ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › spkolle ರವರ ಬ್ಲಾಗ್

ಬಂಗಾರದ ಅರಮನೆ.

August 24, 2008 - 1:49pm — spkolle

ಒಳಗೆ ಪ್ರವೇಶಿಸಲು ಅವರಿಗೆ ಹಣಕೊಟ್ಟು ಗಡಿ ಪ್ರವೇಶಿಸುವ ರಶೀದಿಯನ್ನು ಪಡೆಯಬೇಕು. ರಶೀದಿಯನ್ನು ಪಡೆಯದೆ ಪ್ರವೇಶಿದಲ್ಲಿ ,ಯಮಪಾಶಕ್ಕೆ ನಮ್ಮ ಕುತ್ತಿಗೆ ಕೊಟ್ಟಂತೆ.ಅದರ ಅನುಭವ ನಮಗೆ ಅಲ್ಲಿ ಪ್ರವೇಶಿಸಿದಾಗಲೇ ಆಯಿತು. ಸುಮಾರು ಹತ್ತು ಗಂಟೆಗೆ ನಾನು ಪಾಂಡಿಚೇರಿಗೆ ತಲುಪಿದೆವು.ನಂತರ ಅಲ್ಲಿಯ ಅತಿಥಿ ಗ್ರಹದಲ್ಲಿ ಪ್ರವೇಶಿಸಿ ನಮ್ಮ ಸಾಮಾನ್ನು ಅಲ್ಲಟ್ಟು ಊಟಕ್ಕೆ ಹೋಟೆಲಿಗೆ ಹೊದೆವು .ಹೋಟೆಲಿನ ಮೇಲ್ಚಾವಣಿಯನ್ನು ತೆಂಗಿನ ಗರಿಗಳಿಂದ ನೈದು ಮಾಡಿದ್ದರು ಅದು ನೋಡಲು ಅತ್ಯಂತ ಸುಂದರವಾಗಿ ಕಾಣಿಸುತ್ತಿತ್ತು. ಆದರೆ ಹಳ್ಳಿಗಳಲ್ಲಿ ಅದನ್ನು ಕಚ್ಚಾವಸ್ತು ಎನ್ನುವಹಾಗೆ ಎಸೆಯುತ್ತಾರೆ. ಅಲ್ಲೇ ನಮ್ಮ ಪಕ್ಕದಲ್ಲಿ 5,6,ರು ಬಿಳಿ ಚರ್ಮದ ಮಹಿಳೆಯರು ತಮ್ಮ ಕೈಯಗಳ ಬೆರಳಲ್ಲಿ ಸಿಗರೆಟನ್ನು ಹಿಡಿದು ಹೆಬ್ಬಾವುಗಳು 'ಊಸ್ ' ಎಂದು ಉಸಿರು ಬಿಡುವ ಹಾಗೇ ಸಿಗರೇಟಿನ ಹೊಗೆಯನ್ನು ಬಿಡುತ್ತಾ,ಅರೆ ಬರೆಯಾದ ಬಟ್ಟೆಯನ್ನು ಧರಿಸಿ ಸುಗಂಧಿತವನ್ನು ಸಿಂಪಡಿಸಿಕೊಳ್ಳುತ್ತಿದ್ದರು. ನಾನು ಅವರನ್ನೇ ದ್ರಷ್ಟಿ ಅಲಗಾಡಿಸದೇ ನೋಡುತ್ತಿದ್ದೆ. ಅಷ್ಟರಲ್ಲಿ ನಮ್ಮ ಊಟ ಬಂಧಿತು. ಊಟಮಾಡಿ ಅತಿಥಿಗ್ರಹಕ್ಕೆ ಬಂದು ಮಲಗಿದೆವು.ಮುಂಜಾನೆ ಎದ್ದೊಡನೆ ಸಮುದ್ರದ ದರ್ಶನ. ಅದನ್ನು ನೋಡುತ್ತಿರುವಂತೆ ಯಾವ ಕ್ಷಣದಲ್ಲಿ ಸುನಾಮಿ ಬರುತ್ತದೊ ಎಂದು ಕಾದು ನೋಡುವಂತೆ ಸಮುದ್ರದೆಡೆ ನನ್ನ ನೋಟ ಸ್ವಲ್ಪ ಹೊತ್ತು ಸಮುದ್ರ ದರ್ಶನಮಾಡಿ, ಬೆಳಗಿನ ತಿಂಡಿಯನ್ನು ತಿನ್ನಲು ಆಶ್ರಮಕ್ಕೆ ಹೋದೆವು. ವಿಶೇಷ ಉಪಹಾರವಾದ ಬಾಳೆಹಣ್ಣು, ಬ್ರೆಡ್ ಹಾಲು ,ಸಕ್ಕರೆ ,ಮತ್ತು ಮೊಸರನ್ನು ಕೊಟ್ಟರು, ಆ ಬ್ರೆಡ್ ಮತ್ತು ಮೊಸರು ತುಂಬಾ ರುಚಿಯಾಗಿರುತ್ತದೆ.ಉಪಹಾರವನ್ನು ಮುಗಿಸಿ ಪ್ರೇಕ್ಷಣಿಯ ಸ್ಥಳಕ್ಕೆ ಹೊರೆಟೆವು,ಅದ್ಬುತವಾದ ಆಶ್ರಮದ ಕಟ್ಟಡ, ಅದನ್ನು ನಿರ್ಮಿಸಿದ ಆ ವ್ಯಕ್ತಿ ಕಟ್ಟಡ ನಿರ್ಮಾಣದಲ್ಲಿ ಎಷ್ಟು ನಿಪುಣನಾಗಿರಬಹುದೆಂಬುದು,ಆ ಕಟ್ಟಡ ಪ್ರತ್ಯಕ್ಷವಾಗಿ ನೋಡಿದಾಗಲೇ ತಿಳಿಯುತ್ತದೆ.ಕಟ್ಟಡದಲ್ಲಿರುವ ಕೋಣೆಗಳ ವಿನ್ಯಾಸ ಬಾಗಿಲು ಕಿಟ್ಕಿಗಳು ಮತ್ತು ಛತ್ರಿಯನ್ನು ಇಡಲು ಮಾಡಿರುವ ಸ್ಟೇಂಡು. ಕಿಟಕಿಗಳನ್ನು ಮುಚ್ಚುವ ತೆರೆಯುವ ವಿಧಾನ ಕುಳಿತುಕೊಳ್ಳಲು ಮಾಡಿರುವ ಆಸನಗಳು. ಆ ಕಟ್ಟಡದ ಕಿಟಕಿಗಳು ಮುಚ್ಚಿದರೆ ಗೋಡೆ ತೆರೆದರೆ ಕಿಟಕಿ ಎಲ್ಲವು ಅದ್ಬುತ್. ಈ ಕಟ್ಟಡ ನಿರ್ಮಾಣಮಾಡುವಾಗ ಗ್ರಹವಿನ್ಯಾಸಗಾರ ಎಷ್ಟು ವಿಚಾರಿಸಿ ಅದನ್ನು ನಿರ್ಮಾಣ ಮಾಡಿರಬೇಕೆಂಬುದು ಅದನ್ನು ನೋಡಿದಾಗಲೇ ತಿಳಿಯುತ್ತದೆ. ಯಾವುದೆ ವ್ಯಕ್ತಿ ಸೈಕಲ್ ಹೊಡೆಯಲು ಕಲಿಯುವದು ಪ್ರಥಮವಾಗಿ ನಂತರ ಸ್ಕೂಟರ್ ಹೊಡೆಯುತ್ತನೆ. ಪುನಃಹ ಸೈಕಲ್ ಹೊಡೆಯಲು ಹೋಗುವದಿಲ್ಲ ಅದನ್ನು ಮತ್ತೆ ಹೊಡೆಯಲು ಹೋಗುವದಿಲ್ಲ. ಆದರೆ
ಪಾಂಡಿಚೇರಿಯ ಪ್ರತಿಯೊಬ್ಬ ವ್ಯಕ್ತಿ ಸೈಕಲ್ ಪ್ರೇಮಿ. ಏಕೆಂದರೆ ಅಲ್ಲಿಯ ಪ್ರತಿಯೂಬ್ಬ ವ್ಯಕ್ತಿ ಪರಿಸರ್
ಪ್ರೇಮಿ.ವಾಯುಮಾಲಿನ್ಯ ಆಗುವದೆಂಬ ಕಾರಣದಿಂದ ತಮ್ಮ ಅಸೆಯನ್ನೇ ಬಲಿ ಕೊಟ್ಟಿದ್ದಾರೆ.. ತದನಂತರ ನಮ್ಮ ಪ್ರಯಾಣ ಅರವಿಂದರ ಆಶ್ರಮದ ಕಡೆಗೆ ಹೊಯಿತು. ಅರವಿಂದರ ಸಮಾಧಿಯ ಹತ್ತಿರ ಕುಳಿತು ಧ್ಯಾನ ಮಾಡಿದೆವು. ಸಮಾಧಿ ಹತ್ತಿರ ತಲೆ ಇಟ್ಟು ಕುಳಿತು ಕೊಂಡರೆ ಏನೋ ಸ್ಪರ್ಶವಾದ ಅನುಭವ.ಧ್ಯಾನಕ್ಕೆ ಕುಳಿತು ಕೊಂಡರೆ ಬರುವ ಮನಸ್ಸೇ ಬರುವದಿಲ್ಲ.
ಹೊಸವರ್ಷದ ಆಚರಣೆ ---- ಅಲ್ಲಿಯ ಹೊಸವರ್ಷದ ಆಚರಣೆ ವಿಶೇಷತೆಯನ್ನು ಹೊಂದಿದೆ ಅಂದರೆ ಇಲ್ಲಿ ಕುಣಿಯುವದಾಗಲಿ ಮದ್ಯಸೇವಿಸುವದಾಗಲಿ ಇಲ್ಲ.ಅತ್ಯಂತ ಶಾಂತಿಯುತವಾಗಿ ಆಚರಿಸಿದರು. ಒಂದು ಧ್ಯಾನ ಗ್ರಹ ಬೆಳಗಿರುವ ಲಕ್ಷಾಂತರ ದೀಪಗಗಳು ದ್ಪೀಪದ ಮುಂದೆ ಧ್ಯಾನಕ್ಕೆ ಕುಳಿತ ಲಕ್ಷಾಂತರ ಧ್ಯಾನಿಗಳು.ಹೀಗೆ ತಮ್ಮ ಹೂಸವರ್ಷದ ಆಚರಣೆ ಮಾಡಿದರು. ದೀಪ ಬೆಳಗಿಸಿತೆನ್ನ ಜಗವ ಬೆಳಗಲು
ಧ್ಯಾನದಲ್ಲಿ ಕುಳಿತಿರಲು ಜಗದ ಪ್ರೇಮಿಗಳು
ಹತ್ತು, ಹರೆಯದವರ ಹೊತ್ತು ಕಳೆಯಿತು ಧ್ಯಾನದಲ್ಲಿ.
ತದನಂತರ ಅಲ್ಲಿಂದ ನಾವು ಅಲ್ಲಿಂದ ನವು ಮಾತ್ರಮಂದಿರಕ್ಕೆ ಹೊದೆವು. ಮಾತ್ರಮಂದಿರದ ಹೊರವಲಯವನ್ನು. ಬಂಗಾರದ ಪ್ಲೇಟುಗಳಿಂದ ಮಾಡಿರುವರು ಆ ಮಾತ್ರಮಂದಿರ ಕಮಲದ ಹೂವಿನ ಮೇಲೆ ನಿಂತಿದೆ. ಭೂಮ್ಯಾಕಾರದ ಮಾತ್ರಮಂದಿರ ಸುತ್ತಲು ಕಮಲದ ಎಲೆಗಳು, ಎಲೆಗಳನ್ನು ಆವರಿಸಿದ ನೀರು. 'ಸೂರ್ಯನ ಕಿರಣ ಬಿದ್ದೊಡನೆ ನೀರು ಸ್ವರ್ಣ ರಂಜಿತವಾಗುತ್ತದೆ. ಪ್ರಶಾಂತವಾದ ವಾತಾವರಣ ಬ್ರಹದಾಕಾರದ ಆಲದ ಮರ. ಸ್ವರ್ಣಮಯವಾದ ಕಿರಣಗಳಿಂದ ಸುತ್ತಲಿನ ಎಲ್ಲವು ಸ್ವರ್ಣಮಯ. ಸ್ವರ್ಗವನ್ನು ಪ್ರವೇಶಿಸಲು, "ಸಪ್ತಸ್ವರ್ಣಮಯ ಬಾಗಿಲು ದಾಟಿ ಹೋಗುವಹಾಗೆ?"ಈ ಸ್ವರ್ಣಮಯ ಬಾಗಿಲು ದಾಟಿ ಹೋಗಲು ಸ್ವರ್ಣಮಯ ಸಾಗರದಾಟಿ ಹೋಗಬೇಕು.ಅಂತು ನಾವು ಮಾತ್ರಮಂದಿರಕ್ಕೆ ಪ್ರವೇಸಿದೆವು.ಅಲ್ಲಿ ನಮಗೆಲ್ಲಾ ಒಂದು ಆಶ್ಚರ್ಯ ಕಾದಿತ್ತು. ಮಾತ್ರಮಂದಿರದಲ್ಲಿ ದೇವರಿರಲ್ಲಿಲ್ಲ. ಅದರ ಬದಲಿಗೆ ದೊಡ್ಡಸ್ಫಟಿಕ ಆಸ್ಫಟಿಕದ ಮೇಲೆ ಬಿಳುತ್ತಿರುವ ಸೂರ್ಯನ ಕಿರಣ ಅಲ್ಲಿ ಎಲ್ಲವು ಸ್ವರ್ಣಮಯ.ನಿಶ್ಯಬ್ದಮಯ ವಾತಾವರಣ, ಧ್ಯಾನಕ್ಕೆ ಕುಳಿತರೆ ಧ್ಯಾನಿಗಳಾಗಿ ಬಿಡುತ್ತಾರೆ ನಡೆಗರು ಶಬ್ದ .ಕುಳಿತರು ಶಬ್ದ ಉಸಿರಾಡಿದರು ಶಬ್ದ ಅಷ್ಟು ನಿಶಬ್ದ ಸ್ಥಳ. ಸೂರ್ಯನು ನೆತ್ತಿಯ ಮೇಲೆ ಬಂದೊಡನೆ ಸೂರ್ಯನ ಕಿರಣಗಳು ಆ ಸ್ಫಟಿಕದ ಮೇಲೆ ಬಿದ್ದೊಡನೆ ಸೂರ್ಯನ ಕಿರಣಗಳು ಪ್ರತಿಫಲಿಸಿ ಬಂಗಾರದ ಪ್ಲೇಟುಗಳ ಮೇಲೆ ಬೀಳುತ್ತದೆ. ಆ ಕಿರಣಗಳು ಮಾತ್ರಮಂದಿರದ ಸುತ್ತಲು ಇರುವ ನೀರಿನ ಮೇಲೆ ಬಿದ್ದಾಗ ನೀರು ಬಂಗಾರದ ಹೊಳಪನ್ನು ಪಡೆಯುತ್ತದೆ. ಸುತ್ತಲಿನ ಎಲ್ಲಪ್ರದೇಶವು ಸ್ವರ್ಣರಂಜಿತವಾಗುತ್ತದೆ ಇದೊಂದು ಬಂಗಾರದ ಅರಮನೆ ಎನ್ನಬಹುದು.

  • ಪ್ರವಾಸ ಕಥನ.
~.~
  • spkolle ರವರ ಬ್ಲಾಗ್
  • Login or register to post comments
  • 195 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಂಗಾರದ ಅರಮನೆ
  • ಧ್ಯಾನದ ಬೆಳಗು
  • ಕೂರ್ಗ್ ಪ್ರವಾಸ
  • ಗುಂಡೂ....ನಿನ್ನನ್ನು ಮರೆಯಲಾಗುತ್ತಿಲ್ಲಾ........
  • ಕಳೆದ ನೆನೆಪುಗಳು
Syndicate content

ಲೇಖಕರು

spkolle's picture

ಪೂರ್ಣ ಹೆಸರು
Shantha P. Kolle

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
    November 21, 2008 - 4:14am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 179 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator