ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ravikreddy ರವರ ಬ್ಲಾಗ್

ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

April 11, 2008 - 6:59am — ravikreddy

ಸ್ನೇಹಿತರೆ,

ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ ಇಲ್ಲದ, ಕೇವಲ ದುಡ್ಡು-ಜಾತಿ-ಮತವೆ ಗರಿಷ್ಠ ಯೋಗ್ಯತೆಯಾಗಿ ಹೊಂದಿರುವ ಜನರು ಈ ಬಾರಿ ಬಹುಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳಾಗಲಿದ್ದಾರೆ. ಬೆಂಗಳೂರಿನಲ್ಲಂತೂ ಚುನಾವಣಾ ವೆಚ್ಚದ ಮಿತಿಯಾದ ಹದಿನೈದು ಲಕ್ಷದ ಮಿತಿಯ ನೂರಕ್ಕೂ ಹೆಚ್ಚಿನ ಪಟ್ಟು ಹಣವನ್ನು ಗಣಿಗಾರಿಕೆಯ ಮತ್ತು ರಿಯಲ್ ಎಸ್ಟೇಟಿನ ಕಪ್ಪುಹಣ ಹೊಂದಿರುವವರು ಹರಿಸಲಿದ್ದಾರೆ. ಇದು ಸೃಷ್ಟಿಸಲಿರುವ ಭವಿಷ್ಯ ಹೀನಾಯವಾದದ್ದಾಗಿರುತ್ತದೆ. ನ್ಯಾಯ-ನೀತಿ-ಮೌಲ್ಯ-ಅರ್ಹತೆಗಳ ಮೇಲೆ ನಡೆಯದ ಈ ಚುನಾವಣೆ ನಮಗೆ ಮಾತ್ರವಲ್ಲ ನಮ್ಮ ಮಕ್ಕಳಿಗೂ ನಿಕೃಷ್ಟರನ್ನು ನಾಯಕರನ್ನಾಗಿ ದಯಪಾಲಿಸಲಿದೆ.

ಇದಕ್ಕೆ ನಮ್ಮ ಉತ್ತರವೇನು?

ಈಗ ತಾನೆ ನನ್ನ ಉದ್ದೇಶ ಮತ್ತು ಯೋಜನೆಯನ್ನು ಐಟಿ ಕ್ಷೇತ್ರದಲ್ಲಿನ ನನ್ನ ಸಹಬಾಂಧವರಿಗೆ ತಿಳಿಯಪಡಿಸುವ ಮತ್ತು ಅವರ ಬೆಂಬಲ ಕೋರುವ ಇಂಗ್ಲಿಷ್ ಲೇಖನವನ್ನು www.ravikrishnareddy.com ವೆಬ್‍ಸೈಟಿನಲ್ಲಿ ಏರಿಸಿದ್ದೇನೆ. ಬೆಂಗಳೂರಿನಲ್ಲಿ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ, ಭಾರತದ ಬೇರೆಲ್ಲ ಜನಸಮುದಾಯಕ್ಕಿಂತ ಹೆಚ್ಚಿನ ಶಿಕ್ಷಣ, ಆದಾಯ ಮತ್ತು ಆಧುನಿಕತೆಯಲ್ಲಿ ಬದುಕುತ್ತಿರುವ ಈ ವಿದ್ಯಾವಂತ ಸಮುದಾಯಕ್ಕೆ ಬರೆದ ಪತ್ರ ಇದು. ಈ ಸಮಯದಲ್ಲಿ. ನಿಮ್ಮೆಲ್ಲರ ತನು-ಮನ-ಧನದ ಸಹಾಯವನ್ನು ಕೋರುತ್ತಿದ್ದೇನೆ. ಇದು ನಮ್ಮೆಲ್ಲರ ಹೋರಾಟ.

(ಇದರ ಕನ್ನಡ ರೂಪ ಇಷ್ಟರಲ್ಲಿಯೆ ಪ್ರಕಟವಾಗಲಿದೆ.)

ಗೆಳೆಯರೆ, ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಡನೆ ಮತ್ತು ಸಮುದಾಯವರೊಡನೆ ಹಂಚಿಕೊಳ್ಳಿ. ಚರ್ಚಿಸಿ. ಕಾಲದ ವಿಷಮತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದರ ಸವಾಲನ್ನು ಸ್ವೀಕರಿಸುವ ಅವಕಾಶ ಮತ್ತು ಸಂದರ್ಭ ಎಲ್ಲರಿಗೂ ಬರುವುದಿಲ್ಲ. ಸಿನಿಕರಾಗದೆ, ಇನ್ನೂ ಕೆಡಲಿ ಎಂಬಂತಹ ಮಾನವದ್ವೇಷಿ ಭಾವನೆ ಇಲ್ಲದೆ, ನಮ್ಮ ಪಾಲಿಗೆ ಬಂದಿರುವ ಕರ್ತವ್ಯವನ್ನು ಪ್ರತಿಸಾರಿಯೂ ನಿರ್ವಹಿಸುವ ನೈತಿಕತೆಯನ್ನು ತೋರೋಣ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಂತೆ ಪ್ರಭುಗಳು ಎನ್ನುವುದನ್ನು ಮರೆಯದಿರೋಣ.

ಮುಂದಿನ ದಿನಗಳಲ್ಲಿ ಸ್ಪಷ್ಟ ಯೋಜನೆಗಳನ್ನು, ಯಾಕೆ ಮತ್ತು ಹೇಗೆ ಎನ್ನುವುದನ್ನು ವಿಷದವಾಗಿ ತಮ್ಮೊಡನೆ ಹಂಚಿಕೊಳ್ಳಲಿದ್ದೇನೆ. ದಯವಿಟ್ಟು ಈ ಸಂವಾದಕ್ಕೆ ತೆರೆದುಕೊಳ್ಳಿ.

ನಮಸ್ಕಾರ,
ರವಿ...

~.~
  • ravikreddy ರವರ ಬ್ಲಾಗ್
  • Login or register to post comments
  • 1029 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 11, 2008 - 10:12am — varunbhatbm

ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

varunbhatbm's picture

ರವಿಯವರೆ,
ಕರ್ನಾಟಕದ ಭ್ರಷ್ಟ ರಾಜಕಾರಣಿಗಳು ಕಾಯ್ಕೊಂಡಿದಾರೆ, ಚುನಾಯಿತರಾದ ಮೇಲೆ ಹಣ ನುಂಗೋಕೆ. ಪಾಪ ಅವರು ತಾನೆ ಹಾಕಿದ ಬಂಡವಾಳ ಎಲ್ಲಿಂದ ಹೊರತೆಗೀತಾರೆ, ಇರೋದು ಒಂದೇ ಬಿಸಿನೆಸ್, ಜನರನ್ನು ದೋಚೋದು.

ನೀವು ಮಾಡೋದಕ್ಕೆ ಎಲ್ಲ ಕನ್ನಡಿಗರ ಸಹಕಾರ ಇದ್ದೇ ಇರುತ್ತೆ.

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 10:33am — Sunil Jayaprakash

ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

Sunil Jayaprakash's picture

ರವಿಕೆರೆಡ್ಡಿ, ನಿಮ್ಮ ವೆಬ್ಸೈಟ್ ನೋಡಿದ ಮೇಲೆ ನನಗೆ ಎಷ್ಟು ಬೇಸರ ಆಯ್ತು ಅಂದ್ರೆ, ತಪ್ಪು ತಿಳೀಬೇಡಿ, ನನಗೆ ಮೈಯೆಲ್ಲ ಉರಿತಾ ಇದೆ (ನಿಜ, ಬೇಕಿದ್ದರೆ ಮತ್ತೊಮ್ಮೆ ಓದಿಕೊಳ್ಳಿ). ಅಲ್ಲಿ ರೀ, ನೀವು ಎಲೆಕ್ಷನ್ನಿಗೆ ನಿಲ್ತಾ ಇದ್ದೀರಾ. ನಿಲ್ಲಿ ಯಾರು ಬೇಡ ಅಂದಿದ್ದಾರೆ, ಆದರೆ ಕನ್ನಡಕ್ಕೆ ಕನಿಷ್ಠ ಸೌಜನ್ಯ ಬೇಡವೇ.

(ಇದರ ಕನ್ನಡ ರೂಪ ಇಷ್ಟರಲ್ಲಿಯೆ ಪ್ರಕಟವಾಗಲಿದೆ.)

ಎಷ್ಟು ಸುಲಭವಾಗಿ ಹೇಳಿಬಿಟ್ರೀ, ಈ ಮಾತನ್ನ. ನಿಮ್ಮ ಲೇಖನಗಳನ್ನು ಇಷ್ಟು ದಿನ ಓದಿ ಪ್ರೋತ್ಸಾಹಿಸಿದವರು ಇಂಗ್ಲೀಷಿನವರೋ, ಕನ್ನಡದವರೋ ? ಅಲ್ಲ ಕರ್ನಾಟಕದ ರಾಜಧಾನಿ ಬೆಂಗಳೂರಿನ ಅದರಲ್ಲೂ ಜಯನಗರವೋ, ಬಿಟಿಎಂ ನಿಂದಲೋ ನಿಲ್ತೀನಿ ಅಂದ್ರಲ್ಲ, ನಿಮ್ಮ ಪತ್ರವನ್ನು ಕನ್ನಡದಲ್ಲಿ ಮೊದಲು ಮಾಡಬೇಕಿದ್ದು, ನಿಮ್ಮ ನೈತಿಕೆ ಹೊಣೆಯಾಗಿತ್ತು. ಕರ್ನಾಟಕದಿಂದ ಎಲೆಕ್ಷನ್ನಿಗೆ ನಿಲ್ತಾ ಇಂಗ್ಲೀಷಿನಲ್ಲಿ ಪ್ರಚಾರ ಮಾಡುತ್ತಿದ್ದೀರಲ್ಲ, ಇದು ಯಾವ ರೀತಿಯ ಮೌಲ್ಯಾಗ್ರಹ ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 4:25pm — anivaasi

ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

anivaasi's picture

ರವಿಯವರೆ,
ನಿಮ್ಮ ಎದೆಗಾರಿಕೆ ಮತ್ತು ಅದರ ಹಿಂದನ ಒತ್ತಡವನ್ನು ಮೆಚ್ಚಬೇಕಾದ್ದೆ. ಬಹುಶಃ ನಿಮ್ಮ ಮೊದಲ ಸವಾಲು ಇಲ್ಲೇ ಶುರುವಾಗಿದೆ. Smiling
ಚುನಾವಣೆ, ರಾಜಕೀಯ, ಜನ ಸ್ಪಂದನ ಇವೆಲ್ಲಾ ತುಂಬಾ ಜಟಿಲವಾದ ವಿಷಯಗಳು. ತುಂಬಾ ಸುಲಭದಲ್ಲಿ ಕಪ್ಪು/ಬಿಳುಪಿನಂತೆ ನಿರ್ಧಾರವಾಗುವಂತವಲ್ಲ.
ಇದನ್ನು ಒಂದು ಪಯಣ ಎನ್ನುವಂತೆ ಭಾವಿಸಿಕೊಂಡರೆ ಸೋಲು, ಗೆಲುವಿಗಿಂತ ಅದು ಕೊಡುವ ಅನುಭವ ಸೂಕ್ಷ್ಮಗಳು ಮಿಗಿಲಾಗುತ್ತವೆ. ಅವುಗಳಿಂದ ಹೆಚ್ಚಿನ ಕೆಲಸ ಮಾಡುವುದು ಸುಲಭವಾಗುತ್ತದೆ ಅನಿಸುತ್ತದೆ.

ನಿಮಗೆ ಗೆಲುವಾಗಲಿ ಎಂದು ಹಾರೈಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 11:10pm — hamsanandi

ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

hamsanandi's picture

ರವಿ,
ಇಷ್ತು ದಿನದಿಂದ ನಿಮ್ಮನ್ನ್ಯ್ ನೋಡಿದ ನನಗೆ ನಿಮ್ಮ ಹೆಜ್ಜೆ ಆಶ್ಚರ್ಯವೇನೂ ತರಲಿಲ್ಲ! ಒಳ್ಳೆಯದಾಗಲಿ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 11, 2008 - 11:28pm — sritri

ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

sritri's picture

ರವಿ ರೆಡ್ಡಿಯವರೇ, ಶುಭಾಶಯಗಳು. ವಿದ್ಯಾವಂತರಿಗೆ ರಾಜಕೀಯ ಕ್ಷೇತ್ರ ಆಗಿಬರಲ್ಲ ಅನ್ನುವ ನಂಬಿಕೆ ನಿಮ್ಮಿಂದ ಸುಳ್ಳಾಗಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್‌ನಲ್ಲಿಯ ಬುಲೆಟ್
  • ಐಟಿ ಜನರು ಸ್ವಾರ್ಥಿಗಳು ಮತ್ತು ಸ್ವಂತದ್ದನ್ನು ಮಾತ್ರವೆ ಯೋಚಿಸುವವರು
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
  • ನಾವು ಹಾಗೂ ನಮ್ಮ ಸಂಪದ
  • ಕೇದಗೆ ಫಾಂಟಿನಲ್ಲಿ "ಇಳಿ"(ೕ) ಏತ್ವ ಇಲ್ಲದ ಐತ್ವ(ೖ) ಮತ್ತು ೠ(ೄ)
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator