ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು ( ಉ.ಕ.ಕ-೫)

July 25, 2006 - 1:12pm — shreekant.mishrikoti

ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು ಮಠವೂ ಒಂದು ಕನ್ನಡ ಶಾಲೆಯೇ ಆಗಿತ್ತು . ೧೮೮೦ ರವರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ವೀರಶೈವರದೊಂದು ಶಾಲೆಯು ಕಣ್ಣಿಗೆ ಬೀಳುತ್ತಿತ್ತು.

ಉತ್ತರ ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಮರಾಠಿಗಳನ್ನು ಕಡ್ಡಾಯವಾಗಿ ಕಲಿಸಲಾಗುತ್ತಿತ್ತು .

ವಿಜಾಪುರದಲ್ಲಿ ಹೊರಟ ಮೊದಲ ಪತ್ರಿಕೆ ಮರಾಠಿಯದು . ೧೯೧೭ ರಲ್ಲಿ ವಿಜಾಪುರದ ಸಾರ್ವಜನಿಕ ವಾಚನಾಲಯದಲ್ಲಿ ಇದ್ದ ೩೦೦೦ ಪುಸ್ತಕಗಳಿದ್ದು ಕೇವಲ ೩೦೦ ಮಾತ್ರ ಕನ್ನಡದ್ದು ಆಗಿದ್ದವು . ಕನ್ನಡ ಪುಸ್ತಕ ಕೊಳ್ಳದಿರಲು ಮರಾಠಿ ಆಡಳಿತಗಾರರು ಕೊಟ್ಟ ಕಾರಣವೆಂದರೆ ಕನ್ನಡ ಪುಸ್ತಕ ಓದಲು ವಿಜಾಪುರದವರಿಗೆ ಇಚ್ಛೆ ಇಲ್ಲವೆಂದು.

ಶಾಲೆಗಳ ವಿಷಯವೂ ಹೀಗೆಯೇ . ಹೆಣ್ಣುಮಕ್ಕಳಿಗೆ ಕನ್ನಡ ಕಲಿಸುವ ವ್ಯವಸ್ಥೆ ಇದ್ದಿಲ್ಲ ಮರಾಠಿ ಶಾಲೆಯ ಕಟ್ಟಡ ಸುಂದರವಾಗಿ ಆಕರ್ಷಕವಾಗಿತ್ತು . ಅಲ್ಲಿ ಶಿಕ್ಷಕರಿಗೆ ಹೆಚ್ಚು ಸಂಬಳ ಇತ್ತು.

... ಮುಖಂಡರೆನ್ನಿಸಿಕೊಳ್ಳುವವರೂ ಅಧಿಕಾರಸ್ಥರೂ ಮರಾಠಿಗರೇ ಆಗಿದ್ದರು ...

ಕರ್ನಾಟಕದಲ್ಲಿ ಕನ್ನಡ ಶಾಲೆಗಳಿರಬೇಕೆಂದು ಕನ್ನಡಿಗರು ಬಡಿದಾಡಬೇಕಾಯಿತು. ಒಮ್ಮೆ ವೆಂಕಟರಂಗೋ ಕಟ್ಟಿಯವರು ಮನೆಯ ದೀಪವೆಂದು ಮುದ್ದಿಡಲಿಕ್ಕೆ ಬರುವದಿಲ್ಲ ಎಂದು ಅಗ್ರಲೇಖವನ್ನೂ ಬರೆದರು .

"ಶುಭೋದಯ"ದಲ್ಲಿ ಶ್ರೀ ಕೆ. ವಾಸುದೇವಾಚಾರ್ಯರು ತಮ್ಮದೇ ಆದ ಶೈಲಿಯಲ್ಲಿ ಹೀಗೆ ಬರೆದರು .
" ವಿಜಾಪುರ ಜಿಲ್ಲೆಯಂಬುದೊಂದು ಪ್ರಾಂತವು ಕರ್ನಾಟಕದ ಮಧ್ಯದಲ್ಲಿರುವದು . ಆ ಪ್ರಾಂತದ ಮಧ್ಯದಲ್ಲಿರುವ ವಿಜಾಪುರವೆಂಬ ಊರಾದರೂ ಕರ್ನಾಟಕದಲ್ಲಿಯೇ ಇರುವದೆಂಬುದನ್ನು ವ್ಯಾಪವ್ಯಾಪಕ ವಿಚಾರದಿಂದ ನೋಡಿದರೆ ಸಿದ್ಧವಾಗುವದು ,. ಆ ಊರಿನ ಒಕ್ಕಲಿಗರೆಲ್ಲರೂ ಕನ್ನಡಿಗರು . ಅಲ್ಲಿರುವ ವ್ಯಾಪಾರ ಉದ್ದಿಮೆ ಮಾಡುವವರೆಲ್ಲರು ಆಡುವ ಮಾತು ಕನ್ನಡವಲ್ಲದೆ ಬೇರೊಂದಿಲ್ಲ . ಅಲ್ಲಿನ ದೇಸಾಯಿ , ದೇಶಪಾಂಡೆಯವರು , ಗೌಡ ಕುಲಕರ್ಣಿಗಳು , ಆಯಗಾರ ಕೂಲಿಯವರು , ಭಟ್ಟ ಭಿಕ್ಷುಕರು , ಇನ್ನುಳಿದ ಸುಖವಸ್ತಿಯರು ಎಲ್ಲರೂ ಕನ್ನಡಿಗರೇ ... ಹೀಗಿದ್ದರೂ ಕನ್ನಡನುಡಿಯ ನಡುಮನೆಯಲ್ಲಿ ಮರಾಠಿ ಭಾಷೆಯು ಹೊಕ್ಕುಕೊಂಡು ಕನ್ನಡನುಡಿಗೆ ಎದ್ದಲಗಾಟ ಕೊಟ್ಟಿರುವದೆಂಬ ಮಾತು ಕೇಳಿ ಯಾರಿಗೆ ಸಖೇದವಾದ ಆಶ್ಚರ್ಯವಾಗಲಿಕ್ಕಿಲ್ಲ ? ... ಎಲ್ಲವ್ವನ ಜಾತ್ರೆಯಲ್ಲಿ ಮುಲ್ಲಾನ ಅಧಿಷ್ಠಾನವೆಂಬಂತೆ ಇಲ್ಲಿಯ ಕನ್ಯಾಶಾಲೆ*ಯಲ್ಲಿ ಮರಾಠಿ ಮುಲೀ ಜನರು ಸೇರಿಕೊಂಡು ಬಿಟ್ಟಿರುವರು . ಇಷ್ಟೆಲ್ಲ ಅನಾವಸ್ಥೆಗೆ ಕಾರಣವೇನೆಂದು ಯಾರಾದರೂ ಕುತೂಹಲದಿಂದ ಪ್ರಶ್ನೆ ಮಾಡಬಹುದು . ಪ್ರಸ್ತ** ಮಾಡಿಸುವ ಯಜಮಾನನು ಒಕ್ಕಲಿಗನು. ತಂಗಳ ರೊಟ್ಟಿಯನ್ನು ಸೋಟೆ ಹರಿಯುವಂತೆ ಕಟೆದು*** ಬಂದು ಆ ಮಂದಮತಿಯಾದ ಒಕ್ಕಲಿಗನು ತುಪ್ಪ, ಸಕ್ಕರೆ, ಬದಾಮ, ಕೇಶರಗಳ ಕೊಲೆ ಮಾಡುತ್ತಿರುವ ಬ್ರಾಹ್ಮಣರಿಗೆ ಕೈಜೋಡಿಸಿ 'ಸಂತೋಸರೇ' ಎಂದು ಕೇಳುವ ಹಾಗೆ ನಾವು ಮತಿಮಂದರಾದ ಕರ್ನಾಟಕಸ್ಥರ ಗತಿಯಾಗಿದೆ. ಕೆಲಕಾಲದ ಹಿಂದೆ ವಿಜಾಪುರದ ಸರಕಾರೀ ಕಾಮಗಾರರೆಲ್ಲರೂ ಮರಾಠೀ ಮಾತನಾಡುವ ಜನರೇ ಆಗಿದ್ದರು. ಆ ಕಾಲದಲ್ಲಿ ಅಧಿಕಾರೀ ಜನರಿಗೆ ಜನರೆಲ್ಲರೂ ಅಂಜಿ ಗಡಗಡನೇ ನಡುಗುವರು. ಅದಕ್ಕಾಗಿ ಬಾಪೂಸಾಹೇಬ , ನಾನಾಸಾಹೇಬ , ಪೇಠೆ , ಬಾಜಾರೆ , ಕಾಳೇ , ಗೋರೇ, ಖರೇ , ಖೋಟೇ ಮುಂತಾದ ಜನರೇ ಅಧಿಕಾರಬಲದಿಂದ ನಮ್ಮನ್ನು ಆಳಿಕೊಂಡರು. ನಮ್ಮಲ್ಲಿ ಪ್ರಮುಖರೆಂಬವರು ಅಭಿಮಾನ ಶೂನ್ಯರಾಗಿ ಸ್ವಭಾಷೆ , ಸ್ವಾಚಾರಗಳನ್ನು ನಿಂದಿಸಿ ಮರಾಠೀ ಜನರ ಆಚರಣಗಳನ್ನೂ ಅವರ ಭಾಷೆಯನ್ನೂ ಡುಬ್ಬದ ಮೇಲೆ ಹೊತ್ತುಕೊಂಡು ಡೊಗ್ಗಿ ನಿಂತುಕೊಂಡರು . ' ಚಹಾ ಝಾಲ ಕಾಯ್ ? ಥೋಡೇಸೆ ಇಕಡೆ ಯಾ ! ಫಾರ್ ಉತ್ತಮ್ ' ಎಂಬ ಮರಾಠೀ ವಾಕ್ಯಗಳನ್ನಾಡೀ .. ಹೆಂಡರನ್ನು ವಿನೋದಗೊಳಿಸಿ ಸಂತೋಷದಿಂದ ನಕ್ಕರು".

*ಕನ್ಯಾಶಾಲೆ- ಹೆಣ್ಣುಮಕ್ಕಳ ಶಾಲೆ
**ಪ್ರಸ್ತ - ಶುಭಕಾರ್ಯ
***ಕಟೆದು - ಕಟೆಯುವ ಬಗ್ಗೆ ಒಂದೆರಡು ದಿನಗಳ ಹಿಂದೆ ಸಂಪದದಲ್ಲಿ ಬ್ಲಾಗಿಸಿದ್ದಾರೆ

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 583 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
  • ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩
  • ಉತ್ತರ ಕರ್ನಾಟಕದಲ್ಲಿ ಕನ್ನಡ-೪
  • ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧
  • ಎಂಥ ನಾಡಿದು ಎಂಥ ಕಾಡಾಯಿತೋ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 91 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator