ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಸಂಪದಿಗರಿಗೆ ವಿದಾಯ...
ಆತ್ಮೀಯ ಸಂಪದಿಗರಿಗೆ,
ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ.
ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸಾಹ ನೀಡಿದ ಹರಿಪ್ರಸಾದ ನಾಡಿಗ್, ಮೆಚ್ಚುಗೆ ವ್ಯಕ್ತಪಡಿಸಿದ ಸಂಪದಿಗರು, ಪ್ರತಿಕ್ರಿಯೆ ಬರೆದು ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿ.
ಮನಸ್ಸು ಬೇರೆ ಏನನ್ನೋ ಯೋಚಿಸುತ್ತಿದೆ. ಎಲ್ಲರನ್ನೂ ಬಂಧಿಸುವ ಎಳೆ ಹುಡುಕಾಟದಲ್ಲಿ ಇದೊಂದು ಗ್ಯಾಪ್ ಮಾತ್ರ.
ನಿಮ್ಮ ಪ್ರೋತ್ಸಾಹ ಹಾಗೂ ಪ್ರೀತಿಗೆ ಅನಂತ ಧನ್ಯವಾದಗಳು.
ಇಂತಿ
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 781 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಂಪದಿಗರಿಗೆ ವಿದಾಯ...
ನಿಮ್ಮಿಂದ ಬಹಳಷ್ಟು ನಿರೀಕ್ಷಿಸಿದ ನಮಗೆ ಖಿನ್ನತೆ ತರುತಿದ್ದೀರಿ ನೀವು...
ನಿಮ್ಮ ಶೈಲಿ ಅಪರೂಪ ಮತ್ತು ತುಂಬಾ ಮೋಹಕವಾಗಿತ್ತು.
ಉ: ಸಂಪದಿಗರಿಗೆ ವಿದಾಯ...
ದುಡುಕಿನ ತೀರ್ಮಾನ ಬೇಡ. ಬರೆಯುತ್ತಿರಿ.
*ಅಶೋಕ್
ಉ: ಸಂಪದಿಗರಿಗೆ ವಿದಾಯ...
ತೀರ್ಮಾನ ಪುನರ್ಪರಿಶೀಲಿಸಿ.
ಉ: ಸಂಪದಿಗರಿಗೆ ವಿದಾಯ...
ಯಾಕ್ರೀ ಪಲ್ಲವಿ,
ಏನಾಯ್ತ್ರೀ? ಆತುರದ ನಿರ್ಧಾರ ಬೇಡ ಕಣ್ರೀ!!!
ನಿಮ್ಮ ಬರವಣಿಗೆ ಮುಂದುವರೆಸಿರಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಸಂಪದಿಗರಿಗೆ ವಿದಾಯ...
ಯಾಕೆ ಪಲ್ಲವಿ ಏನಾಯ್ತು? ಈ ಬರಹ ತಮಾಷೆಗೆ ಅಂತ ಹೇಳಿ. ತುಂಬಾ ಖುಷಿಯಾಗುತ್ತೆ.
ಜಯಲಕ್ಷ್ಮೀ.ಪಾಟೀಲ್.
ಉ: ಸಂಪದಿಗರಿಗೆ ವಿದಾಯ...
ಯಾಕ್ರಿ ಪಲ್ಲವಿ? ಶ್ರಿಯಾ ತರ ಇದೀನ ಅಂತ ಮೊದಮೊದಲದರಲ್ಲಿ ಹೇಳಿಕೊಂಡು, ನಮ್ಮ ಹುಡುಗರ ದಂಡನ್ನೇ ಸೆಳೆದಿದ್ದ ನೀವು, ಹಿಂಗೆ ಇದ್ದಕ್ಕಿದ್ದಂತೆ ಹೊಂಟರೆ ಹೆಂಗ್ರಿ? ಮೊದಮೊದಲು ನಿಮ್ಮನ್ನು ಏನೋ ಸಣ್ಣ ಹುಡುಗಿ ಅಂತ ದೊಡ್ಡವರು ನೆಗ್ಲೆಕ್ಟ್ ಮಾಡಿದ್ದರೂ, ನಿಮ್ಮ ತಿಳಿವಳಿಕೆಯ ಬರವಣಿಗೆಗಳಿಗೆ ಎಲ್ಲರೂ ಮರುಳಾಗಿದ್ದು ಸುಳ್ಳಲ್ಲ.
ಸಂಪದದಲ್ಲಿ ಒಬ್ಬರು ಮರುನುಡಿದರೆ, ಹತ್ತು ಮಂದಿ ಸುಮ್ಮನೆ ಮೂಗರಂತೆ ಓದಿ, ಒಳ್ಳೆ ಬರಹಕ್ಕೆ ಒಳಗೊಳಗೇ ತಲೆದೂಗಿ ಹೋಗುವವರು. ನಿಮ್ಮ ಇಂತ ತೀರ್ಮಾನಕ್ಕೆ ಕಾರಣ ಆಗಿದ್ದಿರಬಹುದಾದ ಆ ಬರಹ ಕಾಣೆಯಾಗಿದೆ. :-(
ನಿಮ್ಮ ಈ ಬರಹ ನೋಡಿ, ಎಸ್ಟೊಂದು ಮಂದಿ ಇಸ್ಟಪಟ್ಟಿದ್ದಾರೆ.
ಸುಮ್ಮನೆ ನಿಮ್ಮ ತೀರ್ಮಾನವನ್ನು ಕೈ ಬಿಡಿ. ಬರೀತಾ ಇರಿ.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಸಂಪದಿಗರಿಗೆ ವಿದಾಯ...
ನಿಮಗೆ ಒಳ್ಳೆಯದಾಗಲಿ.
ಎಲ್ಲರನ್ನು ಬಂಧಿಸುವ ಎಳೆ ಹುಡುಗಾಟ ಮುಂದುವರಿಸಿ.
ಹಬ್ಬ ಕಳೆಯುವವರೆಗಾದರೂ ನಿಲ್ಲಬಾರದೇ?
-ಗಣೇಶ.
ಉ: ಸಂಪದಿಗರಿಗೆ ವಿದಾಯ...
ಪಲ್ಲವಿ ಯಾಕೆ ಹೋಗುತ್ತೀ? ಯಾರಾದರು ಮನಸ್ಸು ನೋಯಿಸಿದರ? ಅದು ನಮ್ಮ ದೇಶದಲ್ಲಿ ಸಾಮನ್ಯ ಅದರಲ್ಲೂ ಹೆಂಗಸರಿಗೆ ತುಂಬ ರೂಲ್ಸ್. ನೀನು ತುಂಬ ಜಾಣೆ , ತುಂಬ ಚಂದ ಇದ್ದೀ ಮತ್ತು ಪ್ರೀತಿ ಮಾಡುವ ತಂದೆ ತಾಯಿ ಇದಾರೆ. ಯಾಕೆ ಖಿನ್ನತೆ?
ನನ್ನ ಒಬ್ಬನೇ ಮಗನನ್ನು ಕಾಲೇಜ್ ಗೆ ಕಳಿಸಿದ ಮೇಲೆ, ನನಗೆ ಸಂತೋಷ ತಂದಿದ್ದು ನಿನ್ನ ಬರಹ ಮಾತ್ರ. ಈ ಪರ ದೇಶ ದಲ್ಲಿ ನೀನು ನನ್ನ ದುಖವನ್ನೆಲ್ಲ ಮರೆಸಿ ನನಗೆ ನಿನ್ನ ಬರವಣಿಗೆ ಯಿಂದ ತುಂಬ ಸಂತಸ ತಂದಿದ್ದೆ. ಈಗ ನಾನು ಸಂತಸ ಎಲ್ಲಿ ಕಂಡು ಕೊಳ್ಳಲಿ?
ಯಾರು ಏನೆ ಅಂದರು ಎಲ್ಲವನ್ನು ಮೆಟ್ಟಿ ನಿಂತು ಸಂತೋಷ ದಿಂದ ಇರು . ಬರೆಯುವುದು ನಿಲ್ಲಿಸಬೇಡ.
ಇಂಡಿಯಾ ದಲ್ಲಿ ಆದರೂ ಅಮೇರಿಕಾ ದಲ್ಲಿ ಆದರೂ ಕಚೇರಿ ನರಕವೇ. ಆದರೆ competitive ಆಗಿ ಎಲ್ಲವನ್ನು ಗೆಲ್ಲುತ್ತ ಹೋದರೆ ಅದರಲ್ಲಿ ಸತಂಸ ಸಿಗುತ್ತದೆ. ದೇವರಲ್ಲಿ ದಿನಾಲೂ ನಾನು ಕೇಳುವುದು ಏನೆಂದರೆ ನನ್ನನ್ನು ನನ್ನ ಮಗನನ್ನು ಕರ್ಮ ಯೋಗಿಗಳನ್ನಾಗಿ ಮಾಡಪ್ಪ ಎಂದು.
ದೇವರ ದಯೆಯಿಂದ ನೀನು ಯಾವ ಕಚೇರಿ ಗೂ ಹೋಗ ಬೇಕಾಗಿಲ್ಲ, ನಿನ್ನ ತಂದೆಯವರ ಬ್ಯುಸಿನೆಸ್ ಅನ್ನು ಕಲಿತು ಅದನ್ನು ಚೆನ್ನಾಗಿ ಬೆಳೆಸು ಎಂದು ಹಾರೈಸುತ್ತ ,
ನಿನ್ನ ಬರಹಗಳನ್ನು ನನ್ನ ಇಮೇಲ್ ಗೆ ಕಳಿಸು ಎಂದು ಕೇಳಿಕೊಳ್ಳುತ್ತಾ
biosaaf@yahoo.com
ಚಾರು ಸ್ಮಿತಾ ಆಂಟಿ
ಉ: ಸಂಪದಿಗರಿಗೆ ವಿದಾಯ...
Hey pallavi ,
Still april 1 too far.
sry was joking ...
Please dont go ,keep posting once in month at least.
I really shocked to read this thing from u, is it true that u r leaving?
ಉ: ಸಂಪದಿಗರಿಗೆ ವಿದಾಯ...
ಯಾಕ್ರೀ ಈ ಥರಾ ಶಾಕ್ ಕೊಡ್ತಿದೀರ? ಹೀಗೆ ಮಾಡ್ಬೇಡ್ರೀ ಪ್ಲೀಸ್...
ಕೀರ್ತಿ ಕಿರಣ್ ಎಂ
ಉ: ಸಂಪದಿಗರಿಗೆ ವಿದಾಯ...
ಪಲ್ಲವಿ,
ಮೊಗ್ಗಿನ ಮನಸು ಸಿನಿಮಾ ನೋಡಿ ಬಂದ್ಯಾ? ಮತ್ತ ನೀನೇನಾದ್ರು ಲವ್ ನ್ಯಾಗ ಬಿದ್ಯಾ.. ನಿನ್ನ ಹುಡುಗ ಪೊಸೆಸ್ಸಿವ್ವಾ???
ಏನ್ ತ್ರಾಸ್ ಐತಿ ನಿನಗ ಬರಿಯುದನ್ನ ಬಿಡಾಕ??????
ಅದು ಏನ ಇರಲಿ, ಅದನ್ನ ಬರಿಯವಾ ತಾಯಿ......
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಸಂಪದಿಗರಿಗೆ ವಿದಾಯ...
ಏನ್ರೀ, ನೀವು ಹೀಂಗ ಮಾಡುದ? ಸರಿಯಲ್ಲ ಬಿಡ್ರಿ. ಖಿನ್ನತೆ ಕಾರಣ ಅಲ್ಲ ಅಂತಿರಿ. ಅಂದ್ರ ನೀವು ಖಿನ್ನ ಆಗಿರಿ ಅಂತ ಆತು. ಚಿಯರ ಅಪ್ ಆಗ್ರಿ. ಮತ್ತ ಬರೀರಿ. ಎಷ್ಟ ಚೊಲೋ ಬರಿತಿದ್ರಿ. ಬಿಟ್ಟರ ಹ್ಯಾಂಗ? ಅಥವಾ ಮದ್ವಿ ಗಿದ್ವಿ ಗೊತ್ತಾಗಿ ಟೆಂಪೊರರಿ ಟೈಮ್ ಆಪ್ ತೊಗೊಳ್ಳಿಕತ್ತಿರೊ? ಏನರ ಇರ್ಲಿ. ಮತ್ತ ಬರಿಲಿಕ್ಕೆ ಶುರು ಮಾಡಿದ್ರ ಮರಿದಾ ತಿಳಸರಿ ಮತ್ತ. ಚಂದದ ಹುಡುಗಿ ಚೆಂದಾಗಿ ಬರ್ಕೊತ್ತ ಇದ್ದರ ಚಂದ.
ನಿಮ್ಮವ,
ಮಠ
ಉ: ಸಂಪದಿಗರಿಗೆ ವಿದಾಯ...
ಎನ್ ಆಯ್ತು ಪಲ್ಲವಿರವರೇ, ವಿದಾಯ ಹೆಳೋವಂತ ತೀರ್ಮಾನ ಯಾಕೆ?
samapada friends ಇದನ್ನ expect madiralilla..
ಗುರುಪ್ರಸಾದ್
ಉ: ಸಂಪದಿಗರಿಗೆ ವಿದಾಯ...
ಪಲ್ಲವಿ ಬಹಳ ಬುದ್ದಿವಂತೆ, ಈ ಗೌರಿ ಹಬ್ಬಕ್ಕೆ ನಮ್ಮೆಲ್ಲರಿಗು ಉಡುಗೊರೆ ಅಂತ ಈ ಆಸ್ಚರ್ಯದ ವಿಷಯ ಮುಂದಿಟ್ಟು ಬಹಳ ಸಂತಸ ಪಡ್ತಾಯಿದ್ದಾರೆ....!!
ದಯವಿಟ್ಟು ಎಂದಿನಂತೆ ಸಂಪದದಲ್ಲಿ ಸಂಪದಿಗರಾಗಿ....!!
-ಯುವಪ್ರೇಮಿ
ಉ: ಸಂಪದಿಗರಿಗೆ ವಿದಾಯ...
ಪ್ರಿಯ ಪಲ್ಲವಿ,
ನಮಸ್ಕಾರ. ಏನಿದು? ತಮಾಷೆಯಲ್ಲ ತಾನೇ? ಗೌರಿಗಣೇಶ ಹಬ್ಬದಲ್ಲಿ ಸಂಪದಿಗರಿಗೆಲ್ಲ "ಶಾಕ್" ಕೊಡ್ತಿದ್ದೀರಲ್ರಿ! ಇದು "ಹುಸಿಬಾಂಬ್" ಆಗಿದ್ದರೆ ಖುಶಿ. ನಿಜವಾದ ಬಾಂಬ್ ಆದರೆ ಮಾತ್ರ ನಮಗೆಲ್ಲ ತುಂಬಾ ಬೇಸರ. ಬರೆಯೋದನ್ನ ಬಿಟ್ಟು ನಿಮ್ಮ ಕೈಲಿ ಇರೋದಕ್ಕೆ ಸಾಧ್ಯನೇನ್ರಿ? ನಿಮ್ಮ ಬರೆಹಗಳ ಮೂಲಕ ನಮ್ಮೆಲ್ಲರನ್ನು ಬಂಧಿಸಿರುವ ನೀವು ಹೀಗೆ ಮಾಡಿದರೆ ಹೇಗೆ? ನಿಮ್ಮ ನಿರ್ಧಾರ ವಾಪಸ್ ತೆಗೆದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. Come on, please!
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಉ: ಸಂಪದಿಗರಿಗೆ ವಿದಾಯ...
http://dharwadpallavi.blogspot.com/
ಉ: ಸಂಪದಿಗರಿಗೆ ವಿದಾಯ...
ಲಿಂಕಿಗಾಗಿ ಥ್ಯಾಂಕ್ಸ್
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಸಂಪದಿಗರಿಗೆ ವಿದಾಯ...
ಇಲ್ಲಿ ನನಗೇನೋ ಸ೦ಶಯ ಬರ್ತಾ ಇದೆ ಇಲ್ಲಿ. ಇಲ್ಲಿನ ಪಲ್ಲವಿ ರಿಯೆಲ್ಲಾ ಅಥವ ಸ್ಪೂಫಾ ಅ೦ತಾ?
ಎರಡ್ ಮೂರ್ angleನಲ್ಲಿ ನೋಡ್ತಾ ಇದ್ದ್ರೆ ನನಗೇನೋ ಡೌಟು. ಇರ್ಲಿ.
ಯಾಕ್ರಿ ಬಿಡ್ತಾ ಇದ್ದೀರಾ ಸ೦ಪದನಾ? ನನಗ೦ತೂ ಸ೦ಪದಕ್ ಅಡಿಕ್ಟಾಗ್ ಹೋಗಿದ್ದೇನೆ. ಕೆನಡಾಗ್ ಹೋದ ಮೇಲೆ ನೋಡಕ್ ಹೊತ್ತಾಗ್ಲ್ವಲ್ಲಾ ಅ೦ತ ಯೋಚನೆ?
ಉ: ಸಂಪದಿಗರಿಗೆ ವಿದಾಯ...
ಅದರ ಬಗ್ಗೆ ಸೊತಹ ಅವರಿಗಿಂತ ಬೇರೆಯವರು ತಲೆ ಕೆಡಿಸಿಕೊಳ್ಳುವದರಲ್ಲಿ ಅರಿತವಿಲ್ಲ, ಯಾಕಂದರೆ ನಾವೇನು ಅಂತ ನಾವು ತೋರಿಸಿಕೊಳ್ಳುತ್ತೇವೋ, ಅದೇ ಆಗುತ್ತೇವೆ, ಹಾಗಾಗಿ, ರಿಯಲ್ ಇರಲಿ, ಸ್ಫೂಫ್ ಇರಲಿ, ಸಂಪದಿಗರಿಗೆ ಅಸ್ಟು ಬೇರೆತನ ಆಗಲ್ಲ ಅನ್ಕೋತೀನಿ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಸಂಪದಿಗರಿಗೆ ವಿದಾಯ...
ಸೋಮಶೇಖರಯ್ಯನವರ ಬರಹ ಓದಿದಿರಾ? ಅದು ಬಹುಶಃ ನಿಮ್ಮನ್ನೇ ಉದ್ದೇಶಿಸಿ ಬರೆದಂತಿದೆ. ಎಲ್ಲ ಬೇಸರಗಳೂ ತಾತ್ಕಾಲಿಕ. ಸ್ವಲ್ಪ ದಿನ ಸುಮ್ಮನಿರಿ, ಮನಸ್ಸು ಸರಿ ಹೋದೀತು. ಎಂದಿನಂತೆ ಬರೆಯಲು ಶುರು ಮಾಡಿ. ಎಲ್ಲರ ಅಭಿವ್ಯಕ್ತಿಯೂ ತನ್ನದೇ ವಿಶಿಷ್ಟತೆ ಹೊಂದಿರುತ್ತದೆ.
- ಚಾಮರಾಜ ಸವಡಿ
ಉ: ಸಂಪದಿಗರಿಗೆ ವಿದಾಯ...
ಹೊಸತನವೇ ಬಾಳು ; ಹಳಸಿಕೆಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊನ್ದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲವು -- ಮನ್ಕುತಿಮ್ಮ
ನಿಮಗೆ ಶುಭವಾಗಲಿ....
ಧನ್ಯವಾದ,
ರಘು