ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › madhava_hs ರವರ ಬ್ಲಾಗ್

ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

September 5, 2008 - 12:34pm — madhava_hs

ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ. ಭಾರವಿರುವ ಭ್ಯಾಗ್ ಗಳನ್ನು ಹೊತ್ತುಕೊಂಡು ಟ್ರಾಫಿಕ್ ಸಿಗ್ನಲ್ಗಳು, ಸಿಟಿ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಕ್ಕಳನ್ನು ನೋಡಿದಾಗ ಇವರು ಶಾಲೆಗೆ ಹೋಗುತ್ತಿದ್ದಾರಾ ಅಥವಾ ಯುದ್ಧಕ್ಕೆ ಹೊರಟಿದ್ದಾರಾ ಅನ್ನಿಸುತ್ತದೆ. ಇನ್ನು ಕೆಲಹುಡುಗರನ್ನು ಕುರಿತುಂಬಿದಂತೆ ಮಾರುತಿವ್ಯಾನಿನೊಳಕ್ಕೆ ದಬ್ಬಿ ಕಳಿಸಲಾಗುತ್ತದೆ. ಸಾಲದ್ದಕ್ಕೆ ಕೆಟ್ಟ ಕಾಂಪಿಟಿಶನ್ ಬೇರೆ. ಕೆಲ ತಿಂಗಳುಗಳಹಿಂದೆ ಒಬ್ಬರಮನೆಗೆ ಹೋಗಿದ್ದಾಗ ಎಸ್ಸೆಲ್ಸಿ ಪಾಸಾದ ಆ ಹುಡುಗ ಗೊಳೋ ಅಂತ ಅಳುತ್ತಾ ಕುಳಿತಿದ್ದ. ಯಾಕೆ ಅಂತ ಕೇಳಿದ್ದಕ್ಕೆ ನನಗೆ ಇಂಗ್ಲೀಷ್ ನಲ್ಲಿ ಬರೀ ೮೪ ಅಂಕಗಳು ಬಂದಿವೆ. ಅದೇ ನನ್ನ ಸ್ನೇಹಿತ, ಎಲ್ಲ ಟೆಸ್ಟುಗಳಲ್ಲಿ, ಅರ್ಧವಾರ್ಶಿಕದಲ್ಲಿ ಕಡಿಮೆ ಅಂಕ ತಗೊಂಡರೂ ಅವನಿಗೆ ೯೦ ಬಂದಿದೆ..ಇದು ಅನ್ಯಾಯ ಅಂತ ಭೋರಿಡುತ್ತಿದ್ದ. ತಂದೆ ತಾಯಿಯರದ್ದೂ ಅದೇಗೋಳು. ಅಯ್ಯೋ ಈ ಬಾರಿ ಕಡಿಮೆ ಅಂಕ ತಗೊಂಡಿದ್ದಾನೆ ನೋಡಿ ಎಲ್ಲಿ ಸೀಟು ಸಿಗುತ್ತೋ ಏನು ಕತೆಯೋ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದರು.
ಒಮ್ಮೆ ಅನಂತಮೂರ್ತಿಯವರು ಈ ಮಾತು ಹೇಳಿದ್ದರು. ಆಯಾ ಬಡಾವಣೆಯ ಶಾಲೆಗಳಲ್ಲಿಯಮಕ್ಕಳು ಅಲ್ಲಿಗೆ ಹತ್ತಿರವಿರುವ ಶಾಲೆಗಳಲ್ಲೇ ಕಲಿಯಬೇಕು. ಇದು ಕಡ್ಡಾಯವಾಗಬೇಕು. ಹಾಗಾದಾಗ ಎಲ್ಲ ಬಡ/ಶ್ರೀಮಂತ/ದಡ್ದ/ಬುದ್ಧಿವಂತ ಮಕ್ಕಳು ಒಂದೆಡೆ ಸೇರಿ ಆರೋಗ್ಯಕರ ವಾತಾವರಣ/ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಅಂತ. ಶಿಕ್ಷಣದವಿಷಯದಲ್ಲಿ ಅನಂತ್ ಉತ್ತಮ ಸಲಹೆ ಕೊಡುತ್ತಾರೆ. ಆದರೆ ಯಾರೂ ಅದರಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅದೇ ಬೇಜಾರು. ಹೀಗೆ ಮನೆಗೆ ಹತ್ತಿರವಿರುವ ಶಾಲೆಗೆಕಳಿಸುವುದು, ಸರಳ ಯೂನಿಫಾರಂ ನಿಗಧಿಪಡಿಸುವುದು, ಬೆಳಗ್ಗೆ ೧೦ ರಿಂದ ಮಧ್ಯಾನ್ಹ ೩.೩೦ ರವರೆಗೆ ಶಾಲೆ ನಡೆಸುವುದು, ನಂತರ ೫ ಗಂಟೆಯವರೆಗೆ ಶಾಲಾ ಆವರಣದಲ್ಲಿ ಮಕ್ಕಳನ್ನು ಆಟವಾಡಿಸುವುದು ಒಳ್ಳೆಯದಲ್ಲವೇ? ಬಹಳಷ್ಟು ಶಾಲೆಗಳಲ್ಲಿ ವಿಶಾಲವಾದ ಮೈದಾನಗಳೇ ಇರುವುದಿಲ್ಲ. ಬರೀ ವ್ಯಾನು, ಸ್ಕೂಲು, ಟ್ಯೂಷನ್ ಅಂದುಕೊಂಡು ಆಟ-ಚಟುವಟಿಕೆಗಳಿಲ್ಲದೆ ಮಕ್ಕಳು ಬಾಲ್ಯವನ್ನು ಕಳೆಯಬೇಕೆ. ಚಿಕ್ಕ ಚಿಕ್ಕ ಊರಿನ ಥರ ಸಂಜೆಯಾದನಂತರ ಬೀದಿಯ ಹುಡುಗರೆಲ್ಲಾ ಸೇರಿ ಆಟವಾಡುವುದು ಇವೆಲ್ಲಾ ಈಗ ಮರೆಯಾಗಿದೆ. ಈಗ ಏನಿದ್ದರೂ ಮನೆಯೊಳಗೆ ಆಡಿಕೊಳ್ಳಬೇಕು. ಎಲ್ಲೋ ಒಂದುಕಡೆ ಮಕ್ಕಳನ್ನು ಇಶ್ಟೆಲ್ಲಾ ಬಂಧನಗಳನ್ನು ಮಾಡಿ ಉಸಿರುಗಟ್ಟಿಸುತ್ತಿದ್ದೇವೆ ಎನ್ನಿಸುವುದಿಲ್ಲವೇ?

  • ಚಿಂತನೆ
~.~
  • madhava_hs ರವರ ಬ್ಲಾಗ್
  • Login or register to post comments
  • 145 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 5, 2008 - 9:58pm — kalpana

ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

kalpana's picture

"ಆಯಾ ಬಡಾವಣೆಯ ಶಾಲೆಗಳಲ್ಲಿಯಮಕ್ಕಳು ಅಲ್ಲಿಗೆ ಹತ್ತಿರವಿರುವ ಶಾಲೆಗಳಲ್ಲೇ ಕಲಿಯಬೇಕು. ಇದು ಕಡ್ಡಾಯವಾಗಬೇಕು. " - ಇದು ಅಮೇರಿಕದಲ್ಲಿ ನಿಜ. ಮತ್ತೆ ಈ ಶಾಲೆಗಳಿಗೆ ಏನೂ ಶುಲ್ಕವಿಲ್ಲ!

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೀಗೂ ಜೀವಿಸಬಹುದೇ?
  • ಮಕ್ಕಳ ರಾತ್ರಿ ಶಿಬಿರ
  • ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ- ರಘೋತ್ತಮ್ ಕೊಪ್ಪರ
  • ಅಜ್ಜಿ ಮತ್ತು ಮುಗ್ಧ ಮನಸ್ಸು
  • ವಿಶ್ವದ ಅತಿ ಜಾಣ ಹಾಗೂ ಬುಧ್ಧಿವಂತ ಮಕ್ಕಳಿರುವ ದೇಶ ಯಾವುದು?
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 110 ಅತಿಥಿಗಳು ಆನ್ಲೈನ್ ಇರುವರು.


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator