ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ಮದುವೆ ಅಂದರೆ ಅಕ್ಕಿ ಸುರಿದಾಟ ತುಂಬಾ ಇರತ್ತೆ. ಅದಕ್ಕೆ ಮೊನ್ನೆ ನಾವೆಲ್ಲ ಈ ಅಕ್ಕಿಯನ್ನೇ ಯಾಕೆ ಸುರೀಬೇಕು ಅಂತ ತಲೆಕೆಡಿಸಿಕೊಂಡು ಕೂತಿದ್ವು...
ನಾನು ನಮ್ಮ ನೆಲ ರಾಗೀ ನೆಲ, ನಾವು ಅಕ್ಶತೆ ಅಂತ ರಾಗಿಯನ್ನೇ ಬಳಸಬೇಕು.. ಅಕ್ಕಿ ಬೇಳೆಯೋರು ಅಕ್ಕಿ, ಜೋಳದೋರು ಜೋಳ ಬೆಳಸಬೇಕು ಎಂದು ಹೇಳ ತೊಡಗಿದೆ.
ಅದಕ್ಕೆ ನಮ್ಮಮ್ಮ "ಲೋ ರಾಗಿ ಅಕ್ಶತೆ ಹಾಕಿ ಅಂದರೆ, ನಮ್ ಮಾನ ಹಾರಾಜು.. ಅಕ್ಶತೆಗೂ ೨೮ರೂ ಕೇಜಿ ಸಣ್ಣಅಕ್ಕಿ ತರಬೇಕು." ಎಂದು "ನಮ್ಮ ಜೋರು ಕರ್ಮಟ ಲವ್ಕಿಕ ಅಱು"ವನ್ನು ನೆನೆಸಿ ಪುಣ್ಯಬರಲು ದಾರಿ ಮಾಡಿದರು...! ![]()
ಮದುವೆಗೆ ಬರೋ ಮಂದಿ ಏನೆಲ್ಲ ನೋಡ್ತಾರೆ.. ಅಕ್ಶತೆ ದಪ್ಪಕ್ಕಿಯೋ ಸಣ್ಣಕ್ಕಿಯೋ ಅಂತ ನೋಡೋ ಮಂದಿಯೂ ಇರ್ತಾರಂತೆ!

- mahesha ರವರ ಬ್ಲಾಗ್
- Login or register to post comments
- 277 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
"ಅಕ್ಷತೆಯಾಗಿ ಅಕ್ಕಿಕಾಳು" ಕುರಿತು ಒಂದು ಬರಹ ಇಲ್ಲಿದೆ.
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ಇರುವದೆಲ್ಲವ ಬಿಟ್ಟು.....
ನಮ್ಕಡಿ(ಗುಲ್ಬರ್ಗಾ,ಬೀದರ್) ಬ್ರಾಮ್ಹಣರಲ್ಲದೋರು ಜ್ವಾಳಾನೇ ಅಕ್ಷತೆ ಆಗಿ ಉಪಯೋಗ ಮಾಡ್ತಾರ.
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ಹವುದೇನ್ರೀ
ನಿಮ್ ಕಡೀ ಈ ಜೋಳದ ಅಕ್ಶತಿ ಮಂದಿ ಬಗ್ಗಿ ಒಂದು ಬರಹ ಬರೀರ್ಲ!
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ನನ್ನಿ
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ಮಹೇಶ ಅವರೆ,
ಮದುವೆಗಳಲ್ಲಿ ಅಕ್ಕಿಯಷ್ಟೆ ಸುರಿಯುವರೆ? ಹಣದ ಹೊಳೆಯೇ ಹರಿಸುತ್ತರೆ , ಇದರ ಬಗ್ಗೆ ತಾವು ಯೋಚಿಸಿಲ್ಲವೆ?
ಇತ್ತೀಚೆಗೆ ಮದುವೆ ಕೇವಲ ಆಡಂಬರ, ತೋರಿಕೆಗಳಷ್ಟೆ ಮೇಳೈಸಿವೆ ಅಲ್ಲವೆ ಏನಂತೀರಿ?!........
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ಇರುವದೆಲ್ಲವ ಬಿಟ್ಟು....
ಎಷ್ಟೆ ಆದ್ರು, ಬ್ರಾಮಣ್ರು ತಾವು ಎಲ್ಲಾರಿಗಿಂತಾ ಉತ್ತಮ ಅಂತ ಅನ್ಕೊಳ್ಳೋರು.ಅದಲ್ದೆ ಅಕ್ಕಿ ಜ್ವಾಳದಕ್ಕಿಂತಾ ಶ್ರೇಷ್ಠ ಅನ್ನೊ ಭಾವ ನಮ್ಕಡಿ ಐತಿ. ನಂಬಲ್ಲಿ ಹಿಂದ ದಿನಾ ಅನ್ನಾ ಮಾಡ್ತಿರಲಿಲ್ಲ. ಎನರೆ ಹಬ್ಬ ಕಾರಣ ಇದ್ರ ಮಾತ್ರ ಅನ್ನ, ಅದೂ ಬ್ರಾಮಣರ ಮನ್ಯಾಗ ಜಾಸ್ತಿ ಇರತಿತ್ತು.
ನೆಲಕ್ಕ ಹತ್ರ ಇರೊ ಮಂದಿ ತಾವು ನೆಲದಾಗ್ ರಕ್ತ ಬೆವರ ಹರಸಿ ತೆಗದಿದ್ದ ಕಾಳೆ ತೆಗದು ಅದೆ ಅಕ್ಷತಿ ಆಗಿ ಹಾಕ್ತಿದ್ರು. ಬ್ರಾಮಣ್ರೆನು ಉತ್ತೊರಲ್ಲ ಬಿತ್ತೊರಲ್ಲ , ಬ್ರಾಮಣ್ರಿಗಿ ತಮ್ ಶ್ರೇಷ್ಠತಾ ತೊರಿಸ್ಗೊಳ್ಳಿಕ್ಕಿ ಅಕ್ಕಿ ಉಪಯೊಗ ಮಾಡ್ತಿದ್ರು ಅಂತ ಅನಸ್ತದ.
ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
ಇರಬೋದು.. !!
ಆದರೆ ಬ್ರಾಮಣರ ಮದುವೆಗಿಂತ ಗವ್ಡರ ಮದುವೆಗೇ ಹೆಚ್ಚು ಹಣಬೇಕಾಗಿರೋದು....
ಬ್ರಾಮಣರು ಏನೇ ಮಾಡಿಕೊಳ್ಳಿ.. ಆದರೆ ಅವರನ್ನು ಕುರುಡು-ಕುರುಡೇ ಪಾಲೋರಿಗೆ(ಪಾಲೋ ಮಾಡೋರಿಗೆ) ಏನ್ ಅನ್ನೋಣ?
ಒಂದು ವಿಶಯ ಬ್ರಾಮಣರೇ ಬ್ರಾಮಣರನ್ನು ಪಾಲೋಲ್ಲ.
ಮೇಲ್ಮೆ ಅನ್ನೋದು ಎಲ್ಲರೂ ಬಯಸುವಂತಹದ್ದು.. ಆದರೆ ಕೆಲವೇ ಕೆಲವರು ಅದನ್ನು ಜಾಣತನದಿಂದ ಪಡೆಯುವಲ್ಲಿ ಗೆದ್ದಿದ್ದಾರೆ.. ಅದು ಅವರ ಜಾಣ್ಮೆ ಮತ್ತು ಬಲ್ಮೆ.....
ಇವೊತ್ತು ಜಗವಿರೋದೇ ಹಿಂಗೆ..
"ದಾಟು" ಓದಿರಿ.!