ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಭಲೇ ಟಿ.ವಿ. ೯
ನಿಜಕ್ಕೂ ಒಂದು ಟಿ.ವಿ.ಚಾನೆಲ್ ಅಂತಹ ಸಾಹಸಕ್ಕೆ ಕೈಹಾಕಿರುವುದು ಶ್ಲಾಘನೀಯ. ಲಂಚಪಡೆಯುವ ಇಂಜಿನಿಯರನ್ನು ಕುಟುಕು ಕಾರ್ಯಾಚರಣೆಮಾಡಿ ಸಾಕ್ಷಿಒದಗಿಸುವುದು, ಸರ್ಕಾರಿ ಟೆಂಡರ್ ಗಳಿಗೆ ಪ್ರತಿಕ್ರಿಯಿಸುವವರಿಗೆ ತಡೆಯೊಡ್ಡುವವರು ಇಂತಹವರನ್ನು ಗುರುತಿಸಿ ಕೆಲವರನ್ನಾದರೂ ಬಂಧಿಸುವ/ಸಸ್ಪೆನ್ಶನ್ ಮಾಡಿಸುವ ಕೆಲಸ ಮಾಡಿದ್ದಾರೆ. ಏನೇ ವರ್ಣ ರಂಜಿತ ಕಾರ್ಯಕ್ರಮ ಮಾಡಲಿ, ಏನೇ ಸುದ್ಧಿ ರಿಪೀಟ್ ಮಾಡಲಿ ಈ ಥರಹದ ಕೆಲಸ ಮಾಡುತ್ತಿರುವುದು ಒಳ್ಳೆಯಬೆಳವಣಿಗೆ. ಅಲ್ಲವೇ?

- madhava_hs ರವರ ಬ್ಲಾಗ್
- Login or register to post comments
- 284 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಭಲೇ ಟಿ.ವಿ. ೯
ಭಲೇ ಮಾಧವರೆ, ವಿಷಯ ಏನು ಎಂಬುದನ್ನೂ ತಿಳಿಸದೆ ಮೊದಲೇ ಹೊಗಳಿಬಿಡ್ತೀರ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಭಲೇ ಟಿ.ವಿ. ೯
ನಾನು ಮೊದಲ ಮೂರು ಸಾಲಿನಲ್ಲಿ ಹೇಳಿರುವುದು ಅವರು ನಡೆಸಿದ ಎರಡು ಕುಟುಕು ಕಾರ್ಯಾಚರಣೆಯನ್ನು. ಅದೇ ವಿಷಯ! ಹೆಚ್ಚಿನವಿವರಗಳನ್ನು ಟಿ.ವಿ.೯ ನಿಯಮಿತವಾಗಿ ನೋಡುವವರಿಂದ ತಿಳಿದುಕೊಳ್ಳುವುದು
ಉ: ಭಲೇ ಟಿ.ವಿ. ೯
ಇಷ್ಟು ಮಾತ್ರ ಓದಿ ಹೆಚ್ಚು ಜನ ತಿಳಿದುಕೊಳ್ಳುವ ಪ್ರಯಾಸ ಕೂಡ ಮಾಡಲ್ರಿ!
ಏನೋ ಬರೆದಿದ್ದಾರೆ ಅಂದುಕೊಂಡು ಮುಂದಕ್ಕೆ ಹೊಟೋಗ್ತಾರೆ.
ಹೀಗೆ ಬರೆಯುವಾಗ ಸ್ವಲ್ಪ ಹಿಂದೆ ಮುಂದೆ ಬರೆದರೆ ಉತ್ತಮ ಅಲ್ವ? ನನ್ನ ಅಭಿಪ್ರಾಯ ಅದು - ನೋಡಿ ನಿಮಗೇನನ್ನಿಸುತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಭಲೇ ಟಿ.ವಿ. ೯
ಟಿವಿ೯ ಕನ್ನಡ ಚಾನೆಲ್ನ ಕೆಲವಾರು ಕಾರ್ಯಕ್ರಮಗಳು ಚೆನ್ನಾಗಿರುತ್ತವೆ. ಹಿಡೆನ್ ಕ್ಯಾಮೆರಾದ ಸಹಾಯದಿಂದ ಸೆರೆ ಹಿಡಿಯುವ ಭ್ರಷ್ಟಾಚಾರಗಳು ನಿಜಕ್ಕೂ ಹೊಗಳತಕ್ಕದ್ದು. ಕಂಟ್ರಾಕ್ಟರ್ಗಳ ದಬ್ಬಾಳಿಕೆ , ಬಿ ಬಿ ಎಂ ಪಿ ಯಲ್ಲಿ ನೆಡೆಯುವ ಅವ್ಯವಹಾರವನ್ನು ಚೆನ್ನಾಗಿಯೆ ಬಿತ್ತರಿಸಿತ್ತು. ಅವರ ಜಾಹೀರಾತುಗಳು (ನೀರನ್ನು ಸಂರಕ್ಷಿಸುವುದು , ಶಾಲೆಗೆ ಹೋಗುವ ಬಾ ಗೆಳೆಯ , ಭ್ರಷ್ಟಾಚಾರದ ವಿರುದ್ದ) ಕೂಡ ಚೆನ್ನಾಗಿರುತ್ತೆ. ಕನ್ನಡ ಚಾನೆಲ್ವೊಂದು ಈ ರೀತಿ ಬೆಳೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿ.
ಆದ್ರೆ ಬೇರೆ ಚಾನೆಲ್ಗಳ ತರಹ ಸಣ್ಣ ಸಣ್ಣ ವಿಷಯಗಳಿಗೆ ಒತ್ತು ಕೊಡುವುದು , ಅತಿಥಿಗಳನ್ನು ಸಂದರ್ಶನ ಮಾಡುವುದರಲ್ಲಿ ಎಡವಿದ್ದಾರೆ. ಅತಿಥಿಗಳನ್ನು ಆಹ್ವಾನಿಸಿ ಅವರ ಮಟ್ಟಕ್ಕೆ ಪ್ರಶ್ನೆಗಳನ್ನು ಕೇಳದೆ ಇವರು (ಕಾರ್ಯಕಮಗಳನ್ನು ನೆಡೆಸಿಕೊಡುವವರು) ತಮ್ಮ ಕೆಳ ಮಟ್ಟವನ್ನು ಪ್ರದರ್ಶಿಸುತ್ತಾರೆ.
ಉ: ಭಲೇ ಟಿ.ವಿ. ೯
ಕಾರ್ಯಕ್ರಮಗಳನ್ನು ನಡೆಸಿಕೊಡುವ anchorsಗಳನ್ನ ಹಳಿಯಲಾಗುವುದಿಲ್ಲ ಈ ಬಗ್ಗೆ. ಏಕೆಂದರೆ ಅವರು ಕೇಳುವ ಪ್ರಶ್ನೆಗಳನ್ನು ನನಗನಿಸಿದಂತೆ ಅದರ ಹಿಂದಿರುವ ಒಂದು ತಂಡವೇ ರೆಡಿ ಮಾಡಿರುತ್ತದೆ. ಸಮಯದ ಅಭಾವ ಇವರನ್ನು ಕೂಡ ಸವಕಲು ಮಾಡಿಬಿಟ್ಟಿರುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಭಲೇ ಟಿ.ವಿ. ೯
ತಂಡದವರು ಜಾಹಿರಾತುಗಳಿಗೆ ಸಮಯವನ್ನು ಚೆನ್ನಾಗಿ ಫಿಕ್ಸ್ ಮಾಡಿರುತ್ತಾರೆ. ತಂಡದವರು ರೂಪಿಸಿಕೊಟ್ಟ ಮಾಹಿತಿಯನ್ನೇ ಹೇಳುವ ಬದಲು (ನ್ಯೂಜಿಲ್ಯಾಂಡ್ ನ ಸೈಮನ್ ಟೊಫೆಲ್ ಅಂಪೈರ್ , ಮಗಳನ್ನೆ ಕೊಂದ ತಂದೆ ,.......ಇನ್ನು ಬಹುತೇಕ ಸಂಧರ್ಭದಲ್ಲಿ ನಾವು ಕಾಣಬಹುದು) anchors or news readers ತಮ್ಮ ಸಾಮಾನ್ಯ ಜ್ನಾನವನ್ನು ಉಪಯೋಗಿಸಿಕೊಂಡು ಹೇಳಿದ್ರೆ ಟಿವಿ ೯ ಇನ್ನು ಚೆನ್ನಾಗಿ ಮೂಡಿಬರುತ್ತದೆ. ತಂಡದವರ ಜೊತೆ anchorsರ ಪಾತ್ರವು ಇರುತ್ತೆ ಅಂತನಿಸುತ್ತೆ
ತಂಡದವರು ರೆಡಿ ಮಾಡಿಕೊಡುವ ಪ್ರಶ್ನೆಗಳನ್ನೆ ಆ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಕೇಳಲು ಆಗುವುದಿಲ್ಲ (ಇದು ತಪ್ಪಿದ್ದರೆ ದಯವಿಟ್ಟು ಹೇಳಿ , ನನಗೆ ತಿದ್ದಿಕೊಳ್ಳುವುದಕ್ಕೆ ಸಹಾಯವಾಗುತ್ತೆ) , ಕೆಲವೊಮ್ಮೆ ಸಂಧರ್ಭಕ್ಕನುಸಾರವಾಗಿ ಪ್ರಶ್ನೆಗಳನ್ನು ಕೇಳಬೇಕಾದಾಗ ಕೆಲವು anchors ತಮ್ಮ ಇತಿ ಮಿತಿಗಳನ್ನೆ ಮರೆತು (ಗತ್ತಿನಲ್ಲಿ , ಯೋಚಿಸದೇ ) ಪ್ರಶ್ನೆಗಳನ್ನು ಕೇಳುತ್ತಾರೆ . ಕೆಲವಾರು "ವಿಶೇಷ" ಕಾರ್ಯಕ್ರಮಗಳಲ್ಲಿ udA: ಸಂತೊಷ್ ಕಲಿ , ಕರಾಟೆ ಪಟುವಿನ , ಬದುಕ್ಕಿದ್ದಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿದವರ ಸಂದರ್ಶನಗಳಲ್ಲಿ ಇದನ್ನು ಗಮನಿಸಬಹುದು.