ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › tvsrinivas41 ರವರ ಬ್ಲಾಗ್

ಬೀದಿ ಬದಿಯಲ್ಲಿರುವವರು

August 9, 2005 - 7:33pm — tvsrinivas41

ಊರು ಅಂದ ಮೇಲೆ ಹೊಲಗೇರಿ ಇರಲೇಬೇಕು ಅನ್ನುವುದು ನಾಣ್ನುಡಿ (ನಾಡು ನುಡಿ). ಆದರೆ ಈಗ ಎಲ್ಲೆಲ್ಲಿಯೂ ಬೀದಿ ಬದಿಯಲ್ಲಿ ವಾಸ ಮಾಡುವವರು ಜಾಸ್ತಿ ಆಗ್ತಿದ್ದಾರೆ. ಎಷ್ಟೇ ಕ್ಷಾಮ, ಪ್ರಳಯ ಮತ್ತಿತರೇ ನೈಸರ್ಗಿಕ ಪ್ರಕೋಪಗಳು ಆಗುತ್ತಿದ್ದರೂ ಇವರುಗಳ ಸಾವು ಜಾಸ್ತಿ ಆಗುತ್ತಿದ್ದರೂ ಮತ್ತೆ ಮತ್ತೆ ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ಜೀವನಕ್ಕೆ ಎಷ್ಟೇ ಕಷ್ಟಪಟ್ಟರೂ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಹಾಗೇ ಆಚೀಚೆಯ ಆಕರ್ಷಣೆಯೂ ಇವರುಗಳನ್ನು ಸೆಳೆಯುತ್ತಿದೆ. ಇದರಿಂದಾಗಿ ಕಳ್ಳತನಗಳು, ದರೋಡೆಗಳು, ಕೊಲೆ ಸುಲಿಗೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣವೇನಿರಬಹುದು? ಇವರ ಸಂಖ್ಯೆಯ ಹೆಚ್ಚಳ ತಡೆಯಲಾಗದೇ? ಹಾಗಿದ್ದರೆ ಏನು ಉಪಾಯ ಮಾಡಬೇಕು?

ಇದಕ್ಕೆ ಮುಖ್ಯ ಕಾರಣ - ಬಡತನ, ಅನಕ್ಷ್ರರಸ್ತತೆ, ನಿರುದ್ಯೋಗ, ಹಳ್ಳಿಗಳಿಂದ ನಗರಗಳಿಗೆ ವಲಸೆ, ಮುಂತಾದ ಸಾಮಾಜಿಕ ಸಮಸ್ಯೆಗಳು. ಇದೆಲ್ಲ ಒಂದಕ್ಕೊಂದು ಸಂಬಂಧಿಸಿದವು. ಒಂದನ್ನು ಸರಿಪಡಿಸಿದರೆ ಮಿಕ್ಕೆಲ್ಲವೂ ಸರಿ ಹೋಗುವುದು. ಒಂದು ಸರಿಪಡಿಸದಿದ್ದರೂ ಮಿಕೆಲ್ಲ ಉಲ್ಬಣಗೊಳ್ಳುವುವು.

ಸರ್ಕಾರವು ಮೊದಲಿಗೆ ಎಲ್ಲರಿಗೂ ಕಡ್ಡಾಯ ಶಿಕ್ಷಣ ಕೊಟ್ಟರೆ ಮಿಕ್ಕೆಲ್ಲವೂ ಕಡಿಮೆಯಾಗುವುದು. ಬರೆಯುತ್ತಾ ಹೋದರೆ ಇದೊಂದು ದೊಡ್ಡ ಲೇಖನವೇ ಆಗುವುದು. ನಿಮ್ಮ ನಿಮ್ಮಗಳ ಅನಿಸಿಕೆ ಏನು?

~.~
  • tvsrinivas41 ರವರ ಬ್ಲಾಗ್
  • Login or register to post comments
  • 742 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 9, 2005 - 8:19pm — hpn

ಉಲ್ಬಣವಾಗಿರುವ ಸಮಸ್ಯೆ

hpn's picture

ನಿಜ. ಇದೊಂದು ಉಲ್ಬಣವಾಗಿರುವ ಸಮಸ್ಯೆ. ನಮ್ಮ ರಾಜಕಾರಣಿಗಳಂತೂ ಇದನ್ನು ಸುಧಾರಿಸುವಲ್ಲಿ ಸಹಾಯವಾಗರು. ಅವರು ತಮ್ಮ ತಮ್ಮ ಜೇಬು ತುಂಬಿಕೊಳ್ಳುವುದಕ್ಕೆ ಅವರವರ ಹುದ್ದೆಯಲ್ಲಿರುವುದು. ಲಾಲ್ ಬಹದೂರ್ ಶಾಸ್ತ್ರಿ ಕಾಲ ಈಗಿಲ್ಲ Smiling

ಇದಕ್ಕೆ ಪರಿಹಾರ ಇಷ್ಟೆ: ಇನ್ಫ್ರಾಸ್ಟ್ರಕ್ಚರ್ ಸುಧಾರಿಸುವುದು. ಹೆಚ್ಚು ಕೆಲಸಗಳನ್ನು ಸೃಷ್ಟಿ ಮಾಡುವುದು. ಪರಿಹಾರ 'ಇಷ್ಟೆ' ಎನಿಸಿದರೂ ಅದು ಸುಲಭವಲ್ಲ. ಆದರೂ ಹಲವಾರು ಭಾರತೀಯರು ತಮ್ಮ ಜೀವನವನ್ನೇ ತೆತ್ತು ಬಹುಮಟ್ಟಿಗೆ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಭಾರತೀಯರು ಆ ಹಾದಿ ಹಿಡಿಯುವರು ಎಂದು ನನ್ನ ನಂಬಿಕೆ. ಹೀಗೆ ಅಂತಹ ಹಾದಿ ಹಿಡಿದವರ ಸಂಖ್ಯೆ ಹೆಚ್ಚಾದಲ್ಲಿ ಸ್ಥಿತಿ ಸ್ವಲ್ಪ ಸುಧಾರಿಸಬಹುದು.

ಇನ್ನು ಜನಸಂಖ್ಯೆ ಮತ್ತು ಕಳಪೆ ಹ್ಯೂಮನ್ ರಿಸೌರ್ಸಿಗೆ ಕಾರಣ ನೀವು ಹೇಳಿದಂತೆ ಶಿಕ್ಷಣ ವ್ಯವಸ್ಥೆ. ಇದು ಸುಧಾರಿಸಲೇಬೇಕು. ಸರಕಾರದ ಸುಧಾರಣೆಗಳು ಫಲ ಕೊಡುವ ಹೊತ್ತಿಗೆ ಈ ಶತಮಾನವೇ ಕಳೆದು ಹೋಗುತ್ತದೆ, ಬಹುಶಃ. ಇದಕ್ಕೆ ದುಡ್ಡಿದ್ದವರು ಆದಷ್ಟೂ ಸುಧಾರಣೆಯೆಡೆಗೆ ಎನ್ ಜಿ ಓ ಗಳ ಮೂಲಕ ಪ್ರಯತ್ನಿಸುವುದು ಒಳ್ಳೆಯ ದಾರಿ.

ನಮ್ಮ ಭಾರತದಲ್ಲಿ ದುಡ್ಡು ಹಿಡಿದಿಡುವುದು, ಕೂಡಿಡುವುದು (ಬ್ಲಾಕ್ ಮನಿ) ಹೇರಳವಾದ್ದರಿಂದ ಹಣದ ಹರಿವಿಗೆ ತಡೆಯುಂಟಾಗುತ್ತದಾದ್ದರಿಂದ ಒಟ್ಟು ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆಂದು ಎಕಾನಾಮಿಕ್ಸ್ ಓದುತ್ತಿರುವ ಸ್ನೇಹಿತರೊಬ್ಬರು ಹೇಳಿದ ನೆನಪು (ಅದೆಷ್ಟು ಸರಿಯಾಗಿ ಆಗ ನಾನು ಅರ್ಥೈಸಿಕೊಂಡಿದ್ದೆನೊ ನನಗೆ ತಿಳಿಯದು, ನನಗೆ ನೆನಪು ಬಂದದ್ದನ್ನ ಬರೆದಿರುವೆ). ಕೂಡಿಟ್ಟ ಹಣ ಹೊಸತರಲ್ಲಿ ಹೂಡಿ, ಹೊಸ ವ್ಯವಸ್ಥೆಗಳಲ್ಲಿ ಹೂಡಿ ಹೆಚ್ಚಾಗಿ ಕೆಲಸಗಳನ್ನು ಸೃಷ್ಟಿಸಿದರೆ ಸ್ಥಿತಿ ಎಷ್ಟೊ ಸುಧಾರಿಸಬಹುದು. ಇವು ನನ್ನ ಆಲೋಚನೆಗಳು.

ಶಾಮ್ ಕಶ್ಯಪ್ ರವರು ಇದನ್ನು ಓದಿದರೆ ಒಂದಷ್ಟು ಬರೆಯುವರು. ಅವರು ಇದೇ ಕುರಿತು ಕೆಲವು ಸಂಶೋಧನೆಗಳನ್ನು ಮಾಡುತ್ತಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 13, 2005 - 10:38pm — tvsrinivas41

ಖರ್ಚಿನ ಮೇಲೆ ತೆರಿಗೆ

tvsrinivas41's picture

ಈ ಮೇಲೆ ತಿಳಿಸಿರುವಂತೆ, ಈ ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಎಲ್ಲರಿಗೂ ಪ್ರಾಥಮಿಕ ವಿದ್ಯೆ ನೀಡದಿರುವುದೇ ಕಾರಣ. ಜೊತೆಗೆ ಆರ್ಥಿಕ ಅಸಮತೋಲನ, ರಾಜಕಾರಣಿಗಳಿಂದ ಸರಕಾರದ ಹಣದ ದುಂದುವೆಚ್ಚ, ಆದಾಯ ತೆರಿಗೆ ವಂಚನೆ, ಕಾಳ ಸಂತೆ, ಕಪ್ಪು ಹಣ ಇತ್ಯಾದಿಗಳೂ ಸಮಸ್ಯೆಗಳನ್ನು ಉಲ್ಬಣಗೊಳಿಸಿವೆ.

ಈ ಹಿಂದೆ ೧೯೯೧ರಲ್ಲಿ ವಸಂತಸಾಠೆಯವರು ಆರ್ಥಿಕ ಸಮಸ್ಯಯನ್ನು ನಿವಾರಿಸಲು ಆದಾಯ ತೆರಿಗೆ ಹೇರುವ ಬದಲು ಖರ್ಚಿನ ಮೇಲೆ ತೆರಿಗೆ ವಿಧಿಸಲು ಸೂಚಿಸಿದ್ದರು. ಯಾರೂ ಅದರ ಕಡೆ ಗಮನ ಹರಿಸಲೇ ಇಲ್ಲ. ಖರ್ಚಿನ ಮೇಲೆ ತೆರಿಗೆ ಹೇರಿದರೆ ಕಪ್ಪು ಹಣವನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಇದನ್ನು ಎಷ್ಟರ ಮಟ್ಟಿಗೆ ಚಾಲ್ರಿಯಲ್ಲಿ ತರುವರೋ?

ಈ ಸಮಸ್ಯೆಗಳನ್ನೆಲ್ಲಾ ನೋಡುತ್ತಿದ್ದರೇ ಮತ್ತು ನಮ್ಮ ಸರಕಾರದ (ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ) ವಿಮುಖ ಕಾರ್ಯಾಚರಣೆಯನ್ನೂ ಗಮನಿಸಿದರೆ ಅಷ್ಟು ಸುಲಭವಾಗಿ ಈ ದೇಶ ಉದ್ಧಾರವಾಗೋಲ್ಲ.

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಣ್ನುಡಿ - ಪದವಿಭಜನೆ
  • ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು?
  • ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
  • fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
  • ಜೋಗಿಗೆ ಮನೆಯೆಲ್ಲಿ ಮಠವೆಲ್ಲಿ ; ಕೂತಲ್ಲೇ ಶಿವನ ಧ್ಯಾನ !
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 6, 2008 - 5:51am
  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator