ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಕನಕದಾಸರು ಮತ್ತು ಗೌರವ, ಪ್ರಶಸ್ತಿಯ ಆಸೆ.
ಮಾಸ್ತಿಯವರು ಕನಕದಾಸರ ಕುರಿತು ಬರೆಯುವಾಗ ಹೀಗೆ ಬರೆದಿದ್ದಾರೆ .
"ಕುರುಬ ವಂಶದಲ್ಲಿ ಜನಿಸಿ ತಮ್ಮ ಪಾಳೆಯಪಟ್ಟನ್ನು ಕೆಲವುಕಾಲ ಆಳಿ ಆಮೇಲೆ ಹರಿದಾಸನ ಪದವಿಗೇರಿದ ಕನಕದಾಸರು ತಮ್ಮ ಬಾಳಿನ ರೀತಿಯಿಂದ ತಮ್ಮ ಗುರು ವ್ಯಾಸರಾಯರಿಗೆ ಮೆಚ್ಚುಗೆಯ ಶಿಷ್ಯರಾದರು . ದ್ವಿಜರಾದ ಗುರು , ದ್ವಿಜವಂಶದವನಲ್ಲದ ಈ ಶಿಷ್ಯ ತಮಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದಿರುವ ದೈವಭಕ್ತ ಎಂದು ಇವರನ್ನು ಹೊಗಳುತ್ತಿದ್ದರಂತೆ .
ವ್ಯಾಸರಾಯರು ಕನಕದಾಸರು ತಮಗಿಂತ ಹಿರಿಯರೆಂದು ಹೊಗಳಿದರೂ ಕನಕದಾಸರು ತಾವು ಗುರುವಿನ ಪೀಠದಲ್ಲಿ ಕುಳಿತೇನು ಎಂದು ಮುಂದರಿಯಲಿಲ್ಲ. ಈ ನಡತೆಯ ರಹಸ್ಯ ಏನು ಎಂದು ಆಧುನಿಕರಾದ ನಾವು ವಿಚಾರ ಮಾಡಬೇಕು. "
ಇಲ್ಲಿನ "ರಹಸ್ಯ" ಏನೆಂದು ನನಗೆ ತಿಳಿಯಲಿಲ್ಲ ; ( ನಿಮಗೆ ಗೊತ್ತಿದ್ದರೆ ಅಥವಾ ತೋಚಿದರೆ ತಿಳಿಸಿ ) . ಆದರೆ ಇಂಥ ಜನ ನಮ್ಮ ನಡುವೆ ಇದ್ದಾರೆ , ಅರ್ಹತೆಯಿದ್ದೂ ಪ್ರಶಸ್ತಿ,ಗೌರವ ಬಯಸದೆ "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ? " ಎಂದು ಹಾಡಿಕೊಂಡು ಇರುವವರು . ಇಂಥವರೇ ಈ ರಹಸ್ಯವನ್ನು ತಿಳಿಹೇಳಿದರೆ ಬಲು ಚೆನ್ನು.

- shreekant.mishrikoti ರವರ ಬ್ಲಾಗ್
- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: