ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹೆದರ್ ಬೇಡ ಕಣೋ....
ಇದು ಬಲು ಹಳೆಯ ಇಂಸಿಡೆಂಟು. ನಾನು ಆಗಿನ್ನೂ ಕಾಲೇಜಿನಲ್ಲಿದೆ. ನಾನು ಇದ್ದುದು ಹಾಸ್ಟೆಲಲ್ಲಿ.
ನನ್ನ ರೂಮ್ಮೇಟ್ ಬಳ್ಳಾರಿ-ರಾಯಚೂರು ಕಡೆಯವನು. ಅವನು ಹೊಸದಾಗಿ ಈ ಕಡೆಗೆ ಬಂದಿದ್ದ. ಪಾಪ ಅಕ್ಕತಂಗಿಯರ ಜೊತೆ ಬೆಳೆದ ಹುಡುಗನಂತೆ. ತುಸು ಮೆದು.
ನನ್ನ ಮಗ್ಗಲಲ್ಲಿ ಮಲಗುತ್ತಿದ್ದ. ನಮ್ಮ ಕೋಣೆಯಲ್ಲಿ ಸಾಲು ಹಾಸಿಗೆಗಳಲ್ಲಿ ನಮ್ಮ ಮಲಗು.
ಯಾವಾಗಲೂ ನಮ್ಮೆಲ್ಲರ ಜೊತೆ ಬಂದು ಇದ್ದರೂ ತಾನು ಎಂದೂ ಮಾತೆತ್ತಿದ್ದು ಕಾಣೆ. ಮಾತಿನ ಕಾರುಬಾರು ಏನಿದ್ದರೂ ನಾವ್ ಮಯ್ಸೂರು ಕಡೆ, ಶಿವಮೊಗ್ಗ ಕಡೆ, ಮಂಗಳೂರಿನವರದೇ ಜೋರು. ಆ ಕಡೆಯ ಮಂದಿ ಪಾಪ ಮೆದುತನದವರು, ಹಿಂಜರಿಕೆಯವರು, ಮಾತಲ್ಲಿ ಎಲ್ಲರಿಗೂ ತುಂಬಾ ಹಿರಿತನ ತೋರುವ ಒಳ್ಳೆಯವರು ಎಂದು ನಮ್ಮ ಅನಿಸಿಕೆ. ನಾವು ಹಾಗಲ್ಲ ಬಂಡಾಯ, ಗಲಾಟೆ, ತಾಕೀತು, ’ನಾವೇ ಸರಿ’. ನೆರವು ಅನ್ನೋದು ಅವರ ಹುಟ್ಟುಗುಣವೇನೋಪ್ಪ. ನಯವನ್ನ ಅವರಿಂದ ಕಲಿಯಬೇಕು. ಆದರೂ ’ನಯ’ವೆಂಬೋದು ನಮಗೆ ಹೊಂದದ ಸಂಗತಿ ಬಿಡಿ
.
ಹೀಗೆ ಇದ್ದ ನನ್ನ ರೂಮ್ಮೇಟ್ ಗೆಳೆಯ, ನಾವೆಲ್ಲರೂ ಮಯ್ಸೂರಿನ ಬಲಮುರಿಗೋ, ಎಡಮುರಿಗೋ ಹೋದಾಗ ಬಂದಿದ್ದ. ನಾವೆಲ್ಲ ನೀರುಗಾಣದವರಂತೆ ನೀರಿಗೆ ಬಿದ್ದರೆ, ಅವನು ದಡದಲ್ಲೇ ನಿಂತಿದ್ದ. ನಾವೆಲ್ಲ ಹಾಗೂ ಹೀಗು ಮಾಡಿ, ನೀರಿಗೆ ಬಾ ಎಂದು ಕರೆದೆವು. ಬರಲೇ ಇಲ್ಲ. ಹಿಂಜರಿಕೆಯೋ ಹೆದರಿಕೆಯೋ. ಸರಿ, ನಾನು ಹೋಗಿ, ಅವನ ಕಯ್ ಹಿಡಿದು "ಬಾರೋ ನಂಗೆ ಈಜು ಬರತ್ತೆ, ನೋಡಿದ್ಯಲ್ಲ. ಬಾ ಆಳ ಇಲ್ಲ.. ನೋಡು, ಸೊಂಟಕ್ಕೂ ಬರಲ್ಲ" ಎಂದು ಎಳೆದುಕೊಂಡು ಬಂದೆ. ಅವನು ಹಿನ್ಹೆಚ್ಚೆಗಳನ್ನು ಹಾಕುತ್ತಲೇ ಬಂದ. ಸರಿ ನಾವೆಲ್ಲ ಅವನಿಗೆ ಚನ್ನಾಗಿ ನೀರೆರಚಿದೆವು, ಎರಚಿಸಿಕೊಂಡು ದಡಕ್ಕೆ ಹೋದ. ಸರಿ ನಾವೆಲ್ಲ ನೀರಿಂದ ದಣಿದು ಎದ್ದು ಬಂದು, ಹೊಟೆಲ್ಲಲ್ಲಿ ತಿಂದು ಹಾಸ್ಟೆಲ್ ಸೇರಿದೆವು. ಅವನು ಮಾಮೂಲಿ ಎಲ್ಲರ ನಡುವೆ ಇದ್ದರೂ ಮಾತು ಕಡಮೆ.
ರೂಮಲ್ಲಿ ಇರುಳೆಲ್ಲ ಹರಟೆ ಹೊಡೆದು ಮಲಗಿದೆವು. ಅದೆಶ್ಟೊತ್ತಾಗಿತ್ತೋ! ನನಗೆ ಸುಸ್ತಿಂದ ಸಕ್ಕತ್ ನಿದ್ದೆ. ನಡುರಾತ್ರಿ ಯಾರೋ ನನ್ನನ್ನು ಅಲುಗಾಡಿಸದ ಹಾಗೆ ಎಚ್ಚರವಾಯ್ತು. ನೋಡಿದರೆ, ಅವನು ನನ್ನ ತೋಳನ್ನು ಗಟ್ಟಿಯಾಗಿ ಹಿಡಿದು ನಡುಗುತ್ತಿದ್ದ. ನಾನು ಎದ್ದು. "ಏನಾಯ್ತೋ, ಯಾಕೆ? ಇಶ್ಟು ಹೆದರಿಕೊಂಡಿದ್ದೀಯ" ಅಂದೆ. ಅದಕ್ಕೆ ಅವನು "ನಮ್ಮ ಮನೆಯಲ್ಲಿ ನಮ್ಮನ್ನ ನೀರಿಗೆ ಕಳಿಸೋದೇ ಇಲ್ಲ. ನನಗೆ ಕನಸಿನಲ್ಲಿ ನೀರಿಗೆ ಬಿದ್ದು ಮುಳುಗಿದಂತೆ ಆಯ್ತು.. ನೀನು ಬಂದು ಕಯ್ ಹಿಡಿದುಕೊಂಡೆ." ಎಂದ.
ನನಗೆ ಏನು ಹೇಳಬೇಕು ತಿಳೀಲಿಲ್ಲ. ನಾನು ಹೇಳಿದ್ದಾಗ ಇಶ್ಟೇ "ಸರಿ... ನಾನು ಇದ್ನಲ್ಲ.. ಮತ್ಯಾಕೆ ಹೆದರಿಕೆ? ಹೆದರ್ ಬೇಡ ಕಣೋ, ಮತ್ತೆ ಕನಸು ಬಿದ್ರೆ ಎಚ್ಚರಿಸು ಪರವಾಗಿಲ್ಲ, ಈಗ ನಡಿ, ನೀರು ಕುಡಿದು ಬರಣ". ಎಂದು ನೀರುಕುಡಿಯಲು ಹೋದೆವು.
ನನಗೆ ಅಂದು ಅನ್ನಿಸಿದ್ದು, ಪುಕ್ಕಲ ಎಂದು ಮೂದಲಿಸಬೋದು.. ಆದರೆ ಅವರಿಗೆ ಇರುವ ಹೆದರಿಕೆಯನ್ನ ಓಡಿಸೋದು, "ನಿನ್ನ ಜೊತೆಗೆ ಒಬ್ಬನು ಇದ್ದಾನೆ" ಎಂಬ ನಂಬಿಕೆ ಮೂಡಿಸಿಯೇ, ಅದು ಸುಳ್ಳು ನಂಬಿಕೆ ಆದರೂ ಬಾಳಿಕೆಗೆ ಬರುವುದು ಎಂದು ನನ್ನ ಅನಿಸಿಕೆ.....

- mahesha ರವರ ಬ್ಲಾಗ್
- Login or register to post comments
- 345 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೆದರ್ ಬೇಡ ಕಣೋ....
ನಿಜ.
ಜಯಲಕ್ಷ್ಮೀ.ಪಾಟೀಲ್.
ಉ: ಹೆದರ್ ಬೇಡ ಕಣೋ....
ಚಿಕ್ಕಹುಡುಗನಾಗಿದ್ದಾಗ ಶ್ರೀರನ್ಗಪಟ್ಟಣದ ಕಾವೇರಿ ನದೀಲಿ ನಾನು ಬಿದ್ದ್ ಎದ್ದದ್ದು ನೆನಪು ಮಾಡಿದಕ್ಕೆ ನನ್ನೀರಿ, ಮಾಯ್ಸರೇ!!
ಇನ್ತದೆಲ್ಲಾ ಕಿತಾಪತಿಗಳೆಲ್ಲ ಜಾಸ್ತಿ ನಮ್ಗಳದು!! ಇನ್ನು ಏನೇನೋ ಇವೆ ಬರೆಯುಕ್ಕೆ!! ಆದ್ರೆ ಟೈಮಿಲ್ಲ!!
ಪುಣ್ಯ!! ಮನೇಲಿ ಬಯ್ಸ್ಕೊಳಿಲಿಲ್ಲ ಅಶ್ಟೆ ಅವಾಗ!! ಏನೋ ಸುಳ್ಳು ಹೇಳಿ ಜಾರ್ಕೊನ್ಡಿದ್ದೆ!!
ನಿಮ್ಮವ
ಕ್ರಿಸ್ನ