nannakanasu-chiguru
ನನಗೆ ಬರೆಯೋದಿಕ್ಕೆ ಸ್ಪೂರ್ತಿ ತಂದು ಕೊಟ್ಟ ನನ್ನ ಅತ್ಮೀಯ ಗೆಳೆಯರಾದ ಅಮರ ಮತ್ತೆ ವಿಜಯ್ ಗೆ ನನ್ನ ಹೃತ್ಪೋರ್ವಕ ವಂದನೆಗಳು. ನಿಮ್ಮೆಲ್ಲರ ಹಾರೈಕೆ ನನ್ನೊಂದಿಗಿರಲಿ... ನಮಸ್ಕಾರ, ನನ್ನ ಎಲ್ಲಾ ಸ್ನೇಹಿತರಿಗೂ.... ನಾನಿಲ್ಲಿ ಬರೆದಿರುವುದೆಲ್ಲಾ ನನ್ನ ಮನಸ್ಸಿನ ಭಾವನೆಗಳು, ಮನದ ಮಾತುಗಳು. ಮೊದ ಮೊದಲು ಕವನದ ಕಡೆಗೆ ಇದ್ದ ಒಲವು ಇತ್ತಿಚೆಗೆ ಕಡಿಮೆಯಾಗಿದೆ. ನನ್ನದೇ ಒಂದು ಪುಟ್ಟ ಬ್ಲಾಗ್ ಇದೆ. ಮನಸ್ಸಿಗೆ ತೋಚಿದ್ದನ್ನ ನಾನಿಲ್ಲಿ ವ್ಯಕ್ತಪಡಿಸ್ತಾ ಇದ್ದೇನೆ. ಇಲ್ಲಿ ಬರೆದಿರೊದ್ರಲ್ಲಿ ಬಹಳಷ್ಟು ತಪ್ಪುಗಳಿವೆ. ನನ್ನ ಓದುಗರು ಅದನ್ನ ನನಗೆ ತಿದ್ದಿ ಹೇಳಬೇಕು. ಯಾರೂಕೂಡಾ ಹುಟ್ಟಿದ ತಕ್ಷಣ ಎಲ್ಲಾದನ್ನೂ ಕಲಿಯೋದಿಲ್ಲ. ನಡಿಯೋಕಾಲು ಎಡವೋದು ಸಹಜತಾನೆ ??? ನಿಮ್ಮ ಪ್ರೀತಿಯ ತಿದ್ದುಪಡಿಗೆ ನಾನು ಚಿರರುಣಿ...
ನನ್ನ ಗೆಳತಿ
ಹೇಗಿದ್ದಿಯೋ ?
ಸಾರಿ ಕಣೋ, ನಿನ್ಜೊತೆ ನಾನು ಸರಿಯಾಗಿ ಮಾತಾಡೊಕ್ಕೇ ಆಗ್ತಾ ಇಲ್ಲ. ಯಾಕೋ ಬೇಜಾರು, ತುಂಬಾ ಬೇಜಾರು.
ನಾನು ನಿನ್ನ ಹತ್ರ ಒಂದು ಹುಡುಗನಬಗ್ಗೆ ಹೇಳಿದ್ದೆ ಅಲ್ವ ? ಅದೇ ನಾನು ಪ್ರೀತಿಸ್ತಾ ಇರೋ ಹುಡ್ಗನ ಬಗ್ಗೆ ? ಅವನಿಂದ್ಲೇ ನನ್ನ ಮನಸ್ಸಿಗೆ ಬೇಜಾರಾಗ್ತಾ ಇರೋದು. ಅವ್ನು ನನ್ನ ಒಂಟಿಯಾಗಿ ಬಿಟ್ಟು ಹೋಗ್ತಾ ಇದಾನೆ ಕಣೋ... ನಾನು ಕಂಡಿದ್ದ ಕನಸನ್ನ ನುಚ್ಚುನೂರು ಮಾಡಿ ಹೋಗ್ತಾ ಇದಾನೆ ನನ್ನ ಒಂಟಿಯಾಗಿ ಬಿಟ್ಟು.
ನನ್ನದೇನು ತಪ್ಪಿರಲೇ ಇಲ್ಲ ಕಣೋ... ನಾನು ಅವನನ್ನ ಮನಸಾರೆ ಪ್ರೀತಿಸ್ದೆ, ಪೂಜಿಸ್ದೆ, ಆದ್ರೂ ಅವ್ನು ಯಾಕೆ ಹೀಗೆ ಮಾಡಿದ ? ಅವನಿಲ್ಲದೆ ಒಂಟಿಯಾಗಿ ಈ ಬಾಳನ್ನ ಎದುರಿಸೋಕೆ ನನಗೆ ಬರೋದಿಲ್ಲ ಕಣೋ...
ಮೊದಲು ನಾವಿಬ್ಬರೂ ಎಷ್ಟು ಚೆನ್ನಾಗಿದ್ವಿ. ನಾನು ಅವನನ್ನ ನೋಡೇ ಇಲ್ಲ ಇನ್ನೂ, ಬರೀ ಅವನ ಫೋಟೋ ನೋಡಿದ್ದೀನಿ, ಮುಂದಿನ ೧೪ನೇ ತಾರೀಖು ಇಬ್ಬ್ರೂ ಮೀಟ್ ಆಗೋಣಾ ಅಂತಿದ್ವಿ. ಇದ್ದಕ್ಕಿದ್ದಹಾಗೆ ಅವ್ನು ಏನೇನೋ ಹೇಳ್ತಾಇದಾನೆ. ನಾನು ಅವ್ನಿಂದ ದೂರ ಹೋಗ್ಬೇಕಂತೆ. ಅವನನ್ನ ಮರೀಬೇಕಂತೆ. ಅವ್ನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆಯಂತೆ... ಯಾವ್ದನ್ನ ನಂಬೋದು ಯಾವ್ದನ್ನ ಬಿಡೋದು ?
ನನಗೆ ನನ್ನಮೇಲೇ ಆಸಕ್ತಿ ಕಡಿಮೆ ಆಗ್ತಾ ಇದೆ. ಅವನ ಯೋಚನೆ ಇಂದ ನನಗೆ ಹೊರಕ್ಕೆ ಬರೋಕ್ಕೇ ಆಗ್ತಾಇಲ್ಲ. ಒಂದೊಂದ್ಸಲ ನಾನೊಬ್ಳೇ ಮನೆನಲ್ಲಿ ಇರ್ತೀನಲ್ಲಾ, ಆಗ ನನ್ನ ಸುತ್ತಾ ಅವನ ನೆನಪೇ ಸುಳಿದಾಡ್ತಾ ಇರತ್ತೆ. ನನ್ನ ಕಿತ್ತು ತಿನ್ನತ್ತೆ. ಹೇಗೆ ಮರಿಯೋದು ಅವನ್ನ ? ಅವನ ಮಾತುಗಳನ್ನ ? ಅವನಜೊತೆ ಕಳೆದ ಆ ಮಧುರ ಕ್ಷಣಗಳನ್ನ ? ಅವನೇ ನನ್ನ ಪ್ರಪಂಚ, ನನ್ನ ಸರ್ವಸ್ವ. ನಾನು ಅವನ ಬಗ್ಗೆ ಮನೆನಲ್ಲಿ ಮಾತಾಡಿ ಎಲ್ಲಾ ಸಸೂತ್ರವಾಗಿ ಆಗತ್ತೆ ಅಂತ ಸಂತೋಷದಿಂದಿದ್ದೆ. ಆದ್ರೆ ಈಗ ನೋಡು...
ನನ್ಗೆ ಎಷ್ಟೇ ಕಷ್ಟ ಬಂದ್ರೂ ಕೂಡಾ ಅವನ ಮುಖ ನೋಡಿದ್ರೆ ಅದನ್ನ ಎದುರಿಸೋ ಧೈರ್ಯ ಬರ್ತಾ ಇತ್ತು, ಅದೇನೋ ಹುಮ್ಮಸ್ಸು ಮೂಡ್ತಾ ಇತ್ತು. ಎಲ್ಲವನ್ನೂ ಗೆದ್ದು ಅವನಿಂದ ನಾಲ್ಕು ಒಳ್ಳೇ ಮಾತು ಕೇಳೋದಕ್ಕೆ ಮನಸ್ಸು ಕುಣೀತಾ ಇರ್ತಿತ್ತು. ದಿನಾ ನಾನು ಅವನು ಮೊಬೈಲಿನಲ್ಲಿ ಏಷ್ಟು ಹೊತ್ತು ಮಾತಾಡ್ತಾ ಇದ್ವಿ ಗೊತ್ತಾ... ಆದ್ರೆ ಯಾಕೊ ಗೊತ್ತಿಲ್ಲ ಸ್ವಲ್ಪ ದಿನಗಳಿಂದಾ ಅವ್ನಿಗೆ ನನ್ನಲ್ಲಿ ಆಸಕ್ತಿ ಕಡಿಮೆ ಆಗ್ತಾ ಇದ್ಯೇನೋ ಅಂತ ಅನ್ನಿಸ್ತಾ ಇತ್ತು. ನಾನು ಬಹುಷಃ ಅವನಿಗೆ ಕೆಲಸದ ಒತ್ತಡ ಇರ್ಬೇಕು ಅಂತ ಸುಮ್ನೆ ಸಮಾಧಾನವಾಗಿ ಮಾತಾಡಿಸ್ತಾ ಇದ್ದೆ ಕಣೋ. ಆದ್ರೆ ಇವತ್ತು ಅವ್ನು ನನ್ಗೆ ಫೋನ್ ಮಾಡಿ ಅವ್ನಿಂದ ದೂರ ಹೋಗೊಕ್ಕೆ ಹೇಳ್ತಾ ಇದಾನೆ. ನಾನೇನು ತಪ್ಪು ಮಾಡಿದ್ದೆ ಅಂತ ಅವನ್ನ ಪರಿ ಪರಿಯಾಗಿ ಕೇಳ್ಕೊಂಡಿದೀನಿ, ಆದ್ರೂ ಅವ್ನು ಏನೂ ಹೇಳ್ತಾ ಇಲ್ಲ. ಅವನೊಡನೆ ಅವನ ನೋವನ್ನ ಹಂಚಿಕೊಂಡಿದ್ದು ನನ್ನ ತಪ್ಪಾ ? ಅವ್ನನ್ನ ನನ್ನ ಕಣ್ಣುಗಳರೀತಿ ನೋಡ್ಕೊಂಡಿದ್ದು ತಪ್ಪಾ ?
ಪ್ರತೀ ದಿನ ನನ್ನ ನೆನಪಿಗೆ ಅವ್ನು ಬರ್ತಾನೆ, ಈ ಕಣ್ಣಲ್ಲಿ ನೀರು ತರಿಸ್ತಾನೆ. ನಾನು ಎಷ್ಟೇ ಪ್ರಯತ್ನ ಪಟ್ರೂ ನನ್ನಿಂದ ಅವ್ನನ್ನ ಮರಿಯೋಕೆ ಆಗ್ತಾ ಇಲ್ಲ. ಪದೇ ಪದೇ ಅವ್ನ ಹೆಸರನ್ನೇ ಕರೆಯೋಣ ಅನ್ಸತ್ತೆ, ಅವ್ನ ಹೆಸ್ರನ್ನೇ ಬರಿಯೋಣ ಅನ್ಸತ್ತೆ. ಇದೆಲ್ಲಾ ನನ್ನ ಹುಚ್ಚುತನ ಅಂತ ಬೇಕಾದ್ರೆ ಅನ್ಕೊ. ಆದ್ರೆ ನನ್ನಿಂದ ಅವನನ್ನ ಮರಿಯೋಕೆ ಆಗ್ತಾಇಲ್ಲ.
ಪ್ರಕೃತಿಯ ಮಡಿಲಲ್ಲಿ ಒಂದು ಪುಟ್ಟ ಮಗುವಿನಂತೆ ತೇಲಿ ಹೋಗೋಣಾ, ಈ ದುಃಖನ ಮರೆಯೋಣ ಅಂತ ಇಲ್ಲಿಂದ ದೂರ ಹೋಗಿದ್ದೆ, ಆದ್ರೆ ಆಗ್ಲಿಲ್ಲ ಕಣೋ... ಅಲ್ಲಿ ಪ್ರತಿಯೊಬ್ಬರೂ ನನಗೆ ಅವನ ಹಾಗೇ ಕಣ್ತಾಇದ್ರು. ನನ್ನಿಂದ ದೂರ ಹೋಗಿದಾನೆ, ಎಲ್ಲೇ ಇದ್ರೂ ಖುಷಿಯಾಗಿರ್ಲಿ ಅವ್ನು. ನಾನು ನನ್ನ ಪಾಡನ್ನ ಹೇಗೋ ಸಂಭಾಳಿಸಿಕೊಂಡು ಹೋಗೊಕ್ಕೆ ಪ್ರಯತ್ನ ಪಡ್ತೀನಿ. ನಾನು ನನ್ನ ಮನಸ್ಸಿನಜೊತೆ ಹೋರಾಡ್ತಾ ಇದೀನಿ, ಅವನನ್ನ ಮರೆತು ನನ್ನ ನಾನು ಗೆಲ್ಲೋ ಹಾಗೆ ನನಗೆ ಗೆಲುವು ಸಿಕ್ಲಿ ಅಂತ ಹಾರೈಸೋ...
ಒಬ್ಬ ಒಳ್ಳೇ ಗೆಳೆಯನಾಗಿ ನನ್ನ ಕಷ್ಟದಲ್ಲಿ ನನಗೆ ಧೈರ್ಯ ಹೇಳೋ...

- pachhu2002 ರವರ ಬ್ಲಾಗ್
- Login or register to post comments
- 307 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನನ್ನ ಗೆಳತಿ
hmm chenagidhe paa
ಉ: ನನ್ನ ಗೆಳತಿ
ವಂದನೆಗಳು,
ಪ್ರಶಾಂತ ಜಿ ಉರಾಳ (ಪಚ್ಚು)
ಉ: ನನ್ನ ಗೆಳತಿ
ಪಾಪ, ಈಕೆಯ ಮನಸಿಗೆ ಬಹಳ ನೋವಾಗಿದೆ.
ಪಚ್ಚು ರವರೆ, ದಯವಿಟ್ಟು ಇವರ ಮನಸಿಗೆ ಸಮಾದಾನ ಮಾಡಿ.
-ಯುವಪ್ರೇಮಿ
ಉ: ನನ್ನ ಗೆಳತಿ
ಹೌದು ಯುವಪ್ರೇಮಿಗಳೇ,
ಈಕೆಯೊಡನೆ ಮಾತನಾಡುವಾಗ ನನಗೂ ಬಹಳ ನೋವಾಯಿತು. ಏತಕ್ಕಾಗಿ ಹುಡುಗ ಹೀಗೆ ಮಾಡಿರಬಹುದು ???
ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ (ಪಚ್ಚು)
ಉ: ನನ್ನ ಗೆಳತಿ
ನಾನು ನನ್ನ ಕೈಲಾದ ಪ್ರಯತ್ನ ಮಾಡಿ ಸ್ವಲ್ಪ ಮಟ್ಟಿಗೆ ಆಕೆಯನ್ನ ಸಮಾಧಾನಿಸಿದೆ
http://sampada.net/blog/pachhu2002/15/07/2008/10048
ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ (ಪಚ್ಛು)