ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rameshbalaganchi ರವರ ಬ್ಲಾಗ್

" ಇವ ನಮ್ಮವ ಇವ ನಮ್ಮವನೆಂದೆಣಿಸಯ್ಯಾ"

"ಅರಿತೂ ಅರಿಯೆನೆಂದೆಂಬವರನೆಚ್ಚರಿಸಿ"

"ಭಿಷ್ಟಿ ಪೊಡೇ ಟಪುರ್ ಟುಪುರ್"

June 3, 2008 - 10:13pm — rameshbalaganchi

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು.

ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು.

ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!. ಇಲ್ಲಿ ತೀರ್ಥಳ್ಳೀಲಿ ಏಪ್ರಿಲ್ ತಿಂಗ್ಳಲ್ಲಿ ಸ್ವಲ್ಪ ಮುಖಹಾಕಿ,"ತಡೀರಿ, ಬರ್ತೀನಿ" ಅಂದಿದ್ದೆ ಅದೆಲ್ಲಿಗ್ಹೋಯ್ತೋ? ಹೆಚ್ಚಿನಂಶ ಮಲೆನಾಡ ಅಡಿಕೆ ಬೆಳೆಗಾರ್ರ ಹಿಡಿಶಾಪಕ್ಕೆ ರೋಸಿ ಎಲ್ಲೋ ಗುಳೇ ಹೋಗಿರ್ಬೇಕು.
ಬೆಂಗ್ಳೂರು ಬೇಡ ಅಂತ ಬಯಸಿ ಬಯ್ಸಿ ನಾನು ಇಲ್ಲಿಗೆ ಬಂದಾಗ ಏನು ಜಲಸಿರಿ!! ಅಬ್ಬಾ ನೆನಸ್ಕೊಂಡ್ರೆ ಮೈಯೆಲ್ಲ ಪುಳಕ ಬರತ್ತೆ! ನನ್ನ ಬಾಲ್ಯಕಾಲದ ಅನೇಕ ನೆನೆಪುಗ್ಳು ಮಳೆ, ಪ್ರವಾಹ, ಮಳೆನೀರಿನ ಸದ್ದು, ಕೊಚ್ಚೆರಾಡಿ ಇವುಗ್ಳ ಜೊತೇನೇ ತೆಕ್ಕೆಯಾಗಿವೆ. ಬಾಲ್ಯಕಾಲದಲ್ಲಿ ಶಿವಮೊಗ್ಗಾದಲ್ಲಿ ಎಷ್ಟು ಮಳೆ ಬರಿತ್ತು ಅಂದ್ರೆ ಹೇಳೋದೇ ಬೇಡ. ದಿನ ಬಿಟ್ದಿನ ಶಾಲೆಗೆ ರಜೆ ಇರ್ತಿತ್ತು. ನದಿ ದಡ್ದಲ್ಲಿ ನಿಂತು ದಡ ಕೊರೀತಾ ಕೆಂಪು ರಾಡಿಯಾಗಿ ಹರಿಯೋ ತುಂಗೆ ನೋಡಿದ್ರೆ ಅದ್ಯಾವ ಪುಣ್ಯಾತ್ಮ "ತುಂಗಾ ಪಾನಂ" ಅಂದ್ನೋ ಅನ್ಸೋದು. ನಮ್ಮ ಮನೆಯ ಹತ್ರಾನೇ ಇದ್ದ ಒಂದು ದೊಡ್ಡ ಮೋರಿ- ವೈತರಣಿ ಅಂತ್ಲೇ ಕರೀತಿದ್ವಿ ಅದನ್ನ- ತುಂಬಿ ನೀರೆಲ್ಲ ಅಕ್ಕ ಪಕ್ಕದ ವಠಾರಕ್ಕೆ ನುಗ್ಗಿ ಒಳ್ಳೇ ಫಜೀತಿ. ನಮ್ಮೂರ ದೇವರ ಅರ್ಚಕರಾದ ರಾಂಭಟ್ರು ತಮ್ಮ ಧಡೂತಿ ಹೆಂಡ್ತೀನ ಅನಾಮತ್ತಾಗಿ ತೋಳಲ್ಲಿ ಬಳಸಿ ಎತ್ಕೊಂಡು ಸೊಂಟಮಟ್ಟ ನೀರಲ್ಲಿ ಅವ್ರನ್ನು ಸುರಕ್ಷಿತ ಜಾಗಕ್ಕೆ ಕರ್ಕೊಂಡ್ಹೋಗ್ತಿದ್ದ ದೃಶ್ಯ ಯಾವತ್ಗೂ ಮರ್ಯೋದೇ ಇಲ್ಲ. ಸೀಗೇಹಟ್ಟಿ ಅನ್ನೋ ಶಿವಮೊಗ್ಗದ ಎಕ್ಸ್‌ಟೆನ್ಶನ್ ಸದಾ ಮಳೆಗಾಲದಲ್ಲಿ ಸುದ್ದಿಯಲ್ಲಿರ್ತಿತ್ತು. ನಾಲ್ಕಾಣೆ ಕೊಟ್ರೆ ಸಾಕು ಪ್ರೈವೇಟ್ ಬಸ್ನೋರು ಗಿಟ್ಟಿಗಿರಿದು ಜನತುಂಬ್ಕೊಡು ಸೀಗೇಹಟ್ಟಿ, ಹರಕೆರೆ, ಗಾಜನೂರು ಎಲ್ಲ ಕಡೆ ಪ್ರವಾಹದ ದೃಶ್ಯ ತೋರ್ಸೋರು.

ಈ ಕಡೆ ತೀರ್ಥಳ್ಳಿಗೆ ಬಂದ್ರೂ ಅಷ್ಟೆ! ಕುರುವಳ್ಳಿ,ಶಿವರಾಜಪುರ, ತುಂಗಾ ಕಾಲೇಜಿನ ಬಳಿ ಡಾಕ್ಟರ್ ರಂಗಪ್ಪನವರ ತೋಟದ ಹತ್ರ ರಸ್ತೆ ಮೇಲೆ ಮೂರಡಿ ನೀರಿರ್ತಿತ್ತು. ಕಾಲೇಜಿಗೆ ನಡ್ಕಂಡು ಹೋಗೋದೆಂಥ ಮಜ!! ದನಗೋಳು ಮಳೆಯ ಜೊತೆಗೆ ರುಮ್ ರುಮ್ ಅಂತ ಅಡ್ಡಾದಿಡ್ಡಿ ರಾಚೋ ಗಾಳಿ. ಬರೀ ಕೊಡೆ ಹಿಡ್ದೋರ ಕತೆಯಂತೂ ದೇವ್ರಿಗೇ ಪ್ರೀತಿ. ಕೊಡೆ ಪೂರ್ತಿ ತಿರುಗಾಮುರುಗಾ ಆಗಿ ನಾವು ಅದನ್ನ ಹೆಣಗಿ ಸರಿ ಮಾಡ್ಕಳೋ ಹೊತ್ಗೆ ಮೈಯೆಲ್ಲ ತೊಯ್ದು ತೊಪ್ಡಿಯಾಗಿರ್ತಿತ್ತು. ಒಂದ್ಸಾರಿ ಅಂತೂ ಮಳೆ ಯಾವಪರಿ ಹೊಯ್ದಿತ್ತು ಅಂದ್ರೆ ಗದ್ದೆತುಂಬಿ ಬತ್ತದ್ ಪೈರೆಲ್ಲ ಮೂರಡಿ ಮಳೆನೀರಲ್ಲಿ ಮುಳ್ಗಿರ್ತಿತ್ತು. ರಸ್ತೆ ಬಂದ್ ಆಗಿ ಮೂರು ದಿನ ಕಾಲೇಜಿಗೆ ರಜಾ. ನಾವು ಕೆಲವು ಪಡ್ಡೆಗಳು ದಿನವಿಡೀ ನದೀದಡದಲ್ಲಿ ಅಡ್ಡಾಡ್ತಿದ್ವಿ. ಎಲ್ಲೆಲ್ಲೂ ನೆಲ ನೀರುಕುಡ್ದು ಹೆಚ್ಚಾಗಿ ಜಲ ಒಡೆದು ರಸ್ತೆ, ಗದ್ದೆಯ ಬದು, ಕಾಲುವೆಗಳಲ್ಲಿ ನೀರೋನೀರು. ಒಂದ್ಸಾರಿ ಅಂತೂ ನಮ್ಮ ಮನೆ ಹಿಂದಿನ ಆರಡಿ ತಗ್ಗು ಪೂರ್ತಿ ತುಂಬಿ ನಮ್ಮ ಹಿತ್ಲಿಗೇ ಬಂದಿದ್ಲು ತುಂಗೆ. ನನ್ನ ಗೆಳೆಯರೆಲ್ಲ ಬಾರೋ ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ ನೋಡ್ಕೊಂಬರೋಣ ಅಂದ್ರೆ ನಂಗೆ ಹೆಂಡ್ತಿ ಜೊತೆ ಸೇರಿ ಮನೆಯಲ್ಲಿ ತುಂಬಿ,ಸೋರಿ ಸೇರ್ಕೊಂಡ ನೀರು ಮೊಗ್ದೂಮೊಗ್ದೂ ಹೊರ್ಗೆ ಹಾಕೋದೇ ಕೆಲ್ಸ ಆಗಿತ್ತು. ಹರವಿದ ಬಟ್ಟೆಗಳಲ್ಲಿ ನೀರಿನ ಪಸೆ ಆರದೆ ಬಿಳಿ ಬನಿಯನ್‌ಗಳೆಲ್ಲ ಒಳ್ಳೇ ಕಪ್ಪು ಸಾರಿಸೋ ಬಟ್ಟೆ ಥರ ಆಗಿರ್ತಿದ್ವು. ಪಕ್ಕ ಪಕ್ಕದಲ್ಲಿ ಹರವಿದ್ದ ಬಟ್ಟೆಗಳು ಬೂಸ್ಟು ಬಂದು ಒಂದು ಬಟ್ಟೆ ಎಳೆದ್ರೆ ನಾಕು ಬಟ್ಟೆ ಬರೋವು.
ನೀರೊಲೆ ಕಾಯ್ಸೋಕ್ಕೆ ಅಂತ ತರಿಸಿ ರಾಶಿ ಹಾಕಿದ್ದ ಮರದ ಹೊಟ್ಟನ್ನೆಲ್ಲ ತುಂಗೆ ಕದ್ದೊಯ್ದಿದ್ಳು. ಬಾವೀಲಿ ಇಣ್ಕಿ ನೋಡಿದ್ರೆ ನೀರು ಕೈಲೇ ತುಂಬ್ಕಳೋ ಮಟ್ಟಕ್ಕೆ ಬಂದಿರ್ತಿತ್ತು. ಇಷ್ಟ್ರ ಮೇಲೆ ದಿನಾ ಕೋತಿಗ್ಳ ಕಾಟ. ಗಂಡಸ್ರಿಗೆ ಮಾತ್ರ ಹೆದ್ರೋ ಗಡವಕೋತಿಗ್ಳು ಮನೆ ಗಂಡಸ್ರೆಲ್ಲಾ ಕೆಲ್ಸಕ್ಕೆ ಹೋದ ಹೊತ್ತು ನೋಡ್ಕೊಂಡು ಮನೆ ಹೆಂಚುತೆಗ್ದು ಹೆಂಗಸ್ರಿಗೆ ಕೇರೇ ಮಾಡ್ದೆ ಮನೇಲಿದ್ದ ದಿನಸೀನೆಲ್ಲಾ ಸೂರೆ ಮಾಡೋವು. ಒಂದು ಬೇಸಿಗೇಲಿ ಒಂದು ಮನೆಯ ಹೆಂಚು ತೆಗ್ದು ಅಕ್ಕಿ, ಬೇಳೆ, ಬೆಲ್ಲ ಎಲ್ಲ ಕೇಜಿಗಟ್ಳೆ ಹೊರಚೆಲ್ಲಿದ್ವು. ನೆನಪಾಗಿದ್ದು ಆಂಡಯ್ಯನ ಪದ್ಯ.

"ಅಡಱ್ದೇರಿ ಕೋಡಗಂಗಳ್
ಕಡುಪಿಂದೀಡಾಡೆ ಗೞಿಲನೊಡೆದೆಳಗಾಯಿಂ
ದೆಡೆವಿಡದೊಸರ್ವೆಳನೀರ್ಗಳ್
ಮಡುಗೊಂಡೋವುತ್ತುಮಿರ್ಪುವಲ್ಲಿಯ ಬನಮಂ"

ಗಂಟೆಗಟ್ಟಲೆ ಸುರಿದ ಮುಸಲಧಾರೆ ನಿಂತರೂ ಮರದಿಂದ ಉದುರುವ ಮಳೆಹನಿಗಳದ್ದೇ ಮತ್ತೊಂದು ಮಳೆ!! ಹಾಂ, ಮೊನ್ನೆ ಮೊನ್ನೆ ಅಕಸ್ಮಾತ್ತಾಗಿ ಒಂದು ವೆಬ್‌ಸೈಟ್ ನೋಡಿದೆ. ಅದು ಇರುವುದು ಕೇವಲ ಮಳೆಹನಿಯ ಸದ್ದು ಕೇಳಲು. ನನ್ನ ಮನಸ್ಸು ನಾಸ್ಟಾಲ್ಜಿಕ್ ಆಗಿ ಹಿಂದೆ ಹೋಗುತ್ತದೆ. ಶಿವಮೊಗ್ಗಾದ ಸೋರುವ ಹಳೆಯ ಹೆಂಚಿನ ಮನೆಯಲ್ಲಿದ್ದೆವು. ಮಳೆಗಾಲದಲ್ಲಿ ಮಲಗೋ ಜಾಗವಿಲ್ಲದ ಹಾಗೆ ಎಲ್ಲೆಂದರಲ್ಲಿ ಸೋರೋ ಮಳೆಹನಿ. ಅಮ್ಮ ಇದ್ದಬದ್ದ ಕೊಳದಪ್ಪಲೆ, ಅರುಕಿನ ಚೆಟ್ಟಿ, ಇಡ್ಳಿ ಪಾತ್ರೆ, ತೂಕ್ಕು ಹೀಗೆ ನಾನಾ ಥರದ ಪಾತ್ರೆಗಳನ್ನ ಅಟ್ಟದಿಂದಿಳಿಸಿ ಎಲ್ಲ ಕಡೆಗಿಟ್ಟರೆ ನಮ್ಮ ಮನೆ ಧಿಡೀರ್ ರಂಗಮಂಟಪ ಆಗೋದು. ನುರಿತ ಜಲತರಂಗವಾದಕನಂತೆ ಮಳೆ ಟಪ್, ಟಮ್, ಟಿಪ್, ಟಿಮ್, ಡಪ್ ಢಮ್ ಅಂತ ನಾನಾ ಬಗೆಯಲ್ಲಿ ನುಡಿಸೋದು. ಕುತ್ತಿಗೆಯಲ್ಲಿ ಬೊಂಬಿನ ದೊಂಟೆ ಕಟ್ಕೊಂಡು ತಿರುಗೋ ತುಡುಗು ದನಗಳ ಕುತ್ತಿಗೆ ಹಾಗೆ ನಾನಾ ಸದ್ದು ಹೊರಡುತ್ತಿತ್ತು. ನೀವೂ ಆ ಸದ್ದು ಕೇಳಬೇಕೆ?. ಜಪಾನಿನ ಒಂದು ದೇವಾಲಯದಲ್ಲಿ ಹನಿಯುವ ನೀರಿನ ಸದ್ದು ಕೇಳುತ್ತಾ ಮೈಮರೆಯುವ ಸುಖಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

http://aqua-scape.jp/top_en.html

  • ಆಂಡಯ್ಯ
  • ನೀರು
  • ಮಳೆ
~.~
  • rameshbalaganchi ರವರ ಬ್ಲಾಗ್
  • Login or register to post comments
  • 348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 4, 2008 - 1:41pm — Prashanth H J

ಉ: "ಭಿಷ್ಟಿ ಪೊಡೇ ಟಪುರ್ ಟುಪುರ್"

Prashanth H J's picture

ನಿಜ, ನಮ್ಮ ಮನೆ ಹತ್ರ ಎಷ್ಟು ನೀರು ಬಂದಿದೆ ಅಂಥಾ ನೋಡೋಕೆ ನನ್ನ ಬೇರೆ ಏರಿಯಾದ ಗೆಳೆಯರೆಲ್ಲಾ ನನ್ನ ಮನೆಗೆ ಬರ್ತಿದ್ರು ಮಳೆಗಾಲದಲ್ಲಿ, ನಾನು ಸೀಗೆಹಟ್ಟಿಯಲ್ಲಿ ಇದ್ದದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 2:01pm — veena

ಉ: "ಭಿಷ್ಟಿ ಪೊಡೇ ಟಪುರ್ ಟುಪುರ್"

veena's picture

veena.

ಲೇಖನ ಓದಿ ತವರಿನ ನೆನಪು ಹೆಚ್ಚಾಯಿತು. ಶಿವಮೊಗ್ಗಕ್ಕೆ ಹೋಗಿ ಬಂದು ಇನ್ನೂ ತಿಂಗಳಾಗಿಲ್ಲ. . ನಮ್ಮ ಅಜ್ಜಿ ಮನೆ ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ. ಕುಂಬಾರಗುಂಡಿಗೆ ನೀರು ಬಂದು ಕಾಲಿಗೆಲ್ಲಾ ಎರೆಹುಳ ಮೆತ್ತಿದ್ದನ್ನು ನಾನಿಂದಿಗೂ ಮರೆಯಲಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 8:18pm — rameshbalaganchi

ಉ: "ಭಿಷ್ಟಿ ಪೊಡೇ ಟಪುರ್ ಟುಪುರ್"

rameshbalaganchi's picture

ಅಪರೂಪಕ್ಕಾದ್ರೂ ಈಗ ಸೀಗೇಹಟ್ಟಿಯಲ್ಲಿ ಅಷ್ಟು ಪ್ರವಾಹದ ತೊಂದರೆ ಇರಲಾರದೇನೋ ಅಲ್ವಾ? ಸೀಗೇಹಟ್ಟಿ, ಕುಂಬಾರಗುಂಡಿ, ರಾಮಣ್ಣಶೆಟ್ಟಿಪಾರ್ಕ್, ಕೊಲ್ಲೂರಯ್ಯಕೇರಿ, ದೊಡ್ಡಬ್ರಾಹ್ಮಣರ ಬೀದಿ ಎಲ್ಲ ಕಡೆ ಇರುವ ಜನಗಳ ಬಗ್ಗೆ ಆ ದಿನಗಳಲ್ಲಿ ನಮಗೆ ಆತಂಕ ಆಗ್ತಿತ್ತು.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 4:57pm — veena

ಉ: "ಭಿಷ್ಟಿ ಪೊಡೇ ಟಪುರ್ ಟುಪುರ್"

veena's picture

veena.

ಪ್ರವಾಹದ ಮಾತು ಹಾಗಿರಲಿ, ಮಂಟಪ ತುಂಬುವುದೇ ಕಷ್ಟವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:10pm — rameshbalaganchi

ಉ: "ಭಿಷ್ಟಿ ಪೊಡೇ ಟಪುರ್ ಟುಪುರ್"

rameshbalaganchi's picture

ಸಾರಿ ವೀಣಾ, ಏನು ಮಾಡಿದರೂ ಪ್ರಶಾಂತ್ ಅವರಿಗೆ ಬರೆದ ಪ್ರೈತಿಕ್ರಿಯೆ ನಿಮಗೆ ಹೋಗುತ್ತಿದೆ. ಯಾಕೋ, ತಿಳಿಯವಲ್ಲದು!

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 7:08pm — rameshbalaganchi

ಉ: "ಭಿಷ್ಟಿ ಪೊಡೇ ಟಪುರ್ ಟುಪುರ್"

rameshbalaganchi's picture

ನೋಡಿ, ಶಿವಮೊಗ್ಗಾ ಬಿಟ್ಟು ಎಷ್ಟೋ ವರ್ಷಗಳ ಮೇಲೆ ನಿಮ್ಮೆಲ್ಲರ ಭೇಟಿ ಈ ಬರಹದ ಮೂಲಕ ಆಗಿದ್ದು ಸಂತೋಷ. Smiling. ಈಗ ಎಲ್ಲಿದ್ದೀರಿ, ಪ್ರಶಾಂತ್, ಏನು ಮಾಡ್ತಿದ್ದೀರಿ?

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
  • ಚಿಂಟು: ನಂಗೇನಿಷ್ಟ ಅಂದ್ರೆ...
  • ಅಂಬರಕ್ಕೆ ಹಾರಿತಯ್ಯೋ!!
  • ಝೆನ್ ಕತೆ: ೫: ಒಂದು ಕೈ ಚಪ್ಪಾಳೆ
  • ಸರ್ಪ್ರೈಸ್
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
  • ASHOKKUMAR
    ಉ: ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
    September 6, 2008 - 7:59pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 7:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 26 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator