ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › nagenagaari ರವರ ಬ್ಲಾಗ್

ನಗೆ ನಗಾರಿ

ನಕ್ಕು ಬಿಡು ಒಮ್ಮೆ ಹಾಗೇ ಸುಮ್ಮನೆ.. ಕಳೆಯಲಿ ಜಗದ ದುಃಖ ಆ ಕ್ಷಣ ಮಾತ್ರಕ್ಕಾದರೂ!

ಜಯವರ್ಧನೆಗೆ ಒಂದು ಪತ್ರ!

July 27, 2008 - 8:59pm — nagenagaari

ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜಯ‘ವರ್ಧನೆ’ಗೆ ಅಮೂಲ್ಯವಾದ ಸಲಹೆಯನ್ನು ಮಾಡಿ ಕಳುಹಿಸಿದ ಇ-ಮೇಲಿನ ಪ್ರತಿ ಇಲ್ಲಿದೆ:

ಪ್ರಿಯ ಜಯವರ್ಧನೆ,
ಶ್ರೀಲಂಕವೆಂಬ ಪುಟ್ಟ ದ್ವೀಪದಲ್ಲಿ ಅಜಂತ ಮೆಂಡಿಸ್ ಎಂಬ ಮತ್ತೊಬ್ಬ ಮಾಂತ್ರಿಕನ್ನು ಹುಡುಕಿಕೊಂಡು ಬರುವುದರಲ್ಲಿ ಯಶಸ್ವಿಯಾದದ್ದಕ್ಕೆ ಅಭಿನಂದನೆಗಳು. ನಮ್ಮ ದೇಶದಲ್ಲೂ ಅಂಥಾ ಪ್ರತಿಭೆಗಳು ಇಲ್ಲವೆಂದಲ್ಲ. ಆದರೆ ನಮ್ಮ ದೇಶ ದೊಡ್ಡದು ನೋಡು ಅದಕ್ಕೇ ಹುಡುಕುವುದು ಸ್ವಲ್ಪ ಕಷ್ಟ. ಅಂದ ಹಾಗೆ ಮುರುಳಿಗೆ ಒಳ್ಳೆ ಜೂನಿಯರ್ ಸಿಕ್ಕಹಾಗಾಯ್ತು ಬಿಡು.

ಮೊದಲ ಟೆಸ್ಟ್ ಮ್ಯಾಚನ್ನು ನೀರು ಕುಡಿದವರಂತೆ ಗೆದ್ದು ಬಿಟ್ಟಿರಿ. ನಿಮ್ಮ ದೇಶದ ಯಾವುದೋ ಹೈಸ್ಕೂಲು ತಂಡದ ಹಾಗೆ ಕಂಡಿರಬೇಕಲ್ಲವಾ ನಮ್ಮ ತಂಡ? ಆ ಸಚಿನ್ನು, ಗಂಗೂಲಿ, ದ್ರಾವಿಡ್ಡು, ಸೆಹವಾಗು ಮುಂತಾದ ಅತಿರಥ ಮಹಾರಥರೆಲ್ಲಾ ಮುರುಳಿ ಹಾಗೂ ಮೆಂಡಿಸ್‌ರಿಗೆ ಗಲ್ಲಿ ಕ್ರಿಕೆಟರ್‌ಗಳ ಕಂಡಿದ್ದಾರೆ ಅನ್ನಿಸುತ್ತದೆ. ಹಾಗಂತ ತೀರಾ ಸಡಿಲಾಗಬೇಡಿ. ನಮ್ಮ ಜಂಬೋ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುವವನಲ್ಲ. ಏನೋ ನಮ್ಮ ಹಿರಿಯ ಆಟಗಾರರಿಗೆ ಕೈತಪ್ಪಿಹೋದ ಏಕದಿನದ ಸ್ಥಾನದ ಕನವರಿಕೆ, ಯುವ ಆಟಗಾರರಿಗೆ ದಕ್ಕಿದ ಜಾಹೀರಾತುಗಳ ನೇವರಿಕೆ- ಈ ಬೆರಕೆಯಲ್ಲೇ ಅವರು ಮೈಮರೆತಿದ್ದಾರೆ ಅಷ್ಟೇ. ಯಾವಾಗ ಬೇಕಾದರೂ ಅವರು ಗರ್ಜಿಸಬಹುದು, ಗೊತ್ತಲ್ಲ ಅವರೆಂಥಾ ಪೇಪರ್ ಹುಲಿಗಳೆಂದು!

ಈ ಸಂದರ್ಭದಲ್ಲಿ ನಿಮ್ಮ ತಂಡದಲ್ಲೊಂದು ಬದಲಾವಣೆಯನ್ನು ಮಾಡಿಕೊಂಡರೆ ಇನ್ನುಳಿದ ಪಂದ್ಯಗಳನ್ನೂ ಸರಾಗವಾಗಿ ಗೆಲ್ಲಬಹುದು ಎಂದು ನನಗನ್ನಿಸುತ್ತದೆ. ಅಜಂತಾ ಮೆಂಡಿಸ್ ಹಾಗೂ ಮುತ್ತಯ್ಯ ಮುರಳೀಧರನ್ ಇಬ್ಬರೇ ಬೌಲರ್‌ಗಳನ್ನು ಇಟ್ಟುಕೊಂಡು ಉಳಿದವರಿಗೆಲ್ಲಾ ವಿಶ್ರಾಂತಿ ಕೊಟ್ಟುಬಿಡು. ಉಳಿದ ಒಂಭತ್ತು ಮಂದಿಯೂ ಬ್ಯಾಟ್ಸ್ ‌ಮನ್‌ಗಳೇ ಆಗಿರಲಿ. ನಮ್ಮ ತಂಡದವರು ಇವರಿಬ್ಬರಿಗೂ ಹೇಗೆ ಆಡಬೇಕು ಎಂದು ಕಲಿಯುವಷ್ಟರಲ್ಲಿ ಶ್ರೀಲಂಕಾ ಪ್ರವಾಸವೇ ಮುಗಿರುತ್ತದೆ. ನೀವು ಸರಣಿಯನ್ನು ಸುಲಭವಾಗಿ ಗೆಲ್ಲಬಹುದು. ಏನಂತೀಯ?

ಇಂತಿ,
ನಿನ್ನ ಹಿತ ಆಕಾಂಕ್ಷಿ
ನಗೆ ಸಾಮ್ರಾಟ್

ಈ ಇ-ಮೇಲು ಜಯವರ್ಧನೆಯ ದೇಶಕ್ಕೆ ಹಾರುವ ಮೊದಲೇ ಸೇತು ಸಮುದ್ರದ ಬಳಿ ಹಾಯುತ್ತಿರುವಾಗ ಲೀಕ್ ಆಗಿ ಬಿಸಿಸಿಐಗೆ ಲಭ್ಯವಾಗಿ ಬಿಟ್ಟಿದೆಯಂತೆ. ಅವರು ನಗೆ ಸಾಮ್ರಾಟರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಭಾರತ ತಂಡದ ಎಲ್ಲಾ ಬೌಲರ್‌ಗಳನ್ನು ಕೂರಿಸಿಬಿಡಲು ತೀರ್ಮಾನಿಸಿದ್ದಾರೆ. ಲಂಕಾದ ಬ್ಯಾಟ್ಸ್ ಮನ್‌ಗಳಿಗೆ ಬೌಲರ್‌ಗಳೇ ಬೇಕಿಲ್ಲ ಒಂದು ಬೌಲಿಂಗ್ ಮಶೀನು ಇಟ್ಟುಬಿಟ್ಟರೆ ಸಾಕು ಎಂದು ಅವರಿಗೆ ಅನ್ನಿಸಿದೆಯಂತೆ!

  • ಕ್ರಿಕೆಟ್
  • ಟೀಮ್ ಇಂಡಿಯಾ
  • ಭಾರತ
  • ಮೆಂಡಿಸ್
  • ಶ್ರೀಲಂಕ
  • ಹಾಸ್ಯ
~.~
  • nagenagaari ರವರ ಬ್ಲಾಗ್
  • Login or register to post comments
  • 232 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಗಲಿಕ್ಕೊಂದು ಚಿತ್ರ 4
  • ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್
  • ನಗಲಿಕ್ಕೊಂದು ಚಿತ್ರ 2
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ನಗಲಿಕ್ಕೊಂದು ಚಿತ್ರ 8
Syndicate content

ಲೇಖಕರು

nagenagaari's picture

ಪೂರ್ಣ ಹೆಸರು
ನಗೆ ಸಾಮ್ರಾಟ್

ಪರಿಚಯ

ನಗೆಯ ಹೊನಲು ಹರಿಸುವುದರಲ್ಲೇ ತೃಪ್ತಿ. ಅದಕ್ಕಾಗೇ ಈ ತಾಣ ತೆರೆದಿರುವೆ:
http://nagenagaaridotcom.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Vishnu
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
    November 21, 2008 - 5:09am
  • poornimas
    ಉ: ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨
    November 21, 2008 - 4:43am
  • hamsanandi
    ಉ: ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.
    November 21, 2008 - 4:14am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 21, 2008 - 3:57am
  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 537 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator