ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › madhava_hs ರವರ ಬ್ಲಾಗ್

ಶರಣರ ಬದುಕನ್ನು ಮರಣದಲ್ಲಿ ನೋಡು

July 24, 2008 - 11:34am — madhava_hs

ಹೀಗೊಂದು ಕೇಳ್ಮೆ ಕನ್ನಡದಲ್ಲಿ ಇದೆ. ನಾನು ಕೇಳಿದಪ್ರಕಾರ ಇದರರ್ಥ ಅವರಿಗೊದಗಿಬಂದ ಸಾವು, ಸನ್ನಿವೇಶಗಳು ಯಾತನಾರಹಿತ ಕ್ಷಣಗಳು ಅವರು ಹೇಗೆ ಬದುಕಿದರೆಂದು ಸೂಚಿಸುತ್ತದೆ ಎಂದು. ಸಾಮಾನ್ಯವಾಗಿ ಸಾವು ಮನುಷ್ಯನ ಜೀವನದಲ್ಲಿ ಭೌತಿಕವಾಗಿ ಅತ್ಯಂತ ನೋವಿನ ಕ್ಷಣ ಎನ್ನುತ್ತಾರೆ. ಯಾರಾದರೂ ಆರೋಗ್ಯವಾಗಿದ್ದುಕೊಂಡು ಇದ್ದಕ್ಕಿದ್ದಂತೆ ಹೃದಯಾಘಾತವಾಗಿಯೋ ಅಥವಾ ನಿದ್ದೆಯಲ್ಲಿಯೋ ಸಾವನ್ನಪ್ಪಿದರೆ ’ಸುಲಭ ಸಾವು’ ಎಂದು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.

ಅಂದರೆ ವ್ಯಕ್ತಿ ಪರೋಪಕಾರಿಯಾಗಿ, ಸಾತ್ವಿಕನಾಗಿ ಬದುಕಿದಾಗ ಆತನಿಗೆ ಸುಲಭಸಾವು ಎಂದು ಈ ವಾಕ್ಯದ ಅರ್ಥವೇ?

  • ಚಿಂತನೆ
~.~
  • madhava_hs ರವರ ಬ್ಲಾಗ್
  • Login or register to post comments
  • 199 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2008 - 10:19pm — Jayalaxmi.Patil

ಉ: ಶರಣರ ಬದುಕನ್ನು ಮರಣದಲ್ಲಿ ನೋಡು

Jayalaxmi.Patil's picture

ನನಗೂ ಈ ವಾಕ್ಯದ ಬಗ್ಗೆ ಮೊದಲಿನಿಂದಲೂ ಕುತೂಹಲ ಇದೆ.ಜೊತೆಗೇ ಗೊಂದಲವೂ ಸಹ. ಯಾಕೆಂದರೆ ಶರಣರು ಎಂದರೆ ನೆನಪಾಗೋದು ೧೨ನೆಯ ಶತಮಾನ. ನನಗೆ ತಿಳಿದ ಮಟ್ಟಿಗೆ ೧೨ನೆಯ ಶತಮಾನದ ಶರಣರಲ್ಲಿ ಹೆಚ್ಚಿನ ಜನ ಸುಖದ ಸಾವನ್ನು ಕಂಡವರಲ್ಲ. ಬಿಜ್ಜಳನ ಸೈನ್ಯದಿಂದ ತಪ್ಪಿಸಿಕೊಳ್ಳಲು ಪಡುಪಾಟಲು ಪಟ್ಟು, ತಲೆ ಮರೆಸಿಕೊಳ್ಳಲು ಊರೂರು ಅಲೆದು ಹೀನಾಯ ಸಾವು ಕಂಡರು. ಅದರೂ ಈ ನುಡುಗಟ್ಟು ಹೇಗೆ ಪ್ರಚಲಿತವಾಯ್ತೊ? ಇದನ್ನು ಯಾರಾದರು ವಿವರಿಸಿ ಹೇಳಿದರೆ ಉಪಕಾರವಾದೀತು.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 10:25am — savithru

ಉ: ಶರಣರ ಬದುಕನ್ನು ಮರಣದಲ್ಲಿ ನೋಡು

savithru's picture

ಜಯಲಕ್ಷ್ಮಿಯವ್ರೆ,

ಕಲ್ಯಾಣ ಕ್ರಾಂತಿಯ ( ಕ್ರಾಂತಿಯನ್ನು ಎರಡು ರೀತಿಯಲ್ಲಿ ಅರ್ಥ ಮಾಡಿ ಕೊಳ್ಳಬಹುದು!!) ಸಮಯದಲ್ಲಿ
ಹಲ ಶರಣರು ಕತ್ತಿ ಹಿಡಿದಿದ್ದು ನಿಜ. ಆಗ ಹುಟ್ಟಿಕೊಂಡ ನುಡಿಗಟ್ಟು " ಶರಣರಿಗೆ ಮರಣವೇ ಮಾನವಮಿ"

"ಶರಣರ ಬದುಕನ್ನು ಮರಣದಲ್ಲಿ ನೋಡು"....ಈ ನುಡಿಗಟ್ಟನ್ನು ಸ್ವಲ್ಪ ಬೇರೆ ತರದಲ್ಲಿ ಅರ್ಥ ಮಾಡಿಕೊಳ್ಳಬೇಕು.

ಕಾಯಕವೇ ಕೈಲಾಸ ಅಂತ ಬದುಕಿ ಅದರಿಂದ ಬಂದ ಹಣವನ್ನು ಶರಣರು ಎಂದೂ ಕೂಡಿಟ್ತವರಲ್ಲ. "ಕೂಡಿಡುವಿಕೆ" ಶರಣ ಧರ್ಮಕ್ಕೆ ವಿರುದ್ದ. ಹಾಗಾಗಿ ಕೆರೆಯ ನೀರನು ಕೆರೆಗೆ ಚೆಲ್ಲಿ ಅನ್ನೋ ರೀತಿಯಲ್ಲಿ ತಮ್ಮದೆಲ್ಲವನೂ ಸಮಾಜಕ್ಕೆ ನೀಡಿ ಬದುಕಿದವರು. ಅಂದ್ರೆ ಸಮಾಜದಲ್ಲಿ ಜನಸಾಮಾನ್ಯರಾಗಿದ್ದವರು. ಬದುಕಿದ್ದಾಗ "ಇವನಾರೋ" ಅನ್ನೋ ರೀತಿ ಎಲೆ ಮರೆ ಕಾಯಿಯಾಗಿ ಬದುಕಿ ಜನರ ಗಮನಕ್ಕೆ ಬಾರದೆ .....ಸತ್ತಾಗ ಅವರಿಂದ ಉಪಕೃತರಾದವರು ಅವರನ್ನು ನೆನೆಯುವ / ನೆರೆಯುವ ರೀತಿಯಿಂದ ಅವರ ದೊಡ್ಡತನವನ್ನು ತಿಳಿಯಬಹುದಿತ್ತು.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 9:18pm — Jayalaxmi.Patil

ಉ: ಶರಣರ ಬದುಕನ್ನು ಮರಣದಲ್ಲಿ ನೋಡು

Jayalaxmi.Patil's picture

ಧನ್ಯವಾದ ಸವಿತೃ ಅವ್ರೆ. ನನ್ನ ಗೊಂದಲ ದೂರ ಮಾಡಿದಿರಿ. 'ಮರಣವೆ ಮಹಾನವಮಿ' ಎಂಬುದರ ಬಗ್ಗೆ ಗೊತ್ತಿತ್ತು. ಆದರೆ ಈ ನುಡಿಗಟ್ಟು ನನ್ನನ್ನು ಗೊಂದಲಗೊಳಿಸಿತ್ತು.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪದಬೆಳಗು:೨: ಬದುಕು!
  • "ಸಾವು"
  • how much, hom many ಕನ್ನಡದಲ್ಲಿ....
  • ಭಾವನೆಗಳಿಲ್ಲದ ಬದುಕು.
  • ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 112 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator