ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಅವನು ಅಪ್ಪಟ ಬಂಗಾರ ನಿಜ ; ಅದರೆ ಆಭರಣಕ್ಕೆ ಬಾರದೇ ? (ಸತ್ಯಕಾಮ ಕತೆ - ಭಾಗ - ೪)

November 22, 2007 - 4:28pm — shreekant.mishrikoti

ಹಿಂದಿನ ಭಾಗ ಓದಿದಿರಾ ? ಇಲ್ಲಿ ಅದನ್ನು ಓದಿ http://www.sampada.net/blog/shreekantmishrikoti/22/11/2007/6365

ನಮ್ಮ ನಾಯಕ ಈಗಲೂ ಅವಳನ್ನು ಮದುವೆಯಾಗಿ , ಗೌರವದ ಬಾಳು ಕೊಡಲು ಸಿದ್ಧ .
ಅದರಂತೆ ಅವಳನ್ನು ಮದುವೆಯೂ ಆಗುತ್ತಾನೆ . ಅದೇಕೋ ಅವಳ ಜತೆ ಸಂಬಂಧ ಇಟ್ಟುಕೊಳ್ಳುವದಿಲ್ಲ .
ಮುಂದೆ ಒಂದು ಮಗು ಹುಟ್ಟುತ್ತದೆ . ಅದನ್ನೂ ತನ್ನ ಮಗು ಎಂದೇ ಒಪ್ಪಿಕೊಳ್ಳುತ್ತಾನೆ.
ಸಂಪ್ರದಾಯಸ್ಥ ತಂದೆ ಇದೆಲ್ಲವನ್ನೂ ಹೇಗೆ ಸಹಿಸಿಯಾನು? , ಕೆಳ ಜಾತಿಯವಳು , ಅದರಲ್ಲೂ ವೇಶ್ಯೆಯ ಮಗಳು ,ಅವಳನ್ನು ಸೊಸೆಯಾಗಿ , ಅವಳಿಗೆ ಬೇರಾರಿಂದಲೋ ಆದ ಮಗುವನ್ನು ತನ್ನ ಮೊಮ್ಮಗನಾಗಿ ಆ ಸಂಪ್ರದಾಯದ ಜೀವ ಹೇಗೆ ಒಪ್ಪಿಕೊಳ್ಳಲು ಸಾಧ್ಯ ?
ಹೆಂಡತಿ ಹಾಗೂ ಮಗುವಿನೊಂದಿಗೆ ಬಂದ ಮಗನನ್ನು ಮನೆಯ ಒಳಗೆ ಸೇರಿಸುವದಿಲ್ಲ .

ಸತ್ಯವೃತನ ಹೆಂಡತಿ , ಮಗುವಿನೊಡನೆಯ ಸಂಬಂಧದ ಬಗೆಯನ್ನು ಬಹಿರಂಗಪಡಿಸಿಲ್ಲ . ಈ ವಿಷಯ ಅವನ ಆಪ್ತ ಮಿತ್ರನಿಗೆ ಮಾತ್ರ ಗೊತ್ತು .
ಅತ್ತ ಉದ್ಯೋಗದ ವಿಷಯದಲ್ಲಿ ಅವನು ತೊಂದರೆಪಡುತ್ತಿದ್ದಾನೆ , ಸುಳ್ಳು ಬಿಲ್ಲುಗಳು , ಕಳಪೆ ಗುಣಮಟ್ಟದ ಕೆಲಸ ಇತ್ಯಾದಿಗಳಿಗೆ ನೆರವಾಗನು . ಹಾಗಾಗಿ ಅವನ ವರ್ಗಾವಣೆ ಆಗುತ್ತಿರುತ್ತದೆ , ಬಡ್ತಿಗಳು ತಪ್ಪುತ್ತವೆ , ಈ ಮಧ್ಯೆ ಅವನಿಗೆ ಆರೋಗ್ಯ ಕೆಟ್ಟಿದೆ ; ಕ್ಯಾನ್ಸರ್ ಆಗಿ ಕೊನೆಯ ಹಂತದಲ್ಲಿದ್ದಾನೆ . ಅವನ ಆಸ್ಪತ್ರೆ ಖರ್ಚು ಭರಿಸುವ ಕಂಟ್ರಾಕ್ಟರ್ ಅವನಿಂದ ಹಳೆಯ ಬಿಲ್ಲೊಂದಕ್ಕೆ ಸಹಿ ಬಯಸಿದ್ದಾನೆ . ಇವನು ಅದಕ್ಕೆ ತಯಾರಿಲ್ಲ ; ಆಗ ಅವನು ಸತ್ಯವೃತನ ಹೆಂಡತಿಯೊಂದಿಗೆ ಮಾತನಾಡುತ್ತಾನೆ . "ನನಗೆ ಈ ಬಿಲ್ಲು ಸಹಿಯಾಗದಿದ್ದರೆ ಸ್ವಲ್ಪ ನಷ್ಟವಾಗಬಹುದು ; ಅಷ್ಟೇ ; ಪರವಾಗಿಲ್ಲ, ನಾನು ಅದನ್ನು ಸಹಿಸಬಲ್ಲೆ ; ಆದರೆ ನಿಮ್ಮ ಗಂಡನ ನಂತರ ನಿಮ್ಮ ಮತ್ತು ಮಗುವಿನ ಗತಿ ಏನು ? ಈ ಬಿಲ್ಲಿಗೆ ಸಹಿ ಮಾಡಿಸಿ ಕೊಟ್ಟರೆ ನಿಮಗೇ ಅನುಕೂಲವಾಗುತ್ತದೆ " . ಎಮ್ದು ಹೇಳಿ ಆ ಬಿಲ್ಲನ್ನು ಅವಳ ಹತ್ತಿರ ಬಿಟ್ಟು ಹೋಗುತ್ತಾನೆ .
ಅದೇನೋ ಸರಿ , ಅದರೆ ಮರಣ ಶಯ್ಯೆಯಲ್ಲಿ , ಗಂಡನನ್ನು ಅವನು ಎಲ್ಲಕ್ಕಿಂತ ಹೆಚ್ಚಾಗಿ ಈವರೆಗೆ ಕಾಪಾಡಿಕೊಂಡು ಬಂದ ಸತ್ಯ , ಪ್ರಾಮಾಣಿಕತೆಯ ಆದರ್ಶಗಳನ್ನು ಕೈ ಬಿಡು ಎಂದು ಕೇಳುವದು ಹೇಗೆ?
ಯಾರೋ ಅವಳ ಬಳಿ ಈ ನಡುವೆ "ನಿನ್ನ ಗಂಡ ಅಪ್ಪಟ ಚಿನ್ನ ಕಾಣಮ್ಮ " ಅನ್ನುತ್ತಾರೆ . ಹೌದು, ಆದರೆ ಅಪ್ಪಟ ಚಿನ್ನದಿಂದ ಏನು ಉಪಯೋಗ ; ಒಂದಿಷ್ಟು ಹಿತ್ತಾಳೆಯೋ ತಾಮ್ರವೋ ಕಲಬೆರಕೆ ಆಗದ ಹೊರತು ಯಾವ ಆಭರಣಕ್ಕೂ ಬಾರದು !

ಏನೂ ಮಾತನ್ನಾಡದೇ , ಆ ಬಿಲ್ಲನ್ನು ಅವನ ಬಳಿ ಬಿಟ್ಟು ಬಂದು ಬಿಡುತ್ತಾಳೆ .
ಮರುದಿನ ಅವಳು ಅಸ್ಪತ್ರೆಗೆ ಹೋದಾಗ
ಆ ಬಿಲ್ಲಿಗೆ ಸಹಿ ಮಾದಿದ್ದಾನೆ ಸತ್ಯವೃತ . " ನನಗೆ ಗೊತ್ತಿತ್ತು ನೀನು ಸಹಿ ಮಾಡ್ತೀಯಾ , ಅಂತ " ಅಂದು ಅದನ್ನು ಹರಿದು ಬಿಡುತ್ತಾಳೆ . " ನನಗೆ ಗೊತ್ತಿತ್ತು , ನೀನು ಹರಿದು ಬಿಡ್ತೀಯಾ ಅಂತ " ಅಂತ ಸತ್ಯವೃತನ ಮಾತು .
ಅವರ ಮೇಲಿನ ಪ್ರೇಮಕ್ಕಾಗಿ ತನ್ನ ಧ್ಯೇಯಾದರ್ಶಗಳನ್ನೂ ತ್ಯಜಿಸಿದ್ದಾನೆ ಅವನು ;
ತನ್ನ ಸುಖಕ್ಕಾಗಿ ಅವನ ಧ್ಯೇಯಾದರ್ಶಗಳಿಗೆ ತಿಲಾಂಜಲಿಯನ್ನು ಅವಳು ಬಯಸಳು ;
ಎಂಥ ಸನ್ನಿವೇಶ ನೋಡಿ?

ಇನ್ನು ಒಂದೇ ಕಂತು ಬಾಕಿ ಇದೆ .. ಅಲ್ಲಿ ಭಾರೀ ಕ್ಲೈಮಾಕ್ಸ್ ಇದೆ ....
ದಯವಿಟ್ಟು ಈ ತೊಂದರೆ ಸಹಿಸಿಕೊಳ್ಳಿ .

ಮುಂದಿನ ಭಾಗ ಇಲ್ಲಿದೆ . http://www.sampada.net/blog/shreekantmishrikoti/23/11/2007/6381

  • ಕತೆ
  • ಸಿನಿಮಾ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 398 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 22, 2007 - 5:14pm — Sunil Jayaprakash

ಉ: ಅವನು ಅಪ್ಪಟ ಬಂಗಾರ ನಿಜ ; ಅದರೆ ಆಭರಣಕ್ಕೆ ಬಾರದೇ ? (ಸತ್ಯಕಾಮ ಕತೆ - ಭಾಗ - ೪)

Sunil Jayaprakash's picture

ಮಿಶ್ರಿಕೋಟಿ, ಚೆನ್ನಾಗಿ ಸಾಗಿದೆ. ಮುಂದೆ, ಬೇಗ ಬೇಗ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಿನಿಮಾ ಕತೆ ಕೇಳಿ- ಸತ್ಯಕಾಮ -೨
  • ಬಂತು , ಬಂತು, ಕಡೆಯ ಕಂತು ! (ಸತ್ಯಕಾಮ -ಭಾಗ ೫)
  • ’ಈ ಮಾತನ್ನು ನಿನ್ನೇನೇ ಹೇಳ್ಬಾರ್ದೇ ?’ - ಸತ್ಯಕಾಮ ( ಭಾಗ ೩)
  • ಒಂದು ಜೋಗಿ ಕತೆ ಕೇಳಿ
  • ಒಂದು ಒಳ್ಳೇ ಸಿನಿಮಾ ಕತೆ ಕೇಳಿ- ಸತ್ಯಕಾಮ -೧
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
  • anivaasi
    ಉ: ಜೀವ ಕಾಯುವುದೇತಕೆ?
    September 8, 2008 - 2:24am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 1:57am
  • manjunath s reddy
    ಉ: ಜೀವ ಕಾಯುವುದೇತಕೆ?
    September 8, 2008 - 1:41am
  • manjunath s reddy
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 1:31am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 8, 2008 - 1:29am
  • nekkar_guru
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 8, 2008 - 1:07am
  • mayakar
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 12:16am
  • raghava
    ಉ: ಮೊದಲ ಚಿತ್ರ
    September 8, 2008 - 12:13am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator