ವಿಶ್ವಮಾನವ - ಕನ್ನಡದೊಳ್ ಭಾವಿಸಿದ ಜನಪದಂ
'ವಿಶ್ವಮಾನವ' ಎಂದಾಕ್ಷಣ ನಮಗೆ ನೆನಪಾಗುವುದು ನಮ್ಮ ರಾಷ್ಟ್ರಕವಿ ಶ್ರೀಕುವೆಂಪು. 'ಮನೆಯನೆಂದೂ ಕಟ್ಟದಿರು, ನೆಲೆಯನೆಂದೂ ಮುಟ್ಟದಿರು, ನೀ ಅನಂತವಾಗಿರು,' 'ಓ ನನ್ನ ಚೇತನ, ಆಗು ನೀ ಅನಿಕೇತನ', 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು', ಎಂದು ಕರೆ ನೀಡುವ ಮೂಲಕ ಇಡೀ ಕನ್ನಡ ವಿಶ್ವಕ್ಕೆ 'ವಿಶ್ವಮಾನವ' ಸಂದೇಶವನ್ನು ನೀಡಿದ ಈ ಶತಮಾನದ ಸಾಹಿತ್ಯ ಶಿಖರ ಅವರು. ಅವರ 'ವಿಶ್ವಮಾನವ' ಸಂದೇಶವನ್ನು ನಾವೆಲ್ಲರೂ ನಡೆ,ನುಡಿಯಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಹಾಗಾಗಿ, ಜಾತಿ, ಮತ, ಧರ್ಮ ಎಲ್ಲಾ ಜೊಳ್ಳುಗಳ ಹೊಟ್ಟು ತೂರಿ 'ವಿಶ್ವಮಾನವ'ನಾಗುವ ನನ್ನ ಪ್ರಯತ್ನದ ಒಂದು ಅಭಿವ್ಯಕ್ತಿಯೇ ಈ ಜಾಲತಾಣ.
ಹಾಗೆಯೇ, ತಮ್ಮ ಉನ್ನತ ಬದುಕಿನ ಮೂಲಕ ಮಾನವ ಕುಲಕ್ಕೇ ಬೆಳಕು ತೋರಿದ ಬುದ್ಧ, ಮಹಾವೀರ, ಅಲ್ಲಮ, ಬಸವರಾದಿಯಾಗಿ, ನಮ್ಮೆಲ್ಲಾ ವಚನಕಾರರು, ಆಧುನಿಕ ಭಾರತದ ಸಂತರೆಂದೇ ಹೇಳಬಹುದಾದ ಶ್ರೀರಾಮಕೃಷ್ಣ, ಶ್ರೀರಮಣ, ಶ್ರೀ ಅರವಿಂದರು, ಶ್ರೀ ಸ್ವಾಮಿ ವಿವೇಕಾನಂದರು, ಜಿಡ್ಡು ಕೃಷ್ಣಮೂರ್ತಿ, ಗಾಂಧಿ, ಓಶೋ ಮುಂತಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ನನ್ನ ಅನುಭವಕ್ಕೆ ಬರುವುದರಲ್ಲಿ ನಾನು ಅಭಿವ್ಯಕ್ತಗೊಳಿಸಬಹುದಾದವನ್ನು ಸಹೃದಯ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನವಾಗಿ ರೂಪುಗೊಂಡಿರುವ ಈ ಬ್ಲಾಗನ್ನು ಸಮಸ್ತ ಕನ್ನಡ ಬಾಂಧವರಿಗೆ ಅರ್ಪಿಸುತ್ತಿದ್ದೇನೆ.
shashikannada ರವರ ಬ್ಲಾಗ್
ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು
October 14, 2008 - 12:46pm — shashikannadaಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು ತಿರುವಿ ಹಾಕಿದೆ. Interesting ಅನ್ನಿಸ್ತು. Of course, ಓಶೋ ಬಗ್ಗೆ ಎಲ್ಲವೂ Interesting ಅಂತ ಅನ್ನಿಸಿಯೇ ಅನ್ನಿಸುತ್ತೆ. ಅಂಥಾ Interesting ವ್ಯಕ್ತಿ ಅವರು. ಮುಂದೆ ಓದಿ »

ಗಾಂಧೀಸ್ಮರಣೆ - 2
October 14, 2008 - 12:37pm — shashikannadaಗಾಂಧೀ ಕುರಿತ ನನ್ನ ಮೊದಲ ಲೇಖನಕ್ಕೆ ಸಂಪದಿಗರು ಒಳ್ಳೆಯ ರೀತಿಯಲ್ಲಿ ಸ್ಪಂದಿಸಿರುವುದು ನಿಜಕ್ಕೂ ಗಾಂಧಿ ನಮ್ಮಲ್ಲಿ ಕೆಲವರಲ್ಲಾದರೂ ಜೀವಂತವಾಗಿರುವುದನ್ನು ನಿಜವಾಗಿಸಿದೆ. ಮುಂದೆ ಓದಿ »

- Login or register to post comments
- 40 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಗಾಂಧೀಸ್ಮರಣೆ
October 5, 2008 - 1:30pm — shashikannadaಪ್ರತಿವರುಷದ ಹಾಗೆ ಈ ವರುಷವೂ ಅಕ್ಟೋಬರ್ 2, ಅಂದರೆ ಗಾಂಧೀ ಜಯಂತಿ ಬಂತು ಹೋಯ್ತು. ಅದರಲ್ಲೇನು ವಿಶೇಷ ಎಂದು ನಾವು ಕೇಳಿಕೊಳ್ಳಬಹುದು. ಮುಂದೆ ಓದಿ »

ಕಾಶ್ಮೀರದ ನಾಡ್ಗಿಚ್ಚು ನಂದೀತು ಎಂದು?
August 30, 2008 - 7:12pm — shashikannadaಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಮರ್ನಾಥ್ ಭೂವಿವಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿನ್ನೆ "ಕಾಶ್ಮೀರ ಯಾರಿಗೆ ಸೇರಿದ್ದು" ಎನ್ನುವ ಲೇಖನವನ್ನು ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೆ. ಮುಂದೆ ಓದಿ »

ಕಾಶ್ಮೀರ ಯಾರಿಗೆ ಸೇರಿದ್ದು?
August 24, 2008 - 1:50pm — shashikannadaಭಾರತ ಪಾಕಿಸ್ತಾನಗಳೆರಡಕ್ಕೂ ಸ್ವಾತಂತ್ರ್ಯ ದೊರೆತು 60 ವರುಷಗಳೇ ಕಳೆದರೂ ಇನ್ನೂ ಬಗೆಹರಿಸಲಾಗದ, ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಭಾರತದ ಶಿರಸ್ಥಾನದಲ್ಲಿರುವ ಕಾಶ್ಮೀರ ಭೂ ಪ್ರದೇಶದ ಸದಾ ಚಾಲ್ತಿಯಲ್ಲಿರುವ ಸಂಘರ್ಷಕ್ಕೆ ವರ್ಷಕ್ಕೊಮ್ಮೆ ಜರುಗುವ "ಅಮರ್ನಾಥ್ ಯಾತ್ರೆ"ಯಿಂದಾಗಿ ಮತ್ತಷ್ಟು ಪುಷ್ಟಿ ದೊರಕಿದೆ ಎಂದೆನಿಸುತ್ತೆ. ಮುಂದೆ ಓದಿ »

- Login or register to post comments
- 140 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: