ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ ಮಾತಿನ ಒಳಗುಟ್ಟಂನು ಅಂತೂ ಶನಿವಾರ ಬಲು ಎಡರುಗಳನ್ನು ದಾಟಿ ಪಡೆದುಕೊಂಡೆನು. ಇದಕ್ಕಾಗಿ ಗಾಂದಿನಗರದ ಸಪ್ನಕ್ಕೆ ಹೋಗಿದ್ದೆ. ಬೆಲೆ ೧೨೦ರೂ. ಇದು ಶಂಕರಬಟ್ಟರ ತಮ್ಮ ಹಿಂದಿನ ಹೊತ್ತಗೆಯಲ್ಲಿ ಹೇಳಿದೆ "ಹೊಸ ಬರಹದಲ್ಲಿದೆ"
ತಲೆಇಣುಕುಗಳು
೧) ಸೊಲ್ಲರಿಮೆ = ವ್ಯಾಕರಣ
೨) ಮಾತು ಅಂದರೇ ಏನು? ಜೇನುನೊಣಗಳ ಮಾತು, ಕಿವುಡರ ಮಾತು?
೩) ಮಾತು ಮತ್ತು ಉಲಿಕೆ
೪) ಅರ್ತ ಅಂದರೇನು?
೫) ಸದ್ದು, ಪದ, ಸೊಲ್ಲು
೬) ಕನ್ನಡವಾಡುವ ಎಲ್ಲರಲ್ಲೂ ಹುದುಗಿರುವ ಗುಟ್ಟಾದ ಮೇಲ್ಮಟ್ಟ ತಿಳಿವಾದ ಕನ್ನಡ ಸೊಲ್ಲರಿಮೆಯ ಗುಟ್ಟುಗಳು. ಮತ್ತು ಆ ಗುಟ್ಟುಗಳನ್ನು ಹೇಳಿ ತಿಳಿಸುವುದರಲ್ಲಿ ಕನ್ನಡಿಗರ ಸೋಲು.
೭)ಕನ್ನಡಬಗೆಗಳು.
೮) ಹಕಾರ ಇಲ್ಲದ ಕನ್ನಡ ಎಂಬುದು ಒಂದು ಕಿರುನುಡಿ. ಅದೊಂದು ನೆಲದ ಗುಣ. ಹಕಾರ ಬಿದ್ದುಹೋಗುವುದು ಕನ್ನಡನೆಲದ ತಲೆಯಿಂದ ಅಡಿಯವರೆಗೂ ಇರುವ ಸಂಗತಿ.
೯) ಕನ್ನಡ ತಾಯ್ನುಡಿಯಾದ ಮಕ್ಕಳು, ಕನ್ನಡದಲ್ಲೇ ಮೊದಲು ಕಲಿಯಬೇಕು. ಕನ್ನಡದಲ್ಲಿ ತಕ್ಕಮಟ್ಟಿಗೆ ಓದಿಬರೆಯಲು ಬಂದ ಬಳಿಕ ಬೇರೆನುಡಿಕಲಿಯವೇಕು. ಆದರೆ ’ಕನ್ನಡ’ ಎಂದರೆ ಹೇರಳವಾಗಿ ಹೊರನುಡಿಪದದುಂಬಿದ, ಹೊರನುಡಿಪದಗಳಿಗೋಸುಗ ಉಲಿಕೆ ಮಾಡಿದ ಕನ್ನಡವಲ್ಲ. ಇಲ್ಲಿ ಕನ್ನಡವೆಂದರೆ ನಮ್ಮ ನೆಲದ ಉಲಿಕೆ ಮತ್ತು ಹೆಚ್ಚು ಒರೆಗಳನ್ನು ಬಳಸುವ ದಿಟಗನ್ನಡ.
ಒಟ್ಟಾರೆ:
ತುಂಬಾ ಚಂದದ ಹೊತ್ತಗೆ. ಅಚ್ಚಗನ್ನಡದ ಒರೆಗಳ ಬಳಕೆ ಕಣ್ಣುಕೋರಯ್ಸುವಂತದ್ದು. ಕನ್ನಡದ ದಿಟಮಾಟ ತಿಳಿಬಯಸುವವರು ಓದಲೇಬೇಕಾದುದು.

- mahesha ರವರ ಬ್ಲಾಗ್
- Login or register to post comments
- 442 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಇಂಥದೇ ಒಂದು ಲೇಖನವನ್ನು ಯಾರೋ ದಟ್ಸ್ ಕನ್ನಡದಲ್ಲಿ ಹಾಕಿದ್ದರು. ಅದಕ್ಕೆ ಸುನಾಥ ಎಂಬುವರು ಕೊಟ್ಟಿರುವ ಜವಾಬು ನನಗೆ ಬಹಳ ಹಿಡಿಸಿತು. ಅದನ್ಣೇ ಇಲ್ಲಿ ದಾಖಲಿಸಲಿಚ್ಚಿಸುತ್ತೇನೆ.
ಸುನಾಥ ಹೇಳಿದ್ದು :
"ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಕನ್ನಡದ ಉಚ್ಚಾರ ಬೇರೆಬೇರೆಯಾಗಿರುತ್ತದೆ ಹಾಗು ಅದೆಲ್ಲವೂ ಕನ್ನಡವೇ ಎನ್ನುವದು ನಮಗೆಲ್ಲರಿಗೂ ಗೊತ್ತಿದೆ. ಅದಕ್ಕೆ ಯಾರದೂ ವಿರೊಧವಿಲ್ಲ.ಕನ್ನಡದ ಎಲ್ಲ ಪ್ರಕಾರಗಳೂ ನಮಗೆಲ್ಲರಿಗೂ ಪ್ರಿಯವೇ. ಆದರೆ, ಕನ್ನಡಿಗರು ಮಹಾಪ್ರಾಣವನ್ನು ಉಚ್ಚರಿಸುವದಿಲ್ಲ (ಪುಟ ೬೦, ಕನ್ನಡ ಬರಹವನ್ನು ಸರಿಪಡಿಸೋಣ)ಎನ್ನುವ ಶಂಕರ ಭಟ್ಟರ ಹೇಳಿಕೆ ತಪ್ಪು.
ಕನ್ನಡಿಗರಾದ ಮಾಜಿ ಮಂತ್ರಿ ಖರ್ಗೆಯವರಿಗೆ ನೀವು ಕರ್ರಗೆ ಎಂದು ಕರೆದು ನೋಡಿರಿ.ಅವರು ನಿಮ್ಮ ನಾಲಿಗೆ ಸೀಳಿ ನಿಮ್ಮಿಂದ ಖರ್ಗೆ ಎನಿಸಿಯಾರು.ಕನ್ನಡ ಮೂಲರೂಪದಲ್ಲಿ ಮಹಾಪ್ರಾಣಗಳಿಲ್ಲ ಎಂದು ಹೇಳಿ, ಈ ಮಾತಿಗೆ ಸೋಲಿಗರ ಅಥವಾ ಜೇನುಕುರುಬರ ಉದಾಹರಣೆ ಕೊಡುವ ಕೆಲವು ಜನರು ಇದ್ದಾರೆ. ಹಾಗಿದ್ದರೆ ಇವರು ತಾವೇಕೆ ಅವರಂತೆಯೇ ಲಂಗೋಟಿ ಹಾಕಿಕೊಂಡು ತಿರುಗಬಾರದು,ಏಕೆ ಪ್ಯಾಂಟ್ ಹಾಕಿಕೊಳ್ಳಬೇಕು. ಕಾಲ ಬದಲಾಯಿಸಿದಂತೆ ವಿಕಾಸದ ಕಡೆಗೆ ನಾವು ನಡೆಯಬೇಕು. ಇದು ಭಾಷೆಗೂ ಅನ್ವಯವಾಗತ್ತದೆ. ಶಂಕರ ಭಟ್ಟರು ಕನ್ನಡ ವರ್ಣಮಾಲೆಯನ್ನು ಸಂಕುಚಿತಗೊಳಿಸುತ್ತಿದ್ದಾರೆ. ತಮ್ಮ ಉದ್ದೇಶಕ್ಕಾಗಿ ಅವರು ಒಡೆದು ಆಳು ಎನ್ನುವ ವರ್ಣಭೇದ ಮಾರ್ಗ ಅನುಸರಿಸುತ್ತಿರುವದು ವಿಷಾದನೀಯ. "
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಮಾದವ ಸ್ವಾಮಿಗಳೇ>..
ಆ ಸುನಾತರ ಕಮೆಂಟಿರೋದು ಏನ್ಗುರು ಬ್ಲಾಗ್ ಬಗ್ಗೆ..
ನಾನು ಬರೆದುದ ಏನು ಓದಿದ್ರ?..
ನನಗೆ ಒತ್ತು ಎನಿಸಿದ ೯ರಲ್ಲಿ ಅದು ಒಂದು ಅಶ್ಟೇ...
ಒಂದ್ ಸರತಿ ಹೊತ್ತಗೆ ಓದಿ.. ಆಮೇಲೆ ಹೇಳಿ..
ಯಾರೋ ಎಲ್ಲೋ ಹೇಳಿದ್ದನ್ನು ಇಲ್ಲಿ ಹೇಳೋ ಅಲ್ಲಾ ಕಾಪಿ ಮಾಡೋ ತವಕ.. !! ಇದು ನಿಮಗೆ ಮೆರಗಲ್ಲ!
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
"ಯಾರೋ ಎಲ್ಲೋ ಹೇಳಿದ್ದನ್ನು ಇಲ್ಲಿ ಹೇಳೋ ಅಲ್ಲಾ ಕಾಪಿ ಮಾಡೋ ತವಕ.."
ಇದು ನಿಮಗೂ ಅನ್ವಯಿಸುತ್ತಲ್ವ. ಯಾರೋ ಏನೋ ಪುಸ್ತಕ ಬರಕೊಂಡರು ಅಂತ ಅದನ್ನು ಇಲ್ಲಿ ಹೇಳೋ ತವಕ
) 
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಸರಿ..!!
ಸಂಪದದ ತುಂಬ ಒಂದು ಪುಸ್ತಕದ ಬಗ್ಗೆ ಬರೆದಿರೋರೆಲ್ಲ ಇದನ್ನೇ ಮಾಡಿರೋದು..
ಹವುದು ಹೊತ್ತಗೆ ಬಗ್ಗೆ ಹೇಳೋ ತವಕ..!!
ಆದರೆ ನಿಮ್ಮದು.. .. ಕಾಪಿ
ಅದ್ ಸರಿ ಏನೀಗೀಗ ಇಂಗ್ಲೀಶ್ ವಿಕಿಪಿಡಿಯ ಕಾಪಿ ಮಾಡೋದು ನಿಲ್ಲಿಸಿಬಿಟ್ಟಿದ್ದೀರಿ?
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಹೌದು..ಇಲ್ಲಿ ಒಬ್ಬರೋ ಇಬ್ಬರೋ ಬರೀ ಒಬ್ಬರ ಪುಸ್ತಕದ ಬಗ್ಗೆ ನೂರಾರು ಬಾರಿ ಬರೆದಿದ್ದಾರೆ. ನಾವು ಕಾಪಿ ಮಾಡಿದ್ದರೆ ನೀವು ರಿಮೇಕ್ ಮಾಡಿದ್ದೀರಿ..ಇಬ್ಬರಿಗೂ ಸಬ್ಸಿಡಿ ಇಲ್ಲ ಬಿಡಿ.
ವಿತಂಡ ವಾದಕ್ಕೆ ಕೆಲವೊಮ್ಮೆ ವಿಕಿಪಿಡಿಯಾವೇ ಮದ್ದು !
ಬರಹ ಆರೀತಿ ಬರೆಯಿರಿ ಈ ರೀತಿ ಬರೆಯಿರಿ ಅಂತ ಸಾವಿರ ಸರಿ ಕೊರೆದಿದ್ದೇ ಆಯ್ತು..ಒಬ್ಬರಾದ್ರೂ ಮಾತು ಕೇಳ್ಬೇಕಲ್ಲ !!
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಕೊನೆಗೂ "ವಿತಂಡವಾದ" ಪದಪ್ರಯೋಗತೃಪ್ತರಾದಿರಿ..
ಸಲ್ಲದಲ್ಲದೆಡೆ ಸಲ್ಲದಲ್ಲದದ ಬರೆದದು ಸುಳ್ಳುಸುಳ್ಳೇ ಸೊಲ್ಲುಸೊಲ್ಲೇ!!
ನಂಗೆ ಗೊತ್ತಿತ್ತು ನೀವು ನನ್ನ ಕಾಲ್ಕೆರೀತಾ ಇದ್ದೀರಿ ಅಂತ.. ಈಗ ನಿಕ್ಕಿ ಆಯ್ತು..!!
ಮಾದವಾ ಮಾದವಾ!
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಆ ಸುನಾಥರು ಬರೆದಿದ್ದೂ ನೀವು ಹೇಳಿದ ಪುಸ್ತಕದ ಬಗ್ಗೆ. ಮೊದಲು ಅದಕ್ಕೆ ಉತ್ತರ ಕೊಡಿ (ಗೊತ್ತಿದ್ದರೆ). ಅದು ಕಾಪಿಯೋ ಟೀಯೋ ಬೇರೆ ಪ್ರಶ್ನೆ.
ಸುಮ್ಮನೆ ಕಾಡು ಹರಟೆ ಬೇಡ.
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ನಾನು ಕೆಲವೊಮ್ಮೆ ಕೆಲ ವಿಷಯ ಅರಸುವಾಗ ವಿಕಿಪೀಡಿಯಾ ಹುಡುಕುವುದು ದಿಟ..ಕೆಲ ಚರ್ಚೆಗಳಲ್ಲಿ ಅದನ್ನು ಬಳಸಿದ್ದೇನೆ(ಇಲ್ಲಲ್ಲ)
ಅದ್ಸರಿ.. ನಾನು ಸಂಪದದಲ್ಲಿ ವಿಕಿಪೀಡಿಯಾ ಬಳಸಿದ್ದು ಯಾವಾಗ? ಸ್ವಲ್ಪ ಕೊಂಡಿ ಕೊಡಿ..
ಹಾಳು ಮರೆವು.
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
--------------ಯಾರೋ ಏನೋ ಪುಸ್ತಕ ಬರಕೊಂಡರು ಅಂತ ಅದನ್ನು ಇಲ್ಲಿ ಹೇಳೋ ತವಕ ---------.
**************************
http://vikasavada.blogspot.com/
**************************
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಪುಸ್ತಕ ವಿಮರ್ಶೆ ಸಂಪದದಲ್ಲಿ ಉಪಯುಕ್ತ ಮಾಹಿತಿ...ಯಾಕ್ರೀ ನೀವು encourage ಮಾಡಲ್ಲ?
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ನನ್ನಿ!
ಇರಲಿ ಬಿಡ್ರೀ.. ಸಿರಿನೆಲಸಿಗ..
ಓದಿ ಚನ್ನಾಗಿಗೆ ಆ ಹೊತ್ತಗೆ.. ನಿಮಗೆ ಇದ್ರಾಗೆ ಇಂಟರೆಸ್ಟ್ ಇದೆ. ಅದಕ್ಕೆ ’ಶಾಲೆ’ಗೆ ಅಪ್ಪಟಕನ್ನಡದ ಒರೆ ಕೇಳಿದ್ರಲ್ವ..!!
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಮೊದಲು ಬೇರೆ ಭಟ್ಟರ ಹೊತ್ತಗೆ ಓದಬೇಕು ಆಮೇಲೆ ಇದು...
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಹೆ ಹೆ..
ಸರಿ... !! ನನ್ನಿ..
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಇಂಟರೆಸ್ಟ್ ಗೆ ಕನ್ನಡ ಪದ ಏನೂ ಇಲ್ವೋ? ಬಟ್ಟರು ಸೂಚಿಸಿಲ್ವೋ..
**************************
http://vikasavada.blogspot.com/
**************************
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಬಟ್ಟರ ಹೊತ್ತಗೆ ಓದಿ ತಿಳಿದುಕೊಳ್ಳಬೋದು..!
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಬೇರೆ ಬಟ್ಟರ ಹೊತ್ತಗೆಗಳಲ್ಲಿ ಇದ್ದರೂ ಓದಿಕೊಳ್ಳಬೋದು.. ಒತ್ತಾಯ ಜಪ್ಪಯ್ಯ ಇಲ್ಲ!!
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಮತ್ತೆ ಬಂಟರಿಗೇನು ಕೆಲಸ . ಬರೀ ಗಾಳಿ ಬೀಸೋದಾ!
**************************
http://vikasavada.blogspot.com/
**************************
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಏನು ಹಂಗಂದ್ರೆ?
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ಮಾಯ್ಸಣ್ಣ,
ಈ ವಿಷಯವಾಗಿ ನಿಮ್ಮ ಜೊತೆಗೆ ತುಂಬಾ ಸಲ ಜಗಳವಾಡಿಯಾಗಿದೆ.
ಈಗ ನನಗನ್ನಿಸುವುದು, ಶಂಕರ ಬಟ್ಟರು ಸಂಶೋಧಕರು, ಪಂಡಿತರು ಅವರು ನಮ್ಮ ನಿಮ್ಮಗಳ ಹಾಗೆ ಕೇವಲ ಮೇಲ್ಪದರದಲ್ಲಿ ಕಮೆಂಟು ಮಾಡಿ ಕೈತೊಳೆದುಕೊಳ್ಳುವವರಲ್ಲ. ಅವರ ವಿಚಾರವನ್ನು ತಿಳಿಯೋಣ. ಅವರ ಸಂಶೋಧನೆಯ ಬಗ್ಗೆ ಅಕಾಡೆಮಿಕ್ ಆಗಿ ಚರ್ಚಿಸಲು ಸಾಧ್ಯವಾದರ್ ಮಾಡೋಣ. ಅವರ ವಿಚಾರ ಒಪ್ಪಿಗೆಯಾದರೆ ಅವರ ಶೈಲಿಯಲ್ಲಿ ಬರಹವನ್ನು ಬದಲಾಯಿಸೋಣ. ಎಲ್ಲರಿಗೂ ಇರುವುದು ಭಾಷೆಯನ್ನು ಇನ್ನಷ್ಟು ಹತ್ತಿರವಾಗಿಸಿಕೊಳ್ಳುವ, ಆಪ್ತವಾಗಿಸಿಕೊಳ್ಳುವ ಹಂಬಲವೇ ತಾನೇ?
ನೀವು ನಿಮ್ಮ ಕಾಲೆಳೆಯುವವರ, ಸಂಸ್ಕೃತದ ಬಗ್ಗೆ ಪ್ಯಾಶನೇಟ್ ಆಗಿ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅವರು ತಮಗೆ ತೋಚಿದ ಹಾಗೆ ಮಾಡಿಕೊಳ್ಳಲಿ. ಕಡೆಗೆ ಉಳಿಯುವುದು ಭಾಷೆಯನ್ನು ನಾವೆಷ್ಟು ಬಳಕೆಗೆ ಯೋಗ್ಯವಾಗಿ ಉಳಿಸಿಕೊಂಡಿದ್ದೇವೆ ಎಂಬುದು ಮಾತ್ರ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
ನನ್ನಿ..
ನನಗೆ ವಿಶಯವಾಗಿ ಮಾತಾಡರೋ ಜೊತೆ ಯಾವ ಅಬ್ಯಂತವಿಲ್ಲ..
ಆದರೆ ಬರೀ ಚುಡಾಸಲ್ಕೆ, ಮೂದಲಿಸಲ್ಕೆ ಅಂತ ಬರೆದು ಬೀಗೋರ ಕಂಡು ಕನಿಕರ, ಸಿಟ್ಟು, ಉಡಾಪೆ, ಎಲ್ಲಾ ಇದೆ..
ನನ್ನ ಬೆಂಬಡದೇ ಬರೆಯುವ ನೀಯತ್ತನ್ನು ನಾನು ಮೆಚ್ಚಿದ್ದೀನಿ.. !
ನನ್ನಿ..