ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › kuchela ರವರ ಬ್ಲಾಗ್

ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ

July 7, 2007 - 8:14pm — kuchela
har.jpg

- ತಾಲೂಕನ್ನು ಬರ ಮುಕ್ತ- ಜಲಸಂಪದ್ಭರಿತವಾಗಿಸುವ ಉದ್ದೇಶ
- ತಾಲೂಕಿನ ೪೫ ಸಾವಿರ ಮನೆಯವರಿಗೆ ನೀರಿನ ಬಗ್ಗೆ ಜಾಗೃತಿ

ಇಡೀ ತಾಲೂಕಿನ ಜನರಲ್ಲಿ ನೀರಿನ ಬಗ್ಗೆ ತಿಳಿವಳಿಕೆ ನೀಡಿ, ಜಲ ಸಾಕ್ಷರರನ್ನಾಗಿ ಮಾಡಿ ತಾಲೂಕನ್ನು ಜಲಸಂಪದ್ಭರಿತ ತಾಲೂಕು ಮಾಡುವ ಹೊಸ ಪ್ರಯತ್ನವೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ.
ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿ ಈ ರೀತಿಯ ಪ್ರಯತ್ನವೊಂದು ಸಾಗಿದೆ.
ಸಾಗರ ಮಲೆನಾಡಿನ ಕೇಂದ್ರ ಬಿಂದು. ಇಲ್ಲಿ ಸರಾಸರಿ ೨೦೦ ಇಂಚು ಮಳೆಯಾಗುತ್ತದೆ. ಆದರೆ, ಈ ತಾಲೂಕಿನ ಬಹುತೇಕ ಭಾಗ ಏಪ್ರಿಲ್ ಮೇನಲ್ಲಿ ನೀರಿಗೆ ಹಪಹಪಿಸುತ್ತದೆ. ಜನರು ನೀರಿಗಾಗಿ ಅಲೆಯುತ್ತಾರೆ. ಟ್ಯಾಂಕರ್ ಮೂಲಕ ನೀರಿನ ಸೌಲಭ್ಯ ಪಡೆಯುವ ಸ್ಥಿತಿ ತಲುಪಿದೆ. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಈಗ ಪ್ರಯತ್ನ ಸಾಗಿದೆ.
ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರ ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮ ಹಾಕಿಕೊಂಡಿದ್ದು, ಈಗ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ.
ಸಾಗರ ತಾಲೂಕನ್ನು ಬರಮುಕ್ತ ಮತ್ತು ಜಲಸಂಪದ್ಭರಿತ ತಾಲೂಕನ್ನಾಗಿ ಮಾಡುವುದು ಪರಿವಾರದ ಉದ್ದೇಶ. ಅದಕ್ಕಾಗಿ ಯೋಜನೆ ಸಿದ್ಧವಾಗಿದ್ದು ‘ತಿಳಿ’ನೀರ ಮೂಲ- ಜಲ ಶಿಕ್ಷಣ ಅಭಿಯಾನ.
ಇದು ಆರಂಭಗೊಂಡು ಎರಡು ವರ್ಷಗಳೇ ಕಳೆದಿದ್ದು, ಸಾಕಷ್ಟು ಕೆಲಸ ಮಾಡಿದೆ. ಇದಕ್ಕೆ ಉತ್ತಮ ಉದಾಹರಣೆ ತಾಲೂಕಿನ ಹುಳೇಗಾರು- ಇದು ಸಂಪೂರ್ಣ ಜಲ ಸಾಕ್ಷರ ಗ್ರಾಮ.
ತಾಲೂಕಿನಲ್ಲಿ ನಡೆಯುವ ಅಭಿಯಾನದಲ್ಲಿ ೧೨೦ ಕಾರ್ಯಕರ್ತರು ೧೦೦ ದಿನಗಳ ತಾಲೂಕಿನಲ್ಲಿ ಅಂದಾಜು ೪೫ ಸಾವಿರ ಮನೆಯ ೨ ಲಕ್ಷ ಮಂದಿಯಲ್ಲಿ ನೀರಿನ ಬಗ್ಗೆ ತಿಳಿವಳಿಕೆ ಮೂಡಿಸುತ್ತಾರೆ. ಕಡೇ ಪಕ್ಷ ೫ ಸಾವಿರ ಮನೆಯವರು ಜಲ ಸಾಕ್ಷರರನ್ನಾಗಿ ಮಾಡುವ ಮಹೋದ್ದೇಶ ಇದೆ.
ತಾಲೂಕಿನಾದ್ಯಂತ ನಡೆಯುವ ಆಂದೋಲನಕ್ಕೆ ಶೀಘ್ರವೇ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ತಾಲೂಕಿನಲ್ಲಿ ಈಗಾಗಲೇ ಬಹಳಷ್ಟು ಮಂದಿ ಜಲ ಸಾಕ್ಷರರಿದ್ದಾರೆ ಅವರೇ ಅಭಿಯಾನದ ಕಾರ್ಯಕರ್ತರು ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರವೂ ಇದೆ. ಸುಮಾರು ೧೫೦ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಕೈಜೋಡಿಸಿದ್ದಾರೆ. ಅತಿ ದೊಡ್ಡದಾದ ಆಂದೋಲನ ಈಗ ಆರಂಭವಾಗಿದೆ.
ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತಾರೆ, ಮಳೆ ಬಂದ ಕೂಡಲೇ ನೀರಿನ ಬಗ್ಗೆ ಜನರು ಕಾಳಜಿ ವಹಿಸುವುದಿಲ್ಲ. ಈ ಬಗ್ಗೆ ಜಾಗೃತಿ ಮಾಡಿಸಲಾಗುತ್ತದೆ ಎನ್ನುತ್ತಾರೆ ಕೃಷಿ ಪ್ರಯೋಗ ಪರಿವಾರದ ಆ.ಶ್ರೀ. ಆನಂದ.
ಮಳೆಗಾಲದಲ್ಲಿ ನೀರಿನ ಬಗ್ಗೆ ಕಾಳಜಿ ವಹಿಸಿದರೆ ಮುಂದೆ ತೊಂದರೆಯಾಗದು ಎಂಬುದು ಅವರ ಅಂಬೋಣ.

ಟಿ ಸಾಧನೆ ಮಾಡಿದ ಹುಳೇಗಾರು
ಈ ಗ್ರಾಮ ಸಂಪೂರ್ಣ ಜಲ ಸಾಕ್ಷರ ಗ್ರಾಮ. ಇಲ್ಲಿರುವ ಶೇ. ೯೯ ಭಾಗ ಮಕ್ಕಳು, ಪುರುಷರು, ಮಹಿಳೆಯರು ಜಲಸಾಕ್ಷರರು. ನೀರಿನ ಬಳಕೆ, ನೀರಿನ ಸಂಗ್ರಹ, ಸರಿಯಾದ ಬಳಕೆ ಬಗ್ಗೆ ಮಾಹಿತಿ ಇದೆ. ಅದನ್ನು ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತಂದಿದ್ದಾರೆ.
ಭೂಮಿಗೆ ಬಿದ್ದು ಓಡುವ ನೀರನ್ನು ನಿಲ್ಲಿಸಲು, ನಿಂತ ನೀರನ್ನು ಇಂಗಿಸಲು ಗ್ರಾಮದಲ್ಲಿ ಇಂಗು ಗುಂಡಿ ತೋಡಲಾಯಿತು. ಈವರೆಗೆ ಒಟ್ಟು ೪೦೦೦ ಇಂಗು ಗುಂಡಿ ತೋಡಲಾಗಿದ್ದು, ಒಂದು ಸಲ ಗುಂಡಿ ತುಂಬಿದರೆ ಅಂದಾಜು ೨೫ ಲಕ್ಷ ಲೀಟರ್ ನೀರಿಂಗುತ್ತದೆ.
ಇಲ್ಲಿರುವ ಶಾಲೆಯ ೪ಎಕರೆ ಪ್ರದೇಶ ಹೊಂದಿರುವ ಶಾಲೆಯ ಆವರಣದಲ್ಲೂ ಮಕ್ಕಳು, ಪೋಷಕರ ಸಹಾಯದಿಂದ ೨೦೦ ಇಂಗು ಗುಂಡಿ ತೋಡಿ ನೀರಿಂಗಿಸುವ ಕಾರ್ಯಕ್ಕೆ ಕಳೆದ ಮಳೆಗಾಲದಲ್ಲೇ ಕೈಹಾಕಿದ್ದಾರೆ.
ಶಾಲೆಯ ಸೂರಿನ ನೀರು ಹಿಡಿದು ಬಳಕೆ ಮಾಡಲು ಪ್ರಾರಂಭ ಮಾಡಲಾಯಿತು. ಮಕ್ಕಳು ಶಾಲೆಯಲ್ಲಾದ ಕ್ರಾಂತಿಯನ್ನು ಮನೆಯಲ್ಲೂ ಜಾರಿಗೆ ತರಲು ಪ್ರಯತ್ನಿಸಿದರು. ಪೋಷಕರಲ್ಲೂ ಜಲ ಜಾಗೃತಿ ಉಂಟಾಯಿತು.
ಗುಡ್ಡಗಳ ಮಧ್ಯೆ ಗ್ರಾಮ ಇದ್ದು, ಮನೆಗಳಿಗೆ ನೀರು ನುಗ್ಗಬಾರದೆಂಬ ಕಾರಣಕ್ಕೆ ಅಗಳ (ದೊಡ್ಡ ಟ್ರಂಚ್) ಹೊಡೆಯಲಾಗಿದೆ. ಆ ಅಗಳಲ್ಲಿ ಸಣ್ಣ ಒಡ್ಡು ನಿರ್‍ಮಿಸಿ ಓಡುವ ನೀರಿಗೆ ಸಣ್ಣ ಪ್ರಮಾಣದಲ್ಲಿ ತಡೆಯೊಡ್ಡಿ ಇಂಗಿಸಲಾಗುತ್ತಿದೆ.
ಕೃತಕ ಕೆರೆ ನಿರ್‍ಮಿಸಲಾಗಿದ್ದು, ಅದು ೬ ಲಕ್ಷ ಲೀಟರ್ ನೀರನ್ನು ಹಿಡಿದಿಡುತ್ತದೆ. ಗುಡ್ಡದಿಂದ ಹರಿದು ಬರುವ ನೀರನ್ನು ಇಲ್ಲಿಗೆ ಹರಿಸಲಾಗುತ್ತದೆ. ಅಲ್ಲಿ ಇಂಗಿಸುವ ಪ್ರಯತ್ನ ನಡೆದಿದೆ.
ಮನೆಯ ಅಂಗಳದಲ್ಲಿ ಇಂಗು ಗುಂಡಿ ಮೂಲಕ ನೀರಿಂಗಿಸಿದರೆ, ಸೂರಿನ ನೀರನ್ನು ತಿಳಿಗೊಳಿಸಿ ಬಾವಿಗೆ ಬಿಡುತ್ತಾರೆ. ಅಲ್ಲದೇ ಸೂರಿನಿಂದ ಡ್ರಂ, ಬಾನಿಗಳಿಗೆ ನೀರು ಬರುವಂತೆ ವ್ಯವಸ್ಥೆ ಮಾಡಿ ಪಾತ್ರೆ, ಸ್ನಾನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಮಳೆಗಾಲದಲ್ಲಿ ಹಿಡಿದಿಟ್ಟ ನೀರು ಬೇಸಿಗೆಯಲ್ಲಿ ಈ ಹಳ್ಳಿಗರಿಗೆ ಸಹಕಾರವಾಗುತ್ತದೆ. ಬರದಿಂದ ಗ್ರಾಮ ದೂರ.
ಈ ಸಣ್ಣ ಗ್ರಾಮ ಈಗ ಇಡೀ ತಾಲೂಕಿಗೆ ಮಾದರಿ.

- ಶ್ರೀಕಾಂತ್ ಭಟ್

  • ಲೇಖನ
~.~
  • kuchela ರವರ ಬ್ಲಾಗ್
  • Login or register to post comments
  • 731 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 9, 2007 - 9:40am — sindhu

ಉ: ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ

sindhu's picture

ಶ್ರೀಕಾಂತ್,

ಓದಿ ಖುಷಿಯಾಯಿತು. ದೂರದೂರಿನಲ್ಲಿರುವ ಸಾಗರದವಳು ನಾನು. ನಮ್ಮಿಂದ ಏನು ಉಪಯೋಗವಾಗಬಹುದು ಅಂತ ಏನಾದರೂ ಯೋಚನೆಯಿದ್ದರೆ, ಖಾಸಗಿ ಮೈಲ್ ಕಳಿಸಿ.

ಹನಿಯು ಹೊಳೆಯಾಗಲಿ, ಹೊಳೆಯ ಕಾಯುವ ಚೈತನ್ಯ ನಮ್ಮದಿರಲಿ,

ಸಿಂಧು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬತ್ತಿದ ಕೆರೆಯಲ್ಲಿ ಮಳೆ ನೀರು ಬಿತ್ತಿ
  • ದೋಣಿ
  • ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?
  • ಝೆನ್: ೩: ಒಂದು ಹನಿ
  • ನೀರ ದನಿ
Syndicate content

ಲೇಖಕರು

kuchela's picture

ಪೂರ್ಣ ಹೆಸರು
ಶ್ರೀಕಾಂತ್

ಪರಿಚಯ

ಹಾಯ್, ಸಹೃದಯ ಗೆಳೆಯರಿಗೆ ನನ್ನ ನಮನ. ಶ್ರೀಕಾಂತ್ ನನ್ನ ಹೆಸರು. ವಾಸಸ್ಥಳ ಶಿವಮೊಗ್ಗ. ಊರು ಕೋಟ(ದ.ಕ). ಓದಿದ್ದು ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ನಲ್ಲಿ, ಬಿಬಿಎಂ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 385 ಅತಿಥಿಗಳು ಆನ್ಲೈನ್ ಇರುವರು.


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator