ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › venkatesh ರವರ ಬ್ಲಾಗ್

ಎಂಕ್ಟೇಸಪ್ಪನ್ ಕ (ಕಂ)ತೆ ಪುರಾಣ !

"ಒಸ್ ಬ್ಲಾಗ್ " ನಗೆ ಅದೊ ಇದೊ ಅಂತ ಏನಾದ್ರು ಬರ್ಯವ ಅಂದ್ರೆ, ತಲ್ಯಾಗೇನೂ ಒಳ್ಯಂಗೇ ಇಲ್ವಲಪ್ಪ. ಆಗ್ಲಿ ಬಿಡಿ. ಆ ಸಿವಂಗೆ ನನ್ ಮ್ಯಾಗ್ ಇಸ್ವಾಸ ಬರೊತಂಕ ಬರ್ಯಕ್ಕ ಬಿಟ್ಟಾನ. ಮರ್ವಾದೆ ಪ್ರಸ್ನೆ ಅಲ್ಲ್ವ್ರಾ. ಎಂಗಾರಾಗ್ಲಿ. ಎನಾದ್ರು ಗೀಚೊ ಉಚ್ಚು. ಅಂಗೇ ಮನಸ್ನಾಗ್ ಐತೆ. ನೊಡವ. ಜನ ಏನಂತಾರೆ ಅಂತವ ! ಜುಲೈ ೪ ನೆ ತಾರೀಕ್ ಆದ್ಮ್ಯಾಗೆ, ನಾನ್ ಇಲ್ಲಿಲ್ಲ. ಪರ್ದೇಸ್ದಲ್ಲಿ ಅಂದ್ರೆ ಅಮ್ರ್ಕದಲ್ಲಿವ್ನಿ. ಒಂದೆಲ್ಡ್ ತಿಂಗ್ಳಾದ್ ಮ್ಯಾಗೆ ಬರೋದು. ಅಂಗೆ ಗೀಚೋ ಅಳೇ ಉಚ್ಚು ಐತಲ್ಲ ! " ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು "! ಅಂತ ತಲಿಗ್ ತೋಚಿದ್ನ ಬರ್ದಿವ್ನಿ. ಓದಂಗಿದ್ರೆ ಓದ್ರಪೋ. ನಾನ್ತಾನೇ ಏನೇಳ್ಲಿ ? ! ಮುನಿಸ್ಕಂಡು ಕಲ್ ಏಟ್ ಮಾತ್ರ ಆಕ್ಬ್ಯೇಡ್ರಪ್ಪೊ ! ನಿಮ್ದರ್ಮ

" ದೀಪಾವಳಿ," ಹಬ್ಬ !

November 10, 2007 - 11:44am — venkatesh

" ದೀಪಾವಳಿ," ಹಬ್ಬ !

ಈ ದೀಪಾವಳಿಯ ಪವಿತ್ರಶುಭ-ದಿನದಂದು ಸಂಪದಿಗರಿಗೆಲ್ಲಾ, ಹಾಗೂ ಕನ್ನಡಿಗರಿಗೆಲ್ಲಾ ಹಾರ್ದಿಕ ಶುಭಾಶಯಗಳು.

ದೀಪಾಲಂಕಾರಗಳಿಂದ, ಮನದ ಕತ್ತಲನ್ನು ಹೊಡೆದೋಡಿಸಿ ಹೊಸ ಬೆಳಕನ್ನು ಆಹ್ವಾನಿಸುವ, ಅದನ್ನು ಆಸ್ವಾದಿಸುವ ಹಬ್ಬ ! ನಮ್ಮಲ್ಲೇ ಆಳವಾಗಿ ಹೂತಿರುವ ಕತ್ತಲೆಗಳಾದ, ಅಜ್ಞಾನ, ಆಲಸ್ಯ, ಅನಾರೋಗ್ಯ, ದಾರಿದ್ರ್ಯ, ನಿರಾಶೆ, ಖಿನ್ನತೆಗಳೆಲ್ಲಾ ಕತ್ತಲಿನ ಅನೇಕಮುಖಗಳು. ದೀಪ ಹಚ್ಚುವ, ಅಥವ ಪ್ರಜ್ವಲನದಿಂದ, ಬೆಳಕನ್ನು ತರುವ ಪ್ರಕ್ರಿಯೆ, ನಮ್ಮ ಜೀವನದಲ್ಲಿ ಎಲ್ಲೋ ಮಂಕಾಗಿ, ಕ್ಷೀಣವಾಗಿ ಕಾಣಿಸಿಕೊಳ್ಳುತ್ತಿರುವ ಜೀವನೋಲ್ಲಾಸದ ಸೆಲೆಯನ್ನು ಮತ್ತೆ ಪ್ರಜ್ವಲಿಸುವಂತೆ ಮಾಡಿ ಕಾರ್ಯೋನ್ಮುಖರಾಗಲು ಪ್ರೇರೆಪಿಸುವ ಸದುದ್ದೇಶವೇ ದೀಪಾವಳಿಯ ಪ್ರಮುಖ ಉದ್ದೇಶ್ಯ. ದೀಪಾವಳಿ ನಮ್ಮೆಲ್ಲರಿಗೂ ವಿಶಿಶ್ಠಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ದೀಪಾವಳಿಯಲ್ಲಿ ಆಚರಣೆಯಲ್ಲಿರುವ ಪ್ರಮುಖ ದಿನಗಳು ಮೂರು.

೧. ನರಕ ಚತುರ್ದಶಿ.

೨. ಅಮಾವಾಸ್ಯೆ.

೩. ಬಲಿಪಾಡ್ಯಮಿ.

ದೀಪಾವಳಿ ಈ ೩ ದಿನಗಳನ್ನೂ ವ್ಯಾಪಿಸಿದೆ. ಅದಲ್ಲದೆ ಅದರ ಸಂದೇಶ ವರ್ಷದ ಇನ್ನುಳಿದ, ೩೬೨ ದಿನಗಳನ್ನು ಸಹಿತ! ನರಕಾಸುರನೆಂಬ ರಾಕ್ಷಸನ ಸಂಹಾರದಿಂದ ಪ್ರಜೆಗಳಿಗೆ, ಅದರಲ್ಲೂ ಬಂದಿಗಳಾಗಿದ್ದ ಸ್ತ್ರೀಯರಿಗೆ, ಬಿಡುಗಡೆಯ ದೀಪವನ್ನು ತೋರಿಸಿದ್ದು, ಶ್ರೀಕೃಷ್ಣ. ಇದು ನಡೆದದ್ದು ನರಕಚತುರ್ದಶಿಯ ದಿನದಂದು. ಅದರ ಮರುದಿನವೇ ಅಮಾವಾಸ್ಯೆ. ಆದಿನ, ಲಕ್ಷ್ಮೀದೇವಿಯ ಪೂಜೆ ಮಾಡಿ, ಶಾಂತಿ, ಸಮೃದ್ಧಿ, ಮತ್ತು ಐಷ್ವರ್ಯಗಳನ್ನು ಕರುಣಿಸೆಂದು ಪ್ರಾರ್ಥಿಸಬೇಕು. ಆಮೇಲೆ ಬರುವುದು, ಪಾಡ್ಯಮಿ- ಬಲಿಪಾಡ್ಯಮಿ. ಬಲಿಚಕ್ರವರ್ತಿ, ಅಹಂಕಾರ ನಾಶವಾಗಿ, ಆತನು ತಾನು ಗಳಿಸಿದ ಭೂಮಿಯನ್ನೆಲ್ಲಾ ವಾಮನನ ರೂಪದಲ್ಲಿದ್ದ, ಶ್ರೀಹರಿಗೆ ಧಾರೆಯೆರೆಯುವ ಮೂಲಕ " ಪ್ರಪತ್ತಿ ಮಾರ್ಗ,"ದ ದರ್ಶನವನ್ನು ಪಡೆದು ಜೀವನ್ಮುಕ್ತನಾಗುತ್ತಾನೆ. ಭಾರತೀಯರೆಲ್ಲಾ ದೇಶದಲ್ಲಿ ಮೇಲೆ ತಿಳಿಸಿದ ೩ ದಿನಗಳನ್ನು, ವಿವಿಧ ಭಾಗಗಳಲ್ಲಿ, ಸಂಭ್ರಮದಿಂದ ಆಚರಿಸುತ್ತಾರೆ. ಅಭ್ಯಂಜನ, ಪೂಜೆ, ಕುಟುಂಬದ ಸದಸ್ಯರೊಡನೆ ಕಲೆತು ಭೋಜನ, ಎಲ್ಲರಿಗು ಜೀವನ ಹಸನಾಗಲೆಂಬ ಆಶಯ, ನಮಗಾಗಿ ದುಡಿಯುವ ಹಸು, ಎತ್ತು, ಎಮ್ಮೆ ಗಳಿಗೆಗೆ ಪೂಜೆ ಸಲ್ಲಿಸುವ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಏರ್ಪಾಡಿದೆ. ಹೊಸದಾಗಿ ಮದುವೆಯಾದ ಯುವ-ದಂಪತಿಗಳಿಗೆ ಶುಭಹಾರೈಸುವ ಕಾರ್ಯವೂ ಅತಿ ಮುಖ್ಯವಾದದ್ದು. ಇವೆಲ್ಲವೂ ದೀಪಾವಳಿಯನ್ನು ಒಂದು ಅವಿಸ್ಮರಣೀಯ ಸಂಕೇತವನ್ನಾಗಿ ಮಾಡಿ ನಮ್ಮ ಬಾಳು ಹಾಗೆಯೇ ಹಚ್ಚ ಹಸಿರಾಗಿರಲು ಪ್ರೇರೇಪಿಸುತ್ತವೆ.

ಕೇರಳ ರಾಜ್ಯದಲ್ಲಿ " ಓನಂ" ದಿನವನ್ನು ಆಚರಿಸಿದಾಗಲೇ ಬಲಿಚಕ್ರವರ್ತಿಯನ್ನು ಅವರು ಆಹ್ವಾನಿಸಿ ಪೂಜಿಸಿರುತ್ತಾರೆ.

  • ಹಬ್ಬ-ಹರಿದಿನ.
~.~
  • venkatesh ರವರ ಬ್ಲಾಗ್
  • Login or register to post comments
  • 486 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲರಿಗೂ ವ್ಯಯ ಸಂವತ್ಸರದ 'ದೀಪಾವಳಿ'ಯ ಹಾರ್ದಿಕ ಶುಭಾಷಯಗಳು !
  • ನಮ್ಮ ಸಂಪದೀಯರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು.
  • ದೀಪಾವಳಿಗೊಂದು ಕವನ...
  • ದೀಪಾವಳಿ - ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ - ಕೆ.ಎಸ್.ನರಸಿ೦ಹಸ್ವಾಮಿ
  • ದೀಪಾವಳಿ ಹಬ್ಬಕ್ಕೆ, ದೀಪಗಳ ತಯಾರಿಕೆಯಲ್ಲಿ, ಆಸಕ್ತೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
  • nekkar_guru
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 8, 2008 - 1:07am
  • mayakar
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 12:16am
  • raghava
    ಉ: ಮೊದಲ ಚಿತ್ರ
    September 8, 2008 - 12:13am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator