ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › shylaswamy ರವರ ಬ್ಲಾಗ್

ನಾನು ಉತ್ತಮ ಪುರುಷ

August 26, 2008 - 11:34am — shylaswamy

ನಾನು ಉತ್ತಮ ಪುರುಷ
ಹಾಸ್ಯ ಎಂಬುದು ಅಷ್ಟು ಸುಲಭವಾಗಿ ಒಲಿಯುವ ಕಲೆಯಲ್ಲ. ನವಿರಾದ ಹಾಸ್ಯ ತುಂಬಿದ ಮನ ಬಿಚ್ಚಿ ನಗಿಸುವಂತಹ ಹಾಸ್ಯಲೇಖನಗಳು ಬರೆಯುವುದು ನಿಜಕ್ಕೂ ಕಷ್ಟದ ಕೆಲಸ. ಹಿಂದೆ ಅಂದರೆ ಈಗ್ಗೆ ಹತ್ತಾರು ವರ್ಷಗಳ ಕೆಳಗೆ S.P.ರಾಮಾನುಜಂ ಎಂಬ ಹಾಸ್ಯ ಲೇಖಕರು ಬರೆದ ಚುಟುಕಗಳನ್ನು ಓದುತ್ತಿದ್ದೆ. ಅವರು ಯಾವುದೇ ಪುಸ್ತಕ ಹೊರತಂದಿದ್ದು ನನಗೆ ಗೊತ್ತಿಲ್ಲ. ಆದರೆ ಅವರು ರೇಡಿಯೋಗಳಲ್ಲಿ ಅವರ ಕವನಗಳನ್ನು ವಾಚನ ಮಾಡುತ್ತಿದ್ದುದು ಕೇಳಿದ್ದೆ.
ಇತ್ತೀಚೆಗೆ ಅವರ ಹೆಸರೇ ಕೇಳಿ ಬರುತ್ತಿಲ್ಲ . ಅವರು ಈಗ ಬರೆಯುತ್ತಿದ್ದಾರೋ ಇಲ್ಲವೋ ಅದೂ ತಿಳಿದಿಲ್ಲ. ಆದರೆ ಅವರು ಆಕಾಶವಾಣಿಯಲ್ಲಿ ಹೇಳಿದ ಒಂದು ಕವನ ಅಚ್ಚಳಿಯದಂತೆ ನನ್ನ ಮನಸಿನಲ್ಲಿ ಉಳಿದಿದೆ. ಅದು ಹೀಗಿದೆ,
ಅವರು ಅದರ ಸಂದರ್ಭವನ್ನು ವಿವರಿಸಿ ನಂತರ ಈ ಕವನ ಹೇಳಿದರು. ಅವರು ಒಂದು ಹಾಸ್ಯಕವನವಾಚನ ಗೋಷ್ಟಿಯಲ್ಲಿ ಭಾಗವಹಿಸಿದ್ದರು. ಆ ಗೋಷ್ಟಿಗೆ ರಾಮಾನುಜಂ ಅವರ ಪುಟ್ಟ ಮಗನೂ ಬಂದಿದ್ದ. ಗೋಷ್ಟಿ ಮುಗಿದಾಗ ಅವನು ಮುಖ ಬಿಗಿದುಕೊಂಡಿದ್ದನಂತೆ. “ಯಾಕೋ ಮರಿ? ಕೋಪ ಮಾಡಿಕೊಂಡಿದೀಯಲ್ಲ?” ಎಂದು ರಾಮಾನುಜಂ ಕೇಳಿದರು. ಪಕ್ಕದಲ್ಲೇ ಅವರ ಗೆಳೆಯರು ಅನೇಕರು ಇದ್ದರು.
ಆಗ ಮಗ ಮುಖ ದಪ್ಪ ಮಾಡಿಕೊಂಡೇ’ “ಅಪ್ಪಾಇನ್ನುಮುಂದೆ ನೀನು ಈ ಕವಿಗೋಷ್ಟಿಗೆಲ್ಲಾ ಹೋಗಬೇಡಪ್ಪ.” ಎಂದನಂತೆ.
“ಯಾಕೋ ಮರಿ?” ರಾಮಾನುಜಂ ತಿರುಗಿ ಕೇಳಿದರು.
“ಮತ್ತೆ ಜನ ಎಲ್ಲ ಬೇರೆಯವರು ಕವನ ಓದಿದಾಗ seriousಆಗಿ ಕೇಳ್ತಾ ಇದ್ದರು. ನೀನು ಹೇಳಿದಾಗ ಮಾತ್ರ ಜನ ಬಿದ್ದು ಬಿದ್ದು ನಗುತ್ತಿದ್ದರು. ನನಗೆ ಎಷ್ಟು ಅವಮಾನ ಅನ್ನಿಸಿತು ಗೊತ್ತಾ?”
ಈ ಉತ್ತರ ಕೇಳಿದಾಗ ಅವರು ಗೆಳೆಯರೊಂದಿಗೆ, “ನೋಡ್ರಪ್ಪ ಹಾಸ್ಯ ಕವಿ ಗೋಷ್ಟಿ ಎಂದ ಮೇಲೆ ಜನಗಳು ನಗುವ ಹಾಗೆ ಮಾಡೋನೇ great. ನಾನೇ ಉತ್ತಮ ಹಾಸ್ಯ ಬರಹಗಾರನಲ್ಲವೆ?”
ಒಬ್ಬ ಗೆಳೆಯ, “ರಾಮಾನುಜಂ ಇದು ಯಾಕೋ ಅತಿಯಾಯಿತು. ಆತ್ಮಪ್ರಶಂಸೆ ಅಷ್ಟು ಒಳ್ಳೆಯದಲ್ಲ.” ಎಂದರು.
ಆಗ ಅವರು ನಗುತ್ತಾ ಈ ಕೆಳಗಿನ ಸಾಲುಗಳನ್ನು ಹೇಳಿದರಂತೆ.
“ನಾನು ಉತ್ತಮ ಪುರುಷ
ಏನು ಮಾಡಲಿ ವ್ಯಾಕರಣವೇ ಹೇಳಿದೆಯಲ್ಲ.
ನನ್ನ ಮಗನೂ ಒಳ್ಳೆಯವನೇ
ಆದರೂ ಅವನಪ್ಪನಷ್ಟಲ್ಲ
ಏಕೆಂದರೆ ಅವನು ನಾನಲ್ಲವಲ್ಲ.”
ಆತ್ಮ ಪ್ರಶಂಸೆ ಎಂದಾದರು ಅದರಲ್ಲಿ ಎಷ್ಟು ಚೆನ್ನಾಗಿ pun ಮಾಡಿ ಹೇಳಿದ್ದಾರೆ ಎಂದು ಯೋಚಿಸುತ್ತಾ ಅದೇ ಗುಂಗಿನಲ್ಲಿ ಶಾಲೆಗೆ ಹೋದಾಗ ಅಲ್ಲಿ ನನ್ನ ಸಹ ಶಿಕ್ಷಕಿಯೊಬ್ಬರು ಯಾವುದೋ official letter ಬರೆಯಲು ಪ್ರಾರಂಭಿಸಿದ್ದರು. ಅವರು ನನ್ನ ನೋಡಿದಕೂಡಲೇ, “ ಮೇಡಂ, ನನಗೆ ಈ letters ಬರೆಯುವಾಗಲೆಲ್ಲಾ ಒಂದು confusion ಇದ್ದೇ ಇರತ್ತೆಕಣ್ರಿ.” ಎಂದರು.
ನಾನು, “ಏನದು?” ಎಂದು ಕೇಳಿದೆ.
ಅವರು, “ಈ letterಗಳ ‘ಇಂದ’ ಅಡ್ರೆಸ್ ಮೊದಲು ಬರೀಬೇಕಾ ಅಥವಾ ‘ಗೆ’ ಅಡ್ರೆಸ್ ಮೊದಲು ಬರೀಬೇಕಾ ಅಂತ” ಎಂದರು.
ನಾನು ತಕ್ಷಣ,
“ನಾನು ಉತ್ತಮ ಪುರುಷ,
ಎಂದಿಗೂ ನಾನೇ ಮೊದಲಲ್ಲವೇ
ನಂತರವೇ ಯಾರಿದ್ದರೂ
ತೃತಿಯಾ ವಿಭಕ್ತಿ ‘ಇಂದ’ ಆದಮೇಲೇನೇ
ಗೆ, ಇಗೆ, ಇಕ್ಕೆ, ಚತುರ್ಥ ನಂತರವೇ ಅಲ್ಲವೇ?”
ಎಂದೆ. ಅವರು ಮೊದಲು ಕಕ್ಕಾಬಿಕ್ಕಿಯಾಯರೂ ಆಮೆಲೆ ಅರ್ಥವಾದಮೇಲೆ ಅಲ್ಲಿಂದ ಮುಂದಕ್ಕೆ ಅವರಿಗೆ confusion ಬರಲೇ ಇಲ್ಲವಂತೆ!

  • ಲಘು ಬರಹ
~.~
  • shylaswamy ರವರ ಬ್ಲಾಗ್
  • Login or register to post comments
  • 266 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 26, 2008 - 5:23pm — shreekant.mishrikoti

ಉ: ನಾನು ಉತ್ತಮ ಪುರುಷ

shreekant.mishrikoti's picture

ಎಲ್ಲೋ ಓದಿದ್ದು ನೆನಪಾಯಿತು ..
ಒಬ್ಬ ಹೇಳ್ತಾನೇ - ’ಅ’ ರವರು ಒಳ್ಳೇ ಕವಿಯಲ್ಲ.
ಇನ್ನೊಬ್ಬ - ’ಒಳ್ಳೇ’ ಶಬ್ದ ಅನಗತ್ಯವಾಗಿತ್ತು
Smiling

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 9:26pm — hamsanandi

ಉ: ನಾನು ಉತ್ತಮ ಪುರುಷ

hamsanandi's picture

ಇಂದ ಆದ್ಮೇಲೆ ಗೆ ಅನ್ನೋದಕ್ಕೊಂದು ಹೊಸ ಸೂತ್ರ ಕೊಟ್ಟಿದ್ದೀರಿ! ಚೆನ್ನಾಗಿದೆ Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
  • ಶ್ರೀನಿವಾಸ ರಾಮಾನುಜಂ
  • ಡೈರಿಯ ಕೆಲವು ಹಾಳೆಗಳು - ಭಾಗ ೩
  • ಕನಸು ಭವಿಷ್ಯ ಸೂಚಕವೇ?
  • ದೊಡ್ಡಸ್ತಿಕೆಯ ಅಮಲೇರದಿರಲಿ
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 182 ಅತಿಥಿಗಳು ಆನ್ಲೈನ್ ಇರುವರು.


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator