ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › shobha.koppad ರವರ ಬ್ಲಾಗ್

ಹಾಗೆ ಸುಮ್ಮನೆ...

ಮನಸ್ಸಿಗೆ ಅನಿಸಿದ ೪ ಮಾತು ಹಾಗೆ ಸುಮ್ಮನೆ ...

ಹೀಗೊಂದು ಊರು !

May 1, 2008 - 10:29pm — shobha.koppad

ಸಾಮಾನ್ಯವಾಗಿ ನಮ್ಮ ಹಳ್ಳಿಗಳು ಅಂದ್ರೆ ಟಾರ್ ಇಲ್ಲದ ರಸ್ತೆಗಳು,, ಗಲ್ಲಿ ಗಲ್ಲಿಗಳಲ್ಲಿ ತಿಪ್ಪೆಗುಂಡಿಗಳು.., ಆಲದ ಮರದ ಕೆಳಗೆ ಕಾಡು ಹರಟೆ ಹೊಡೆಯುತ್ತ ಕೂತ ಯುವ ಜನರು, ಅಧೋಗತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಂಚು ಹಾರಿ ಹೋಗಿರುವ, ಪಾಳು ಬಿದ್ದ ಶಾಲಾ ಕಟ್ಟಡಗಳು.. ಈ ನೋಟ ಕರ್ನಾಟಕದಾಂದ್ಯಂತ ಹಳ್ಳಿಗಳಲ್ಲಿ ಕಂಡು ಬರುವ ಸರ್ವೇಸಾಮಾನ್ಯ ದ್ರುಶ್ಯ,,.. ಆದ್ರೆ ಇಲ್ಲೊಂದು ಹಳ್ಳಿ ಇಡಿ ನಾಡಿಗೆ ಮಾದರಿ ಎನ್ನುವಂತದ್ದು...

ಈ ಹಳ್ಳಿಯ ಹೆಸರು ಬಡಗಂಡಿ,, ಇರೋದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ.. ಇ ಊರಲ್ಲೆಲ್ಲೂ ಕೊಳಚೆಯನ್ನುವ ಮಾತೆ ಇಲ್ಲ,, ರಸ್ತೆಗಳೆಲ್ಲ ಶುಭ್ರ,, ಊರಿನಲ್ಲೆ ಒಳ್ಳೆಯ ಭದ್ರವಾದ ಕಟ್ಟಡವುಳ್ಳ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಲ್ಲಾ ಪ್ರಾಥಮಿಕ ಸೌಲಭ್ಯ ವುಳ್ಳ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ,, ಇದೆಲ್ಲಕಿಂತ ಹೆಚ್ಚಾಗಿ,, ಇ ಊರಲ್ಲಿ ದುರ್ಬಿನ್ ಹಾಕೊಂಡ್ ಹುಡುಕಿದ್ರು ಒಬ್ಬೆ ಒಬ್ಬ ನಿರುದ್ಯೋಗಿ ಕಣ್ಣಿಗೆ ಕಾಣಲ್ಲ.. !! ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡ್ಬೆಡಿ...ಇದೆಲ್ಲವು ಸಾಧ್ಯವಾದದ್ದು ಇಲ್ಲಿನ ಒಬ್ಬೆ ಒಬ್ಬ ವ್ಯಕಿಯಿಂದ,, ಅವರೆ ವಿಧಾನ ಪರಿಷತ್ ಸದಸ್ಯ ಎಸ್. ಆರ್‍. ಪಾಟೀಲ ರಿಂದ. ಇದೇ ಊರಿನಲ್ಲಿ ಹುಟ್ಟಿ ಬೆಳೆದ ಪಾಟೀಲರು ತಮ್ಮ ಹುಟ್ಟೂರಿನ ಋಣ ತೀರಿಸಿದ್ದು ಹೀಗೆ. ಬಾಗಲಕೋಟೆ, ಬೆಳಗಾವಿ, ಬಿಜಾಪುರ ಪ್ರಾಂತ್ಯದಲ್ಲಿ ರೈತರ ಮುಖ್ಯ ಬೆಳೆ ಕಬ್ಬು. ಬೆಳೆದ ಕಬ್ಬನ್ನು ನುರಿಸಲು ಮಹಾರಾಷ್ಟ್ರ ಕ್ಕೆ ಹೋಗುತ್ತಿದ್ದೆ ಜನರ ಬವಣೆ ನಿವಾರಿಸಲು, ಪಾಟೀಲ-ರ ನೇತ್ರತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದೆ ಬೀಳಗಿ ಶುಗರ್ ಮಿಲ್ಸ್. ಬಡಗಂಡಿಯ ಹೆಚ್ಚಿನ ಯುವಕರು ಇ ಕಾರ್ಖಾನೆಯಲ್ಲೆ ಕೆಲಸ ಮಾಡುತ್ತಾರೆ. ಇಷ್ಟಕ್ಕೆ ನಿಲ್ಲದೆ ಪಾಟೀಲರು ಊರಿನಲ್ಲಿ ಔದ್ಯೊಗಿಕ ತರಬೇತಿ ಕೇಂದ್ರವೊಂದನ್ನು (ಐ.ಟಿ.ಐ) ತೆರೆದು ಅಲ್ಲಿನ ಯುವಕರಿಗೆ ಉದ್ಯೊಗವಕಾಶ ಹೆಚ್ಚುಸುವಲ್ಲಿ ಸಹಾಯ ಮಾಡಿದ್ದಾರೆ. ಗ್ರಾಮದ ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲೂ ಪಾಟೀಲರು ಯಶಸ್ವಿಯಾಗಿದ್ದಾರೆ. ಇಷ್ಟೆಲ್ಲ ಆದರೂ ಎಲೆ ಮರೆಯ ಕಾಯಿಯಂತೆ ತಮ್ಮ ಕಾಯಕವನ್ನು ಮುಂದುವರಿಸಿರುವ ಎಸ್. ಆರ್‍. ಪಾಟೀಲರು ಅಭಿನಂದನೀಯರು...

ಉತ್ತರ ಕರ್ನಾಟಕದ ರಾಜಕಾರಣಿಗಳು ಅಂದ್ರೆ ಸೋಮಾರಿಗಳು, ಬೆಂಗಳೂರಿನಲ್ಲಿ ಸೈಟು,ಮನೆ ಮಾಡೊದ್ರಲ್ಲೆ ಹೆಚ್ಚು ಆಸಕ್ತರು ಅನ್ನೊ ಆರೊಪ ಇರುವಾಗ, ಎಸ್. ಆರ್‍. ಪಾಟೀಲ ಅಂಥವರು ಹೆಚ್ಚು ಪ್ರಸ್ತುತ ವೆನ್ನಿಸುತ್ತಾರೆ. ಗಣಿ ಧನಿಗಳ ಅಬ್ಬರದಲ್ಲಿ, ರಿಯಲ್ ಎಸ್ಟೇಟ್ ನ ಕೊಚ್ಚೆಯಲ್ಲಿ ಬಿದ್ದು ಗಬ್ಬೆದ್ದಿರೋ ರಾಜ್ಯ ರಾಜಕೀಯಕ್ಕೆ ಇವರು ಒಂಥರಾ exception.

ಇಂಥವರ ಸಂಖ್ಯೆ ಕರ್ನಾಟಕದೆಲ್ಲೆಡೆ ಜಾಸ್ತಿ ಆದರೆ, ನಮ್ಮ ನಾಡು ನಿಜವಾಗಿಯೂ ರಾಮ ರಾಜ್ಯ ವಾದೀತು..

  • kannada kannadigas karnataka bagalakote
~.~
  • shobha.koppad ರವರ ಬ್ಲಾಗ್
  • Login or register to post comments
  • 315 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 3, 2008 - 12:42pm — Shivakumar.Revadi

ಉ: ಹೀಗೊಂದು ಊರು !

Shivakumar.Revadi's picture

ಶೋಭಾ ಅವರೆ..... ಆ ಊರಿನ ಹೆಸರು ಬಡಗಂಡಿ ಇರ್ಲಿಕ್ಕಿಲ್ಲಾ ಬಾಡಗಂಡಿ ಇರ್ಬೆಕ್ ನೋಡ್ರಿ.
ನಾ ಸಂಣಾವಾ ಇದ್ದಾಗಾ ಆ ಊರ್ಗೆ ಹೊಗ್ತಿದ್ಯಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 10, 2008 - 11:30am — kadakolla05

ಉ: ಹೀಗೊಂದು ಊರು !

kadakolla05's picture

ಶೋಭಾ ,
ನೀವು ಆ ಊರಿಗೆ ಯಾವಾಗಲಾದರು ಹೋಗಿದ್ದೀರ?

ಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 9:44am — shobha.koppad

ಉ: ಹೀಗೊಂದು ಊರು !

shobha.koppad's picture

snehite obbala maduvegagi aa oorige hogidde..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ
  • ರಿಯಲ್ ಎಸ್ಟೇಟ್ ಮಾಲೀಕರು ರಾಜಕಾರಣಕ್ಕೆ
  • ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು
  • ಅಜೇಯನ ರಂಗ ಪ್ರವೇಶ
  • ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು
Syndicate content

ಲೇಖಕರು

shobha.koppad's picture

ಪೂರ್ಣ ಹೆಸರು
ಶೋಭಾ ಕೊಪ್ಪದ್

ಪರಿಚಯ

ವೃತ್ತಿಯಿಂದ ವೈದ್ಯೆ. ಹುಟ್ಟೂರು ದಾವಣಗೆರೆ. ಈ ಸದ್ಯಕ್ಕೆ ಬೆಂಗಳೂರಲ್ಲಿ ಒಂದು ಆಸ್ಪತ್ರೆಯಲ್ಲಿ ಕೆಲಸ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗನ ಬಗ್ಗೆ ಕೆಲವು ಕನಸಿವೆ. ಇದೇನು ಕನ್ನಡತಿ ಒಬ್ಬಳಿಗೆ ಇದೆಂತ ಹುಚ್ಚು ಅಂತೀರ? ನನ್ನ ಕನ್ನಡ ಮೇಷ್ಟ್ರಿಂದ ಬಂದಿದ್ದು ಈ ಕನ್ನಡ ಪ್ರೀತಿ. ಕನ್ನಡ ದಲ್ಲಿ ಉತ್ತಮವಾದ ಎಲ್ಲ ಸಾಹಿತ್ಯ ಓದಬೇಕು. ಓದಿರೋದು ತುಂಬ ಕಮ್ಮಿ. ತುಂಬ ಓದೋ ಆಸೆ ಇದೆ. ಜೊತೆಗೆ ಸಮಾನ ಮನಸ್ಕ ಸ್ನೇಹಿತರ ಹುಡುಕಾಟದಲ್ಲಿ ಸಂಪದದ ಸಂಪರ್ಕಕ್ಕೆ ಬಂದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator