂದು ತಿಂಗಳಾದ್ ಮೇಲೆ ನನ್ಬಂದು ನೋಡಿ' ಎಂದರು. ದವಾಖಾನೆ ಯಿಂದ ಹೊರಗೆ ನಾವು ನೊಡಿದಾಗ 'ಹವ್ ಟು ಫೀಡ್ ಯೆ ಬೇಬಿ-ಬೈ- ಕ.ಗ.ದ. ಓದಿ ಇಬ್ಬರಿಗೂ ನಿರಾಶೆ.

ಅದಾದ ಕೆಲವು ದಿನಗಳ ನಂತರ, ಒಮ್ಮೆ ನಾನು ಅವರನ್ನು ದಾರಿಯಲ್ಲಿ ಕಂಡಾಗ, ಅವರೇ ಕಾರ್ ನಿಲ್ಲಿಸಿ, ಯೋಗಕ್ಷೇಮ ವಿಚಾರಿಸಿದರು. 'ಅಲ್ರೀ,ಮಗು,ಚೂಟಿಯಾಗಿದೆ, ಗೆಲುವಾಗಿ ಆಡ್ಕೊಂಡಿದೆ, ಅಂತ ನೀವೆ ಹೇಳ್ತೀರಿ. ಈಗಿನ ಕಾಲದ ಮಕ್ಳೆ ಹಾಗೆ, ಎನ್ಕೊಟ್ರು ಒಮ್ಮೆಲೇ, ನನ್ನ ಮೊಮ್ಮಗಾನೂ ತಿನ್ನಲ್ಲ, ಅವನು ಕೇಳೋ ಹಣ್ಣನ್ನು ಸ್ವಲ್ಪ ಸ್ವಲ್ಪ ನಿಧಾನವಾಗಿ ತಿನ್ನಿಸಿ. ಹಣ್ಣಿನ ರುಚಿ ಮಗುಗಲ್ವಾ ಬೇಕಾಗಿರೋದು ! ಎಲ್ಲಾ ಸರಿ ಇದೆ. ನಿಮ್ಹೆಂಡ್ತೀಗೂ ಭರವಸೆ ಕೊಡಿ' ಹೋಗಿ, ಎಂದು ಬೆನ್ನು ತಟ್ಟಿದಾಗ ಬೆಟ್ಟದಷ್ಟು ಭಾರ ಬೆನ್ನಿನಿಂದ ಇಳಿಸಿದಂತಾಗಿತ್ತು !

ಯು.ಬಿ.ರಾವ್ ತೀರಿ ಹೋಗಿ ಹಲವು ವರ್ಷಗಳೇ ಆಗಿವೆ. ಅವರು ಇನ್ನೂ ನಮ್ಮ ಹೃದಯದಲ್ಲಿ 'ಅಮರ 'ವಾಗಿದ್ದಾರೆ !

  • ವ್ಯಕ್ತಿ ವಿಶೇಷ :
~.~
  • venkatesh ರವರ ಬ್ಲಾಗ್
  • Login or register to post comments
  • 932 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಂದಾಪುರದ ಕಡಲು
  • ಒಂದು ಸಣ್ಣ ಲೆಕ್ಕ
  • ಸಾಹಿತ್ಯ ವಿಚಾರ ಸಂಕೀರಣದಲ್ಲಾದ ಅಭಾಸಗಳು.
  • ವಿಜ್ಞಾನಿಗಳೊಡನೆ ರಸನಿಮಿಷಗಳು
  • ಟೀಚರ್ಸ್ ಡೇ!
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 110 ಅತಿಥಿಗಳು ಆನ್ಲೈನ್ ಇರುವರು.


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator