ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)

ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೆಂಟು

June 5, 2007 - 4:01pm — olnswamy

“ನೇರವಾಗಿ ಕಥೆ ಹೇಳುವುದು ಬಿಟ್ಟು ಏನೇನೋ ಹೇಳುತ್ತಿದ್ದೇನೆ. ಸಮಾಧಾನವಾಗಿ ಹೇಳುವುದಕ್ಕೆ ಆಗುವುದೇ ಇಲ್ಲ. ಈ ವಿಷಯಗಳ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ. ನನಗೆ ಎಲ್ಲವೂ ಬೇರೆ ಥರ ಕಾಣುತ್ತವೆ. ನನಗೆ ಕಂಡದ್ದನ್ನು ಹೇಳದೆ ಇರಲಾರೆ.
“ಇರಲಿ. ಸಿಟಿಗೆ ಹೋದೆವು. ದುಃಖ ತುಂಬಿಕೊಂಡಿರುವವರು ಸಿಟಿಗಳಲ್ಲಿ ಬದುಕುವುದು ಸುಲಭ. ಸತ್ತು ಕೊಳೆತು ಹೋಗಿದ್ದೇವೆ ಅನ್ನುವುದೇ ಗೊತ್ತಿಲ್ಲದಂತೆ ನೂರು ವರ್ಷ ಬೇಕಾದರೂ ಬದುಕಿಬಿಡಬಹುದು ಸಿಟಿಗಳಲ್ಲಿ. ಎಲ್ಲರೂ ಬ್ಯುಸಿ. ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ವ್ಯವಧಾನವೇ ಇಲ್ಲ. ಬ್ಯುಸಿನೆಸ್ಸು, ಸಾಮಾಜಿಕ ಜವಾಬ್ದಾರಿ, ಆರೋಗ್ಯ, ಕಲೆ, ಮಕ್ಕಳ ಹೆಲ್ತು, ಎಜುಕೇಶನ್ನು, ಇವತ್ತು ಇಂಥಾವರನ್ನು ಮನೆಗೆ ಕರೆಯಬೇಕು, ನಾಳೆ ಇಂಥಾವರ ಮನೆಗೆ ಹೋಗಬೇಕು, ಇದನ್ನ ನೋಡಲೇಬೇಕು, ಅದನ್ನ ಮಾಡಲೇಬೇಕು, ಆ ಭಾಷಣ ಕೇಳಲೇಬೇಕು. ಸಿಟಿಗಳಿಗೆ ದಿನವೂ ಒಬ್ಬಿಬ್ಬರಾದರೂ ಸೆಲಿಬ್ರಿಟಿಗಳು ಬರುತ್ತಲೇ ಇರುತ್ತಾರೆ. ಅವರನ್ನು ನೋಡದೆ ಇದ್ದರೆ ಹೇಗೆ? ನಮ್ಮ ಕಾಯಿಲೆಗೆ ಡಾಕ್ಟರ ಹತ್ತಿರ ಹೋಗಬೇಕು, ಮಗುವನ್ನು ಸ್ಪೆಷಲಿಸ್ಟಿಗೆ ತೋರಿಸಬೇಕು, ಮಕ್ಕಳ ಸ್ಕೂಲು, ಟ್ಯೂಶನ್ನು, ಗೌರ್ನೆಸ್ಸುಗಳು, ಎಷ್ಟೊಂದು ಮಾಡಲೇಬೇಕಾದ ಕೆಲಸಗಳು, ಬದುಕು ಖಾಲಿ ಗುಡಾಣದ ಹಾಗೆ ಖಾಲಿ ಅಪೂಟ ಖಾಲಿ. ನಾವೂ ಹಾಗೇ ಇರಲು ಶುರುಮಾಡಿದೆವು. ಒಟ್ಟಿಗೆ ಬದುಕುವ ನೋವು ಸ್ವಲ್ಪ ಕಡಮೆಯಾಗಿತ್ತು. ಜೊತೆಗೆ ಹೊಸ ಊರಿನಲ್ಲಿ, ಹೊಸ ಮನೆಯಲ್ಲಿ ಸೆಟಲ್‌ ಆಗುವ ಉತ್ಸಾಹ, ಹಳ್ಳಿಗೆ ಸಿಟಿಗೆ ಓಡಾಡುವ ಸಡಗರ ಇವೆಲ್ಲ ಇದ್ದವು.
“ಒಂದು ಚಳಿಗಾಲ ಕಳೆಯಿತು. ಎರಡನೆಯದು, ಮೂರನೆಯದೂ ಆಗಿಹೋದವು. ಬಹಳ ಮುಖ್ಯ ಅನಿಸುವಂಥದು ಏನೂ ನಡೆಯಲಿಲ್ಲ. ಆದರೆ ಮುಂದೆ ಆದದಕ್ಕೆ ಕಾರಣವಾಗುವಂಥ ಘಟನೆ ತನ್ನಷ್ಟಕೆ ತಾನು ಆಗಿಹೋಯಿತು.
“ಅವಳಿಗೆ ಹುಷಾರಿರಲಿಲ್ಲ. ಡಾಕ್ಟರುಗಳು, ದುಷ್ಟರು, ಇನ್ನುಮೇಲೆ ಮಕ್ಕಳಾಗಬಾರದು ಅಂದರು. ಮಕ್ಕಳಾಗದಂತೆ ನೋಡಿಕೊಳ್ಳುವ ಪ್ಲಾನು ಹೇಳಿಕೊಟ್ಟರು ಅವಳಿಗೆ. ನನಗೆ ಅಸಹ್ಯ ಅನಿಸಿತ್ತು. ವಿರೋಧಮಾಡಿದೆ. ಆದರೆ ಅವಳು ಹಟಮಾಡಿದಳು. ನಾನೇ ಸೋತೆ. ನಮ್ಮ ಮೃಗೀಯ ಬದುಕಿಗೆ ಒಂದು ನೆಪವಾಗಿದ್ದ ಮಕ್ಕಳನ್ನೂ ತೊಲಗಿಸಿಕೊಂಡಮೇಲೆ ನಮ್ಮ ಬದುಕು ಮೊದಲಿಗಿಂತ ಕೊಳಕಾಯಿತು.
“ರೈತನಿಗೆ, ದುಡಿಯುವನಿಗೆ ಮಕ್ಕಳು ಬೇಕು. ಅವನು ಅವಕ್ಕೆ ಹೊಟ್ಟೆಗೆ ಹಾಕಲು ಆಗದಿದ್ದರೂ ಮಕ್ಕಳು ಬೇಕು. ಅವರ ಮದುವೆಗೆ, ದೇಹಸಂಬಂಧಕ್ಕೆ ಅದು ಕಾರಣ. ಆದರೆ ನಮಗೆ ಮಕ್ಕಳು ಬೇಕಾಗಿಲ್ಲ, ಹೆಚ್ಚು ಮಕ್ಕಳಂತೂ ಬೇಡವೇ ಬೇಡ. ಅನಗತ್ಯವಾದ ಜವಾಬ್ದಾರಿ, ವೃಥಾ ಖರ್ಚು ಮತ್ತೆ ಆಸ್ತಿಯಲ್ಲಿ ಹೆಚ್ಚು ಹೆಚ್ಚು ಪಾಲು. ಆದ್ದರಿಂದಲೇ ಹಂದಿಗಳಂತೆ ಬದುಕುವ ನಮ್ಮ ಲೈಫಿಗೆ ಯಾವ ಸಮರ್ಥನೆಯೂ ಇಲ್ಲ. ಕೃತಕವಾಗಿ ಮಕ್ಕಳಾಗದಂತೆ ತಡೆಯುತ್ತೇವೆ, ಅಥವಾ ಹಾಗೂ ಮಕ್ಕಳಾದರೆ ನಮ್ಮದೇ ಬೇಜವಾಬ್ದಾರಿ ಎಂದು ಬೈದುಕೊಳ್ಳುತ್ತೇವೆ. ನಮಗೆ ಯಾವ ಸಮರ್ಥನೆಯೂ ಇಲ್ಲ. ನೈತಿಕವಾಗಿ ಎಷ್ಟು ಹಾಳಾಗಿದ್ದೇವೆಂದರೆ ಸಮರ್ಥನೆಯ ಅಗತ್ಯ ಇದೆ ಎಂದು ಕೂಡ ನಮಗೆ ಅನಿಸುವುದಿಲ್ಲ. ಎಜುಕೇಟೆಡ್ ಆದ ಜನ ಒಂದಿಷ್ಟೂ ಮನಸ್ಸು ಅಳುಕದೆ ಲಂಪಟತನದಲ್ಲಿ ಮುಳುಗಿಹೋಗಿದ್ದಾರೆ.
“ಮನಸ್ಸೇ ಇಲ್ಲದಿರುವಾಗ ಅಳುಕುವುದೆಲ್ಲಿಂದ ಬಂತು? ಪಬ್ಲಿಕ್ ಒಪಿನಿಯನ್ನನ್ನೇ ಅಥವಾ ಕ್ರಿಮಿನಲ್‌ ಕಾನೂನನ್ನೇ ಮನಸ್ಸು ಅಂದುಕೊಳ್ಳಬೇಕೇನೋ. ಆದರೆ ಅವೆರಡೂ ಇದನ್ನ ತಪ್ಪು ಎಂದು ತಿಳಿಯುವುದೇ ಇಲ್ಲ. ಅಯ್ಯೋ, ಮೇರಿ ಪಾವ್ಲೊವ್ನಾ, ಇವಾನ್ ಝಕರಯಾ ಇಂಥಾವರು ಕೂಡ ಮಕ್ಕಳಾಗದಂತೆ ನೋಡಿಕೊಂಡಿದ್ದಾರಂತೆ, ನಾವೂ ಹಾಗಿದ್ದರೆ ನಾಚಿಕೆ ಯಾಕೆ ಎಂದು ಕೇಳುತ್ತದೆ ಸಮಾಜದ ಮನಸ್ಸು. ಹೆಚ್ಚು ಮಕ್ಕಳನ್ನು ಹುಟ್ಟಿಸಿ ಅವರು ಭಿಕ್ಷುಕರಾಗುವಂತೆ ಮಾಡಬೇಕೇ, ನಾವು ಸಮಾಜದಲ್ಲಿ ಮೇಲೆ ಹೋಗುವುದು ಬೇಡವೇ ಎಂದು ಕೇಳುತ್ತದೆ. ಕ್ರಿಮಿನಲ್ ಲಾ ಕೂಡ ಇದರಲ್ಲಿ ನಾಚಿಕೊಳ್ಳುವುದು ಏನಿಲ್ಲ ಅನ್ನುತ್ತದೆ. ಏನಿದ್ದರೂ ಸೂಳೆಯರು ಅಥವಾ ಸೈನಿಕರ ಲವರ್‌ಗಳು ಮಾತ್ರ ಬೇಡದ ಮಕ್ಕಳನ್ನು ಬಾವಿಗೋ ಕಸದ ತೊಟ್ಟಿಗೋ ಬಿಸಾಕುತ್ತಾರೆ. ಅವರಿಗೆ ಶಿಕ್ಷೆ ಆಗಬೇಕು. ಆದರೆ ನಾವು, ಎಜುಕೇಟೆಡ್ ಆದವರು ಸೂಕ್ತ ಸಮಯದಲ್ಲಿ, ಸೂಕ್ತ ವಿಧಾನವನ್ನು ಕ್ಲೀನಾಗಿ ಅನುಸರಿಸುತ್ತಾ ಮಕ್ಕಳಾಗದಂತೆ ನೋಡಿಕೊಳ್ಳುತ್ತೇವೆ.
“ಹೀಗೇ ಇನ್ನೆರಡು ವರ್ಷ ಕಳೆಯಿತು. ದುಷ್ಟ ಡಾಕ್ಟರುಗಳ ಉಪಾಯ ಫಲ ಕೊಟ್ಟಿತ್ತು. ಮೈಕೈ ತುಂಬಿಕೊಂಡಳು. ಚಂದವಾಗಿ ಕಾಣುತ್ತಿದ್ದಳು. ಬೇಸಗೆಯ ಕೊನೆಗೆ ಅರಳುವ ಹೂವಿನಂತೆ ಇದ್ದಳು. ಅವಳಿಗೂ ತಾನು ಚಂದ ಕಾಣುತ್ತಿದ್ದೇನೆಂದು ತಿಳಿಯಿತು. ಅಲಂಕಾರಕ್ಕೆ ಗಮನಕೊಡಲು ತೊಡಗಿದಳು. ನೋಟಕ್ಕೆ ಸವಾಲು ಎಸೆಯುವಂಥ, ಕೆರಳಿಸುವಂಥ, ಕಸಿವಿಸಿ ಹುಟ್ಟಿಸುವಂಥ ಚೆಲುವು ಅವಳದು. ಮೂವತ್ತು ವಯಸಿನ, ದಷ್ಟಪುಷ್ಟ ಮೈಯಿನ, ಮಕ್ಕಳು ಹೆರದಂಥ, ಉತ್ಸಾಹ ತುಂಬಿದ ಹೆಂಗಸು. ಗಂಡಸರ ಕಣ್ಣು ಸೆಳೆಯುವ ಹಾಗಿದ್ದಳು. ಚೆನ್ನಾಗಿ ಪಳಗಿದ, ಈಗ ತಾನೇ ಲಗಾಮು ಕಳಚಿಕೊಂಡ ಕುದುರೆಯ ಹಾಗೆ ಕಾಣುತ್ತಿದ್ದಳು. ನೂರಕ್ಕೆ ತೊಂಬತ್ತೊಂಬತ್ತು ಹೆಂಗಸರಿಗೆ ಲಗಾಮು ಇರುವುದೇ ಇಲ್ಲ. ಇದು ಗೊತ್ತಾಗಿ ನನಗೆ ಭಯ ಆಗಲು ಶುರುವಾಯಿತು.”
(ಮುಂದುವರೆಯುವುದು)

‹ ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರುಮೇಲಿನ ಪುಟಕ್ಕೆಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನೇಳು ›
~.~
  • olnswamy ರವರ ಬ್ಲಾಗ್
  • Printer-friendly version
  • Login or register to post comments
  • 490 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ್ರೂಟ್ಸರ್ ಸೊನಾಟಾ: ಅಧ್ಯಾಯ ಹದಿನೈದು
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು
  • ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 7, 2008 - 9:59pm
  • gurumlr
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 7, 2008 - 8:26pm
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 7, 2008 - 8:09pm
  • agilenag
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 7, 2008 - 7:51pm
  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:34pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 75 ಅತಿಥಿಗಳು ಆನ್ಲೈನ್ ಇರುವರು.


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator