ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Rohit ರವರ ಬ್ಲಾಗ್

ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ

August 14, 2005 - 4:46pm — Rohit

ಮುಂಬಯಿಗೆ ಬಂದು ೨೦ ದಿನಗಳಾದವು. ಬಹಳ ಬೇಸರವಾಗುತ್ತಿತ್ತು, ಅಲ್ಲದೆ ಶನಿವಾರದ ರಜೆಯನ್ನು ಕಳೆಯುವುದು ಹೇಗೆಂದು ಯೋಚಿಸುತ್ತಿದ್ದೆ. ಹಿಂದಿನ ದಿನವಷ್ಟೇ ಬಿಡುಗಡೆಯಗಿದ್ದ, 'ಮಂಗಲ್ ಪಾಂಡೆ' ನೋಡುವ ಎಂದು ಪತ್ರಿಕೆಯಲ್ಲಿದ್ದ, ಮಲ್ಟಿಪ್ಲೆಕ್ಸೊಂದಕ್ಕೆ ಫೋನಾಯಿಸಿದೆ. ನನ್ನ ಅದೃಷ್ಟಕ್ಕೆ ಸಂಜೆ ೪.೩೦ ರ ಪ್ರದರ್ಶನಕ್ಕೆ ಟಿಕೆಟ್ ದೊರೆಯಿತು.

ಇನ್ನು ಚಿತ್ರದ ಬಗ್ಗೆ ಹೇಳಬೇಕು. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಈ ಚಿತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ನನ್ನ ಮಟ್ಟಿಗಂತೂ ಇದು ನಿಜ. 'ಭಾವನಿ ಭಾವೈ'ನಂತ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕೇತನ್ ಮೆಹ್ತಾ ಹೀಗೇಕೆ ಮಾಡಿದರು ಎನಿಸಿತು. ಮೊದಲಿಗೇ ಹೇಳಿಬಿಡುತ್ತೇನೆ, ಇದು 'ಲಗಾನ್'ನ ಮುಂದುವರೆದ ಭಾಗದಂತಿದೆ! ಹಾಡುಗಳು ಅನವಶ್ಯಕವಾಗಿ ತುರುಕಲ್ಪಟ್ಟಿವೆ. ನಾಯಕಿ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಇದು ನಾಯಕನ ಪಾತ್ರದ ಬಗ್ಗೆಯೂ ನಿಜ.

'ಚಿತ್ರಕ್ಕೆ ಸಾಕಷ್ಟು ಸಂಶೋಧನೆಯನ್ನೂ ಮಾಡಿದ್ದೇವೆ' ಎಂದು ಸಂದರ್ಶನವೊಂದರಲ್ಲಿನ ಅಮೀರನ ಮಾತು ನೆನಪಾಗಿ, ಸಂಶೋಧನೆ ನಿರೀಕ್ಷಿತ ವಲಯಗಳಲ್ಲಿ ನಡೆದಿಲ್ಲ ಎನಿಸಿತು. ಉದಾಹರಣೆಗೆ, ಕಂಪನಿ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ, ಮಂಗಳನ ಹಿನ್ನೆಲೆ ಇತ್ಯಾದಿ. ಮಂಗಳನ ಹಿನ್ನೆಲೆಯು ನಿರ್ದೇಶಕರ ಫೋಕಸ್ ಆಗಿಲ್ಲದಿರಬಹುದು. ಆದರ ಚಿತ್ರದಲ್ಲಿಯೇ ತೋರಿಸಿರುವಂತೆ, ದಂಗೆಯ ಅನೇಕ ನಿರ್ಧಾರಗಳನ್ನು ತೆಗೆದುಕೊಂಡದ್ದು, ಆತನ ಸಹವರ್ತಿ. ನಮಗೆ ಇತಿಹಾಸ ಪುಸ್ತಕಗಳಿಂದ ತಿಳಿದು ಬರುವುದಕ್ಕಿಂತ ಹೆಚ್ಚಿನದೇನು ಇಲ್ಲಿ ಕಾಣುವುದಿಲ್ಲ.

ವೇಷ-ಭೂಷಣಗಳ ಬಗ್ಗೆ ಬಹಳ ಹೆಚ್ಚಿನ ಗಮನವನ್ನೇ ಹರಿಸಲಾಗಿದೆ!!! ನನಗೆ ಆಶ್ಚರ್ಯ ಹುಟ್ಟಿಸಿದ್ದು, ಈ ದಿನಗಳಲ್ಲೂ ಮೈ ತುಂಬ ಉಡಲಿಲ್ಲದೆ, ಕೊಳೆತು ನಾರುವ ಚಿಂದಿಗೆ ಬಹಳ ಹತ್ತಿರವಾದ ಬಟ್ಟೆಗಳನ್ನು ತೊಡುವ ಜನರೇ ಹೆಚ್ಚಿರುವ ಈ ದೇಶದಲ್ಲಿ, ೧೫೦ ವರ್ಷಗಳ ಹಿಂದೆ, ಪಾಮರನಿಂದ ಬಲ್ಲಿದನ ವರೆಗೆ ಆ ದಿನಗಳಲ್ಲಿ ಅಷ್ಟು ಶುಭ್ರವಾಗಿರುತ್ತಿದ್ದವೇ ವಸ್ತ್ರಗಳು?

ಊರಿನ ಮುಖ್ಯ ರಸ್ತೆಯ ಸೆಟ್ ಮಾತ್ರ ಚೆನ್ನಾಗಿದೆ.

ಚಿತ್ರವನ್ನು ನೋಡಿ ಹೊರಬಂದ ನಂತರ ನನಗನಿಸಿದ್ದು, ಅಮೀರ್‍ ಹಿಂದೆ ಕೈತಪ್ಪಿದ ಆಸ್ಕರನ್ನು ಈಗ ದಕ್ಕಿಸಿಕೊಳ್ಳಲು ಮತ್ತೊಂದು ಚಿತ್ರ ಮಾಡಿದ್ದಾರೆಂದು!

~.~
  • Rohit ರವರ ಬ್ಲಾಗ್
  • Login or register to post comments
  • 888 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2005 - 2:41am — Appi

Oscarಗೋಸ್ಕರ ಮಾಡಿದ ಚಿತ್ರ!

Appi's picture

ನಾನಂತು ಈ ಚಿತ್ರ ನೊಡೊ ಶ್ರಮ ಪಡಲಿಲ್ಲ್ಲ - ಆದರೆ trailorಗಳನ್ನ ನೋಡಿದಿನಿ.

ಯಾರೊ ಸ್ನೇಹಿತ joke ಮಾಡ್ತಿದ್ದ "ಏ, oscarಗೋಸ್ಕರ ಮಾಡಿದ್ ಪಿಚ್ಚರ್ ಅಂತೆ ಮಗ!" ಅಂತ Eye-wink

ರೋಹಿತ್'ರವರು ಹೇಳಿದ ಉಡುಪುಗಳ ವಿಶಯಕ್ಕೆ ಬಂದರೆ - ನನಗೆ ದೇವದಾಸ್ ಚಿತ್ರ ನೆನಪಿಗೆ ಬಂತು - ಅದರಲ್ಲು ಹೀಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2005 - 12:56am — ಶ್ಯಾಮ ಕಶ್ಯಪ

ಹೌದು.. trailerಗಳನ್ನ ನೋಡಿದರೆ ಹಾಗೇ ಅನ್ನಿಸತ್ತೆ. ಎಷ್ಟು ಕಲರ್ ಕಲರ್ ಆಗಿ

ಶ್ಯಾಮ ಕಶ್ಯಪ's picture

ಹೌದು.. trailerಗಳನ್ನ ನೋಡಿದರೆ ಹಾಗೇ ಅನ್ನಿಸತ್ತೆ. ಎಷ್ಟು ಕಲರ್ ಕಲರ್ ಆಗಿದೇ ಅಂದ್ರೆ ಒಳ್ಳೆ ಪಿಕ್‍ನಿಕ್‍ಗೆ ಹೋದ ಅನುಭವವಾಗತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2005 - 2:57am — hpn

ಒಳ್ಳೆಯ ಅಬ್ಸರ್ವೇಶನ್

hpn's picture

ಈ ದಿನಗಳಲ್ಲೂ ಮೈ ತುಂಬ ಉಡಲಿಲ್ಲದೆ, ಕೊಳೆತು ನಾರುವ ಚಿಂದಿಗೆ ಬಹಳ ಹತ್ತಿರವಾದ ಬಟ್ಟೆಗಳನ್ನು ತೊಡುವ ಜನರೇ ಹೆಚ್ಚಿರುವ ಈ ದೇಶದಲ್ಲಿ, ೧೫೦ ವರ್ಷಗಳ ಹಿಂದೆ, ಪಾಮರನಿಂದ ಬಲ್ಲಿದನ ವರೆಗೆ ಆ ದಿನಗಳಲ್ಲಿ ಅಷ್ಟು ಶುಭ್ರವಾಗಿರುತ್ತಿದ್ದವೇ ವಸ್ತ್ರಗಳು?

ಒಳ್ಳೆಯ ಅಬ್ಸರ್ವೇಶನ್, ರೋಹಿತ್ Smiling ನೋಡಿದ್ರಾ, ಬಾಲಿವುಡ್‌ನವರು ಚಿತ್ರದ ಧೂಮ್ ಧಾಮ್ ಮಾಡಹೋಗಿ ಸತ್ಯಕ್ಕೆ ಎಷ್ಟು ದೂರವಾಗುತ್ತಾರೆ ಅಂತ?

ಪೀರಿಯಡ್ ಸಿನಿಮಾ ನೋಡಬೇಕೆಂದರೆ ಅಕಿರಾ ಕುರೋಸಾವಾರವರ ಚಿತ್ರ ನೋಡ್ಬೇಕು. ಅವರ ಯೊಜಿಂಬೊ, ರಾನ್, ಕಗೆಮುಶ ಎಲ್ಲವೂ ಕಲಾತ್ಮಕವಾಗಿಯೂ ನಂಬುವಂತೆಯೂ ಇವೆ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2005 - 9:10pm — pavanaja

ಉ.ಪ್ರ.ದಲ್ಲಿ ಚಿತ್ರಕ್ಕೆ ವಿರೋಧ

pavanaja's picture

ಈ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ಅಂತರಜಾಲದಲ್ಲಿ ಓದಿದೆ. ಮಂಗಲ ಪಾಂಡೆ ಹುಟ್ಟಿದ ಊರಿನಲ್ಲಂತೂ ಈ ಚಿತ್ರ ಬಿಡುಗಡೆಯಾಗಲಿಲ್ಲ. ಜನರ ಪ್ರತಿಭಟನೆ ಅಷ್ಟು ಜೋರಾಗಿತ್ತು.

ಸಿಗೋಣ,
-ಪವನಜ

-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಗಾಳಿಪಟ" ಹಾರಿಸಬಹುದು.......!!!
  • ಮಂಗಳನ ಕಾಟ
  • ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
  • ಜಗ್ಗೇಶ್ ಚಿತ್ರ
  • ಸವಿನೆನಪುಗಳು ಬೇಕು ... ಸವಿಯಲೇ ಬದುಕು...
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator