ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಫಾದರ್ ಸೆರ್ಗಿಯಸ್ (ಟಾಲ್ಸ್‌ಟಾಯ್ ಕಥೆ) - ಓ ಎಲ್ ಎನ್ ಸ್ವಾಮಿ

ಫಾದರ್ ಸೆರ್ಗಿಯಸ್ ಅಧ್ಯಾಯ ಆರು

December 5, 2007 - 6:58pm — olnswamy

ಆರು
ಫಾದರ್ ಸೆರ್ಗಿಯಸ್ ಇನ್ನೂ ಏಳು ವರ್ಷಗಳನ್ನು ಏಕಾಂತವಾಸದಲ್ಲಿ ಕಳೆದ. ಮೊದಮೊದಲು ಅವನನ್ನು ಕಾಣಲು ಬಂದ ಜನ ತಂದುಕೊಡುತ್ತಿದ್ದ ಟೀ, ಸಕ್ಕರೆ, ಬಿಳಿಯ ಬ್ರೆಡ್ಡು, ಹಾಲು, ಬಟ್ಟೆ, ಸೌದೆಗಳನ್ನು ಸ್ವೀಕರಿಸುತ್ತಿದ್ದ. ಆದರೆ ಕಾಲ ಕಳೆದಂತೆ ಮತ್ತೂ ನಿಷ್ಠುರವಾಗಿ ಸರಳವಾಗಿ ಬದುಕತೊಡಗಿದ. ಸುಖಕ್ಕೆ ಕಾರಣವಾಗುವ ಎಲ್ಲವನ್ನೂ ನಿರಾಕರಿಸಲು ತೊಡಗಿದ. ಕೊನೆಗೆ ಜನ ತಂದುಕೊಡುವ ರೈ ಬ್ರೆಡ್ಡನ್ನು ಮಾತ್ರ ವಾರಕ್ಕೆ ಒಂದು ಸಲ ತೆಗೆದುಕೊಳ್ಳುತ್ತಿದ್ದ. ಅವರು ತಂದ ಮಿಕ್ಕೆಲ್ಲವನ್ನೂ ತನ್ನ ಬಳಿಗೆ ಬಂದ ಬಡವರಿಗೆ ಕೊಟ್ಟುಬಿಡುತ್ತಿದ್ದ.
ಇಡೀ ದಿನವನ್ನು ಕೋಣೆಯೊಳಗೇ ಕೂತು ಪ್ರಾರ್ಥನೆ ಮಾಡುತ್ತ ಕಳೆಯುತ್ತಿದ್ದ. ಅಥವಾ ಯಾರಾದರೂ ಕಾಣಲೆಂದು ಬಂದರೆ ಅವರೊಡನೆ ಮಾತನಾಡುತ್ತಿದ್ದ. ಕಾಲ ಕಳೆದಂತೆ ಅವನನ್ನು ಕಾಣಲು ಬರುವ ಜನ ಹೆಚ್ಚಾದರು. ವರ್ಷದಲ್ಲಿ ಎರಡೋ ಮೂರೋ ಬಾರಿ ಚರ್ಚಿನಿಂದಾಚೆಗೆ ಕಾಲಿಡುತ್ತಿದ್ದ. ಸೌದೆ, ನೀರು ಬೇಕಾದಾಗ ಮಾತ್ರ ಕೋಣೆಯಿಂದಾಚೆಗೆ ಬರುತ್ತಿದ್ದ.
ಡೈವೋರ್ಸ್ ಪಡೆದ ಹೆಂಗಸು ಮಾಕೊವ್ಕಿನಾಳ ಘಟನೆ ನಡೆದದ್ದು ಅವನು ಸಂನ್ಯಾಸೀ ಜೀವನ ನಡೆಸುತ್ತಾ ಐದು ವರ್ಷಗಳನ್ನು ಕಳೆದಿದ್ದಾಗ. ಆ ಘಟನೆ--ರಾತ್ರಿಯ ಹೊತ್ತು ಆಕೆ ಬಂದ್ದು, ಅವಳಲ್ಲಿ ಪರಿವರ್ತನೆ ಮೂಡಿದ್ದು, ಕಾನ್ವೆಂಟ್ ಸೇರಿದ್ದು--ಎಲ್ಲರಿಗೂ ತಿಳಿಯಿತು. ಅಂದಿನಿಂದ ಫಾದರ್ ಸೆರ್ಗಿಯಸ್‌ನ ಪ್ರಸಿದ್ಧಿ ಹೆಚ್ಚತೊಡಗಿತು. ಅವನ ದರ್ಶನ ಪಡೆಯಲು ಹೆಚ್ಚು ಹೆಚ್ಚು ಜನ ಬರತೊಡಗಿದರು. ಅವನ ಗುಹೆಯ ಸಮೀಪದಲ್ಲೇ ಇತರ ಸಂನ್ಯಾಸಿಗಳ ವಸತಿ, ಚರ್ಚು, ಒಂದು ವಸತಿ ಗೃಹ ತಲೆ ಎತ್ತಿದವು. ದೂರ ದೂರದ ಊರುಗಳಿಂದ ಜನ ಬಂದರು. ತಮ್ಮೊಡನೆ ಕಾಯಿಲೆ ಬಿದ್ದವರನ್ನೂ ಕರೆದುಕೊಂಡು ಬಂದರು. ಹಾಗೆ ಬಂದವರ ಕಾಯಿಲೆ ವಾಸಿಯಾಯಿತು ಅನ್ನುವ ಸುದ್ದಿ ಹರಡಿದರು.
ಕಾಯಿಲೆಯನ್ನು ಗುಣಪಡಿಸಿದ ಮೊದಲ ಘಟನೆ ಅವನ ಸಂನ್ಯಾಸೀ ಜೀವನದ ಎಂಟನೆಯ ವರ್ಷದಲ್ಲಿ ನಡೆಯಿತು. ಹದಿನಾಲ್ಕು ವರ್ಷದ ಹುಡುಗನೊಬ್ಬನ ಕಾಯಿಲೆಯನ್ನು ವಾಸಿಮಾಡಿದ್ದ ಅವನು. ಹುಡುಗನ ತಾಯಿ ಅವನನ್ನು ಕರೆದುಕೊಂಡು ಬಂದಿದ್ದಳು. ಫಾದರ್ ಸೆರ್ಗಿಯಸ್ ಹುಡುಗನ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಬೇಕೆಂದು ಒತ್ತಾಯ ಮಾಡಿದ್ದಳು. ಕಾಯಿಲೆಗಳನ್ನು ವಾಸಿಮಾಡುವ ಸಾಮರ್ಥ್ಯ ತನಗೆ ಇರಬಹುದೆಂದು ಫಾದರ್ ಸೆರ್ಗಿಯಸ್ಸನಿಗೆ ಹೊಳೆದೇ ಇರಲಿಲ್ಲ. ಅಂಥ ಶಕ್ತಿ ಇದೆ ಅಂದುಕೊಳ್ಳುವುದು ಕೂಡ ಪಾಪ, ದುರಹಂಕಾರ ಅಂದುಕೊಂಡಿದ್ದ. ಆದರೆ ಮಗುವಿನ ತಾಯಿ ಒಂದೇ ಸಮ ಗೋಗರೆದಿದ್ದಳು. ಅವಳ ಕೋರಿಕೆಯನ್ನು ತಿರಸ್ಕಾರಿಸಲು ಆಗಲಿಲ್ಲ. 'ನೀವು ಎಲ್ಲರ ರೋಗ ವಾಸಿ ಮಾಡುತ್ತೀರಿ, ನನ್ನ ಮಗನಿಗೆ ಕರುಣೆ ತೋರಿಸಬಾರದೆ?' ಎಂದು ಕೇಳಿದಳು. 'ದೇವರು ಮಾತ್ರ ಅಂಥ ಅನುಗ್ರಹಮಾಡಬಲ್ಲ' ಎಂದು ಫಾದರ್ ಸೆರ್ಗಿಯಸ್ ಅವಳಿಗೆ ಹೇಳಿದ. ಅದಕ್ಕೆ ಆ ತಾಯಿ ಇನ್ನೇನೂ ಬೇಡ, ನನ್ನ ಮಗನ ಮೇಲೆ ನಿಮ್ಮ ಕೈ ಇಟ್ಟು ಅವನಿಗೆ ಗುಣವಾಗಲೆಂದು ಪ್ರಾರ್ಥನೆ ಮಾಡಿ, ಸಾಕು ಎಂದು ಬೇಡಿಕೊಂಡಳು. ಫಾದರ್ ಸೆರ್ಗಿಯಸ್ ಅವಳ ಕೋರಿಕೆ ನಿರಾಕರಿಸಿ ಕೋಣೆಯೊಳಕ್ಕೆ ಹೋಗಿಬಿಟ್ಟ. ಮರುದಿನ, (ಶರದೃತುವಿನ ಕೊನೆಯದಿನಗಳು, ಆಗಲೇ ಚಳಿ ಕಾಲಿಟ್ಟಿತ್ತು) ನೀರಿಗಾಗಿ ಕೋಣೆಯಿಂದ ಹೊರಕ್ಕೆ ಬಂದಾಗ ಆ ತಾಯಿ ಮುಖವೆಲ್ಲ ಬಿಳಿಚಿಕೊಂಡಿದ್ದ ಮಗನೊಡನೆ ಬಾಗಿಲಲ್ಲೇ ಕಾದಿದ್ದು ಮತ್ತೆ ಕೋರಿಕೊಂಡಳು.ಅವನು ಅನ್ಯಾಯವಂತ ನ್ಯಾಯಾಧೀಶನ ಸಾಮತಿಯನ್ನು ನೆನಪುಮಾಡಿಕೊಂಡ. ಅವಳ ಕೋರಿಕೆಯನ್ನು ನಿರಾಕರಿಸುವುದೇ ಸರಿ ಎಂದು ದೃಢ ನಿಶ್ಚಯಮಾಡಿಕೊಂಡಿದ್ದವನು ಈಗ ವಿಚಲಿತನಾದ. ವಿಚಲಿತನಾದ್ದರಿಂದ ಪ್ರಾರ್ಥನೆಗೆ ತೊಡಗಿದ. ಅವನ ಮನಸ್ಸಿನಲ್ಲಿ ಒಂದು ನಿರ್ಣಯ ರೂಪುತಳೆಯುವವರೆಗೆ ಪ್ರಾರ್ಥನೆಮಾಡಿದ. ಅವಳ ಕೋರಿಕೆಯನ್ನು ನೆರವೇರಿಸಬೇಕು, ಅವಳ ವಿಶ್ವಾಸದಿಂದಲೇ ಮಗುವಿಗೆ ವಾಸಿಯಾದರೆ ಆಗಲಿ, ತಾನು ಮಾತ್ರ ಈ ಪ್ರಸಂಗದಲ್ಲಿ ದೇವರ ಕೈಯಲ್ಲಿರುವ ಕ್ಷುಲ್ಲಕ ಉಪಕರಣವಷ್ಟೆ ಅನ್ನುವ ನಿರ್ಣಯ ಮನಸ್ಸಿನಲ್ಲಿ ಮೂಡಿತು. ತಾಯಿಯ ಬಳಿಗೆ ಹೋಗಿ, ಅವಳ ಕೋರಿಕೆಯಂತೆ ಮಗುವಿನ ತಲೆಯಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದ. ಆಮೇಲೆ ತಾಯಿ ಮಗುವನ್ನು ಕರೆದುಕೊಂಡು ಹೊರಟುಹೋದಳು. ಒಂದು ತಿಂಗಳ ನಂತರ ಮಗು ಗುಣವಾದ. ಈ ಸುದ್ದಿ ಪ್ರಾಂತ್ಯದಲ್ಲೆಲ್ಲ ಹರಡಿತು. ಜನ ಫಾದರ್ ಸೆರ್ಗಿಯಸ್‌ನನ್ನು ಗುರು ಎಂದು ಕರೆಯತೊಡಗಿದರು. ಒಂದು ವಾರ ಕಳೆಯುವಷ್ಟರಲ್ಲಿ ಕಾಯಿಲೆಯ ಜನ ಕುದುರೆ ಸವಾರಿಮಾಡಿಕೊಂಡು, ಗಾಡಿ ಕಟ್ಟಿಕೊಂಡು, ನಡೆದುಕೊಂಡು ಫಾದರ್ ಸೆರ್ಗಿಯಸ್ಸನ ದರ್ಶನಕ್ಕೆ ಬರಲು ತೊಡಗಿದರು. ಒಬ್ಬಳ ಕೋರಿಕೆಯನ್ನು ನೆರವೇರಿಸಿದಮೇಲೆ ಉಳಿದವರ ಕೋರಿಕೆ ನಿರಾಕರಿಸಲು ಆಗಲಿಲ್ಲ. ಅನೇಕ ರೋಗಿಗಳ ತಲೆಯಮೇಲೆ ಕೈ ಇಟ್ಟು ಪ್ರಾರ್ಥನೆಮಾಡಿದ. ಎಷ್ಟೋ ಜನಕ್ಕೆ ವಾಸಿಯಾಯಿತು. ಅವನ ಕೀರ್ತಿ ಮತ್ತೂ ಬೆಳೆಯಿತು.
ಹೀಗೆ ವರ್ಷಗಳು ಕಳೆದವು: ಒಂಬತ್ತು ವರ್ಷಗಳು ಮಠಗಳಲ್ಲಿ, ಹದಿಮೂರು ಸಂನ್ಯಾಸಿ ಗುಹೆಯಲ್ಲಿ. ಫಾದರ್ ಸೆರ್ಗಿಯಸ್ ವೃದ್ಧನಂತೆ ಕಾಣುತ್ತಿದ್ದ. ಗಡ್ಡ ಉದ್ದವಾಗಿ ಬೆಳೆದು ನೆರೆತಿತ್ತು. ಆದರೆ ತಲೆಯ ಕೂದಲು, ತೆಳ್ಳಗಾಗಿದ್ದರೂ ಇನ್ನೂ ಕಪ್ಪಾಗಿ, ಗುಂಗುರು ಗುಂಗುರಾಗಿದ್ದವು.
(ಮುಂದುವರೆಯುವುದು)
ಅನ್ಯಾಯವಂತ ನ್ಯಾಯಾಧೀಶನ ಸಾಮತಿ*- ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶ ಇದ್ದ. ದೇವರ ಬಗ್ಗೆ ಭಯ ಭಕ್ತಿ ಇರಲಿಲ್ಲ. ಜನರ ಬಗ್ಗೆ ಗೌರವ ಇರಲಿಲ್ಲ. ಆ ಊರಿನಲ್ಲಿ ಒಬ್ಬ ವಿಧವೆ ಅವನ ಬಳಿಗೆ ಬಂದು 'ನನಗೆ ಅನ್ಯಾಯ ಮಾಡಿವನ ವಿರುದ್ಧ ತೀರ್ಪು ಕೊಡಿ ಎಂದು ಕೇಳುತ್ತಿದ್ದಳು. ಮೊದ ಮೊದಲು ಆಗುವುದಿಲ್ಲ ಅನ್ನುತ್ತಿದ್ದ. ಆನಂತರ 'ನನಗೆ ದೇವರ ಬಗ್ಗೆ ಭಯವಿರದಿದ್ದರೂ ಜನಗಳ ಹೆದರಿಕೆ ಇರದಿದ್ದರೂ ಈ ಹೆಂಗಸು ಬಂದು ಬಂದು ಪೀಡಿಸುತ್ತಾಳೆ. ಅವಳು ಕಾಡದೆ ಇದ್ದರೆ ಸಾಕು, ಅವಳ ಪರವಾಗಿ ತೀರ್ಮಾನ ಕೊಟ್ಟು ಬಿಡುತ್ತೇನೆ' ಎಂದು ನಿರ್ಧರಿಸಿದ. (ಲ್ಯೂಕನ ಸುವಾರ್ತೆ, ೧೮:೨-೫)

‹ ಫಾದರ್ ಸೆರ್ಗಿಯಸ್ ಅಧ್ಯಾಯ ಐದುಮೇಲಿನ ಪುಟಕ್ಕೆಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧) ›
  • ಟಾಲ್ಸ್‌ಟಾಯ್ ಕಥೆ
~.~
  • olnswamy ರವರ ಬ್ಲಾಗ್
  • Printer-friendly version
  • Login or register to post comments
  • 385 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೨)
  • ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೩)
  • ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧)
  • ಪರಿಶುದ್ಧ ಚರಿತ್ರ
  • ಫಾದರ್ ಸೆರ್ಗಿಯಸ್ ಅಧ್ಯಾಯ ಮೂರು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 151 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator